ಹಂಪನಾ ಕೃತಿಗಳು ಬುದ್ಧಿ ಭಾವನೆಗಳ ಸಮ್ಮಿಶ್ರಣ


Team Udayavani, Oct 29, 2018, 12:05 PM IST

hampana.jpg

ಬೆಂಗಳೂರು: ಕುಟುಂಬ, ಉದ್ಯೋಗ ಹಾಗೂ ಪ್ರತಿಭೆ ಮೂರರಲ್ಲೂ ಮಹಿಳೆಗೆ ಯಶಸ್ಸು ದೊರೆಯುವುದು ವಿರಳ. ಆದರೆ ನಾಡೋಜ ಕಮಲಾ ಹಂಪನಾ ಅವರು ಈ ಮೂರೂ ಕ್ಷೇತ್ರಗಳಲ್ಲಿ ಯಶಸ್ವಿಯಾದವರು ಎಂದು ಲೇಖಕಿ ಡಾ.ಎಲ್‌.ಜಿ.ಮೀರಾ ಹೇಳಿದರು.

ಕರ್ನಾಟಕ ಲೇಖಕಿಯರ ಸಂಘವು ಭಾನುವಾರ ಬಸವನಗುಡಿಯ ನ್ಯಾಷನಲ್‌ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ನಾಡೋಜ ಪ್ರೊ.ಕಮಲಾ ಹಂಪನಾ ದತ್ತಿ ಉಪನ್ಯಾಸ ಹಾಗೂ ಕಮಲಾ ಹಂಪನಾ-84 ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಮಲಾ ಹಂಪನಾ ಅವರ ಕಲಿಕೆಯ ಹಸಿವು 14ರ ಬಾಲೆಯಂತೆ ಇದೆ. ಬಹುಮುಖ ಪ್ರತಿಭೆಯ ಕಮಲಾ ಹಂಪನಾ ಅವರನ್ನು ಅರ್ಥಮಾಡಿಕೊಳ್ಳಲು ಅನೇಕ ಮಾರ್ಗಗಳಿವೆ. ಎಲ್ಲರನ್ನೂ ಪ್ರೋತ್ಸಾಹಿಸುವ ಗುಣದಿಂದಲೇ ಅವರು ಅನೇಕ ಶಿಷ್ಯರನ್ನು ಸಂಪಾದಿಸಿದ್ದಾರೆ.

ಕಾದಂಬರಿ ಹೊರತುಪಡಿಸಿ ಎಲ್ಲ ಪ್ರಕಾರಗಳ ಸಾಹಿತ್ಯವನ್ನು ಕಮಲಾ ಹಂಪನಾ ರಚಿಸಿದ್ದಾರೆ. ಅವರ ಲೇಖನಿಯಿಂದ ವೈಚಾರಿಕ ಸಾಹಿತ್ಯವೂ ಹೊರಹೊಮ್ಮಿದೆ. ಅದೇ ರೀತಿ ಸೃಜನಶೀಲ ಸಾಹಿತ್ಯವೂ ಮೂಡಿದೆ. ಕಮಲಾ ಹಂಪನಾ ಅವರ ಕೃತಿಗಳು ಬುದ್ಧಿ ಭಾವನೆಗಳ ಸಮ್ಮಿಶ್ರಣವಾಗಿದೆ ಎಂದು ಹೇಳಿದರು.

ಕಮಲಾ ಹಂಪನಾ ಅವರು ಕೇವಲ ಕೃತಿ ರಚನೆ, ಅಧ್ಯಯನ, ಸಂಶೋಧನೆಯಲ್ಲಿ ಕಳೆದುಹೋಗಲಿಲ್ಲ. ಕನ್ನಡ ನಾಡು ನುಡಿಗೆ ತೊಂದರೆ ಉಂಟಾದ ಸಂದರ್ಭದಲ್ಲಿ ತಮ್ಮ ಲೇಖನಿಯಿಂದ ಹೋರಾಟ, ಪ್ರತಿರೋಧ ಕೃತಿಯನ್ನೂ ರಚಿಸಿದ್ದಾರೆ. ತಣ್ಣನೆಯ ಧ್ವನಿಯಲ್ಲಿ ಗಟ್ಟಿತನದ ವಿಷಯಗಳನ್ನು ಪ್ರತಿಪಾದಿಸಿದ್ದಾರೆ.

ಕನ್ನಡಿಗರಿಗೆ ಉದ್ಯೋಗ ದೊರಕದಿದ್ದಾಗ, ಅನ್ಯ ಭಾಷಿಕರಿಂದ ಕನ್ನಡದ ಮೇಲೆ ದಬ್ಟಾಳಿಕೆ ಉಂಟಾದ ಸಂದರ್ಭದಲ್ಲಿ ಪ್ರತಿಭಟಿಸಿದ್ದಾರೆ ಎಂದು ತಿಳಿಸಿದರು. ಶಿಕ್ಷಣ ತಜ್ಞ ಪ್ರೊ.ಕೆ.ಈ.ರಾಧಾಕೃಷ್ಣ ಮಾತನಾಡಿ, ಓಜಸ್ಸು, ತೇಜಸ್ಸು ಹಾಗೂ ವರ್ಚಸ್ಸು ಮೂರರಲ್ಲಿಯೂ ಎತ್ತರದ ಸ್ಥಾನದಲ್ಲಿರುವ ಹಂಪನಾ ಅವರ ದಾಂಪತ್ಯ ಮುದ್ದಣ್ಣ ಮನೋರಮೆ ರೀತಿಯದ್ದು.

ಭಾರತೀಯ ಸಂಸ್ಕಾರದಿಂದ ಬಂದಂತಹ ಜೀವನ ಪ್ರೀತಿಯೇ ಹಂಪನಾ ದಂಪತಿ ಇಷ್ಟು ವರ್ಷ ಅನ್ಯೋನ್ಯ ದಾಂಪತ್ಯ ನಡೆಸಲು ಸಾಧ್ಯವಾಗಿದೆ. ವಿದ್ವತ್‌ ಪರಂಪರೆ ಕಳೆದು ಹೋಗುತ್ತಿರುವ ಸಂದರ್ಭದಲ್ಲಿ ಕಮಲಾ ಹಂಪನಾ ತಮ್ಮ ವಿದ್ವತ್‌ ಪರಂಪರೆಯಿಂದ ಅತ್ಯುತ್ತಮ ಪಾಂಡಿತ್ಯ ಕೃತಿಗಳನ್ನು ರಚಿಸಿದ್ದಾರೆ. ಜತೆಗೆ ಸೃಜನಶೀಲ ಸಾಹಿತ್ಯಕ್ಕೂ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕಮಲಾ ಹಂಪನಾ, ಭಾಷೆಗೆ ನಿಘಂಟುವಿನಲ್ಲಿ ಅರ್ಥ ದೊರೆಯಲಿದೆ. ಆದರೆ ಭಾವನೆಗಳಿಗಲ್ಲ. ವಿಜ್ಞಾನವು ವೈಚಾರಿಕ ಸತ್ಯದೆಡೆಗೆ ಕರೆದೊಯ್ಯಲಿದೆ. ಆದರೆ ಭಾವನೆಯು ಸತ್ಯವನ್ನೂ ಮೀರಿದ್ದನ್ನು ಮನುಷ್ಯನಿಗೆ ತಿಳಿಸಲಿದೆ.

ಇಂತಹ ವೈಚಾರಿಕ ಮತ್ತು ಭಾವನೆಗಳ ಸಮ್ಮಿಶ್ರಣದ ಸಂಶೋಧನೆ ನನ್ನದು. ನಾನು ಹಲವು ಧರ್ಮಗ್ರಂಥಗಳನ್ನು ಓದಿರುವೆ. ಆದರೆ ನನಗಿನ್ನೂ ಆತ್ಮದ ಬಗ್ಗೆ ಸರಿಯಾಗಿ ತಿಳಿದಿಲ್ಲ. ಹೀಗಾಗಿ ನಾನು ಆತ್ಮಕಥೆ ಬರೆಯುತ್ತಿಲ್ಲ. ಬದಲಿಗೆ ಜೀವನ ರೇಖೆಗಳ ಬಗ್ಗೆ ಬರೆಯುತ್ತಿದ್ದೇನೆ. ಎರಡು ವರ್ಷಗಳಲ್ಲಿ ಅದು ಬಿಡುಗಡೆಗೆ ಸಿದ್ಧವಾಗಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಡಾ.ಎಚ್‌.ಎನ್‌. ಆರತಿ ಅವರ “ಸ್ಮೋಕಿಂಗ್‌ ಜೋನ್‌’ ಕೃತಿ ಲೋಕಾರ್ಪಣೆಗೊಳಿಸಲಾಯಿತು. ವಿಮರ್ಶಕ ಎಸ್‌.ಆರ್‌.ವಿಜಯಶಂಕರ್‌ ಅವರು ಕಮಲಾ ಹಂಪನಾ ಕೃತಿಗಳ ಬಗ್ಗೆ ಉಪನ್ಯಾಸ ನೀಡಿದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಲಾ ಸಂಪನ್ನಕುಮಾರ ಹಾಜರಿದ್ದರು.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Namma Metro: ಹಳದಿ ಮಾರ್ಗ ಪೂರ್ಣಗೊಂಡಿದ್ದರೂ ಬೋಗಿಗಳ ಕೊರತೆ

Namma Metro: ಹಳದಿ ಮಾರ್ಗ ಪೂರ್ಣಗೊಂಡಿದ್ದರೂ ಬೋಗಿಗಳ ಕೊರತೆ

Kidnapping Case: ವ್ಯಕ್ತಿಯ ಅಪಹರಿಸಿ ಸುಲಿಗೆಗೈದ 8 ಮಂದಿ ಬಂಧನ

Kidnapping Case: ವ್ಯಕ್ತಿಯ ಅಪಹರಿಸಿ ಸುಲಿಗೆಗೈದ 8 ಮಂದಿ ಬಂಧನ

Younis Zaroora: ಎಂಜಿ ರಸ್ತೇಲಿ ಇನ್‌ಸ್ಟಾಗ್ರಾಮ್‌ ಸ್ಟಾರ್‌ ಯೂನಿಸ್‌ ನೋಡಲು ಕಿಕ್ಕಿರಿದ ಜನ

Younis Zaroora: ಎಂಜಿ ರಸ್ತೇಲಿ ಇನ್‌ಸ್ಟಾಗ್ರಾಮ್‌ ಸ್ಟಾರ್‌ ಯೂನಿಸ್‌ ನೋಡಲು ಕಿಕ್ಕಿರಿದ ಜನ

Private bus: ಖಾಸಗಿ ಬಸ್‌ಗಳಿಂದ ಬೇಕಾಬಿಟ್ಟಿ ದರ ವಸೂಲಿ

Private bus: ಖಾಸಗಿ ಬಸ್‌ಗಳಿಂದ ಬೇಕಾಬಿಟ್ಟಿ ದರ ವಸೂಲಿ

2-bng

Bengaluru: ನಗರದೆಲ್ಲೆಡೆ ಟ್ರಾಫಿಕ್ ಜಾಮ್‌, ಮೆಜೆಸ್ಟಿಕ್‌ ರಷ್‌! ‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.