ರಾಜಧಾನಿಯಲ್ಲಿ ಬಿಸಿಗಾಳಿ ಇಲ್ಲ; ಅದರ ಅನುಭವಕ್ಕೆ ಕೊರತೆ ಇಲ್ಲ!


Team Udayavani, Apr 30, 2022, 12:35 PM IST

ರಾಜಧಾನಿಯಲ್ಲಿ ಬಿಸಿಗಾಳಿ ಇಲ್ಲ; ಅದರ ಅನುಭವಕ್ಕೆ ಕೊರತೆ ಇಲ್ಲ!

ಬೆಂಗಳೂರು: ನಗರದಲ್ಲಿ ಬಿಸಿಗಾಳಿಯಂತೂ ಇಲ್ಲ; ಆದರೆ, ಅದರ ಅನುಭವಕ್ಕೆ ಮಾತ್ರ ಕೊರತೆ ಇಲ್ಲ!

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಶುಕ್ರವಾರ ಗರಿಷ್ಠ ಉಷ್ಣಾಂಶ 36.7 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಇದು ಇಡೀ ತಿಂಗಳಲ್ಲಿ (ಏಪ್ರಿಲ್‌) ದಾಖಲಾದ ಗರಿಷ್ಠ ಉಷ್ಣಾಂಶವಾಗಿದೆ.  ವಾಡಿಕೆಗೆ ಹೋಲಿಸಿದರೆ, ಕೇವಲ 0.6 ಡಿಗ್ರಿ ಸೆಲ್ಸಿಯಸ್‌ ಹೆಚ್ಚಳ ಕಾಣಬಹುದು. ಆದರೆ, ಕಳೆದ ಒಂದು ವಾರದ ಅಂಕಿ-ಅಂಶಗಳನ್ನು ನೋಡಿದರೆ, 2ರಿಂದ 3 ಡಿಗ್ರಿ ವ್ಯತ್ಯಾಸ ಕಂಡುಬರುತ್ತದೆ.

ಈ ತಾಪಮಾನ ಏರಿಕೆ ಜತೆಗೆ ನಗರದಲ್ಲಿ ತಲೆಯೆತ್ತಿರುವ ಗಗನಚುಂಬಿ ಕಟ್ಟಡಗಳ ಕೊಡುಗೆ ಈಗ ನಗರದಲ್ಲಿ ಅನುಭವವಾಗುತ್ತಿರುವ “ಬಿಸಿ ಗಾಳಿ’ಯಲ್ಲಿ ಹೆಚ್ಚಿದೆ. ಸೂರ್ಯನಿಂದ ಬರುವ ಅಲ್ಪತರಂಗ ಕಿರಣಗಳು ನೂರಾರು ಅಡಿ ಎತ್ತರದ ಕಟ್ಟಡಗಳ ಮೇಲೆ ಬಿದ್ದು, ಬಹುವಿಧ ಪ್ರತಿಫ‌ಲನ ಆಗುತ್ತದೆ. ಇದಲ್ಲದೆ, ಹೊರವಲಯದಲ್ಲಿ ವಾತಾವರಣದಲ್ಲಿ ಒತ್ತಡ ಹೆಚ್ಚಿರುತ್ತದೆ. ಹೃದಯಭಾಗದಲ್ಲಿ ಕಡಿಮೆ ಇರುತ್ತದೆ. ಆಗ, ಹೆಚ್ಚು ಒತ್ತಡ ಇರುವ ಪ್ರದೇಶ ದಿಂದ ಕಡಿಮೆ ಒತ್ತಡದ ಕಡೆಗೆ ಗಾಳಿ ಬೀಸುತ್ತದೆ. ಆ ಗಾಳಿಯು ತನ್ನ ಜತೆ ವಾತಾವರಣದಲ್ಲಿನ ಇಂಗಾಲದ ಅಂಶಗಳನ್ನೂ ಹೊತ್ತು ತರುತ್ತದೆ. ಪರಿಣಾಮ ಜನರಿಗೆ ಬಿಸಿಗಾಳಿಯ ಅನುಭವ ಆಗುತ್ತಿದೆ ಎಂದು ತಜ್ಞರು ಹೇಳುತ್ತಾರೆ.

ನಗರದಲ್ಲಿ ವಾಹನಗಳು ಮತ್ತು ಕೈಗಾರಿಕೆಗಳು ಉಗುಳುವ ಹೊಗೆ, ಹವಾನಿಯಂತ್ರಿತ ಯಂತ್ರ ಗಳಿಂದ ಹೊರಹೊಮ್ಮುವ ಅಂಶಗಳು ಸೇರಿದಂತೆ ಹಲವು ಕಾರಣಗಳಿಂದ ವಾತಾವರಣದಲ್ಲಿ ಇಂಗಾಲ ಆಮ್ಲದ ಅಂಶಗಳು ಹರಡಿಕೊಳ್ಳುತ್ತವೆ. ಇದೇ ಸಂದರ್ಭದಲ್ಲಿ ಹೆಚ್ಚು ಒತ್ತಡದ ಪ್ರದೇಶ ದಿಂದ ಕಡಿಮೆ ಒತ್ತಡದ ಪ್ರದೇಶಗಳ ಕಡೆಗೆ ಗಾಳಿ ಬೀಸುತ್ತದೆ. ಉದಾಹರಣೆಗೆ ಹಲಸೂರು, ಹೆಬ್ಟಾಳದಂತಹ ಕೆರೆಗಳ ಸುತ್ತಲಿನ ವಾತಾವರಣದಲ್ಲಿ ಉಷ್ಣಾಂಶ ಕಡಿಮೆ ಇದ್ದು, ಒತ್ತಡ ಹೆಚ್ಚಿರುತ್ತದೆ. ಆದರೆ, ಮೆಜೆಸ್ಟಿಕ್‌, ಶಿವಾಜಿನಗರ ಸೇರಿದಂತೆ ನಗರದ ಹೃದಯಭಾಗಗಳಲ್ಲಿ ಉಷ್ಣಾಂಶ ಹೆಚ್ಚಿದ್ದು, ಒತ್ತಡ ಕಡಿಮೆ ಇರುತ್ತದೆ. ಈ ಕೇಂದ್ರಭಾಗಗಳಲ್ಲಿ ಗಾಳಿಯು ಇಂಗಾಲದ ಅಂಶಗಳನ್ನು ಹೊತ್ತುಬರು ತ್ತದೆ ಎಂದು ಹವಾಮಾನ ತಜ್ಞ ಡಾ.ಎಂ.ಬಿ. ರಾಜೇಗೌಡ ವಿವರಿಸುತ್ತಾರೆ.

ಇಷ್ಟೇ ಅಲ್ಲ, ಕಾರ್ಬನ್‌, ಮಿಥೇನ್‌, ಈಥೇನ್‌, ಸಲ್ಫರ್‌ನಂತಹ ಈ ಇಂಗಾಲ ಅಂಶಗಳು ವಾತಾವರಣದ 200-300 ಅಡಿ ಮೇಲ್ಪದರದಲ್ಲಿ ಹೋಗಿ ಸಂಗ್ರಹವಾಗುತ್ತವೆ. ಸಂಜೆ ಸೂರ್ಯಾಸ್ತದ ನಂತರ ದೀರ್ಘ‌ ತರಂಗ ಕಿರಣಗಳು ವಾಪಸ್‌ ಹೋಗುವಾಗ, ಶೀಲ್ಡ್‌ನಂತೆ ಮೇಲ್ಪದರದಲ್ಲಿ ಸಂಗ್ರಹಗೊಂಡ ಅಂಶಗಳು ಅಡ್ಡಿಪಡಿಸುತ್ತವೆ. ಇದರಿಂದ ರಾತ್ರಿ ವೇಳೆಯಲ್ಲೂ ಸೆಕೆಯಾಗುತ್ತದೆ. ಕನಿಷ್ಠ ತಾಪಮಾನ ಹೆಚ್ಚಳಕ್ಕೂ ಇದೇ ಕಾರಣ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿಯ ಅಧಿಕಾರಿ ಪ್ರಸಾದ್‌ ತಿಳಿಸುತ್ತಾರೆ.

ಗರಿಷ್ಠ ತಾಪಮಾನ: 2016ರ ಏಪ್ರಿಲ್‌ 25ರಂದು 39.2 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು. ಇದು ಈವರೆಗಿನ ಅತ್ಯಧಿಕ ತಾಪಮಾನ. 2021ರ ಏಪ್ರಿಲ್‌ 1ರಂದು 37.2 ಡಿಗ್ರಿ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

ಎರಡು ದಿನಗಳಲ್ಲಿ ಮಳೆ ಸಾಧ್ಯತೆ : ತಾಪಮಾನ ಹೆಚ್ಚಿರುವುದರಿಂದ ಮುಂದಿನ ಎರಡು ದಿನಗಳಲ್ಲಿ ಗುಡುಗು ಮಿಂಚು ಸಹಿತ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಆಗ, ತಾಪಮಾನ ಕಡಿಮೆ ಆಗಬಹುದು. ಸದ್ಯಕ್ಕಂತೂ ಶುಕ್ರವಾರದ ದಾಖಲಾದ ಗರಿಷ್ಠ ಉಷ್ಣಾಂಶ ಈ ತಿಂಗಳ ಮಟ್ಟಿಗೆ ಅತಿ ಹೆಚ್ಚು ಎಂದು ಹೇಳಬಹುದು. ವರ್ಷದ ಗರಿಷ್ಠ ಉಷ್ಣಾಂಶ ಎಂದು ಹೇಳುವುದು ಕಷ್ಟ. ಯಾಕೆಂದರೆ ಇನ್ನೂ ಬೇಸಿಗೆ ಮುಗಿಯಲು ಒಂದು ತಿಂಗಳು ಬಾಕಿ ಇದೆ ಎಂದು ಅವರು ಹೇಳಿದರು

ಟಾಪ್ ನ್ಯೂಸ್

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suspension: ಸುಳ್ಳು ಮಾಹಿತಿ ಮೇರೆಗೆ ಇಬ್ಬರು ಯುವಕರ ಬಂಧನ; ನಾಲ್ವರು ಪೊಲೀಸರು ಅಮಾನತು

Suspension: ಸುಳ್ಳು ಮಾಹಿತಿ ಮೇರೆಗೆ ಇಬ್ಬರು ಯುವಕರ ಬಂಧನ; ನಾಲ್ವರು ಪೊಲೀಸರು ಅಮಾನತು

7

Bengaluru: ನಗರದಲ್ಲಿ ಏಕಕಾಲಕ್ಕೆ  200 ಗಣೇಶ ಮೂರ್ತಿಗಳ ಮೆರವಣಿಗೆ

Parappana Agrahara Prison: ಪರಪ್ಪನ ಅಗ್ರಹಾರ ಜೈಲಲ್ಲಿ ಮತ್ತೆ ಮೊಬೈಲ್‌ಗ‌ಳು ಪತ್ತೆ

Parappana Agrahara Prison: ಪರಪ್ಪನ ಅಗ್ರಹಾರ ಜೈಲಲ್ಲಿ ಮತ್ತೆ ಮೊಬೈಲ್‌ಗ‌ಳು ಪತ್ತೆ

5

Bengaluru: ಚಿನ್ನಾಭರಣ ಮಳಿಗೆಯಲ್ಲಿ ತಡರಾತ್ರಿ ದುಷ್ಕರ್ಮಿಗಳಿಂದ ಕಳವಿಗೆ ಯತ್ನ

BBMP: ರಜೆ ದಿನದಲ್ಲೂ ಗುಂಡಿ ಮುಚ್ಚಿದ ಪಾಲಿಕೆ ನೌಕರರು

BBMP: ರಜೆ ದಿನದಲ್ಲೂ ಗುಂಡಿ ಮುಚ್ಚಿದ ಪಾಲಿಕೆ ನೌಕರರು

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Emergency; ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ: ಸಂಸದೆ ಕಂಗನಾ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.