House arrest: 10 ದಿನ ಹೌಸ್‌ ಅರೆಸ್ಟ್‌ ಮಾಡಿ 30 ಲಕ್ಷ ರೂ. ಸುಲಿಗೆ!

ಫೆಡೆಕ್ಸ್‌, ಡಿಎಚ್‌ಎಲ್‌ ಕೊರಿಯರ್‌ ಸಂಸ್ಥೆ ಸೋಗಲ್ಲಿ ಖಾಸಗಿ ಉದ್ಯೋಗಿಗೆ ವಂಚನೆ

Team Udayavani, Sep 24, 2024, 11:02 AM IST

House arrest: 10 ದಿನ ಹೌಸ್‌ ಅರೆಸ್ಟ್‌ ಮಾಡಿ 30 ಲಕ್ಷ ರೂ. ಸುಲಿಗೆ!

ಬೆಂಗಳೂರು:  ಫೆಡೆಕ್ಸ್‌ ಹಾಗೂ ಡಿಎಚ್‌ಎಲ್‌ ಇಂಟರ್‌ ನ್ಯಾಷನಲ್‌ ಕೊರಿಯರ್‌ ಕಂಪನಿ ಹೆಸರಿನಲ್ಲಿ ಖಾಸಗಿ ಕಂಪನಿ ಉದ್ಯೋಗಿ­ಯೊಬ್ಬರಿಗೆ “ಹೌಸ್‌ ಅರೆಸ್ಟ್‌’ ಮಾಡಿ 30 ಲಕ್ಷ ರೂ. ಸುಲಿಗೆ ಮಾಡಿದ ಮೂವರು ವಂಚಕರು ದಕ್ಷಿಣ ವಿಭಾಗದ ಸೈಬರ್‌ ಕ್ರೈಂ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಡಿ.ಜೆ.ಹಳ್ಳಿ ನಿವಾಸಿಗಳಾದ ಮುಕರಾಮ್‌ (32), ಮನ್ಸೂರ್‌ (30) ಮತ್ತು ಥಣಿಸಂದ್ರ ನಿವಾಸಿ ಇಬ್ರಾಹಿಂ (34) ಬಂಧಿತರು. ಆರೋಪಿಗಳಿಂದ 11.75 ಲಕ್ಷ ರೂ. ನಗದು ವಶಕ್ಕೆ ಪಡೆಯ­ಲಾಗಿದೆ. ತಲೆ ಮರೆಸಿಕೊಂಡಿರುವ ಇತರೆ ಆರೋಪಿ­ಗಳು ಮುಂಬೈ, ಬೆಂಗಳೂರು ಹಾಗೂ ವಿದೇಶದ­ಲ್ಲಿರುವ ಮಾಹಿತಿಯಿದ್ದು, ಅವರಿಗಾಗಿ ಶೋಧ ನಡೆಯುತ್ತಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ‌ ಸುದ್ದಿಗೋ­ಷ್ಠಿಯಲ್ಲಿ ಮಾಹಿತಿ ನೀಡಿದರು.

ಸುಬ್ರಹ್ಮಣ್ಯಪುರದಲ್ಲಿರುವ ಅಪಾರ್ಟ್‌ವೊಂದರ ನಿವಾಸಿಗೆ ಜೂನ್‌ 24ರಂದು ಕರೆ ಮಾಡಿದ ವ್ಯಕ್ತಿ, “ತಾನು ಡಿಎಚ್‌ಎಲ್‌ ಕೊರಿಯರ್‌ ಉದ್ಯೋಗಿ’ ಎಂದು ಪರಿಚಯಿಸಿಕೊಂಡಿದ್ದು, ನಿಮ್ಮ ಹೆಸರಿಗೆ ಶಾಂಘೈನಿಂದ ಪಾರ್ಸೆಲ್‌ ಮುಂಬೈಗೆ ಬಂದಿದೆ. ಈ ಕೋರಿಯರ್‌ ಪಾರ್ಸೆಲ್‌ನಲ್ಲಿ 140 ಡ್ರಗ್ಸ್‌  ಇದೆ. ಪಾರ್ಸೆಲ್‌ನಲ್ಲಿ ಡ್ರಗ್ಸ್‌ ಇರುವುದರಿಂದ ನಿಮ್ಮ ವಿರುದ್ಧ ಮುಂಬೈ ಕ್ರೈಂ ಪೊಲೀಸ್‌ ಮತ್ತು ಸಿಬಿಐ ತನಿಖೆ ನಡೆಸುತ್ತಿದ್ದು, ಮುಂಬೈ ಪೊಲೀಸರು ಮಾತನಾಡುತ್ತಾರೆ ಎಂದು ಮತ್ತೂಬ್ಬರಿಗೆ ಫೋನ್‌ ಕೊಟ್ಟಿದ್ದಾನೆ. ಬಳಿಕ ಮಾತನಾಡಿದ ವ್ಯಕ್ತಿ, ಸ್ಕೈಪ್‌ ಮೂಲಕ ಸಿಬಿಐ ಅಧಿಕಾರಿಯೊಬ್ಬರು ಸಂಪರ್ಕಿಸಲಿದ್ದಾರೆ ಎಂದಿದ್ದಾನೆ.

ಹೌಸ್‌ ಅರೆಸ್ಟ್‌!: ಕೆಲ ಹೊತ್ತಿನ ಬಳಿಕ ಅಪರಿಚಿತ ವ್ಯಕ್ತಿ ಸ್ಕೈಪ್‌ ಆ್ಯಪ್‌ ಮೂಲಕ ದೂರುದಾರರನ್ನು ಸಂಪರ್ಕಿಸಿ, “ಸಿಬಿಐ ಅಧಿಕಾರಿ’ ಎಂದು ಹೇಳಿ, ಹವಾಲಾ ಮೂಲಕ ನಿಮ್ಮ ಖಾತೆಯಿಂದ ಹಣ ವರ್ಗಾವಣೆ ಆಗಿದೆ. ಹೀಗಾಗಿ ನಿಮ್ಮನ್ನು “ಹೌಸ್‌ ಅರೆಸ್ಟ್‌’ ಮಾಡುತ್ತೇವೆ ಎಂದಿದಲ್ಲದೆ, ಕೂಡಲೇ ಮನೆ ತೊರೆದು, ಸ್ಟೇ ಹೋಮ್‌ಗೆ ಹೋಗಬೇಕೆಂದು ಸೂಚಿಸಿದ್ದಾನೆ. ಅದರಂತೆ ದೂರುದಾರ ಕೆಂಗೇರಿಯ ಗುಬ್ಬಲಾಳದಲ್ಲಿರುವ ಗ್ಲೋಬಲ್‌ ಸ್ಟೇಯಲ್ಲಿ ಬಾಡಿಗೆ ರೂಮ್‌ನಲ್ಲಿದ್ದುಕೊಂಡು ಆರೋಪಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಬಳಿಕ ಆರೋಪಿ, ದೂರುದಾರ ಖಾತೆಯಿಂದ ಪ್ರಕರಣ ಇತ್ಯರ್ಥ ಪಡಿಸಲು ಹಂತ-ಹಂತವಾಗಿ 30 ಲಕ್ಷ ರೂ. ಅನ್ನು ತಾನೂ ಸೂಚಿಸಿದ 2 ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾನೆ. ಬಳಿಕ ಆರೋಪಿ ಯಾರೊಂದಿಗೂ ಈ ವಿಚಾರ ಚರ್ಚಿಸಬಾರದು ಎಂದು ಎಚ್ಚರಿಸಿದ್ದ. ಹೀಗೆ 10 ದಿನಗಳ ಕಾಲ ಹೌಸ್‌ ಅರೆಸ್ಟ್‌ ಆಗಿದ್ದ ದೂರುದಾರರಿಗೆ ಅವರ ಕುಟುಂಬ ಸದಸ್ಯರು ಕರೆ ಮಾಡಿದಾಗ ಘಟನೆಯನ್ನು ವಿವರಿಸಿದ್ದಾರೆ. ಬಳಿಕ ವಂಚನೆಗೊಳಗಾಗಿರುವುದು ಗೊತ್ತಾಗಿ ದೂರು ನೀಡಿದ್ದರು ಎಂದು ಆಯುಕ್ತರು ತಿಳಿಸಿದರು.

ಈ ಸಂಬಂಧ ತನಿಖೆ ಕೈಗೊಂಡು ಹಣ ವರ್ಗಾವಣೆಯಾಗಿದ್ದ ಬ್ಯಾಂಕ್‌ ಖಾತೆದಾರ ಮನ್ಸೂರ್‌ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮುಕರಾಮ್‌ ಮತ್ತು ಇಮ್ರಾನ್‌ ಹೆಸರು ಬಾಯಿಬಿಟ್ಟಿದ್ದ. ಮುಕರಾಮ್‌ ಸೂಚನೆ ಮೇರೆಗೆ ತನ್ನ ಬ್ಯಾಂಕ್‌ ಖಾತೆ ನೀಡಿದ್ದು, ಅದಕ್ಕಾಗಿ ಕಮಿಷನ್‌ ಪಡೆದುಕೊಂಡಿದ್ದೇನೆ ಹಾಗೂ ಇಮ್ರಾನ್‌ಗೂ ಹಣ ನೀಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

ಏನಿದು ಡಿಜಿಟಲ್‌ ಅರೆಸ್ಟ್‌?:

ನಿಮ್ಮ ಅಥವಾ ನಿಮ್ಮ ಆತ್ಮೀಯರ ಹೆಸರನಲ್ಲಿ ಬಂದಿರುವ ಕೋರಿಯರ್‌ನಲ್ಲಿ ಮಾದಕ ವಸ್ತುಗಳು, ನಕಲಿ ಪಾಸ್‌ ಪೋರ್ಟ್‌ಗಳು ಹಾಗೂ ಇತರೆ ವಸ್ತುಗಳು ಇವೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. ಅದನ್ನು ಇತ್ಯರ್ಥ ಪಡಿಸಬೇಕಾದರೆ ಹಣ ಕೊಡಿ ಎಂದು ಕರೆ ಮಾಡುವುದಲ್ಲದೆ, ಸ್ಕೈಪ್‌ ಅಥವಾ ಇತರೆ ಆ್ಯಪ್‌ಗಳ ಮೂಲಕ ವಿಡಿಯೋ ಕರೆ ಮಾಡಿ ದಿನವೀಡಿ ತಮ್ಮ ಅಧೀನದಲ್ಲೇ ಕೂರಿಸುವುದಾಗಿದೆ. ಜತೆಗೆ ಆ ವ್ಯಕ್ತಿಯ ಬ್ಯಾಂಕ್‌ ಹಾಗೂ ಇತರೆ ಹಣಕಾಸಿನ ಮಾಹಿತಿಯನ್ನು ವಂಚಕರು ಪಡೆಯಲಿದ್ದಾರೆ. ಕೆಲವೊಮ್ಮೆ ವ್ಯಕ್ತಿಯ ಮನೆಯಲ್ಲೇ ಪ್ರತ್ಯೇಕ ಕೋಣೆಯಲ್ಲಿರುವಂತೆ ಸೂಚಿಸುತ್ತಾರೆ. ಕೆಲವೊಮ್ಮೆ ಬೇರೆಡೆ ಹೋಗಿ ರೂಮ್‌ ಮಾಡುವಂತೆ ಸೂಚಿಸಿ, ಲಕ್ಷಾಂತರ ರೂ. ಸುಲಿಗೆ ಮಾಡುತ್ತಾರೆ. ಅದಕ್ಕೆ ಡಿಜಿಟಲ್‌ ಅರೆಸ್ಟ್‌ ಎನ್ನುತ್ತಾರೆ.

ಚೀನಾ ಮೂಲದವರೇ ಬಾಸ್‌:

ಆರೋಪಿಗಳ ಪೈಕಿ ಮುಕರಾಮ್‌ ದುಬೈನಲ್ಲಿದ್ದಾಗ ಚೀನಾ ಮೂಲದ ವ್ಯಕ್ತಿಯೊಬ್ಬ ಪರಿಚಯವಾಗಿದ್ದು, ಆತನ ಆಮಿಷದ ಮೇರೆಗೆ ದಂಧೆ ನಡೆಸುತ್ತಿದ್ದಾನೆ. ಮನ್ಸೂರ್‌ ಹಾಗೂ ಇಮ್ರಾನ್‌ ಅವರನ್ನು ಈತನೇ ನೇಮಕ ಮಾಡಿದ್ದ. ಸಾರ್ವಜನಿಕ ಸ್ಥಳಗಳಲ್ಲಿ ದೊರೆಯುವ ಕೆಲ ಮೊಬೈಲ್‌ ನಂಬರ್‌ಗಳು, ಅಪರಿಚಿತ ವ್ಯಕ್ತಿಗಳ ಹೆಸರಿನಲ್ಲಿ ನೂರಾರು ಸಿಮ್‌ಕಾರ್ಡ್‌ಗಳು, ಜತೆಗೆ ಕೆಲ ವ್ಯಕ್ತಿಗಳ ಬ್ಯಾಂಕ್‌ ಖಾತೆ ಮಾಹಿತಿಯನ್ನು ಇವರಿಂದಲೇ ಮುಕರಾಮ್‌ ಪಡೆದುಕೊಂಡು, ಪ್ರಕರಣದ ಕಿಂಗ್‌ಪಿನ್‌ಗಳಿಗೆ ಮಾರಾಟ ಮಾಡಿದ್ದಾನೆ. ದುಬೈನಲ್ಲಿದ್ದ ಮುಕರಾಮ್‌ ಇತ್ತೀಚೆಗೆ ಬೆಂಗಳೂರಿಗೆ ಬಂದಾಗ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಚೀನಾ ಮೂಲದ ವ್ಯಕ್ತಿಗಳಿಂದ ನಕಲಿ ಸಿಬಿಐ, ಇ.ಡಿ. ಕಚೇರಿ ಸ್ಥಾಪಿಸಿ ಕಾರ್ಯಾಚರಣೆ:

ಪ್ರಕರಣ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಹೊರಬಂದಿದೆ. ರಾಜ್ಯದ ಕೆಲ ವ್ಯಕ್ತಿಗಳು ಕಾಂಬೋಡಿ ದೇಶಕ್ಕೆ ಹೋಗಿದ್ದು, ಚೀನಾ ವ್ಯಕ್ತಿಗಳು ತಾತ್ಕಾಲಿಕವಾಗಿ ಸ್ಥಾಪಿಸಿರುವ ಭಾರತದ ಸಿಬಿಐ, ಇಡಿ, ಮುಂಬೈ ಕ್ರೈಂ ಪೊಲೀಸರ ನಕಲು ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಂದ ಕನ್ನಡ, ಇಂಗ್ಲಿಷ್‌, ಹಿಂದೆಯಲ್ಲಿ ರಾಜ್ಯದ ಸೇರಿ ದೇಶದ ವ್ಯಕ್ತಿಗಳಿಗೆ ಕರೆ ಮಾಡಿ ಮಾತನಾಡಿಸುತ್ತಾರೆ. ಇನ್ನು ಈ ಕಚೇರಿಯಲ್ಲಿ ಬಾಂಗ್ಲಾದೇಶದ ಪ್ರಜೆಗಳು ಇದ್ದಾರೆ ಎಂಬುದು ಗೊತ್ತಾಗಿದೆ. ಆರೋಪಿಗಳ ಪೈಕಿ ಮುಕರಾಮ್‌, ಇಮ್ರಾನ್‌ ವಿಚಾರಣೆಯಲ್ಲಿ ಹವಾಲಾ ಮೂಲಕ ವಿದೇಶದಲ್ಲಿರುವ ಆರೋಪಿಗಳಿಗೆ ದೂರುದಾರರ 30 ಲಕ್ಷ ರೂ. ಪೈಕಿ 10.25 ಲಕ್ಷ ರೂ. ಅನ್ನು ನೀಡಿರುವುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಟಾಪ್ ನ್ಯೂಸ್

Bantwal: ತಾಯಿ ಮನೆಗೆ ಹೋಗಿ ಬರುವಷ್ಟರಲ್ಲಿ ಮನೆಯ ಬೀಗ ಮುರಿದು ನಗನಗದು ದೋಚಿದ ಕಳ್ಳರು

Bantwal: ತಾಯಿ ಮನೆಗೆ ಹೋಗಿ ಬರುವಷ್ಟರಲ್ಲಿ ಮನೆಯ ಬೀಗ ಮುರಿದು ನಗನಗದು ದೋಚಿದ ಕಳ್ಳರು

1-sulya

ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ದಾಖಲಿಸಿದ ಆರೋಪ;ಸುಳ್ಯ ಪೊಲೀಸ್ ಠಾಣೆ ಬಳಿ ಪ್ರತಿಭಟನೆ

ಇಲಾಖೆಯಿಂದ ಸನ್ಮಾನ ಗಿಟ್ಟಿಸಿಕೊಳ್ಳಲು ಪ್ಲಾನ್ ಮಾಡಿ ಜೈಲಿಗೆ ಹೋದ ರೈಲ್ವೆ ಸಿಬ್ಬಂದಿಗಳು

ಇಲಾಖೆಯಿಂದ ಸನ್ಮಾನ ಗಿಟ್ಟಿಸಿಕೊಳ್ಳಲು ಪ್ಲಾನ್ ಮಾಡಿ ಜೈಲು ಪಾಲಾದ ರೈಲ್ವೆ ಸಿಬ್ಬಂದಿಗಳು

Israel ವೈಮಾನಿಕ ದಾಳಿಗೆ 500 ಲೆಬನಾನ್‌ ಜನರು ಮೃತ್ಯು, ಹೆಜ್ಬುಲ್ಲಾ ಪ್ರತೀಕಾರದ ದಾಳಿ

Israel ವೈಮಾನಿಕ ದಾಳಿಗೆ 500 ಲೆಬನಾನ್‌ ಜನರು ಮೃತ್ಯು, ಹೆಜ್ಬುಲ್ಲಾ ಪ್ರತೀಕಾರದ ದಾಳಿ

Samarjit Lankesh: ʼಗೌರಿʼ ಬಳಿಕ ಇಂದ್ರಜಿತ್‌ ಪುತ್ರನಿಗೆ ಬಾಲಿವುಡ್‌ನಿಂದ‌ ಬಿಗ್‌ ಆಫರ್

Samarjit Lankesh: ʼಗೌರಿʼ ಬಳಿಕ ಇಂದ್ರಜಿತ್‌ ಪುತ್ರನಿಗೆ ಬಾಲಿವುಡ್‌ನಿಂದ‌ ಬಿಗ್‌ ಆಫರ್

Yadgiri: ಸಿಡಿಲು ಬಡಿದು ನಾಲ್ವರು ಮೃತಪಟ್ಟ ಪ್ರಕರಣ… ಸಚಿವ ಶರಣಬಸಪ್ಪ ದರ್ಶನಾಪುರ ಸಾಂತ್ವನ

Yadgiri: ಸಿಡಿಲು ಬಡಿದು ನಾಲ್ವರು ಮೃತಪಟ್ಟ ಪ್ರಕರಣ… ಸಚಿವ ಶರಣಬಸಪ್ಪ ದರ್ಶನಾಪುರ ಸಾಂತ್ವನ

MUDA Case:ಸಿಎಂ ಸಿದ್ದರಾಮಯ್ಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌,ರಾಜ್ಯಪಾಲರ ಅನುಮತಿಗೆ ಮೇಲುಗೈ

MUDA Case:ಸಿಎಂ ಸಿದ್ದರಾಮಯ್ಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌,ರಾಜ್ಯಪಾಲರ ಅನುಮತಿಗೆ ಮೇಲುಗೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Arrested: ವಿಲ್ಲಾಗಳಿಗೆ ರಾತ್ರಿ ಕನ್ನ ಹಾಕುತ್ತಿದ್ದ ತ್ರಿಪುರ ಯುವಕ

Female Staff: ಇನ್ನು ರಾತ್ರಿ ಪಾಳಿ ವೈದ್ಯೆ ಜತೆ ಮಹಿಳಾ ಸಿಬಂದಿ ಕಡ್ಡಾಯಕ್ಕೆ ಆದೇಶ

Female Staff: ಇನ್ನು ರಾತ್ರಿ ಪಾಳಿ ವೈದ್ಯೆ ಜತೆ ಮಹಿಳಾ ಸಿಬಂದಿ ಕಡ್ಡಾಯಕ್ಕೆ ಆದೇಶ

Murder-Represent

Bengaluru: ಅಕ್ರಮ ಸಂಬಂಧವೇ ನೇಪಾಲಿ ಮಹಿಳೆಯ ಕೊಲೆಗೆ ಕಾರಣ

Mahalakshmi Case: ಪ್ರಮುಖ ಆರೋಪಿಯನ್ನು ಪ.ಬಂಗಾಳದಲ್ಲಿ ಪತ್ತೆ ಮಾಡಲಾಗಿದೆ ಎಂದ ಗೃಹ ಸಚಿವರು

Mahalakshmi Case: ಪ್ರಮುಖ ಆರೋಪಿಯನ್ನು ಪ.ಬಂಗಾಳದಲ್ಲಿ ಗುರುತಿಸಲಾಗಿದೆ ಎಂದ ಗೃಹ ಸಚಿವರು

6

Terrace garden: ಗೃಹಿಣಿಯ ಮಾನಸಿಕ ಖಿನ್ನತೆಗೆ ಔಷಧಿಯಾದ ತಾರಸಿ ಕೈತೋಟ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Bantwal: ತಾಯಿ ಮನೆಗೆ ಹೋಗಿ ಬರುವಷ್ಟರಲ್ಲಿ ಮನೆಯ ಬೀಗ ಮುರಿದು ನಗನಗದು ದೋಚಿದ ಕಳ್ಳರು

Bantwal: ತಾಯಿ ಮನೆಗೆ ಹೋಗಿ ಬರುವಷ್ಟರಲ್ಲಿ ಮನೆಯ ಬೀಗ ಮುರಿದು ನಗನಗದು ದೋಚಿದ ಕಳ್ಳರು

1-sulya

ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ದಾಖಲಿಸಿದ ಆರೋಪ;ಸುಳ್ಯ ಪೊಲೀಸ್ ಠಾಣೆ ಬಳಿ ಪ್ರತಿಭಟನೆ

ಇಲಾಖೆಯಿಂದ ಸನ್ಮಾನ ಗಿಟ್ಟಿಸಿಕೊಳ್ಳಲು ಪ್ಲಾನ್ ಮಾಡಿ ಜೈಲಿಗೆ ಹೋದ ರೈಲ್ವೆ ಸಿಬ್ಬಂದಿಗಳು

ಇಲಾಖೆಯಿಂದ ಸನ್ಮಾನ ಗಿಟ್ಟಿಸಿಕೊಳ್ಳಲು ಪ್ಲಾನ್ ಮಾಡಿ ಜೈಲು ಪಾಲಾದ ರೈಲ್ವೆ ಸಿಬ್ಬಂದಿಗಳು

1(5)

Puttur :ಸಾಲು ಮರದ ತಿಮ್ಮಕ್ಕ ಪಾರ್ಕ್‌ ಸಾಲು ಸಾಲು ಸಮಸ್ಯೆ!

Israel ವೈಮಾನಿಕ ದಾಳಿಗೆ 500 ಲೆಬನಾನ್‌ ಜನರು ಮೃತ್ಯು, ಹೆಜ್ಬುಲ್ಲಾ ಪ್ರತೀಕಾರದ ದಾಳಿ

Israel ವೈಮಾನಿಕ ದಾಳಿಗೆ 500 ಲೆಬನಾನ್‌ ಜನರು ಮೃತ್ಯು, ಹೆಜ್ಬುಲ್ಲಾ ಪ್ರತೀಕಾರದ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.