
“ನೆನಪಿನ ಬುತ್ತಿ’ಯಲ್ಲಿ ತೇಲಿಬಂದ ಮಲೆನಾಡಿಗರ ನೆನಪು
Team Udayavani, Apr 17, 2017, 12:26 PM IST

ಬೆಂಗಳೂರು: ಕರೆಂಟೇ ಇಲ್ಲದಂತಹ ಊರಿಂದ ಸಿಟಿಗೆ ಬಂದಾಗ, ಲೈಟ್ ಹಚ್ಚಲಿಕ್ಕೂ ಬರುತ್ತಿರಲಿಲ್ಲ. ನೆನೆಸಿಕೊಂಡರೆ ಈಗಲೂ ನಗು ಬರುತ್ತದೆ. ಮಲೆನಾಡು ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ “ನೆನಪಿನ ಬುತ್ತಿ’ಯಿಂದ ತೇಲಿಬಂದ ನೆನಪು ಇದು.
ನಗರದ ಡಾ.ರಾಜ್ಕುಮಾರ್ ರಸ್ತೆಯಲ್ಲಿರುವ ಅಭಿಮಾನಿ ವಸತಿಯಲ್ಲಿ ಮಲೆನಾಡ ಮಿತ್ರ ವೃಂದ ಭಾನುವಾರ “ಮಲೆನಾಡು ದಿನ’ದ ಅಂಗವಾಗಿ ನೆನಪಿನ ಬುತ್ತಿ ಕಾರ್ಯಕ್ರಮ ಏರ್ಪಡಿಸಿತ್ತು. ತೀರ್ಥಹಳ್ಳಿ, ಕೊಪ್ಪ, ಎನ್.ಆರ್. ಪುರ, ಶೃಂಗೇರಿ ಸೇರಿದಂತೆ ನೂರಾರು ಮಲೆನಾಡಿನ ಜನ ಅಲ್ಲಿ ನೆರೆದಿದ್ದರು. 20-30 ವರ್ಷಗಳಿಂದ ನಗರದಲ್ಲೇ ಜೀವನ ನಡೆಸುತ್ತಿರುವ ಅವರೆಲ್ಲಾ ತಮ್ಮ ಸಿಹಿ-ಕಹಿ ಘಟನೆಗಳನ್ನು ಹಂಚಿಕೊಂಡರು.
“ನಮ್ಮೂರಲ್ಲಿ ಕರೆಂಟೇ ಇರಲಿಲ್ಲ. ಅಂತಹ ಊರಲ್ಲಿ ಇದ್ದ ನನಗೆ ಸಿಟಿಗೆ ಬಂದಾಗ ಬೆಂಗಳೂರು ಝಗಮಗಿಸುತ್ತಿತ್ತು. ನಾನಿದ್ದ ರೂಮಿನಲ್ಲಿಯ ಲೈಟ್ ಹಾಕಲಿಕ್ಕೂ ನನಗೆ ಬರುತ್ತಿರಲಿಲ್ಲ’ ಎಂದು ಚಿಕ್ಕಮಗಳೂರು ಮೂಲದವರೊಬ್ಬರು ಮೆಲುಕುಹಾಕಿದರು. ಇದಕ್ಕೆ ಇತರ ಮಲೆನಾಡಿಗರೂ ದನಿಗೂಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ, ತಮ್ಮ ಕಾನೂರು ಸುಬ್ಬಮ್ಮ ಹೆಗ್ಗಡತಿಯ ಪಾತ್ರವನ್ನು ಮೆಲುಕು ಹಾಕಿದರು. “ಚಿತ್ರದ ಶೂಟಿಂಗ್ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡುವವರೆಗೂ ನನಗೆ ಯಾವ ಪಾತ್ರ ಕೊಡುತ್ತಿದ್ದಾರೆ ಎಂಬುದೇ ಗೊತ್ತಿರಲಿಲ್ಲ. ಆಮೇಲೆ ಅಲ್ಲಿಯೇ ಒಂದು ವಾರ ಠಿಕಾಣಿ ಹೂಡಿ ಮಲೆನಾಡಿನ ಪರಿಸರ, ಅಲ್ಲಿನ ಸಂಸ್ಕೃತಿ, ಅಡಿಗೆ ಮಾಡುವುದು ಸೇರಿದಂತೆ ಪ್ರತಿಯೊಂದು ನೋಡಿ ಕಲಿತೆ’ ಎಂದು ಸ್ಮರಿಸಿದರು.
ಅಲ್ಲದೆ, ದೇಹದ ತೂಕವನ್ನು 20 ಕೆ.ಜಿ ಕರಿಗಸಬೇಕು ಎಂದು ನಿರ್ದೇಶಕರಿಂದ ಸೂಚನೆ ಬಂತು. ಇದಕ್ಕಾಗಿ ಆರು ತಿಂಗಳು ಅವಕಾಶವೂ ಸಿಕ್ಕಿತು. 50 ದಿನಗಳ ಶೂಟಿಂಗ್ ಮುಗಿಸಿಕೊಂಡು ಬರುವಾಗ ದುಃಖ ಉಮ್ಮಳಿಸಿತು. ಅಷ್ಟರಮಟ್ಟಿಗೆ ಅಲ್ಲಿನ ಜನ, ಪರಿಸರದೊಂದಿಗೆ ಬೆರೆತುಹೋಗಿದ್ದೆ ಎಂದರು. ಕಾರ್ಯಕ್ರಮದಲ್ಲಿ ಮಲೆನಾಡ ಮಿತ್ರ ವೃಂದದ ಅಧ್ಯಕ್ಷ ಅನಿಲ್ ಹೊಸಕೊಪ್ಪ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Adalat: ಲೋಕ್ ಅದಾಲತ್ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

BSY: ಬಿಎಸ್ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್ಪಿಪಿ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP Congress;ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರಿಗೆ ಪ್ರತಿದೂರು

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.