JC Nagar Dussehra: ಜೆ.ಸಿ.ನಗರ ದಸರಾದಲ್ಲಿ ನೂರಾರು ಪಲ್ಲಕ್ಕಿಗಳ ಉತ್ಸವ


Team Udayavani, Oct 13, 2024, 12:50 PM IST

10

ಬೆಂಗಳೂರು: ದಸರಾ ಎಂದಾಕ್ಷಣ ಬೆಂಗಳೂರಿಗರಿಗೆ ಥಟ್ಟೆಂದು ನೆನಪಿಗೆ ಬರುವುದು ಜೆ.ಸಿ.ನಗರದಲ್ಲಿ ವಿಜೃಂಭಣೆಯಿಂದ ನಡೆಯುವ “ದಸರಾ ಮಹೋತ್ಸವ’. ಪ್ರತಿ ವರ್ಷದಂತೆ ಈ ಬಾರಿಯೂ ಜೆ.ಸಿ.ನಗರದ ಐತಿಹಾಸಿಕ ದಸರಾ ಮೆರವಣಿಗೆಯು ಶನಿವಾರ ರಾತ್ರಿಯಿಡೀ ವಿಜೃಂಭಣೆಯಿಂದ ಜರುಗಿತು.

ರಾಜಧಾನಿಯ ಹಲವು ಬಡಾವಣೆಗಳಲ್ಲಿ ನವರಾತ್ರಿ ಆಚರಿಸುತ್ತಿದ್ದರೂ, ಜೆ.ಸಿ.ನಗರ ದಸರಾ ಉತ್ಸವ ತನ್ನದೇ ಸ್ಥಾನಮಾನ ಪಡೆದಿದೆ. ಜೆ.ಸಿ.ನಗರ ದಸರಾ ಮಹೋತ್ಸವದಲ್ಲಿ ಸುತ್ತಮುತ್ತಲ ಪ್ರದೇಶಗಳಿಂದ ಅಲಂಕೃತ ರಥಗಳಲ್ಲಿ ಉತ್ಸವ ಮೂರ್ತಿ ಹೊತ್ತು ಬಂದಿದ್ದ ತೇರು, ಪಲ್ಲಕ್ಕಿ ಕಂಡು ಭಕ್ತರು ಪುಳಕಿತರಾದರು. ಈ‌ ಉತ್ಸವಕ್ಕೆ ತಡರಾತ್ರಿ ಲಕ್ಷಕ್ಕೂ ಅಧಿಕ ಮಂದಿ ಸಾಕ್ಷಿಯಾದರು. ಜೆ.ಸಿ. ನಗರದ ಮುಖ್ಯ ರಸ್ತೆಯಲ್ಲಿ ಮಾಹೇಶ್ವರಮ್ಮ ದೇವಾಲಯದಿಂದ ಹೊರಟಿದ್ದ ಮಹಾರಾಜ ಪಲ್ಲಕ್ಕಿಯ ಹಿಂದಿನಿಂದ ಉಳಿದ ಎಲ್ಲ ಪಲ್ಲಕ್ಕಿಗಳೂ ಸಾಲಾಗಿ ಸಾಗಿದವು.

ಶನಿವಾರ ರಾತ್ರಿ ಟಿಆರ್‌ಪಿಸಿ ವೃತ್ತದ ದಸರಾ ಮೈದಾನದಲ್ಲಿ ದೇವಿಯ ವಿಗ್ರಹಗಳು, ವಿವಿಧ ದೇವರ ಪ್ರತಿಮೆ ಹೊತ್ತ ವಿದ್ಯುತ್‌ ದೀಪ, ಹೂವುಗಳಿಂದ ವಿಶೇಷವಾಗಿ ಅಲಂಕೃತಗೊಂಡ 112 ಪಲ್ಲಕ್ಕಿಗಳು ಸಾಲು-ಸಾಲಾಗಿ ಒಂದರ ಹಿಂದೊಂದರಂತೆ ಮೆರವಣಿಯಲ್ಲಿ ಸಾಗಿದವು. ಇದನ್ನು ಕಣ್ತುಂಬಿಕೊಂಡ ಭಕ್ತ ಸಮೂಹ ಭಜನೆ, ಜೈಕಾರ ಕೂಗಿ ಸಂಭ್ರಮಿಸಿತು. ತಡರಾತ್ರಿ ಮೈದಾನಕ್ಕೆ ವಿವಿಧೆಡೆಯ ರಥಗಳು ಬಂದು ತಲುಪಿದ ಬಳಿಕ ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಲಾಯಿತು.

ದೀಪಾಲಂಕಾರ: ಜೆ.ಸಿ.ನಗರ, ಕಾವಲ್‌ಭೈರಸಂದ್ರ, ಹೆಬ್ಟಾಳ, ವಸಂತನಗರ, ರಾಜಮಹಲ್‌ ಗುಟ್ಟಹಳ್ಳಿ ಸೇರಿದಂತೆ ಹತ್ತಾರು ಬಡಾವಣೆಗಳಿಂದ ನೂರಕ್ಕೂ ಹೆಚ್ಚಿನ ದೇವರ ಮೂರ್ತಿಗಳನ್ನು ಪಲ್ಲಕ್ಕಿಗಳ ಮೇಲೆ ಕೂರಿಸಿ ಮೆರವಣಿಗೆಯಲ್ಲಿ ತರಲಾಯಿತು. ಜೆ.ಸಿ. ನಗರ ಮುಖ್ಯ ರಸ್ತೆಯುದ್ದಕ್ಕೂ ಎರಡೂ ಬದಿಗಳಲ್ಲಿ ಬಣ್ಣ-ಬಣ್ಣದ ವಿದ್ಯುತ್‌ ದೀಪ ಕಂಗೊಳಿಸುತ್ತಿದ್ದರೆ, ಮೆರವಣಿಗೆ ಮಧ್ಯೆ ದೇವತೆಗಳ ವಿಗ್ರಹ, ಮಂಟ ಪಗಳು ಕಂಗೊಳಿಸುತ್ತಿದ್ದವು. ಆರ್‌.ಟಿ.ನಗರ, ಹೆಬ್ಟಾಳ, ಸಂಜಯ್‌ ನಗರ, ಭಾರತೀನಗರ, ಪುಲಕೇಶಿನಗರ, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ, ಶಿವಾಜಿನಗರದುದ್ದಕ್ಕೂ

ವಿವಿಧ ಬಡಾವಣೆಗಳಲ್ಲಿ ಬಗೆ-ಬಗೆಯ ಪಲ್ಲಕ್ಕಿಗಳು ವಿದ್ಯುತ್‌ದೀಪಗಳಿಂದ ರಾರಾಜಿಸುತ್ತಿದ್ದವು. ಬೆಂಗಳೂರಿನ ಮೂಲೆ-ಮೂಲೆಗಳಿಂದ ಹರಿದು ಬಂದಿದ್ದ ಭಕ್ತರು ಅಲಂಕೃತ ರಥಗಳಲ್ಲಿ ದುರ್ಗಾ ದೇವಿಯ ವಿಗ್ರಹಗಳ ಜೊತೆಗೆ ಆಂಜನೇಯ, ಶ್ರೀನಿವಾಸ, ಗಣಪತಿ, ವೆಂಕಟೇಶ್ವರ ಸೇರಿದಂತೆ ನಾನಾ ಮೂರ್ತಿಗಳನ್ನು ಭಕ್ತರು ವೀಕ್ಷಿಸಿದರು.

ತಮಟೆ ಸದ್ದು, ಭಕ್ತಿ ಗೀತೆಗೆ ಪರವಶರಾದ ಜನ: ಜೆ.ಸಿ.ನಗರ ದಸರಾ ಮೆರವಣಿಗೆ ಸಾಗುತ್ತಿದ್ದ ಬಡಾವಣೆಗಳಲ್ಲೆಲ್ಲಾ ತಮಟೆ ಸದ್ದು ಮೈ ನವಿರೇಳಿಸಿದರೆ, ಭಕ್ತಿ ಗೀತೆಗಳು, ಪ್ರಸಿದ್ದ ಚಲನಚಿತ್ರ ಹಾಡುಗಳು, ವಾದ್ಯದ ಕರತಾಡನಗಳಿಗೆ ಜನ ಮಾರು ಹೋಗಿ ನಿಂತಲ್ಲೆ ಹೆಜ್ಜೆ ಹಾಕಿದರು. ಇದರೊಂದಿಗೆ ವಿವಿಧ ವೇಷ ತೊಟ್ಟ ನೃತ್ಯ ರೂಪಕಗಳು ಮೆರವಣಿಗೆಯುದ್ದಕ್ಕೂ ಸಾಗಿ ದಸರಾ ಆಕರ್ಷಣೆ ಯನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದವು.

ಶತಮಾನದ ಇತಿಹಾಸ : 

ಶತಮಾನದಷ್ಟು ಹಳೆಯದಾದ ಜೆ.ಸಿ.ನಗರ ನವರಾತ್ರಿ ಉತ್ಸವವು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಇತರ ಧರ್ಮಗಳ ಭಾವೈಕ್ಯತೆಗೂ ಸಾಕ್ಷಿಯಾಗಿದೆ. 80ರ ದಶಕದವರೆಗೂ ಇಲ್ಲಿ ಸಣ್ಣದಾಗಿ ನಡೆಯುತ್ತಿದ್ದ ದಸರಾ ನಂತರದ ವರ್ಷಗಳಲ್ಲಿ ವಿಜಯದಶಮಿಯಂದು ವೈಭವ ಪಡೆಯುತ್ತಾ ಬಂದಿದೆ. ನವರಾತ್ರಿಯ ಕೊನೆಯ ದಿನದಂದು ನಡೆಯುವ ದೇವರ ಪಲ್ಲಕ್ಕಿ ಮೆರವಣಿಗೆ ಇಲ್ಲಿ ಬಹಳ ಪ್ರಸಿದ್ಧಿ ಪಡೆದಿದೆ. ಬೆಂಗಳೂರಿನ ಎಲ್ಲ ಸಮುದಾಯದವರೂ ದಸರಾ ಕಣ್ತುಂಬಿಕೊಳ್ಳಲು ಇಲ್ಲಿಗೆ ಬರುವುದು ವಿಶೇಷತೆಯಾಗಿದೆ. ಈ ಬಾರಿ 111ನೇ ವರ್ಷದ ದಸರಾ ಉತ್ಸವ ನಡೆಯುತ್ತಿದೆ.

ಬನ್ನಿ ಮರಕ್ಕೆ ಪೂಜೆ ಬಳಿಕ ಮೆರವಣಿಗೆ :

ಹೆಬ್ಟಾಳ, ಬೋಳನಾಯಕನಹಳ್ಳಿ, ದಿನ್ನೂರು, ಕಾವಲ್‌ ಭೈರಸಂದ್ರ, ಗಂಗಾನಗರ, ಸುಲ್ತಾನ್‌ಪಾಳ್ಯ, ಮನೋರಾಯನಪಾಳ್ಯ, ನಂದಿದುರ್ಗ ರಸ್ತೆ, ಜೆ.ಸಿ. ನಗರ ಸೇರಿ ಬೆಂಗಳೂರಿನ ವಿವಿಧ ಭಾಗಗಳ ಸುತ್ತ-ಮುತ್ತಲ ಊರುಗಳಿಂದ ಬರುವ ಪಲ್ಲಕ್ಕಿಗಳು ಜೆ.ಸಿ.ನಗರದ ದಸರಾ ಮೈದಾನದಲ್ಲಿ ಸೇರುತ್ತವೆ. ನಂತರ ಬನ್ನಿಮರ ಪೂಜೆ ಮಾಡಿದ ಬಳಿಕ ಬನ್ನಿ ಕಡಿದ ಬಳಿಕ ಎಲ್ಲ ದೇವತೆಗಳು ಮೆರವಣಿಗೆಯಲ್ಲಿ ಪಲ್ಲಕ್ಕಿಗಳ ಮೂಲಕ ಜೆ.ಸಿ.ನಗರ ಮುಖ್ಯ ರಸ್ತೆ ಮೂಲಕ ಆಯಾ ಗ್ರಾಮಗಳಿಗೆ ಹೋಗುತ್ತದೆ. ಶನಿವಾರ ರಾತ್ರಿ ಶುರುವಾದ ಮೆರವಣಿಗೆ ಭಾನುವಾರ ಮುಂಜಾನೆವರೆಗೂ ನಿರಂತರವಾಗಿ ನಡೆಯುತ್ತದೆ. ಆಯಾ ಗ್ರಾಮಗಳಲ್ಲಿ ಭಾನುವಾರ ಸಂಜೆವರೆಗೂ ದಸರಾ ಉತ್ಸವ ನಡೆಯುತ್ತದೆ. ದಸರಾ ಉತ್ಸವಕ್ಕೆ ಸರ್ಕಾರವು ಈ ವರ್ಷ 70 ಲಕ್ಷ ರೂ. ಅನುದಾನ ನೀಡಿದೆ ಎಂದು ದಸರಾ ಉತ್ಸವದ ಸಂಘಟನಾ ಕಾರ್ಯದರ್ಶಿ ಆರ್‌.ಪ್ರಕಾಶ್‌ ರಾವ್‌ “ಉದಯವಾಣಿ’ಗೆ ಮಾಹಿತಿ ನೀಡಿದರು.

 

ಟಾಪ್ ನ್ಯೂಸ್

Box office: ಮಾರ್ಟಿನ್‌ To ಜಿಗ್ರಾ.. ದಸರಾಕ್ಕೆ ರಿಲೀಸ್‌ ಆದ ಸಿನಿಮಾಗಳು ಗಳಿಸಿದ್ದೆಷ್ಟು?

Box office: ಮಾರ್ಟಿನ್‌ To ಜಿಗ್ರಾ.. ದಸರಾಕ್ಕೆ ರಿಲೀಸ್‌ ಆದ ಸಿನಿಮಾಗಳು ಗಳಿಸಿದ್ದೆಷ್ಟು?

7-health

Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?

Hubli: BJP’s fight only if Muslims are named in the case: Santosh Lad

Hubli: ಪ್ರಕರಣದಲ್ಲಿ ಮುಸ್ಲಿಮರ ಹೆಸರು ಇದ್ದರೆ ಮಾತ್ರ ಬಿಜೆಪಿಯ ಹೋರಾಟ: ಸಂತೋಷ್‌ ಲಾಡ್

Shimoga: ಸಿಗಂದೂರಿಗೆ ತೆರಳುತ್ತಿದ್ದ ಪ್ರವಾಸಿಗರ ಕಾರು ಪಲ್ಟಿ

Shimoga: ಸಿಗಂದೂರಿಗೆ ತೆರಳುತ್ತಿದ್ದ ಪ್ರವಾಸಿಗರ ಕಾರು ಪಲ್ಟಿ

6-bhatkal

Bhatkala: ತೆರೆಗಳ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ

ಮಹಾರಾಷ್ಟ್ರದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದೆ: ಮಲ್ಲಿಕಾರ್ಜುನ ಖರ್ಗೆ

Baba Siddique Case: ಮಹಾರಾಷ್ಟ್ರದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದೆ: ಖರ್ಗೆ

CM Siddaramaiah defended the withdrawal of the Halehuballi cases

Hubli: ಹಳೇಹುಬ್ಬಳ್ಳಿ ಕೇಸು ಹಿಂಪಡೆದ ವಿಚಾರ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Threat: ನಿನ್ನ ಪತ್ನಿ ಸರಿಯಾಗಿ ಬಟ್ಟೆ ಹಾಕದಿದ್ದರೆ ಆ್ಯಸಿಡ್‌ ಎರಚುವೆ: ಕಿಡಿಗೇಡಿ ಬೆದರಿಕೆ

Threat: ನಿನ್ನ ಪತ್ನಿ ಸರಿಯಾಗಿ ಬಟ್ಟೆ ಹಾಕದಿದ್ದರೆ ಆ್ಯಸಿಡ್‌ ಎರಚುವೆ: ಕಿಡಿಗೇಡಿ ಬೆದರಿಕೆ

Arrested: ಈವೆಂಟ್‌ ಮ್ಯಾನೇಜ್‌ಮೆಂಟ್‌ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ

Arrested: ಈವೆಂಟ್‌ ಮ್ಯಾನೇಜ್‌ಮೆಂಟ್‌ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ

Missing Case: 20 ಲಕ್ಷ ರೂ. ಸಾಲ ಮಾಡಿ ಮನೆ ತೊರೆದ ಬ್ಯಾಂಕ್‌ ಉದ್ಯೋಗಿ

Missing Case: 20 ಲಕ್ಷ ರೂ. ಸಾಲ ಮಾಡಿ ಮನೆ ತೊರೆದ ಬ್ಯಾಂಕ್‌ ಉದ್ಯೋಗಿ

Bengaluru: ಫೋಟೋ ಕ್ಲಿಕ್ಕಿಸುವಾಗ ಅಡ್ಡ ಬಂದ ಎಚ್‌ಎಎಲ್‌ ನೌಕರನ ಮೇಲೆ ಹಲ್ಲೆ

Bengaluru: ಫೋಟೋ ಕ್ಲಿಕ್ಕಿಸುವಾಗ ಅಡ್ಡ ಬಂದ ಎಚ್‌ಎಎಲ್‌ ನೌಕರನ ಮೇಲೆ ಹಲ್ಲೆ

5

Fake Facebook Account: ಬಿಬಿಎಂಪಿ ಆಯುಕ್ತರ ಹೆಸರಲ್ಲಿ ಫೇಸ್‌ಬುಕ್‌ ಖಾತೆ ನಕಲಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Box office: ಮಾರ್ಟಿನ್‌ To ಜಿಗ್ರಾ.. ದಸರಾಕ್ಕೆ ರಿಲೀಸ್‌ ಆದ ಸಿನಿಮಾಗಳು ಗಳಿಸಿದ್ದೆಷ್ಟು?

Box office: ಮಾರ್ಟಿನ್‌ To ಜಿಗ್ರಾ.. ದಸರಾಕ್ಕೆ ರಿಲೀಸ್‌ ಆದ ಸಿನಿಮಾಗಳು ಗಳಿಸಿದ್ದೆಷ್ಟು?

7-health

Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?

2

Ajjarakadu: ಗಾಂಧಿ ಭವನ ನಿರ್ಮಾಣ ವಿಳಂಬ

Belagavi: ಸವದತ್ತಿ ಯಲ್ಲಮ್ಮ ದೇವಿಯ ಮೊರೆಹೋದ ಸಿಎಂ ಸಿದ್ದರಾಮಯ್ಯ

Belagavi: ಸವದತ್ತಿ ಯಲ್ಲಮ್ಮ ದೇವಿಯ ಮೊರೆಹೋದ ಸಿಎಂ ಸಿದ್ದರಾಮಯ್ಯ

1

Mangaluru: ಶಾರದೆಯ ಮುಡಿಗೆ 72 ಸಾವಿರ ಮಲ್ಲಿಗೆ ಮೊಗ್ಗು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.