Kadalekai Parishe: ಕಡಲೆಕಾಯಿ.. ಹಸಿ ಬಿಸಿ ಕಡಲೆಕಾಯಿ..


Team Udayavani, Dec 3, 2023, 9:30 AM IST

Kadalekai Parishe: ಕಡಲೆಕಾಯಿ.. ಹಸಿ ಬಿಸಿ ಕಡಲೆಕಾಯಿ..

ಬೆಂಗಳೂರು: ಅಮ್ಮಾ, ಅಕ್ಕ ಬನ್ನಿ ಕಡಲೆಕಾಯಿ ತೆಗೆದುಕೊಳ್ಳಿ, ಸುಟ್ಟಿರೋದು ಬೇಕಾ, ಬೇಯಿಸಿರೋದು ಬೇಕಾ ಅಥವಾ ಹಸಿ ಕಾಯಿ ಬೇಕಾ…ಹೀಗೆ ಜನರನ್ನು ಕೂಗಿ ಕರೆಯುತ್ತಿದ್ದ ದೃಶ್ಯ ಕಂಡು ಬಂದದ್ದು ನಗರದ ಮಲ್ಲೇಶ್ವರಂನ 15ನೇ ಕ್ರಾಸ್‌ನಲ್ಲಿರುವ ಕಾಡುಮಲ್ಲೇಶ್ವರ ದೇವಾಲಯದ ಮುಂಭಾಗ.

ಕರ್ನಾಟಕ ಮಾತ್ರವಲ್ಲದೇ, ನೆರೆ ರಾಜ್ಯಗಳ ರೈತರು ತಂದಿದ್ದ ತರಹೇವಾರಿ ಕಡಲೆಕಾಯಿಗಳ ರಾಶಿ ಪರಿಷೆಯ ಉದ್ದಗಲಕ್ಕೂ ಹರಡಿಕೊಂಡಿದ್ದು, ಬೇಯಿಸಿದ ಶೇಂಗಾದ ಘಮ ಎಲ್ಲೆಡೆ ಆವರಿಸಿತ್ತು. ಜೊತೆಗೆ ಅಲೆಮಾರಿ ಜನರು ತಯಾರಿಸಿದ್ದ ಬಾಗಿಲ ತೋರಣ, ರಾಧಾ-ಕೃಷ್ಣ, ಬುದ್ಧ, ಸರಸ್ವತಿ, ಶಿವಾಜಿ, ಆನೆ.. ಮುಂತಾದ ಪಿಂಗಾಣಿ ಆಕೃತಿಗಳು, ಗೃಹಾ ಲಂಕಾರಿಕ ವಸ್ತುಗಳು, ಕುಂಬಾರಿಕೆ ವಸ್ತುಗಳು, ಆಟೋಪಕರಣಗಳು, ಕಡ್ಲೆಪುರಿ, ಬತ್ತಾಸು, ಕುರುಕಲ ತಿಂಡಿಗಳು ಕಾಡುಮಲ್ಲೇಶ್ವರ ಗೆಳೆಯರ ಬಳಗ ಹಮ್ಮಿಕೊಂಡಿರುವ ಈ ಕಡಲೆಕಾಯಿ ಪರಿಷೆಯ ಸಂಭ್ರಮವನ್ನು ಹೆಚ್ಚಿಸಿವೆ.

ಕಾಡುಮಲ್ಲೇಶರಂ ಆವರಣದಲ್ಲಿರುವ ಗಂಗಮ್ಮ, ನರಸಿಂಹ ಸ್ವಾಮಿ, ಭ್ರಮರಾಂಭ ಸಮೇತ ಕಾಡುಮಲ್ಲಿಕಾರ್ಜುನ ದೇವಾಲಯ ಸನ್ನಿಧಿಯನ್ನು ಕಡಲೆಕಾಯಿ, ಹೂವು, ತೋರಣಗಳಿಂದ ಸಿಂಗರಿ ಸಿದ್ದು, ಪರಿಷೆಗೆ ಬಂದಿದ್ದ ಜನರನ್ನು ಆಕರ್ಷಿಸುತ್ತಿದೆ. ಸ್ಥಳದಲ್ಲಿಯೇ ಕಡಲೆಕಾಯಿಯನ್ನು ಉರಿದು ಬೇಯಿಸಿಕೊಡುವ ವ್ಯವಸ್ಥೆ ಮಾಡಲಾಗಿದ್ದು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿ ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಂದ ನೂರಾರು ರೈತರು ತಾವು ಬೆಳೆದ ಕಡಲೆಕಾಯಿಯನ್ನು ಪರಿಷೆಗೆ ತಂದಿದ್ದಾರೆ.

ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ, ನೇರ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ. ಬೀದಿಬದಿ ವ್ಯಾಪಾರಿಗಳೂ ಇಲ್ಲಿ ಅವಕಾಶ ನೀಡಲಾಗಿದೆ. 300 ಮಳಿಗೆಗಳನ್ನು ತೆರೆಯಲಾಗಿದೆ.

ಪ್ಲಾಸ್ಟಿಕ್‌ ಬಳಕೆ ನಿಷೇಧ ಕುರಿತು ಜಾಗೃತಿ: ಪಾಸ್ಟಿಕ್‌ ಬಳಕೆ ನಿಷೇಧಿಸಿ, ಪರಿಸರ ಉಳಿಸಿ ಎಂಬ ಧ್ಯೇಯದಿಂದ ಭರವಸೆ ಎಂಬ ಸರ್ಕಾರೇತರ ಸಂಸ್ಥೆ ಜತೆಗೆ ನಿಟ್ಟೆ, ಎನ್‌ಇಎಸ್‌ ಕಾಲೇ ಜಿನ ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರು ಸೇರಿಕೊಂಡು, ಪ್ಲಾಸ್ಟಿಕ್‌ ನಿಷೇಧದ ಸ್ಲೋಗನ್‌ಗಳ ಫ‌ಲಕ ಹಿಡಿದು, ಲಕ್ಷಾಂತರ ಜನ ಆಗಮಿಸುವ ಕಡಲೆಕಾಯಿ ಪರಿಷೆಯ ಬೀದಿಯಲ್ಲಿ ಜಾಗೃತಿ ಮೂಡಿ ಸಿದರು.

ಪರಿಷೆಗೆ ಬರುವ ಜನರ ಕೈಯಲ್ಲಿರುವ ಪ್ಲಾಸ್ಟಿಕ್‌ ಕವರ್‌ ಅನ್ನು ತೆಗೆದುಕೊಂಡು, ಅವರಿಗೆ ಬಟ್ಟೆ ಚೀಲವನ್ನು ಉಚಿತವಾಗಿ ಕೊಡಲಾಗುತ್ತದೆ ಎಂದು ಭರವಸೆಯ ಸುನೀಲ್‌ ಹೇಳಿದರು.

800 ಕೆ.ಜಿ. ಕಡಲೆಕಾಯಿಗಳಿಂದ ಸಿಂಗಾರಗೊಂಡ ನಂದಿ ವಿಗ್ರಹ:  ‌ಗಂಗಮ್ಮ ದೇವಸ್ಥಾನದ ಆವರಣದಲ್ಲಿ 20 ಅಡಿ ಉದ್ದ ಮತ್ತು 20 ಅಡಿ ಅಗಲದ ನಂದಿ(ಬಸವಣ್ಣ)ಯನ್ನು 800 ಕೆ.ಜಿ. ಕಡಲೆಕಾಯಿಯಿಂದ ಅಲಂಕರಿಸಲಾಗಿದೆ. ಇದನ್ನು 10ರಿಂದ 15 ಜನ ಕಲಾವಿದರ ತಂಡ ವಾರದಿಂದ ಅಲಂಕರಿಸಿದೆ. ಥರ್ಮಕೋಲಿನಿಂದ ಬೃಹತ್‌ ನಂದಿಯನ್ನು ತಯಾರಿಸಿ, ನಂತರ ಗಟ್ಟಿ ಹಾಗೂ ಉತ್ತಮವಾಗಿರುವ 800 ಕೆ.ಜಿ. ಶೇಂಗಾ ಕಾಯಿಗಳನ್ನು ಅದಕ್ಕೆ ಅಂಟಿಸುವ ಮೂಲಕ ಶೃಂಗಾರಿಸಲಾಗಿದೆ. ವಿದ್ಯಾರ್ಥಿಗಳು ಈ ನಂದಿ ಮುಂದೆ ನಿಂತು ತಮ್ಮ ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡರೆ, ಕುಟುಂಬ ಸಮೇತ ಬಂದಿದ್ದವರು ಗ್ರೂಪ್‌ ಫೋಟೋ ತೆಗೆಸಿಕೊಂಡು ಸಂಭ್ರಮಿಸುತ್ತಿದ್ದರು.

ನಾಲ್ಕೈದು ವರ್ಷಗಳಿಂದ ಕಡಲೆಕಾಯಿ ಪರಿಷೆಗೆ ತಮಿಳುನಾಡಿನ ಧರ್ಮಪುರಿ ಯಿಂದ ಬರುತ್ತಿದ್ದೇವೆ. ನಮ್ಮಲ್ಲಿ ಸುಟ್ಟಿರುವ, ಬೇಯಿಸಿರುವ ಹಾಗೂ ಹಸಿ ಕಡಲೆ ಕಾಯಿ ಮತ್ತು ಮೂರೂಂಡೆ ಕಾಯಿಯೂ ಸಿಗಲಿದೆ. ಕೆಲವರು ಸುಟ್ಟಿರುವ ಕಾಯಿ ತೆಗೆದು ಕೊಂಡರೆ, ಹಲವರು ಹಸಿ ಕಾಯಿಯನ್ನು ಖರೀದಿಸುತ್ತಾರೆ. ವ್ಯಾಪಾರವೂ ಚೆನ್ನಾಗಿದೆ. ರಾಜೇಶ್ವರಿ, ಕಡಲೆಕಾಯಿ ವ್ಯಾಪಾರಿ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.