![Shivamogga: ಹೊಟೇಲ್ನಲ್ಲಿ ಯುವಕ, ಯುವತಿಯ ವಿಡಿಯೋ ತೆಗೆದು ಕಿಡ್ನಾಪ್… ಹಣಕ್ಕೆ ಬೇಡಿಕೆ](https://www.udayavani.com/wp-content/uploads/2025/02/shivamogga-1-415x231.jpg)
![Shivamogga: ಹೊಟೇಲ್ನಲ್ಲಿ ಯುವಕ, ಯುವತಿಯ ವಿಡಿಯೋ ತೆಗೆದು ಕಿಡ್ನಾಪ್… ಹಣಕ್ಕೆ ಬೇಡಿಕೆ](https://www.udayavani.com/wp-content/uploads/2025/02/shivamogga-1-415x231.jpg)
Team Udayavani, Jan 29, 2025, 11:12 AM IST
ಬೆಂಗಳೂರು: “ನಮ್ಮ ಮೆಟ್ರೋ’ ಪರಿಷ್ಕೃತ ಪ್ರಯಾಣ ದರ ನಿಗದಿಗೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ ಸಿಎಲ್ )ದಿಂದ ಕೇಂದ್ರ ಸರ್ಕಾರ ಮಾಹಿತಿ ಕೇಳಿದೆ. ಬಿಎಂಆರ್ಸಿಎಲ್ ಆಡಳಿತ ಮಂಡಳಿ ಸಭೆಯು ಇತ್ತೀಚೆಗೆ ಪ್ರಯಾಣ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ದರ ನಿಗದಿ ಸಮಿತಿ (ಎಫ್ಎಫ್ಸಿ) ನೀಡಿದ ಶಿಫಾ ರಸಿನ ಪ್ರಸ್ತಾವನೆಗೆ ಅನುಮೋದನೆ ನೀಡಿತ್ತು. ಇದರ ಬೆನ್ನಲ್ಲೇ ಪರಿಷ್ಕರಿಸಲು ಉದ್ದೇಶಿಸಿರುವ ದರ ನಿಗದಿ ಕುರಿತ ಹೆಚ್ಚಿನ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರ ವಿವರ ಕೇಳಿದೆ ಎಂದು ಮೂಲಗಳು ತಿಳಿಸಿವೆ.
ಈಗಿರುವ ದರವನ್ನೇ ಮುಂದುವರಿಸಬೇಕು: ಈಗಾಗಲೇ ಬಸ್ ಪ್ರಯಾಣ ದರ ಶೇ. 15ರಷ್ಟು ಹೆಚ್ಚಳ ಮಾಡಲಾಗಿದೆ. ಈಗ ಮೆಟ್ರೋ ಪ್ರಯಾಣ ದರವನ್ನೂ ಏರಿಕೆ ಮಾಡುತ್ತಿರುವುದು ಸರಿ ಅಲ್ಲ. ಇಂತಹ ಕ್ರಮಗಳು ಸಾರ್ವಜನಿಕ ಸಾರಿಗೆಯನ್ನು ಉತ್ತೇಜನಕ್ಕೆ ತದ್ವಿರುದ್ಧವಾಗಿವೆ ಎಂದು ಎಲ್ಲೆಡೆ ಯಿಂದ ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ಪೂರಕವಾಗಿ ಸಂಸದ ಪಿ.ಸಿ. ಮೋಹನ್, “ಮೆಟ್ರೋ ಸಂಚಾರಕ್ಕೆ ಜನ ಹೊಂದಿಕೊಂಡಿದ್ದಾರೆ. ಈ ಹಂತದಲ್ಲಿ ಪ್ರಯಾಣ ದರ ಹೆಚ್ಚಳ ಮಾಡಿದರೆ, ಜನ ಮತ್ತೆ ತಮ್ಮ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಮರಳುವ ಸಾಧ್ಯತೆ ಇದೆ. ಇದರಿಂದ ಸಂಚಾರದಟ್ಟಣೆ ಉಂಟಾಗಲಿದೆ. ಹಾಗಾಗಿ, ಈಗಿರುವ ದರವನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದ್ದರು.
ಮತ್ತೂಂದೆಡೆ ಮೆಟ್ರೋ ನಿಯಮದ ಪ್ರಕಾರ ಪ್ರತಿ ಎರಡು ವರ್ಷಗಳಿಗೊಮ್ಮೆ ದರ ಪರಿಷ್ಕರಣೆ ಆಗಬೇಕು. ಆದರೆ, ಏಳು ವರ್ಷಗಳಿಂದ ಪರಿಷ್ಕರಣೆ ಆಗಿಲ್ಲ. ಈ ಮಧ್ಯೆ ಒಂದೆಡೆ ಜಾಲ ವಿಸ್ತರಣೆ ಮತ್ತೂಂದೆಡೆ ಮೂರು ಬೋಗಿಗಳಿಂದ ಆರು ಬೋಗಿಗಳಾಗಿ ಮಾರ್ಪಾಡು ಮತ್ತಿತರ ಕಾರಣ ಗಳಿಂದ ಕಾರ್ಯಾಚರಣೆ ವೆಚ್ಚ ಏರಿಕೆಯಾಗಿದೆ ಎಂಬ ವಾದ ಅಧಿಕಾರಿಗಳದ್ದಾಗಿದೆ. ಈ ನಡುವೆ ಕೇಂದ್ರವು ಮಾಹಿತಿ ಕೇಳಿದೆ ಎನ್ನಲಾಗಿದೆ.
15 ರೂ. ಹಾಗೂ 80 ರೂ.ಗೆ ಹೆಚ್ಚಿಸಲು ಚಿಂತನೆ: ದರ ನಿಗದಿ ಸಮಿತಿಯು ಸರಾಸರಿ ಶೇ. 45ರಷ್ಟು ಮೆಟ್ರೋ ಪ್ರಯಾಣ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆಡಳಿತ ಮಂಡಳಿಯು ಇದನ್ನು ಅಳೆದು -ತೂಗಿ ಪರಿಷ್ಕೃತ ದರ ನಿಗದಿಪಡಿಸಿದೆ. ಎಲ್ಲ ಹಂತದ ದರ ಪರಿಷ್ಕರಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ ಕನಿಷ್ಠ ದರ 10 ರೂ. ಹಾಗೂ ಗರಿಷ್ಠ ದರ 60 ರೂ. ಇತ್ತು. ಈಗ ಅದನ್ನು ಕ್ರಮವಾಗಿ 15 ರೂ. ಹಾಗೂ 80 ರೂ.ಗೆ ಹೆಚ್ಚಿಸಲು ಗಂಭೀರ ಚಿಂತನೆ ನಡೆದಿದೆ.
Shivamogga: ಹೊಟೇಲ್ನಲ್ಲಿ ಯುವಕ, ಯುವತಿಯ ವಿಡಿಯೋ ತೆಗೆದು ಕಿಡ್ನಾಪ್… ಹಣಕ್ಕೆ ಡಿಮಾಂಡ್
Kunigal: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ.. ಮಹಿಳೆ ಸ್ಥಳದಲ್ಲೇ ಮೃತ್ಯು, ಇಬ್ಬರಿಗೆ ಗಾಯ
Earthquake: ಪ್ರಬಲ ಭೂಕಂಪ: ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದ ದೆಹಲಿ ಜನ.. 4.0ತೀವ್ರತೆ ದಾಖಲು
Delhi Stampede: ನನ್ನ ಪತ್ನಿ ತಾರಾ ಎಲ್ಲಿ?..ನಾಪತ್ತೆಯಾದ ಪತ್ನಿಗಾಗಿ ಪತಿಯ ಹುಡುಕಾಟ!
Robbery Case: ಅಸಲಿ ಪೊಲೀಸ್ನ ನಕಲಿ ಆಟವನ್ನು ಭೇದಿಸಿದರು!
You seem to have an Ad Blocker on.
To continue reading, please turn it off or whitelist Udayavani.