ಮುಖ್ಯಪೇದೆ, ಎಎಸ್ಐಗೆ ಚಾರ್ಜ್ಶೀಟ್ ಹೊಣೆ
Team Udayavani, Apr 11, 2017, 12:25 PM IST
ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತಾ ಅವರು ಸೋಮವಾರ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು, ಎಎಸ್ಐ ಹಾಗೂ ಹೆಡ್ಕಾನ್ಸ್ಟೆಬಲ್ಗಳಿಗೂ ಎಫ್ಐಆರ್ ದಾಖಲಿಸುವದರ ಜತೆಗೆ ತನಿಖೆ ನಡೆಸಿ ಚಾರ್ಜ್ಶೀಟ್ ಸಲ್ಲಿಸುವ ಹೊಣೆ ನೀಡಿದ್ದಾರೆ.
ಈ ಹಿಂದೆ ಸಬ್ಇನ್ಸ್ಪೆಕ್ಟರ್ ಮತ್ತು ಅವರಿಗೂ ಮೇಲ್ಪಟ್ಟ ಅಧಿಕಾರಿಗಳಿಗೆ ಮಾತ್ರ ಚಾರ್ಜ್ಶೀಟ್ ಸಲ್ಲಿಸುವ ಅಧಿಕಾರವಿತ್ತು. ಸದ್ಯದ ಆದೇಶದ ಪ್ರಕಾರ ಠಾಣೆಯ ಎಎಸ್ಐ ಹಾಗೂ ಹೆಡ್ಕಾನ್ಸ್ಟೆಬಲ್ ಕೂಡ ಸಾಧಾರಣ ರಸ್ತೆ ಅಪಘಾತ ಹಾಗೂ ಸಣ್ಣ-ಪುಟ್ಟ ಹಲ್ಲೆ ಪ್ರಕರಣಗಳ ಪ್ರಾಥಮಿಕ ತನಿಖಾ ವರದಿ ಸಿದ್ಧಪಡಿಸಿ, ಚಾರ್ಜ್ಶೀಟ್ ಸಲ್ಲಿಸಬಹುದು.
ಹಿರಿಯ ಅಧಿಕಾರಿಗಳ ಮೇಲೆನ ಹೊರೆ ಇಳಿಕೆ: ರಾಜ್ಯ ಪೊಲೀಸ್ ಇಲಾಖೆಯ ಇತಿಹಾಸದಲ್ಲೇ ಇದೊಂದು ಮಹತ್ತರ ನಿರ್ಧಾರಾಗಿದ್ದು, ಈ ಕ್ರಮದಿಂದ ಹಿರಿಯ ಅಧಿಕಾರಿಗಳ ಮೇಲಿನ ಕೆಲಸದೊತ್ತಡ ಕಡಿಮೆಯಾಗಲಿದೆ. ಪೊಲೀಸ್ ಇಲಾಖೆಯಲ್ಲಿರುವ ಶೇ.90ರಷ್ಟು ಮಂದಿ ಎಎಸ್ಐ ಮತ್ತು ಹೆಡ್ಕಾನ್ಸ್ಟೆಬಲ್ಗಳು ಪದವಿಧರರಾಗಿದ್ದು, ಅವರಲ್ಲಿರುವ ಜ್ಞಾನವನ್ನು ಈ ಮೂಲಕ ಬಳಸಿಕೊಳ್ಳಲು ಸಾಧ್ಯವಿದೆ.
ಜತೆಗೆ ಹಿರಿಯ ಅಧಿಕಾರಿಗಳ ನಡುವಿನ ಅಧಿಕಾರದ ಅಂತರ ಕಡಿಮೆ ಮಾಡಲು ಮತ್ತು ಪ್ರಕರಣಗಳನ್ನು ನಿರ್ವಹಿಸುವ ಅನುಭವವನ್ನು ಹೆಚ್ಚಿಸುವ ಸಲುವಾಗಿ ಈ ನಿರ್ಧಾರಕೈಗೊಳ್ಳಲಾಗಿದೆ. ಈ ರೀತಿ ಸಿಬ್ಬಂದಿಯಲ್ಲಿ ಉತ್ತೇಜನ ನೀಡುವುದರಿಂದ ಮುಂದಿನ ದಿನಗಳಲ್ಲಿ ಇಲಾಖೆಯಲ್ಲಿ ದಕ್ಷ ಹಾಗೂ ಉತ್ತಮ ಅಧಿಕಾರಿಗಳ ಸೇವೆ ಇಲಾಖೆಗೆ ದೊರೆಯಲಿದೆ ಎಂದು ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತಾ ಉದಯವಾಣಿಗೆ ತಿಳಿಸಿದರು.
ಯ್ನಾವ್ಯಾವ ಪ್ರಕರಣಗಳು?: ಸಾಧಾರಣ ರಸ್ತೆ ಅಪಘಾತ(ಐಪಿಸಿ 279, 377). ಹಲ್ಲೆ, ದರೋಡೆ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಅವರೇ ಚಾರ್ಜ್ಶೀಟ್ ಸಲ್ಲಿಸಬಹುದಾಗಿದೆ. ಇದಕ್ಕೆ ಹಿರಿಯ ಅಧಿಕಾರಿಗಳ ಮಾಗದರ್ಶನವು ಇರಲಿದೆ.
ಸಿಬ್ಬಂದಿಯ ಪ್ರೋತ್ಸಾಹಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಎಸ್ಐ, ಹೆಡ್ಕಾನ್ಸ್ಟೆಬಲ್ಗಳು ತನಿಖೆ ನಡೆಸಿ ಚಾರ್ಜ್ಶೀಟ್ ಸಲ್ಲಿಸಬಹುದು. ಇದರಿಂದ ಭವಿಷ್ಯದಲ್ಲಿ ಇಲಾಖೆ ಬಹಳ ಉಪಯೋಗವಾಗಲಿದೆ.
-ಆರ್.ಕೆ.ದತ್ತಾ, ಪೊಲೀಸ್ ಮಹಾನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.