ರೈತಸಂಘದ ಹೆಸರು,ಹಸಿರು ಶಾಲು ಶೀಘ್ರವೇ ಬದಲು!


Team Udayavani, Nov 27, 2017, 6:05 AM IST

Ban27111701Medn.jpg

ನಾಡೋಜ ಡಾ.ದೇ.ಜವರೇಗೌಡ ವೇದಿಕೆ ಮೈಸೂರು: ಪೊ. ಎಂ. ಡಿ. ನಂಜುಂಡಸ್ವಾಮಿ ಅವರ ನಾಯಕತ್ವದಲ್ಲಿ 80ರ ದಶಕದಲ್ಲಿ ನಾಡಿನಲ್ಲಿ ಪ್ರಬಲವಾಗಿದ್ದ ರೈತ ಸಂಘಟನೆಯ ಹೆಸರು ಮತ್ತು ಹಸಿರು ಶಾಲು ಸದ್ಯದಲ್ಲೇ ಬದಲಾಗಲಿದೆ.

ರೈತರ ಸಮಸ್ಯೆಗಳನ್ನು ಆಳುವ ಸರ್ಕಾರಗಳಿಗೆ ಮನವರಿಕೆ ಮಾಡಿಕೊಡಲು ಸಾವಿರಾರು ರೈತರನ್ನು ಸೇರಿಸಿ ಹೆಗಲ ಮೇಲಿನ ಹಸಿರು ಶಾಲನ್ನು ಮೇಲೆತ್ತಿ ತಿರುಗಿಸಿದರೆ ಅದಕ್ಕೊಂದು ತಾಕತ್ತು ಇತ್ತು. ಸರ್ಕಾರ ರೈತರ ಮುಂದೆ ಮಂಡಿಯೂರಿ ಕುಳಿತುಕೊಳ್ಳಬೇಕಾದ ಸ್ಥಿತಿ ಇತ್ತು. ದಶಕಗಳ ಕಾಲ ರೈತಸಂಘಟನೆಯನ್ನು ಮುನ್ನಡೆಸಿದ ಪೊ›.ಎಂಡಿಎನ್‌, ತಮ್ಮ ವಿಚಾರಪೂರಿತ ಮೊನಚು ಮಾತುಗಳ ಮೂಲಕ ಹಳ್ಳಿ ಹಳ್ಳಿ ತಿರುಗಿ ಸಂಘಟನೆಗೊಂದು ಹೊಸ ದಿಕ್ಕು ತೋರಿಸಿದ್ದರು. ಆ ಶಾಲು ಆಳುವ ಸರ್ಕಾರಗಳನ್ನೇ ನಡುಗುವಂತೆ ಮಾಡಿತ್ತು. ಆದರೆ, ಆ ಶಾಲು ಈಗ ಇತಿಹಾಸದ ಪುಟ ಸೇರಲಿದೆ. ಈ ಸುಳಿವನ್ನು ಕೊಟ್ಟಿದ್ದು ಸಾಹಿತ್ಯ ಸಮ್ಮೇಳನದಲ್ಲಿನ ಜನಪರ ಚಳವಳಿಗಳು ವಿಚಾರಗೋಷ್ಠಿ.

ಅಲ್ಲಿ ಮಾತನಾಡಿದ ರೈತಸಂಘದ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ, ಕೆಲವರ ಅಧಿಕಾರ ದಾಹದಿಂದ ಹರಿದು ಹಂಚಿಹೋಗಿರುವ ರೈತ ಸಂಘಟನೆಗಳನ್ನು ಒಗ್ಗೂಡಿಸುವ ಕಾರ್ಯವನ್ನು ಆಗಾಗ ಮಾಡಿದರೂ ಮತ್ತೆ ಮತ್ತೆ ವಿಘಟನೆಯಾಗುತ್ತಿರುವ ಜತೆಗೆ ರೈತಸಂಘದ ಹೆಸರು ಮತ್ತು ಹಸಿರು ಶಾಲು ದುರುಪಯೋಗ ಆಗುತ್ತಿದೆ. ಇದನ್ನು ತಡೆಯಲು ರೈತಸಂಘ-ಹಸಿರು ಸೇನೆ ಹೆಸರು ಮಾರ್ಪಾಡಿಗೆ ಚಿಂತನೆ ನಡೆದಿದ್ದು, ಡಿ.21ರಂದು ನಡೆಯುವ ರೈತಸಂಘದ ರಾಜ್ಯಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ರೈತ ಚಳುವಳಿ ಹುಟ್ಟಿಕೊಂಡ ಬಗೆಯನ್ನು ವಿವರಿಸಿದ್ದಲ್ಲದೇ, ನವಲುಗುಂದ-ನರಗುಂದ ಹೋರಾಟ, ಗುಂಡೂರಾವ್‌ ಸರ್ಕಾರದ ರೈತ ವಿರೋಧಿ ನಡೆ ವಿರೋಧಿಸಿ ನಡೆದ ಹೋರಾಟಗಳನ್ನೂ ಪಾಟೀಲ ಅವರು ನೆನಪಿಸಿಕೊಂಡರು. 

ಸಂಘಟನೆಯ ಹೆಸರು ಹಾಗೂ ಶಾಲು ದುರುಪಯೋಗ ಆಗುತ್ತಿರುವುದನ್ನು ತಡೆಗಟ್ಟಲು ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ಹೆಸರು ಮಾರ್ಪಾಡಿಗೆ ಚಿಂತನೆ ನಡೆದಿದೆ. ಡಿ.21ರಂದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
– ಚಾಮರಸ ಮಾಲಿ ಪಾಟೀಲ, ರಾಜ್ಯ ರೈತಸಂಘ ಅಧ್ಯಕ್ಷರು

– ಗಿರೀಶ್‌ ಹುಣಸೂರು

ಟಾಪ್ ನ್ಯೂಸ್

High-Court

Mangaladevi Temple: ಹೈಕೋರ್ಟ್‌ ತಡೆಯಾಜ್ಞೆ ಆದೇಶಕ್ಕೆ ಆಡಳಿತ ಮಂಡಳಿಯಿಂದ ಅರ್ಜಿ

1KH-HOSPITAL

Manipal: ಅನ್ನನಾಳ ರಂಧ್ರ ಸಮಸ್ಯೆಗೆ ನವೀನ ಎಂಡೋಸ್ಕೋಪಿಕ್‌ ಚಿಕಿತ್ಸೆ

CHowta

Mangaluru: ರೈಲು ಹಳಿ ಮೇಲೆ ಕಲ್ಲಿಟ್ಟ ಆರೋಪಿಗಳ ತಕ್ಷಣ ಬಂಧಿಸಿ: ಸಂಸದ ಕ್ಯಾ. ಚೌಟ ಆಗ್ರಹ

RSS-1

Organaisation: ಅಮೆರಿಕದಲ್ಲಿ ಆರೆಸ್ಸೆಸ್‌ ಸಂಘಟನೆಗೆ ಉತ್ತಮ ಸ್ಪಂದನೆ: ವಿಪುಲ್‌ ರೈ

M.Bhandary

Costal: ಡ್ರಗ್ಸ್‌ ಮಟ್ಟ ಹಾಕಲು ಕಾನೂನು ಬದಲಾವಣೆ ಚರ್ಚೆ: ಎಂಎಲ್‌ಸಿ ಮಂಜುನಾಥ ಭಂಡಾರಿ

Mangaluru-VV

Mangaluru: ಸರಕಾರಿ ಕಾಲೇಜಿನ ಎಂಎಸ್‌ಡಬ್ಲ್ಯು ವಿದ್ಯಾರ್ಥಿಗಳಿಗೆ ಸಂಕಷ್ಟ

money

Madikeri: ಹಣ ನೀಡದೆ ವಂಚನೆ: ಖಾಸಗಿ ಸಂಸ್ಥೆ ವಿರುದ್ಧ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Caste census: ವೀರಶೈವ-ಲಿಂಗಾಯತ ಒಬಿಸಿ ಸೇರ್ಪಡೆಗೆ ಒತ್ತಾಯ

Caste census: ವೀರಶೈವ-ಲಿಂಗಾಯತ ಒಬಿಸಿ ಸೇರ್ಪಡೆಗೆ ಒತ್ತಾಯ

ಶೀಘ್ರ ಕನ್ನಡ ಕಸ್ತೂರಿ ತಂತ್ರಾಂಶ ಲೋಕಾರ್ಪಣೆ: ಡಾ| ಬಿಳಿಮಲೆ

ಶೀಘ್ರ ಕನ್ನಡ ಕಸ್ತೂರಿ ತಂತ್ರಾಂಶ ಲೋಕಾರ್ಪಣೆ: ಡಾ| ಬಿಳಿಮಲೆ

Heavy rains: ಮಳೆಯಬ್ಬರಕ್ಕೆ ಜನಜೀವನ ತತ್ತರ, ಅಪಾರ ಬೆಳೆ ಹಾನಿ, ನಷ್ಟ

Heavy rains: ಮಳೆಯಬ್ಬರಕ್ಕೆ ಜನಜೀವನ ತತ್ತರ, ಅಪಾರ ಬೆಳೆ ಹಾನಿ, ನಷ್ಟ

25 ಸಾವಿರ ಎಕರೆ ಬೆಳೆ ನಷ್ಟ ಮಾಹಿತಿ: ಚಲುವರಾಯಸ್ವಾಮಿ

Rain: 25 ಸಾವಿರ ಎಕರೆ ಬೆಳೆ ನಷ್ಟ ಮಾಹಿತಿ: ಚಲುವರಾಯಸ್ವಾಮಿ

Priyank Kharge: ನಿಪುಣ ಕರ್ನಾಟಕ ಕಾರ್ಯಕ್ರಮಕ್ಕೆ ಶೀಘ್ರ ಚಾಲನೆ

Priyank Kharge: ನಿಪುಣ ಕರ್ನಾಟಕ ಕಾರ್ಯಕ್ರಮಕ್ಕೆ ಶೀಘ್ರ ಚಾಲನೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

High-Court

Mangaladevi Temple: ಹೈಕೋರ್ಟ್‌ ತಡೆಯಾಜ್ಞೆ ಆದೇಶಕ್ಕೆ ಆಡಳಿತ ಮಂಡಳಿಯಿಂದ ಅರ್ಜಿ

1KH-HOSPITAL

Manipal: ಅನ್ನನಾಳ ರಂಧ್ರ ಸಮಸ್ಯೆಗೆ ನವೀನ ಎಂಡೋಸ್ಕೋಪಿಕ್‌ ಚಿಕಿತ್ಸೆ

CHowta

Mangaluru: ರೈಲು ಹಳಿ ಮೇಲೆ ಕಲ್ಲಿಟ್ಟ ಆರೋಪಿಗಳ ತಕ್ಷಣ ಬಂಧಿಸಿ: ಸಂಸದ ಕ್ಯಾ. ಚೌಟ ಆಗ್ರಹ

RSS-1

Organaisation: ಅಮೆರಿಕದಲ್ಲಿ ಆರೆಸ್ಸೆಸ್‌ ಸಂಘಟನೆಗೆ ಉತ್ತಮ ಸ್ಪಂದನೆ: ವಿಪುಲ್‌ ರೈ

M.Bhandary

Costal: ಡ್ರಗ್ಸ್‌ ಮಟ್ಟ ಹಾಕಲು ಕಾನೂನು ಬದಲಾವಣೆ ಚರ್ಚೆ: ಎಂಎಲ್‌ಸಿ ಮಂಜುನಾಥ ಭಂಡಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.