ಐಟಿ ನಗರಿಯಲ್ಲೇ ಇಲ್ಲ ತಂತ್ರಜ್ಞಾನ ಬಳಕೆ!


Team Udayavani, Mar 14, 2022, 4:28 PM IST

ಐಟಿ ನಗರಿಯಲ್ಲೇ ಇಲ್ಲ ತಂತ್ರಜ್ಞಾನ ಬಳಕೆ!

ಬೆಂಗಳೂರು: “ದೀಪದ ಕೆಳಗೆ ಕತ್ತಲು’ ಅಂತಾರೆ. ತಂತ್ರಜ್ಞಾನದ ಬಳಕೆ ವಿಚಾರದಲ್ಲಿ ಅದರಲ್ಲೂ ಬೆಂಗಳೂರಿನ ಮಟ್ಟಿಗೆ ಇದು ಅನ್ವರ್ಥಕವಾಗಿದೆ!

ದೇಶದಲ್ಲಿ ಗರಿಷ್ಠ ಐಟಿ ಸೇವೆಗಳು ರಫ್ತು ಆಗುವುದು ಬೆಂಗಳೂರಿನಿಂದ. ಆ ಮೂಲಕ ಗರಿಷ್ಠ ಆದಾಯ ತಂದುಕೊಡುತ್ತಿದೆ. ಇದೇ ಕಾರಣಕ್ಕೆ ಉದ್ಯಾನ ನಗರಿಗೆ “ಸಿಲಿಕಾನ್‌ ಸಿಟಿ’ಯ ಗರಿ ಕೂಡ ಇದೆ. ಆದರೆ, ಆತಂತ್ರಜ್ಞಾನದ ಬಳಕೆಯಲ್ಲಿ ಮಾತ್ರ ಇದು ತದ್ವಿರುದ್ಧವಾಗಿದೆ.

ಸ್ಥಳೀಯ ಮಟ್ಟದಲ್ಲಿ ತಂತ್ರಜ್ಞಾನ ಅಳವಡಿಕೆಯಲ್ಲಿ ಬೆಂಗಳೂರು ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ. ಈ ನಿಟ್ಟಿನಲ್ಲಿ ನಾವಿನ್ನೂ ಸಾಕಷ್ಟು ಪ್ರಗತಿ ಸಾಧಿಸಬೇಕಾಗಿದೆ. – ಇದನ್ನು ಯಾವುದೇ ಪ್ರತಿಪಕ್ಷಗಳ ನಾಯಕರ ಆರೋಪ ಅಲ್ಲ, ಯಾರೋ ತಜ್ಞರ ಅಭಿಪ್ರಾಯಗಳೂ ಅಲ್ಲ. ಸ್ವತಃ ಕರ್ನಾಟಕ ಆರ್ಥಿಕ ಸಮೀಕ್ಷೆ 2021-22ವರದಿಯಲ್ಲಿನ ಅಂಶಗಳಾಗಿವೆ. ಈ ವರದಿಯು ಈಚೆಗೆ ಬಜೆಟ್‌ ಅಧಿವೇಶನದಲ್ಲಿ ಮಂಡನೆಯಾಗಿದೆ.

ಕೇವಲ ತಂತ್ರಜ್ಞಾನ ಬಳಕೆಯಲ್ಲಿ ಅಲ್ಲ; ಹಣಕಾಸುಮತ್ತು ಯೋಜನಾ ಅನುಷ್ಠಾನದಲ್ಲೂ ಬೆಂಗಳೂರಿನ ಪ್ರದರ್ಶನ ಕಳಪೆಯಾಗಿದ್ದು, ದೇಶದ ಇತರ ಮಹಾನಗರ ಪಾಲಿಕೆಗಳಿಗೆ ಹೋಲಿಸಿದರೆ, ಸಾಕಷ್ಟು ಹಿಂದೆಬಿದ್ದಿದೆ. ಈಅಂಶಗಳು ಆಡಳಿತದ ರಚನೆಯ ಶಿಥಿಲತೆ ಮತ್ತುವೈಫ‌ಲ್ಯಗಳನ್ನು ಎತ್ತಿಹಿಡಿಯುತ್ತವೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.

ಸ್ಥಳೀಯ ಆಡಳಿತದಲ್ಲಿ ತಂತ್ರಜ್ಞಾನದ ಬಳಕೆಯಲ್ಲಿ ಬೆಂಗಳೂರು 25ನೇ ಸ್ಥಾನದಲ್ಲಿದ್ದರೆ, ಯೋಜನಾಜಾರಿಯಲ್ಲಿ 36 ಹಾಗೂ ಹಣಕಾಸು ನಿರ್ವಹಣೆಯಲ್ಲಿ40ನೇ ಸ್ಥಾನದಲ್ಲಿದೆ. ನೆರೆಯ ಚೆನ್ನೈ, ಹೈದರಾಬಾದ್‌,ಮುಂಬೈ ಮತ್ತು ರಾಷ್ಟ್ರ ರಾಜಧಾನಿ ದೆಹಲಿಗಳಿಗಿಂತಸಾಕಷ್ಟು ಹಿಂದಿರುವುದನ್ನು ಕಾಣಬಹುದು. ಈ ಮೂರುಕ್ಷೇತ್ರಗಳಲ್ಲಿ ನೆರೆಯ ಮಹಾನಗರ ಪಾಲಿಕೆಗಳು ಅತ್ಯುತ್ತಮಪ್ರದರ್ಶನ ನೀಡಿವೆ. ಅದರಲ್ಲೂ ಚೆನ್ನೈ ಹಣಕಾಸುನಿರ್ವಹಣೆಯಲ್ಲಿ 3ನೇ ಸ್ಥಾನದಲ್ಲಿದ್ದರೆ, ಬೃಹತ್‌ ಮುಂಬೈ ಯೋಜನಾ ಅನುಷ್ಠಾನದಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನು ತಂತ್ರಜ್ಞಾನದಲ್ಲಿ ಇದೇ ಮುಂಬೈ 11 ಹಾಗೂ ಹೈದರಾಬಾದ್‌ 13ನೇ ಸ್ಥಾನದಲ್ಲಿವೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಡಿಜಿಟಲ್‌ ಆಡಳಿತ, ಬಳಕೆ ಮತ್ತು ಅದರ ಸಾಕ್ಷರತೆ ಬರುತ್ತದೆ. ಅದೇ ರೀತಿ, ನಗರಯೋಜನೆಯಲ್ಲಿ ಯೋಜನಾ ತಯಾರಿ, ಜಾರಿ ಮತ್ತುಅಳವಡಿಕೆ ಹಾಗೂ ಹಣಕಾಸಿನಲ್ಲಿ ನಿರ್ವಹಣೆ, ವೆಚ್ಚ,ಹೊಣೆಗಾರಿಕೆ ಮತ್ತು ವಿತ್ತೀಯ ವಿಕೇಂದ್ರೀಕರಣವನ್ನುಆಧರಿಸಿ ಆಯಾ ನಗರಗಳಿಗೆ ಅಂಕಗಳು ಮತ್ತು ಸ್ಥಾನಗಳನ್ನು ನೀಡಲಾಗುತ್ತದೆ.

ಅದೇ ರೀತಿ ಸಮಾಜದ ವಿವಿಧ ವರ್ಗದ ಜನರಿಗೆ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯ ಕಲ್ಪಿಸುವುದು, ನಾಗರಿಕರಿಗೆ ಕುಡಿಯುವ ನೀರು ನೀಡುವುದು, ಕೊಳಚೆನೀರಿನ ಸಂಸ್ಕರಣೆ, ಘನತ್ಯಾಜ್ಯ ವಿಲೇವಾರಿ, ನೈರ್ಮರ್ಲಿಕರಣ, ನೋಂದಣಿ ಪರವಾನಗಿ ಮತ್ತು ಮೂಲ ಸೌಕರ್ಯ ಕಲ್ಪಿಸುವಲ್ಲಿಯೂ ಬೆಂಗಳೂರು ಹಿಂದೆ ಬಿದ್ದಿದೆ. ಬೆಂಗಳೂರು 25ನೇ ಸ್ಥಾನಕ್ಕೆ ತೃಪ್ತಿಪಡಬೇಕಿದೆ.ಸೇವೆಗಳನ್ನು ಕಲ್ಪಿಸುವುದರಲ್ಲಿ ದಕ್ಷಿಣ ದೆಹಲಿ 4ನೇ ಸ್ಥಾನ ಮತ್ತು ಚೆನ್ನೈ 17ನೇ ಸ್ಥಾನದಲ್ಲಿವೆ.

ನಗರಕ್ಕೆ ಸಂಬಂಧಿಸಿದ ಯೋಜನೆಗಳ ತಯಾರಿ,ಅನುಷ್ಠಾನ ಮತ್ತು ಅಳವಡಿಕೆಯಲ್ಲಿ ಬೆಂಗಳೂರು 36ನೇಸ್ಥಾನ ದೊರೆತಿದೆ. ನಗರ ಯೋಜನೆಗಳ ಅನುಷ್ಠಾನದಲ್ಲಿಮುಂಬೈ 2ನೇ ಸ್ಥಾನದಲ್ಲಿದ್ದರೆ, ಹೈದರಾಬಾದ್‌ 17, ದಕ್ಷಿಣ ದೆಹಲಿ 28, ಉತ್ತರ ದೆಹಲಿ 32ನೇ ಸ್ಥಾನದಲ್ಲಿದೆ.

ಆಡಳಿತ ಪಾರದರ್ಶಕತೆಯಲ್ಲಿ 18ನೇ ಸ್ಥಾನ :

ಆಡಳಿತದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ, ಮಾನವ ಸಂಪನ್ಮೂಲ, ಭಾಗವಹಿಸುವಿಕೆ ಮತ್ತು ಪರಿಣಾಮಕಾರಿ ಆಡಳಿತ ನೀಡುವ ವಿಚಾರದಲ್ಲಿಯೂ ಎಲ್ಲಾ ಮಹಾನಗರಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಬೆಂಗಳೂರು 18ನೇ ಸ್ಥಾನದಲ್ಲಿದ್ದು, ಆಡಳಿತದಲ್ಲಿ ಮುಂಬೈ 3ನೇಸ್ಥಾನ ಪಡೆದರೆ, ಹೈದರಾಬಾದ್‌ 9ನೇ ಸ್ಥಾನದಲ್ಲಿದೆ. ಹಣಕಾಸು ವಿಭಾಗದಲ್ಲಿಆದಾಯ ನಿರ್ವಹಣೆ, ವೆಚ್ಚ ನಿರ್ವಹಣೆ, ಹಣಕಾಸು ಹೊಣೆಗಾರಿಕೆ,ವಿತ್ತೀಯ ವಿಕೇಂದ್ರೀಕರಣ ವಿಭಾಗದಲ್ಲಿ ಬೆಂಗಳೂರು 40ನೇ ಸ್ಥಾನದಲ್ಲಿದೆ. ಇದು ಹಣಕಾಸು ನಿರ್ವಹಣೆಯಲ್ಲಿ ತೀರಾ ಕಳಪೆ ಸ್ಥಾನದಲ್ಲಿರುವುದನ್ನುತೋರಿಸುತ್ತದೆ. ಹಣಕಾಸು ನಿರ್ವಹಣೆಯಲ್ಲಿ ಚೆನ್ನೈ 3 ಮತ್ತು ಹೈದರಾಬಾದ್‌ 12ನೇ ಸ್ಥಾನದಲ್ಲಿವೆ.

ಮಹಾನಗರಗಳ ಸಾಧನೆ :

ಮಹಾನಗರ ಪಾಲಿಕೆ/ ಸೇವೆಗಳು/ ಹಣಕಾಸು/ ತಾಂತ್ರಿಕತೆ/ ನಗರಯೋಜನೆ/ ಆಡಳಿತ

ಬೆಂಗಳೂರು 25/ 40 /25/ 36 /18

ಚೆನ್ನೈ 17/ 3/ 18/ 44/ 25

ಹೈದರಾಬಾದ್‌ 45/ 12/ 13/ 17/ 9

ದಕ್ಷಿಣ ದೆಹಲಿ 4/ 18/ 45/ 28/ 44

ಉತ್ತರ ದೆಹಲಿ 35/ 44 /47/ 32/ 48

ಪೂರ್ವ ದೆಹಲಿ 39/ 28/ 43/ 39/ 30

ಬೃಹತ್‌ ಮುಂಬೈ 21/ 45 /11 /2 /3

ಎನ್‌.ಎಲ್‌. ಶಿವಮಾದು

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.