![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, May 13, 2023, 11:01 AM IST
ಬೆಂಗಳೂರು: ನಗರದಲ್ಲಿ ನಾಲ್ಕನೇ ಮಹಡಿಯಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದಾಗ ಹಗ್ಗ ತುಂಡಾದ ಪರಿಣಾಮ ನೆಲಕ್ಕೆ ಬಿದ್ದ ಪೇಂಟರ್ ಮೃತಪಟ್ಟಿದ್ದಾರೆ.
ನರಸಿಂಹಯ್ಯ (55) ಮೃತ ದುರ್ದೈವಿ.
ಜೆ.ಪಿ. ನಗರ 5ನೇ ಹಂತದ 24ನೇ ಮುಖ್ಯ ರಸ್ತೆಯ ಮಹಾ ವೀರ ಪ್ಯಾಲೇಸ್ ಅಪಾ ರ್ಟ್ಮೆಂಟ್ನ 4ನೇ ಮಹಡಿಯಲ್ಲಿ ಶುಕ್ರವಾರ ಬೆಳಗ್ಗೆ 9 ಗಂಟೆಗೆ ನರಸಿಂಹಯ್ಯ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಸೂಕ್ತ ಸುರಕ್ಷತಾ ಸಾಧನ ಬಳಸದೇ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ನರಸಿಂಹ ಸೊಂಟಕ್ಕೆ ಕಟ್ಟಿಕೊಂಡಿದ್ದ ಹಗ್ಗವನ್ನು ಮತ್ತೂಬ್ಬ ಪೇಂಟರ್ 4ನೇ ಮಹಡಿಯ ಮೇಲಿಂದ ಹಿಡಿದು ಕೊಂಡಿದ್ದ ಹಗ್ಗ ಏಕಾಏಕಿ ತುಂಡಾಗಿದೆ. ಪರಿಣಾಮ ನರಸಿಂಹ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ. 4ನೇ ಮಹಡಿ ಯಿಂದ ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ರಕ್ತಸ್ರಾವವಾಗಿ ಸ್ಥಳದಲ್ಲೇ ನರಸಿಂಹ ಸಾವನ್ನಪ್ಪಿದ್ದಾರೆ. ಪುಟ್ಟೇನಹಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.