ಆಯುಷ್‌ ಕೇಂದ್ರಗಳತ್ತ ಜನರ ಒಲವು

ಆಯುಷ್ಯ ಕೇಂದ್ರದಲ್ಲಿ ಔಷಧಿ ಗಿಡಗಳ ಮಹತ್ವದ ಗೋಡೆ ಬರವಣಿಗೆ

Team Udayavani, Oct 25, 2020, 12:08 PM IST

BNG-TDY-3

ಯಲಹಂಕ: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಭಾರತೀಯ ವೈದ್ಯ ಪದ್ಧತಿಗಳಾದ ಆಯುಷ್ಯ ಕ್ಷೇಮ ಕೇಂದ್ರಗಳತ್ತ ಜನರು ಒಲವು ತೋರುತ್ತಿದ್ದಾರೆ. ಯಲಹಂಕ ತಾಲೂಕಿನ ಹೆಸರಘಟ್ಟ, ಬ್ಯಾತ, ಗಂಟಿಗಾನಹಳ್ಳಿ, ಆನೇಕಲ್‌ ತಾಲೂಕಿನ ಬನ್ನೇರಘಟ್ಟ,  ಸೋಮನಹಳ್ಳಿ, ಬೆಂ ಗ್ರಾಮಾಂತರ ಜಿಲ್ಲೆಯ ದೊಡ್ಡ ಬಳ್ಳಾಪುರ ತಾಲೂಕಿನ ಕೋಡಿಹಳ್ಳಿ, ಹಣಬೆ, ನೆಲಮಂಗಲದ ಯಂಟಿಗಾನಹಳ್ಳಿ, ದೇವನಹಳ್ಳಿಯ ಹೆಗ್ಗನಹಳ್ಳಿ ಆಯುಷ್ಯ ಕೇಂದ್ರಗಳಿಗೆ ಪ್ರತಿದಿನ 60- 80ಜನ ಬರುತ್ತಿದ್ದು ಆಯುಷ್ಯ ಇಲಾಖೆಯಲ್ಲಿ ಭರವಸೆ ಹೆಚ್ಚಿದೆ.

ಆಯುಷ್ಯ ಇಲಾಖೆ ಆಯುಷ್ಮಾನ್‌ ಭಾರತ್‌ ರಾಷ್ಟ್ರೀಯ ಮಿಷನ್‌ ಯೋಜನೆ ಅಡಿ ಇತ್ತೀಚೆಗೆ ನಗರ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಆಯುಷ್ಯ -ಕ್ಷೇಮ ಕೇಂದ್ರಗಳಲ್ಲಿ ಯೋಗ ಶಿಕ್ಷಕರಿಂದ ಯೋಗಾಭ್ಯಾಸ, ಜನರಿಗೆ ಆರೋಗ್ಯ ಅರಿವು, ಔಷಧಿ ಸಸಿ ಬೆಳೆಸುವುದು, ಸಸಿಗಳ ಉಚಿತ ವಿತರಣೆ, ಸಸಿ ನೆಡುವಿಕೆ, ಮತ್ತು ಕ್ಷೇಮಕೇಂದ್ರಗಳಲ್ಲಿ ಅರಿವು ಮೂಡಿಸುವ ಹೊಸ ಗೋಡೆ ಬರವಣಿಗೆ ಬ್ರಾಂಡಿಂಗ್‌ ಸೇರಿದಂತೆ ವಿವಿಧ ರೋಗನಿರೋಧ ಶಕ್ತಿ ಹೆಚ್ಚಿಸುವ ಕಾರ್ಯಕ್ರಮಗಳಿಂದ ಜನರಲ್ಲಿ ಆಯುಷ್‌ ಇಲಾಖೆಯೆಡೆಗೆ ವಾಲುತ್ತಿದ್ದಾರೆ.

ಜತೆಗೆ ಇಂಗ್ಲಿಷ್‌ ಮೆಡಿಸನ್‌(ಅಲೋಪಥಿ) ಸಾಮಾನ್ಯ ಜನರಿಗೆ ದುಬಾರಿಯಾಗಿ ಪರಿಣಮಿಸುತ್ತಿದೆ. ಆಯುಷ್ಯ ಇಲಾಖೆಯಿಂದ ಮನೆಬಾಗಿಲಿಗೆ ಬಂದು ಉಚಿತ ಚಿಕಿತ್ಸೆ – ಸಲಹೆ ನೀಡುತ್ತಿದ್ದಾರೆ ಇದರಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ. ನಾವು ನಮ್ಮ ಮನೆ  ಯಲ್ಲಿ ಮದ್ದು ತಯಾರು ಮಾಡಿಕೊಳ್ಳಲು ಔಷಧಿ ಗಿಡ ಆರೋಗ್ಯ ಕಾಳಜಿ ಬಗ್ಗೆ ಮಾಹಿತಿ ನೀಡು ತ್ತಿದ್ದಾರೆ ಎಂದು ಮುದ್ದನಹಳ್ಳಿಯ ನಾಗವೇಣಿ ಹೇಳುತ್ತಾರೆ. ಕೇಂದ್ರಗಳಲ್ಲಿ ಶಿಕ್ಷಕರು ಯೋಗ, ಪ್ರಾಣಾಯಾಮ ಕಲಿಸುತ್ತಿದ್ದಾರೆ. ಪ್ರತಿದಿನ ಬೆಳಗ್ಗೆ 40ಕ್ಕೂ ಅಧಿಕ ಜನರ ಬರುತ್ತಾರೆ. ಜ್ವರ, ಕೆಮ್ಮು ನೆಗಡಿಗೆ ಮನೆಯಲ್ಲಿ ಮದ್ದು ಮಾಡಿಕೊಳ್ಳುವುದು, ಉಚಿತ ಔಷಧಿ ಗಿಡಗಳನ್ನು ನೀಡಿದ್ದಾರೆ ನಾವು ಮನೆಯಲ್ಲಿ ಔಷಧಿ ಹೇಗೆ ತಯಾರಿಸಿ ಕೊಳ್ಳಬೇಕು ಎಂಬ ಪ್ರಾತ್ಯಕ್ಷಿಕೆಯನ್ನೂ ನೀಡುತ್ತಾರೆ ಎಂದು ಬ್ಯಾತ ಗ್ರಾಮದ ಗಿರೀಶ್‌ ಹೇಳಿದರು.

ಆಯುಷ್‌ ಕೇಂದ್ರಗಳಲ್ಲಿ ಔಷಧಿ ಸಸ್ಯಗಳ ಕೈತೋಟ, ಯೋಗ, ಮನೆಮನೆಗೂ ಆಶಾ ಕಾರ್ಯಕತೆಯರಿಂದ ಜಾಗೃತಿ ಮೂಡಿಸಲಾಗುತ್ತಿದೆ. ಇತ್ತೀಚೆಗೆ ಯೋಗ ದಿನಾಚರಣೆ, ಆರ್ಯುರ್ವೇದ ದಿನಾಚರಣೆ ಮಾಡುವುದಕ್ಕೆ ಜನರಿಗೆ ಆಸಕ್ತಿ ಹೆಚ್ಚಾಗಿದೆ. ಜತೆಗೆ ಆರೋಗ್ಯದ ಚೇತರಿಕೆ ಉಂಟಾಗಿದ್ದು, ಪ್ರತಿದಿನ ಆಸ್ವತ್ರೆಗಳಿಗೆ 70ರಿಂದ 80ಜನರು ಚಿಕಿತ್ಸೆಗೆ ಬರುತ್ತಿದ್ದಾರೆ. ಡಾ. ಮುಕ್ತಾಂಬಿಕಾ, ಬ್ಯಾತ ಆಯುಷ್‌ ಕೇಂದ್ರದ ವೈದ್ಯೆ

ಬೆಂಗಳೂರು ನಗರ ಜಿಲ್ಲೆಯಲ್ಲಿ ಸರ್ಕಾರ ಇತ್ತೀಚೆಗೆ ಆಯುಷ್ಯ ಕ್ಷೇಮ ಕೇಂದ್ರಗಳಿಗೆ ಅಮೂಲಾಗ್ರ ಬದಲಾವಣೆ ತಂದಿದೆ. ಆಯುಷ್‌ ಸೇವೆಗಳಲ್ಲಿ ಜೀವನ ಪದ್ಧತಿ ಕುರಿತಂತೆ ಯೋಗ, ಆಹಾರ, ಔಷಧಿಯ ಸಸ್ಯಗಳು ಮತ್ತು ಆಯುಷ್‌ ವ್ಯವಸ್ಥೆಯು ಹಳ್ಳಿ, ನಗರ ಪ್ರದೇಶದಲ್ಲಿ ತಲುಪಿಸಲು ಕ್ರಮ ತೆಗೆದುಕೊಂಡಿರು ವುದು. ಭಾರತೀಯ ಪದ್ಧತಿಗಳ ಮೇಲೆ ಜನರ ಒಲುವು ಹೆಚ್ಚಾಗಿದೆ. ಡಾ. ಮಹಮ್ಮದ್‌ ರಫಿ ಹಕೀಬ್‌ ಬೆಂಗಳೂರು ನಗರ,  ಗ್ರಾಮಾಂತರ ಆಯುಷ್‌ ಅಧಿಕಾರಿ

 

-ರಾಮು ಕೊಲ್ಗಾರ್‌

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.