![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Feb 17, 2018, 10:40 AM IST
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಇಬ್ಬರನ್ನು ವಿಲ್ಸನ್ ಗಾರ್ಡ್ನ್ ಪೊಲೀಸರು ಬಂಧಿಸಿದ್ದಾರೆ. ಆಡುಗೋಡಿ ನಿವಾಸಿಗಳಾದ ಕಿರಣ್ (42) ಮತ್ತು ದಶರಥ (32) ಬಂಧಿತರು.
ಚಿನ್ನ ಅಡವಿಡುವ ಸಲುವಾಗಿ ಹೊಂಬೇಗೌಡ ನಗರದಲ್ಲಿರುವ ಮುತ್ತೂಟ್ ಫಿನ್ಕಾರ್ಪ್ ಕಚೇರಿಗೆ ಶುಕ್ರವಾರ ಮಧ್ಯಾಹ್ನ ಆರೋಪಿಗಳು ಬಂದಿದ್ದರು. ಇದೇ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ಫಿನ್ಕಾರ್ಪ್ ಸಿಬ್ಬಂದಿ ಮೇಲೆ ಬಂಧಿತರು ಹಲ್ಲೆ ನಡೆಸಿದ್ದಾರೆ.
ಬಿಡಿಸಲು ಬಂದ ಸೆಕ್ಯೂರಿಟಿಗಾರ್ಡ್ಗಳ ಮೇಲೂ ಹಲ್ಲೆ ನಡೆಸಿದ್ದರು. ಈ ಸಂಬಂಧ ಮಳಿಗೆ ಸಿಬ್ಬಂದಿ ಪೊಲೀಸ್ ಸಹಾಯವಾಣಿ ನಮ್ಮ-100ಕ್ಕೆ ಕರೆ ಮಾಡಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ವಿಲ್ಸನ್ಗಾರ್ಡ್ ಠಾಣೆ ಪೇದೆಗಳಾದ ಪ್ರಕಾಶ್ ಮತ್ತು ಮಂಟೂರು ಆರೋಪಿಗಳನ್ನು ವಶಕ್ಕೆ ಪಡೆದು ಹಲ್ಲೆಯನ್ನು ಪ್ರಶ್ನಿಸಿದ್ದಾರೆ.
ಇಷ್ಟಕ್ಕೆ ಕೋಪಗೊಂಡ ಕಿರಣ್ ಮತ್ತು ದಶರಥ್ ಪೇದೆ ಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.