![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Nov 23, 2022, 12:31 PM IST
ಬೆಂಗಳೂರು: ಮೈಸೂರು ರಸ್ತೆ ಮೇಲ್ಸೇತುವೆ ನಿರ್ವಹಣೆ ಕೊರತೆಯಿಂದಾಗಿ ಮೇಲ್ಸೇತುವೆಯ ಜಾಯಿಂಟ್ಗಳಲ್ಲಿನ ಬೋಲ್ಟ್ಗಳು ಮೇಲೆ ಬಂದಿದ್ದು ವಾಹನ ಸವಾರರು ಸಮಸ್ಯೆ ಅನುಭವಿಸುವಂತಾಗಿದೆ.
ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಗುಂಡಿ ಬಿದ್ದ ಪರಿಣಾಮ ಆ ಮೇಲ್ಸೇತುವೆಯಲ್ಲಿ ಸಂಚರಿಸಲು ವಾಹನ ಸವಾರರು ಆತಂಕ ಪಡುವಂತಾಗಿದೆ.
ಅದೇ ರೀತಿ ಇದೀಗ ಮೈಸೂರು ರಸ್ತೆಯಲ್ಲಿ ಅಸಮರ್ಪಕ ನಿರ್ವಹಣೆಯಿಂದಾಗಿ ಕೆ.ಆರ್. ಮಾರುಕಟ್ಟೆಯಿಂದ ಮೈಸೂರು ರಸ್ತೆಗೆ ಮಾರ್ಗದ ಮೈಸೂರು ರಸ್ತೆ ಮೇಲ್ಸೇತುವೆಯ ಜಾಯಿಂಟ್ಗಳಲ್ಲಿ ಬೋಲ್ಟ್ಗಳು ಮೇಲೆ ಬಂದಿವೆ. ಅದರಿಂದಾಗಿ ಮಂಗಳವಾರ 8ಕ್ಕೂ ಹೆಚ್ಚಿನ ವಾಹನಗಳ ಚಕ್ರಕ್ಕೆ ಹಾನಿಯಾಗಿ ಚಾಲಕರು ಪರದಾಡುವಂತಾಗಿತ್ತು. ಇದನ್ನು ಗಮನಿಸಿದ ಸಂಚಾರ ಪೊಲೀಸರು ಬೋಲ್ಟ್ಗಳು ಮೇಲೆ ಬಂದಿದ್ದ ಸ್ಥಳದಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದರು.
ಆದರೆ, ಬಿಬಿಎಂಪಿ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬಂದು ಪರಿಶೀಲಿಸಿ, ಸಮಸ್ಯೆ ನಿವಾರಣೆ ಮಾಡುವ ಕೆಲಸ ಮಾಡಲಿಲ್ಲ. ಹೀಗಾಗಿ ಮಂಗಳವಾರ ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚುವಂತಾಗಿತ್ತು.
You seem to have an Ad Blocker on.
To continue reading, please turn it off or whitelist Udayavani.