ರಿಯಾಜ್ಗೆ ಸಿಕ್ಕಿತು ಪಾಸ್ಪೋರ್ಟ್
Team Udayavani, May 12, 2017, 11:28 AM IST
ಬೆಂಗಳೂರು: ಲೋಕಾಯುಕ್ತ ಭ್ರಷ್ಟಾಚಾರ ಪ್ರಕರಣದ ಆರೋಪಿ ಸೈಯದ್ ರಿಯಾಜ್ಗೆ ಮೆಕ್ಕಾ – ಮದೀನಾ ಯಾತ್ರೆ ಕೈಗೊಳ್ಳುವ ಸಲುವಾಗಿ ನಿಗದಿತ ಅವಧಿಗೆ ಪಾಸ್ ಪೋರ್ಟ್ ನೀಡುವಂತೆ ಅಧೀನ ನ್ಯಾಯಾಲಯಕ್ಕೆ ಹೈಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.
ಮೆಕ್ಕಾ-ಮದೀನಾ ಯಾತ್ರೆ ಕೈಗೊಳ್ಳುವ ಸಲುವಾಗಿ ಜಾಮೀನಿನ ಷರತ್ತು ಸಡಿಲಿಸಿ ನಿಗದಿತ ಅವಧಿಗೆ ಅಧೀನ ನ್ಯಾಯಾಲಯದಲ್ಲಿರುವ ಪಾಸ್ಪೋರ್ಟ್ ಕೊಡಿಸುವಂತೆ ಹೈಕೋರ್ಟ್ ಮೊರೆಹೋಗಿದ್ದ ಸೈಯದ್ ರಿಯಾಜ್ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಪೀಠ, ಹಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದೆ. .
ಸೈಯದ್ ರಿಯಾಜ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಚ್.ಬಿ. ಪ್ರಭಾಕರ್ ಶಾಸಿ ಅವರಿದ್ದ ಪೀಠ, ಈ ಹಿಂದೆ ಕೆಲವು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ಆರೋಪಿಗಳಿಗೆ ವಿದೇಶಕ್ಕೆ ತೆರಳಲು ಸುಪ್ರೀಂಕೋರ್ಟ್ ಅವಕಾಶ ನೀಡಿದೆ.
ಈ ಪ್ರಕರಣವನ್ನೂ ವಿಶೇಷ ಪ್ರಕರಣ ಎಂದು ಪರಿಗಣಿಸಲಾಗಿದ್ದು,ಅರ್ಜಿದಾರ ರಿಯಾಜ್, ತಮ್ಮ ತಾಯಿಯ ಸಂಕಲ್ಪದಂತೆ ಮೆಕ್ಕಾ-ಮದೀನಾ ಯಾತ್ರೆ ಕೈಗೊಳ್ಳುವ ಸಲುವಾಗಿ ಇಂದಿನಿಂದ ಜುಲೈ 31 ರವರೆಗೆ ನಿಗದಿತ ಅವಧಿಗೆ ಪಾಸ್ಪೋರ್ಟ್ ನೀಡುವಂತೆ ಅಧೀನ ನ್ಯಾಯಾಲಯಕ್ಕೆ ನಿರ್ದೇಶಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅಕ್ರಮ ಆಸ್ತಿ: ಬೆಸ್ಕಾಂ ಎಇಇಗೆ 3 ವರ್ಷ ಸಜೆ,1 ಕೋಟಿ ರೂ. ದಂಡ ವಿಧಿಸಿದ ಕೋರ್ಟ್
Bengaluru: ಶೋಕಿಲಾಲನಿಗೆ ನಕಲಿ ಎ.ಕೆ.47 ಕೊಡಿಸಿದ್ದ ವ್ಯಕ್ತಿಗೆ ನೋಟಿಸ್
Bengaluru: ಬೈಕ್ಗೆ ಲಾರಿ ಡಿಕ್ಕಿ : ರಿಯಲ್ ಎಸ್ಟೇಟ್ ಏಜೆಂಟ್ ಸಾವು
Bengaluru: ಹಳೇ ದ್ವೇಷಕ್ಕೆ ವ್ಯಕ್ತಿ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
Bengaluru: ವಿಚಾರಣಾಧೀನ ಕೈದಿಯ ಗುದದ್ವಾರದಲ್ಲಿ 2 ಮೊಬೈಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.