ಕೊಡಲಿ ಮಾಫಿಯಾದಿಂದ ಮರ ಉಳಿಸಿ
Team Udayavani, Jan 12, 2018, 11:41 AM IST
ಮಹದೇವಪುರ: ಕೆಲ ತಿಂಗಳ ಹಿಂದೆ ಹೊರವರ್ತುಲ ರಸ್ತೆಯ ಮಾರತ್ತಹಳ್ಳಿ ಸಮೀಪ ಜಾಹಿರಾತು ಫಲಕಗಳಿಗೆ ಅಡ್ಡಲಾಗಿವೆ ಎಂಬ ಕಾರಣಕ್ಕೆ ಜಾಹಿರಾತು ಮಾಫಿಯಾದವರು ಕಡಿದಿದ್ದ ಮರಗಳು ಮತ್ತೂಮ್ಮೆ ಚಿಗುರಿದ್ದು, ಈಬಾರಿಯಾದರೂ ಅವುಗಳನ್ನು ಉಳಿಸುವಂತೆ ಪರಿಸರ ಪ್ರೇಮಿಗಳು ಪಾಲಿಕೆಗೆ ಆಗ್ರಹಿಸಿದ್ದಾರೆ.
ಔಟರ್ ರಿಂಗ್ ರಸ್ತೆಯ ಮಾರತ್ಹಳ್ಳಿ ರಸ್ತೆ ವಿಭಜಕದಲ್ಲಿ ಬೆಳೆಸಲಾಗಿದ್ದ ಮರಗಳು ಜಾಹಿರಾತು ಫಲಕಗಳಿಗೆ ಅಡ್ಡಲಾಗಿವೆ ಎಂದು, ಎರಡು ತಿಂಗಳ ಹಿಂದೆ ಜಾಹಿರಾತು ಮಾಫಿಯಾದವರು ರಾತ್ರೋರಾತ್ರಿ 30 ಮರಗಳನ್ನು ಕತ್ತರಿಸಿ ಹಾಕಿದ್ದರು.
ಇದನ್ನು ತೀವ್ರವಾಗಿ ಖಂಡಿಸಿದ್ದ ಪರಿಸರ ಪ್ರೇಮಿಗಳು, ಮರಗಳನ್ನು ಅಪ್ಪಿಕೊಂಡು ಪ್ರತಿಭಟಿಸಿದ್ದರು. ವೃಕ್ಷ ಪ್ರೇಮಿ ವಿಜಯ್ ನಿಶಾಂತ್, ಸತತ ಎರಡು ತಿಂಗಳ ಕಾಲ ಮರಗಳಿಗೆ ಔಷಧೋಪಚಾರ ಮಾಡಿದ್ದರಿಂದ ಬಹುತೇಕ ಮರಗಳು ಮತ್ತೆ ಚಿಗುರೊಡೆದಿವೆ.
ಸೊಂಪಾಗಿ ಬೆಳೆದು ನಿಂತಿರುವ ಮರಗಳನ್ನು, ಮರಗಳ ಕೊಂಬೆಗಳನ್ನು ಕಡಿಯುವ, ಬೇರುಗಳಿಗೆ ವಿಷ, ಆ್ಯಸಿಡ್ ಹಾಕುವ ದುಷ್ಕೃತ್ಯ ಎಸಗುವ ದುಷ್ಕರ್ಮಿಗಳಿಗೆ ಇದುವರೆಗೂ ಯಾವುದೇ ಶಿಕ್ಷೆಯಾಗಿಲ್ಲ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಕೂಡಲೆ ಜಾಗೃತರಾಗಿ ಕ್ರಮಕ್ಕೆ ಮುಂದಾಗಬೇಕು ಎಂದು ಪರಿಸರ ಮಂಜುನಾಥ್ ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Bengaluru: ಕೆಎಸ್ಆರ್ಟಿಸಿಯಿಂದ ದಸರಾಗೆ 2000 ಹೆಚ್ಚುವರಿ ಬಸ್ ಸಂಚಾರ
Women’s T20 World Cup: ಮತ್ತೆ ವಿವಾದಕ್ಕೆ ಸಿಲುಕಿದ ಕಾಮೆಂಟೇಟರ್ ಸಂಜಯ್ ಮಾಂಜ್ರೇಕರ್
Bengaluru: ಆನ್ಲೈನ್ನಲ್ಲೇ ಆಸ್ತಿ ಇ-ಖಾತಾ ಪಡೆಯಿರಿ
West Bengal: ಬಾಲಕಿಯನ್ನು ಅಪಹರಿಸಿ ಕೊ*ಲೆ: ಭುಗಿಲೆದ್ದ ಆಕ್ರೋಶ, ಪ್ರತಿಭಟನೆ
Bengaluru: ವಂಡರ್ಲಾದಲ್ಲಿ 2 ಟಿಕೆಟ್ ಖರೀದಿಸಿದರೆ 1 ಟಿಕೆಟ್ ಫ್ರೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.