ಶೋಭಾ ಕೊಲೆ ಆರೋಪಿ ಸೆರೆ
Team Udayavani, Apr 17, 2017, 11:56 AM IST
ಬೆಂಗಳೂರು: ದೀಪಾಂಜಲಿ ನಗರದ ನಿವಾಸಿ ಶೋಭಾ ಎಂಬುವವರನ್ನು ಹತ್ಯೆಗೈದು ನೆಲಮಂಗಲದ ಗ್ರಾಮವೊಂದರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಗಿರೀಶ್ನನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.
ಮದುವೆಯಾಗಲು ನಿರಾಕರಿಸಿದಳು ಎಂಬ ಕಾರಣಕ್ಕೆ ಶೋಭಾ ಅವರನ್ನು ಗಿರೀಶ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಕೃತ್ಯೆವಸಗಿದ ಬಳಿಕ ಮೈಸೂರು ರಸ್ತೆಯಲ್ಲಿರುವ ಬಾರ್ ಒಂದರಲ್ಲಿ ಮದ್ಯ ಸೇವಿಸಿ ಸಂಬಂಧಿಕರ ಮನೆಗಳಿಗೆ ಹೋಗಿ ನೆಲಮಂಗಲದ ಗ್ರಾಮವೊಂದರಲ್ಲಿ ನೆಲೆಸಿದ್ದ. ಈಕುರಿತು ಲಭ್ಯವಾದ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಸುಳಿವು ಕೊಟ್ಟ ಗೆಳೆಯ: ತುಮಕೂರು ಮೂಲದ ಆರೋಪಿ ಗಿರೀಶ್, ನಗರದಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದು, ಸ್ಥಳೀಯ ನಿವಾಸಿ ಕ್ಯಾಬ್ ಚಾಲಕ ಹರೀಶ್ ಎಂಬಾತನ ಸ್ನೇಹ ಗಳಿಸಿದ್ದ. ಗಿರೀಶ್, ಆಗಾಗ್ಗೆ ಹರೀಶ್ ಮೊಬೈಲ್ನಿಂದಲೇ ಕೆಲವರಿಗೆ ಕರೆ ಮಾಡುತ್ತಿದ್ದ. ಈ ಮಾಹಿತಿ ಪಡೆದ ಪೊಲೀಸರು, ಹರೀಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ಅಡಗಿರುವ ಸ್ಥಳ ತಿಳಿಸಿದ್ದಾನೆ.
ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿ ಜತೆ ಸಂಸಾರ ನಡೆಸಲು ನಿರಾಕರಿಸಿದ ಗಿರೀಶ್, ಮತ್ತೂಂದು ಮದುವೆಯಾಗಲು ನಿರ್ಧರಿಸಿದ್ದ. ಈ ನಡುವೆ ಶೋಭಾ ಅವರ ಪರಿಚಯವಾಗಿ, ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಆದರೆ ಗಿರೀಶ್ಗೆ ಈಗಾಗಲೇ ವಿವಾಹವಾಗಿರುವ ವಿಷಯ ತಿಳಿದಿದ್ದ ಶೋಭಾ, ಆತನನ್ನು ಮದುವೆಯಾಗಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಆಕೆಯನ್ನು ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.