ವಜ್ರಮುನಿ ಭಾವಮೈದುನನ್ನು ಅಪಹರಿಸಿದ ಆರು ಮಂದಿ ಬಂಧನ


Team Udayavani, Apr 13, 2018, 12:08 PM IST

arrest2.jpg

ಬೆಂಗಳೂರು: ಖ್ಯಾತ ಖಳನಟ ದಿವಗಂತ ವಜ್ರಮುನಿ ಅವರ ಭಾವ ಮೈದುನನ್ನು ಅಪಹರಿಸಿ ಒಂದು ಕೋಟಿ ರೂ. ಒತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದ ಪ್ರಕರಣವನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಭೇದಿಸಿದ್ದು, ಆರು ಮಂದಿಯನ್ನು ಬಂಧಿಸಿದ್ದಾರೆ.

ಬನ್ನೇರುಘಟ್ಟ ನಿವಾಸಿ ಇಂಟೀರಿಯಲ್‌ ಡಿಸೈನರ್‌ ಸತ್ಯವೇಲಾಚಾರಿ(24), ಬಿಬಿಎ ವಿದ್ಯಾರ್ಥಿ ಯಶ್ವಂತ್‌ ಯಾದವ್‌(20), ವಿನೋದ್‌ ಕುಮಾರ್‌(21), ಸಂಜಯ್‌ ರೆಡ್ಡಿ(20), ಶೇಖರ್‌(20) ಹಾಗೂ ಜಗನ್ನಾಥ್‌(23) ಬಂಧಿತರು. ಪ್ರಮುಖ ಆರೋಪಿ ಸತ್ಯವೇಲಾಚಾರಿ ತಾನು ಮಾಡಿದ್ದ ಬ್ಯಾಂಕ್‌ ಸಾಲ ತೀರಿಸಲು ವಜ್ರಮುನಿ ಅವರ ಭಾವಮೈದುನ ಶಿವಕುಮಾರ್‌ರನ್ನು ಭಾನುವಾರ ಮಧ್ಯಾಹ್ನ ತನ್ನ ಸ್ನೇಹಿತರೊಂದಿಗೆ ಸೇರಿ ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ.

ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಕೋಲಾರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿ, ಶಿವಕುಮಾರ್‌ರನ್ನು ರಕ್ಷಿಸಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರು ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ಬೋರಲಿಂಗಯ್ಯ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಶಿವಕುಮಾರ್‌ ಬಾಷ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಪ್ರಮುಖ ಆರೋಪಿ ಸತ್ಯವೇಲಾಚಾರಿಯ ಆಪ್ತ ಸ್ನೇಹಿತರಾಗಿದ್ದಾರೆ. ಇತ್ತೀಚೆಗೆ ಶಿವಕುಮಾರ್‌ ತಮ್ಮ ಮನೆಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದರು. ಶಿವಕುಮಾರ್‌ ಅವರ ಪ್ರತಿಯೊಂದು ಆಗುಹೋಗುಗಳ ಮಾಹಿತಿ ಹೊಂದಿದ್ದ ಸತ್ಯವೇಲಾಚಾರಿ ಅವರನ್ನು ಅಪಹರಿಸಿ ಬ್ಯಾಂಕ್‌ನಲ್ಲಿಟ್ಟಿದ್ದ ಹಣ ಪಡೆಯಲು ಈ ಕೃತ್ಯ ಎಸಗಿದ್ದಾನೆ ಎಂದು ಅವರು ತಿಳಿಸಿದರು.

ಪತ್ನಿಗೆ ಕರೆ ಮಾಡಿ ಬೆದರಿಕೆ: ಜೆ.ಪಿ.ನಗರದಿಂದ ಶಿವಕುಮಾರ್‌ ಅವರನ್ನು ಅಪಹರಿಸಿ ಕೋಲಾರದ ಶ್ರೀನಿವಾಸಪುರಕ್ಕೆ ಕರೆದೊಯ್ದಿದ್ದ ಸತ್ಯವೇಲಾಚಾರಿ ಹಾಗೂ ಇತರ ಆರೋಪಿಗಳು, ಶಿವಕುಮಾರ್‌ ಮೂಲಕವೇ ಪತ್ನಿಗೆ ಕರೆ ಮಾಡಿಸಿ, ಒಂದು  ಕೋಟಿ ರೂ. ಹಣ ನೀಡಲು ತಿಳಿಸಿ, ಹಣ ಕೊಡದಿದ್ದರೆ ಕೊಲ್ಲುವುದಾಗಿ ಎಚ್ಚರಿಕೆ ನೀಡಿದ್ದರು.

ಇದರಿಂದ ಹೆದರಿದ ಶಿವಕುಮಾರ್‌ ಪತ್ನಿ ಸರ್ಜಾಪುರ ವೃತ್ತದ ಬಳಿ ಹಣ ಕೊಂಡೊಯ್ದರಾದರೂ ಆರೋಪಿಗಳು ಸ್ಥಳಕ್ಕೆ ಬಂದಿರಲಿಲ್ಲ. ಹೀಗಾಗಿ ಅವರು ಮನೆಗೆ ವಾಪಸ್‌ ಬಂದಿದ್ದರು. ಮತ್ತೆ ಸುಧಾ ಅವರಿಗೆ ಕರೆ ಮಾಡಿದ ಆರೋಪಿಗಳು, ನೀವು ಪೊಲೀಸರ ಗಮನಕ್ಕೆ ಈ ವಿಚಾರ ತಂದಿರುವುದರಿಂದ ಶಿವಕುಮಾರ್‌ನನ್ನು ಕೊಲ್ಲುವುದಾಗಿ ಎಚ್ಚರಿಕೆ ನೀಡಿ ಕರೆ ಸ್ಥಗಿತಗೊಳಿಸಿದ್ದರು.

ಇದರಿಂದ ಇನ್ನಷ್ಟು ಆತಂಕಗೊಂಡ ಶಿವಕುಮಾರ್‌ ಪತ್ನಿ ಸುಧಾ ಏ. 9ರಂದು ಪರಪ್ಪನ ಅಗ್ರಹಾರ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಡಿಸಿಪಿ ಬೋರಲಿಂಗಯ್ಯ ಅವರು ಇಬ್ಬರು ಎಸಿಪಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಈ ತಂಡ ಆರೋಪಿಗಳ ಮೊಬೈಲ್‌ ನೆಟ್‌ವರ್ಕ್‌, ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ದಾಖಲಾಗಿದ್ದ ವಾಹನಗಳ ಮಾಹಿತಿಯನ್ನಾಧರಿಸಿ ಕೋಲಾರದ ಶ್ರೀನಿವಾಸಪುರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

ಬ್ಯಾಂಕ್‌ ಸಾಲ ತೀರಿಸಲು ಕೃತ್ಯ: ಸತ್ಯವೇಲಾಚಾರಿ ಬ್ಯಾಂಕ್‌ನಿಂದ ಕಂತಿನ ಸಾಲದ ಮೇಲೆ ಇನ್ನೋವಾ ಕ್ರಿಸ್ಟ ಕಾರು ಖರೀದಿಸಿದ್ದ. ಸಕಾಲಕ್ಕೆ ಸಾಲ ತೀರಿಸಲು ಸಾಧ್ಯವಾಗದೆ ಬ್ಯಾಂಕ್‌ಗೆ ಹಣ ಪಾವತಿಸಲು ಶಿವಕುಮಾರ್‌ ಬಳಿ ಸಾಲ ಕೇಳಿದ್ದ. ಆದರೆ, ಶಿವಕುಮಾರ್‌ ಹಣ ಕೊಡಲು ನಿರಾಕರಿಸಿದ್ದರಿಂದ ಕೋಪಗೊಂಡು ಅಪರಹಣಕ್ಕೆ ಸಂಚು ರೂಪಿಸಿದ್ದ.

ಅದರಂತೆ ಏ.8ರಂದು ಬೆಳಗ್ಗೆ ಇಂಟೀರಿಯರ್‌ ಡಿಸೈನ್‌ ಮಾಡುವ ಗುತ್ತಿಗೆ ಕೊಡಿಸಿ ಎಂದು ತನ್ನ ಸ್ನೇಹಿತ ತಾಜ್ಮಿàಲ್‌ ಪಾಷಾ ಎಂಬುವರ ಮನೆಗೆ ವಾಹನದಲ್ಲಿ ಕರೆದೊಯ್ಯುವಂತೆ ಶಿವಕುಮಾರ್‌ ಬಳಿ ಕೇಳಿಕೊಂಡಿದ್ದ. ಶಿವಕುಮಾರ್‌ ಮತ್ತು ಸತ್ಯವೇಲಾಚಾರಿ ಹೋಗುತ್ತಿದ್ದಾಗ ಜೆ.ಪಿ.ನಗರಕ್ಕೆ ಇತರೆ ಆರೋಪಿಗಳನ್ನು ಕರೆಸಿಕೊಂಡ ಸತ್ಯವೇಲಾಚಾರಿ ಅಲ್ಲಿ ಶಿವಕುಮಾರ್‌ ಅವರನ್ನು ಅಪಹರಿಸಿ ಕೋಲಾರದ ಶ್ರೀನಿವಾಸಪುರಕ್ಕೆ ಕರೆದೊಯ್ದಿದ್ದರು.

ಟಾಪ್ ನ್ಯೂಸ್

Desi Swara: ಸಮಸ್ಯೆಗೆ ಸಮಯವೇ ಪರಿಹಾರ ನೀಡುತ್ತಾ ಹೋಗುತ್ತದೆ…

Desi Swara: ಸಮಸ್ಯೆಗೆ ಸಮಯವೇ ಪರಿಹಾರ ನೀಡುತ್ತಾ ಹೋಗುತ್ತದೆ…

Flash Floods: ಸೇನಾ ತರಬೇತಿ ವೇಳೆ ಹಠಾತ್ ಪ್ರವಾಹ.. ಓರ್ವ ಯೋಧ ಹುತಾತ್ಮ, ನಾಲ್ವರು ನಾಪತ್ತೆ

Flash Floods: ಸೇನಾ ತರಬೇತಿ ವೇಳೆ ಹಠಾತ್ ಪ್ರವಾಹ… ಐವರು ಯೋಧರು ಹುತಾತ್ಮ

Desi Swara: ಕೆನಡಾದಲ್ಲಿ ಗಂಗಾ ದಸರಾ- 50ಕ್ಕೂ ಹೆಚ್ಚಿ ಕಲಾವಿದರಿಂದ ಪ್ರದರ್ಶನ

Desi Swara: ಕೆನಡಾದಲ್ಲಿ ಗಂಗಾ ದಸರಾ- 50ಕ್ಕೂ ಹೆಚ್ಚಿ ಕಲಾವಿದರಿಂದ ಪ್ರದರ್ಶನ

Film producer: ಚಿತ್ರ ನಿರ್ಮಾಪಕನಿಗೆ ಮೀಟರ್‌ ಬಡ್ಡಿ ಕಾಟ!

Film producer: ಚಿತ್ರ ನಿರ್ಮಾಪಕನಿಗೆ ಮೀಟರ್‌ ಬಡ್ಡಿ ಕಾಟ!

ಸರ್ಕಾರ ಮತದಾರರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ: ಬಿ.ವೈ.ರಾಘವೇಂದ್ರ

Shimoga; ರಾಜ್ಯ ಸರ್ಕಾರ ಮತದಾರರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ: ಬಿ.ವೈ.ರಾಘವೇಂದ್ರ

ಸಂತೋಷ್ ಲಾಡ್

Shiggavi Bypoll; ಗೆಲ್ಲುವ ಅಭ್ಯರ್ಥಿಗೆ ಪಕ್ಷ ಟಿಕೆಟ್ ನೀಡಲಿದೆ: ಸಂತೋಷ್ ಲಾಡ್

ನಿಮ್ಮ ಸಹಪಾಠಿಗಳು ಎಲ್ಲಿದ್ದಾರೆ ?: ಜೀವನದ ಪ್ರಯಾಣದಲ್ಲಿ ಎಲ್ಲವನ್ನು ಅನುಭವಿಸಬೇಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Film producer: ಚಿತ್ರ ನಿರ್ಮಾಪಕನಿಗೆ ಮೀಟರ್‌ ಬಡ್ಡಿ ಕಾಟ!

Film producer: ಚಿತ್ರ ನಿರ್ಮಾಪಕನಿಗೆ ಮೀಟರ್‌ ಬಡ್ಡಿ ಕಾಟ!

7

Theft: ಬೈಕ್‌ನಲ್ಲಿ ಬಂದು ಮಾಂಗಲ್ಯ ಸರ ಕಳವು ಮಾಡಿದ್ದ ಇಬ್ಬರ ಬಂಧನ

Bengaluru: ಆರೋಪಿ ಅಲ್ಲದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಪಿಎಸ್‌ಐಗೆ 2 ರೂ. ಲಕ್ಷ ದಂಡ

Bengaluru: ಆರೋಪಿ ಅಲ್ಲದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಪಿಎಸ್‌ಐಗೆ 2 ರೂ. ಲಕ್ಷ ದಂಡ

Bengaluru: ನಗರದಲ್ಲಿ ಡೆಂಘೀ ರೋಗಕ್ಕೆ ಇಬ್ಬರು ಬಲಿ?

Bengaluru: ನಗರದಲ್ಲಿ ಡೆಂಘೀ ರೋಗಕ್ಕೆ ಇಬ್ಬರು ಬಲಿ?

Dengue

Bengaluru: ಡೆಂಘೀ ತಡೆಗೆ ಮನೆ ಮನೆ ಸಮೀಕ್ಷೆ- ಮುಖ್ಯ ಆಯುಕ್ತ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

Desi Swara: ಸಮಸ್ಯೆಗೆ ಸಮಯವೇ ಪರಿಹಾರ ನೀಡುತ್ತಾ ಹೋಗುತ್ತದೆ…

Desi Swara: ಸಮಸ್ಯೆಗೆ ಸಮಯವೇ ಪರಿಹಾರ ನೀಡುತ್ತಾ ಹೋಗುತ್ತದೆ…

Flash Floods: ಸೇನಾ ತರಬೇತಿ ವೇಳೆ ಹಠಾತ್ ಪ್ರವಾಹ.. ಓರ್ವ ಯೋಧ ಹುತಾತ್ಮ, ನಾಲ್ವರು ನಾಪತ್ತೆ

Flash Floods: ಸೇನಾ ತರಬೇತಿ ವೇಳೆ ಹಠಾತ್ ಪ್ರವಾಹ… ಐವರು ಯೋಧರು ಹುತಾತ್ಮ

Desi Swara: ಕೆನಡಾದಲ್ಲಿ ಗಂಗಾ ದಸರಾ- 50ಕ್ಕೂ ಹೆಚ್ಚಿ ಕಲಾವಿದರಿಂದ ಪ್ರದರ್ಶನ

Desi Swara: ಕೆನಡಾದಲ್ಲಿ ಗಂಗಾ ದಸರಾ- 50ಕ್ಕೂ ಹೆಚ್ಚಿ ಕಲಾವಿದರಿಂದ ಪ್ರದರ್ಶನ

Film producer: ಚಿತ್ರ ನಿರ್ಮಾಪಕನಿಗೆ ಮೀಟರ್‌ ಬಡ್ಡಿ ಕಾಟ!

Film producer: ಚಿತ್ರ ನಿರ್ಮಾಪಕನಿಗೆ ಮೀಟರ್‌ ಬಡ್ಡಿ ಕಾಟ!

7

Theft: ಬೈಕ್‌ನಲ್ಲಿ ಬಂದು ಮಾಂಗಲ್ಯ ಸರ ಕಳವು ಮಾಡಿದ್ದ ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.