![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Aug 7, 2018, 6:00 AM IST
ಬೆಂಗಳೂರು: ಇಲ್ಲಿ ನಡೆಯುತ್ತಿರುವ “ಎ’ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ “ಎ’ ಪ್ರವಾಸಿ ದಕ್ಷಿಣ ಆಫ್ರಿಕಾ “ಎ’ ತಂಡದ ವಿರುದ್ಧ ಇನ್ನಿಂಗ್ಸ್ ಗೆಲುವಿನತ್ತ ದಾಪುಗಾಲಿಕ್ಕಿದೆ. 338 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಪ್ರವಾಸಿ ಪಡೆ, 3ನೇ ದಿನವಾದ ಸೋಮವಾರದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 99 ರನ್ ಗಳಿಸಿದೆ. ಮಂಗಳವಾರ ಪಂದ್ಯದ ಅಂತಿಮ ದಿನವಾಗಿದ್ದು, ಭಾರತದ ಗೆಲುವು ಖಚಿತವಾಗಿದೆ.
ದಕ್ಷಿಣ ಆಫ್ರಿಕಾ ತಂಡ ಮೊದಲ ಇನಿಂಗ್ಸ್ನಲ್ಲಿ 246 ರನ್ಗೆ ಆಲೌಟಾಗಿತ್ತು. ಜವಾಬಿತ್ತ ಭಾರತ 8 ವಿಕೆಟಿಗೆ 584 ರನ್ ಪೇರಿಸಿ ಡಿಕ್ಲೇರ್ ಮಾಡಿತು. 2ಕ್ಕೆ 411 ರನ್ ಗಳಿಸಿದಲ್ಲಿಂದ ಭಾರತ ಬ್ಯಾಟಿಂಗ್ ಮುಂದುವರಿಸಿತ್ತು. ದ್ವಿತೀಯ ದಿನದ ಅಂತ್ಯಕ್ಕೆ 220 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಕರ್ನಾಟಕದ ಮಾಯಾಂಕ್ ಅಗರ್ವಾಲ್ ಇದೇ ಮೊತ್ತಕ್ಕೆ ಔಟಾದರು. 3ನೇ ದಿನ ಬ್ಯಾಟಿಂಗಿನಲ್ಲಿ ಮಿಂಚಿದವರೆಂದರೆ ಹನುಮ ವಿಹಾರಿ (54) ಮತ್ತು ಕೀಪರ್ ಕೆ.ಎಸ್. ಭರತ್ (64). ಅಕ್ಷರ್ ಪಟೇಲ್ ಅಜೇಯ 33 ರನ್ ಮಾಡಿದರು.
ಸಿರಾಜ್ ಘಾತಕ ಬೌಲಿಂಗ್
ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ “ಎ’ ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್ ದಾಳಿಯನ್ನು ಎದುರಿಸಲಾಗದೆ ತೀವ್ರ ಕುಸಿತಕ್ಕೊಳಗಾಯಿತು. ಮೊದಲ 3 ವಿಕೆಟ್ಗಳು 6 ರನ್ ಆಗುವಷ್ಟರಲ್ಲಿ ಉರುಳಿ ಹೋದವು. ದ್ವಿತೀಯ ಸರದಿಯ ಎಲ್ಲ 4 ವಿಕೆಟ್ಗಳು ಸಿರಾಜ್ ಪಾಲಾಗಿವೆ. ಮೊದಲ ಇನಿಂಗ್ಸ್ನಲ್ಲೂ ಅವರು 5 ವಿಕೆಟ್ ಹಾರಿಸಿದ್ದರು. ಜುಬೈರ್ ಹಮ್ಜಾ (ಬ್ಯಾಟಿಂಗ್ 46) ಮತ್ತು ಮುತ್ತುಸ್ವಾಮಿ (41) 86 ರನ್ ಜತೆಯಾಟ ನಿರ್ವಹಿಸಿ ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿದರು. ದಕ್ಷಿಣ ಆಫ್ರಿಕಾ “ಎ’ ಇನ್ನೂ 239 ರನ್ ಹಿನ್ನಡೆಯಲ್ಲಿದೆ.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ “ಎ’-246 ಮತ್ತು 4 ವಿಕೆಟಿಗೆ 99 (ಹಮ್ಜಾ ಬ್ಯಾಟಿಂಗ್ 46, ಮುತ್ತುಸ್ವಾಮಿ 41, ಸಿರಾಜ್ 18ಕ್ಕೆ 4). ಭಾರತ “ಎ’-584/8 ಡಿಕ್ಲೇರ್ (ಅಗರ್ವಾಲ್ 220, ಪೃಥ್ವಿ ಶಾ 136, ಭರತ್ 64, ವಿಹಾರಿ 54, ಹೆಂಡ್ರಿಕ್ಸ್ 98ಕ್ಕೆ 3).
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.