ಮಹಾರಾಷ್ಟ್ರಮಾದರಿಯಲ್ಲಿ ಮೌಡ್ಯ ನಿಷೇಧ ಕಾಯ್ದೆ- ಕಾಗೋಡು
Team Udayavani, Sep 16, 2017, 7:50 AM IST
ಬೆಂಗಳೂರು:ಮಹಾರಾಷ್ಟ್ರದ ಮಾದರಿಯಲ್ಲಿ ರಾಜ್ಯದಲ್ಲು ಮೌಡ್ಯ ನಿಷೇಧ ಕಾಯ್ದೆ ಜಾರಿಗೆ ಎಲ್ಲ ಸಿದ್ಧತೆ ನಡೆದಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.ವಿಧಾನಸೌಧದಲ್ಲಿ ಶುಕ್ರವಾರ ಮಾತನಾಡಿದ ಮೌಡ್ಯ ನಿಷೇಧ ವಿಧೇಯಕ ಪರಾಮರ್ಶೆ ಸಮಿತಿ ಅಧ್ಯಕ್ಷರೂ ಆಗಿರುವ ಅವರು, ಈಗಾಗಲೇ ವಿಧೇಯಕ ಕರಡು ಸಿದ್ಧಗೊಂಡು ಕಾನೂನು ಇಲಾಖೆ ಅಭಿಪ್ರಾಯಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.
ಸಮಾಜದಲ್ಲಿ ಸಾಕಷ್ಟು ಮೌಡ್ಯಗಳಿದ್ದು ಎಲ್ಲವನ್ನು ನಿಷೇಧ ಕಷ್ಟ. ಕೋಳಿ, ಕುಡಿ ಕಡಿಯೋದು ಬೇಡ ಎಂದರೆ ಒಪ್ಪಲ್ಲ. ಕೆಲವೊಂದು ಜೀವನದ ಭಾಗಗಳಾಗಿ ಹೋಗಿವೆ. ಆದರೆ, ಆಮಾಯಕರ ಶೋಷಣೆ ಮಾಡುವ ಮೌಡ್ಯದ ಹೆಸರಿನಲ್ಲಿ ಮೋಸ ಮಾಡುವ, ಮೌಡ್ಯದ ಹೆಸರಿನಲ್ಲಿ ಜನರ ಜೀವನ ದುಸ್ತರಗೊಳಿಸುವ ಆಚರಣೆಗಳು ನಿಲ್ಲಬೇಕು ಎಂದು ತಿಳಿಸಿದರು.
ಭ್ರಮೆಗಳು ಇರಬಾರದು
ಜಾತಿ ಇಲ್ಲದ ಹೊಸ ಧರ್ಮಕ್ಕೆ ಹೋರಾಟ ನಡೆಯಬೇಕು. ಬಸವಣ್ಣನವರ ನಿಜವಾದ ಆಶಯ ಜಾತಿರಹಿತ ಸಮಾಜ. ಬಗ್ಗೆ ಸಂಘಟನೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿ ಹೋರಾಟ ನಡೆಸಬೇಕು. ಆದರೆ, ಪ್ರಸ್ತುತ ನಡೆಯುತ್ತಿರುವ ಹೋರಾಟ ಜಾತಿಯನ್ನು ಒಳಗೊಂಡ ಹೊಸ ಧರ್ಮದ ಹೋರಾಟ ಎಂದು ಪ್ರಶ್ನೆಯೊಂದಕ್ಕೆ ಪ್ರತಿಯಿಸಿದರು.
ಸಚಿವರ ಕಚೇರಿಯಲ್ಲಿ ಬಸವೇಶ್ವರ ಚಿತ್ರ ಇನ್ನೂ ಅಳವಡಿಸದ ಬಗ್ಗೆ ಕೇಳಿದಾಗ, ತರಲು ಹೇಳಿದೆ. ಆದರೆ, ಚಿತ್ರ ಹಾಕುವುದರಿಂದ ಅವರನ್ನು ಮೆಚ್ಚಿಸುವ ಬದಲು ಅವರ ಆಶಯ ಜಾರಿ ಮಾಡುವುದು ಮುಖ್ಯ. ನಾವೆಲ್ಲಾ ಲೋಹಿಯಾ, ಜಯಪ್ರಕಾಶ್ ನಾರಾಯಣ್, ಗೋಪಾಲಗೌಡರ ಪ್ರಭಾವಕ್ಕೆ ಒಳಗಾದವರು. ಜಾತಿವಿನಾಶ ಮತ್ತು ಭೂ ರಹಿತರಿಗೆ ಭೂಮಿ ಹಕ್ಕು ನಮ್ಮ ಹೋರಾಟದ ಗುರಿಯಾಗಿತ್ತು. ಬಸವಣ್ಣನವರು ಜಾತಿ ಹೋಗಲಾಡಿಸಲು ಹೋರಾಟ ಮಾಡಿದವರು. ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ನಿರಂತರ ಹೋರಾಟ, ಸಂಘಟನೆ, ಜಾಗೃತಿ ಅಗತ್ಯ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
BJP vs Congress ; ಕೇಸ್ ಮೇಲೆ ಕೇಸ್
CM Siddaramaiah ಕಂಡಲ್ಲೆಲ್ಲ ಕಪ್ಪುಪಟ್ಟಿ ಪ್ರದರ್ಶನಕ್ಕೆ ಬಿಜೆಪಿ ಸಜ್ಜು
Karnataka; ಮಳಿಗೆಯಲ್ಲಿ 10 ಸಿಬಂದಿ ಇದ್ದರೆ 24 ತಾಸೂ ವ್ಯವಹಾರಕ್ಕೆ ಅವಕಾಶ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ
Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ
KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.