ಕೊಳಚೆ ನೀರಿಗೆ ಲಕ್ಷ ಲಕ್ಷ ಸುರಿಯುವ ರೈತ!

ಕೃಷಿಗಾಗಿ ಕೊಳಚೆ ನೀರು ಖರೀದಿಸುತ್ತಿರುವ ಮೊದಲ ರೈತ |ಕೈತುಂಬಾ ಆದಾಯ ಪಡೆವ ಸುರೇಶ್‌

Team Udayavani, Nov 23, 2020, 12:48 PM IST

ಕೊಳಚೆ ನೀರಿಗೆ ಲಕ್ಷ ಲಕ್ಷ ಸುರಿಯುವ ರೈತ!

ಬೆಂಗಳೂರು: ನಗರದ ಜನ ಬಳಕೆ ಮಾಡಿದ ನೀರನ್ನು ನೆರೆಯ ಊರುಗಳಿಗೆ ಹರಿಸುವ ಬಗ್ಗೆ ಪರ-ವಿರೋಧಗಳು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ಅಂತಹದ್ದೇ ಬರದ ನಾಡಿನ ರೈತರೊಬ್ಬರು ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಸುರಿದು ಪಟ್ಟಣದ ಕೊಳಚೆನೀರು ಖರೀದಿಸಿ, ಕೈತುಂಬಾ ಆದಾಯ ಗಳಿಸುತ್ತಿದ್ದಾರೆ. ರಾಜ್ಯದಲ್ಲಿ ಹೀಗೆ ಕೃಷಿಗಾಗಿ ಹಣ ಕೊಟ್ಟು, ಕೊಳಚೆನೀರು ಖರೀದಿಸುತ್ತಿರುವ ಮೊದಲ ರೈತಕೂಡ ಇವರಾಗಿದ್ದಾರೆ!

ಕೊಳಚೆನೀರಿಗೆ ಭಾರೀ ಬೇಡಿಕೆ: ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಹಿತ್ತಲಹಳ್ಳಿಯ ಎಚ್‌.ಕೆ. ಸುರೇಶ್‌, ಶಿಡ್ಲಘಟ್ಟ ಪಟ್ಟಣದ ಜನ ಬಳಸಿದ ನೀರನ್ನು ಹಣಕೊಟ್ಟು ಖರೀದಿಸಿ ಅದೇ ನೀರಿನಲ್ಲಿ ಮಾವು, ದಾಳಿಂಬೆ, ರೇಷ್ಮೆ ಬೆಳೆದು ಮಿಂಚುತ್ತಿದ್ದಾರೆ. ಈ ಪ್ರಯೋಗವು ಹಳ್ಳಿಯ ಇತರೆ ರೈತರಿಗೂ ಮಾದರಿಯಾಗಿದ್ದು, ಅವರು ಕೂಡ ಖರೀದಿಗೆ ಮುಂದಾಗಿದ್ದಾರೆ. ಪರಿಣಾಮ ಶಿಡ್ಲಘಟ್ಟ ಪಟ್ಟಣದ ಕೊಳಚೆನೀರಿಗೆ ಭಾರೀ ಬೇಡಿಕೆ ಬಂದಿದ್ದು, ಹರಾಜು ಮೂಲಕ ಹಂಚಿಕೆ ಮಾಡುವಂತಾಗಿದೆ.

ರಾಜ್ಯಮಟ್ಟದ ಅತ್ಯುತ್ತಮ ರೈತ: ಪ್ರಸಕ್ತ ಸಾಲಿನಲ್ಲಿ ಎಚ್‌.ಕೆ. ಸುರೇಶ್‌ ಅವರು ಐದೂವರೆ ಲಕ್ಷ ರೂ. ಕೊಟ್ಟು ನೀರು ಖರೀದಿಸಿದ್ದಾರೆ. ಮೊದಲ ಹಂತ ದಲ್ಲಿ ಸಂಸ್ಕರಣೆಗೊಂಡು ಪೂರೈಕೆಯಾದ ನೀರನ್ನು,ಸ್ವಂತ ವ್ಯವಸ್ಥೆಯಲ್ಲಿ ಮರುಸಂಸ್ಕರಿಸಿ ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆಗಳಿಗೆ ಉಣಿಸುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಬರೋಬ್ಬರಿ 42.80 ಲಕ್ಷ ರೂ. ಕೊಳಚೆನೀರಿಗಾಗಿ ಸುರಿದಿದ್ದಾರೆ. ಇದಕ್ಕೆ ಪ್ರತಿಯಾಗಿ ಹೆಚ್ಚು-ಕಡಿಮೆ ದುಪ್ಪಟ್ಟು ಆದಾಯ ಗಳಿಸಿದ್ದಾರೆ. ಇದರೊಂದಿಗೆ ರಾಜ್ಯಮಟ್ಟದ ಅತ್ಯುತ್ತಮ ರೈತ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.

ಇಸ್ರೇಲ್‌ ಪ್ರವಾಸದಿಂದ ಬದಲಾದ ಅದೃಷ್ಟ: ಈ ಹಿಂದೆ ತಮ್ಮ6ಎಕರೆ ಮಳೆಯಾಶ್ರಿತ ಜಮೀನಿನಲ್ಲಿ ಸುರೇಶ್‌ ಸುಮಾರು 18-19 ಕೊಳವೆಬಾವಿಗಳನ್ನುಕೊರೆಸಿ ಕೈಸುಟ್ಟುಕೊಂಡಿದ್ದಾರೆ. ಒಂದೇ ಒಂದು ಬಾವಿಯಿಂದ ನೀರು ದೊರೆಯಲಿಲ್ಲ. ಇದರಿಂದ ಬೇಸತ್ತ ಸಂದರ್ಭದಲ್ಲೇ 1999ರಲ್ಲಿ ಯೋಜನೆಯೊಂದರಲ್ಲಿ ಸರ್ಕಾರ ಆರು ರೈತರನ್ನು ಇಸ್ರೇಲ್‌ ಪ್ರವಾಸಕ್ಕೆ ಕಳುಹಿಸಿತು. ಆ ಪೈಕಿ ಸುರೇಶ್‌ ಕೂಡ ಒಬ್ಬರಾಗಿದ್ದರು. ಅಲ್ಲಿಂದ ಬಂದ ನಂತರ ಅವರ ಜೀವನ ಹೊಸ ತಿರುವು ಪಡೆದುಕೊಂಡಿತು. ಮಳೆನೀರು ಸಂಗ್ರಹಿಸಿ, ತಂತ್ರಜ್ಞಾನಗಳ ನೆರವಿನಲ್ಲಿ ಹನಿ ನೀರಾವರಿಯತ್ತ ಮುಖಮಾಡಿದರು. ಈ ಮಧ್ಯೆ ಒಂದು ದಿನ ಜಮೀನಿನ ಹತ್ತಿರದಲ್ಲೇ ವ್ಯರ್ಥವಾಗಿ ಹೋಗುತ್ತಿದ್ದ ಕೊಳಚೆನೀರು ಗಮನಸೆಳೆಯಿತು. ಆ ನೀರನ್ನು ಸ್ಥಳೀಯ ಸಂಸ್ಥೆಯ ಅನುಮತಿ ಮೇರೆಗೆ ಸಂಸ್ಕರಿಸಿ ಬಳಸಲು ಮುಂದಾದರು.

ಮೂರು ಟ್ಯಾಂಕ್‌ ನಿರ್ಮಾಣ: “ಕಳೆದ 18 ವರ್ಷಗಳಿಂದ ಕೊಳವೆಬಾವಿ ಸಹಾಯವಿಲ್ಲದೆ, ಸಮಗ್ರ ಕೃಷಿ ಮಾಡುತ್ತಿದ್ದೇನೆ . ಇನ್ನು ಮನೆ ಬಳಕೆಗೆ ನಿತ್ಯ 2ಸಾವಿರ ಲೀ. ನೀರು ಬೇಕಾಗುತ್ತದೆ. ಈ ಪೈಕಿ 400 ಲೀ. ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡುತ್ತಿದ್ದೇನೆ. ಜತೆಗೆ 50/50, 70/70 ಅಡಿ ಗಾತ್ರದ ಮೂರು ಟ್ಯಾಂಕ್‌ಗಳನ್ನು ನಿರ್ಮಿಸಿದ್ದು, ಇಲ್ಲಿ ಸಂಗ್ರಹವಾದ ಮಳೆ ನೀರನ್ನು ಇತರೆ ಬೆಳೆಗಳು ಮತ್ತು ಮನೆಗೆ ಉಪಯೋಗಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ವೈವಿಧ್ಯಬೆಳೆಗಳು :  “ಜಮೀನಿನಲ್ಲಿ ರೇಷ್ಮೆಹುಳುಗಳ ಸಾಕಣೆ,ಕುರಿ, ಸ್ವರ್ಣಧಾರಕೋಳಿ, ಮೇವಿನ ಮುಸುಕಿನಜೋಳ, ಅಗಸೆ ಮರ, ನೇಪಿಯರ್‌ ಹುಲ್ಲು,ಕೈತೋಟ, ಪಪಾಯ, ಸೀಬೆ, ಸೀತಾಫ‌ಲ, ನಿಂಬೆ,ಬಾಳೆ ಸೇರಿದಂತೆಹಲವು ಹಣ್ಣಿನ ಗಿಡಗಳು, ಸಿಲ್ವರ್‌ಓಕ್‌ನಂತಹ ಅರಣ್ಯ ಮರಗಳನ್ನು ಬೆಳೆಯುತ್ತಿದ್ದೇನೆ. ಸಾಸಿವೆ,ಚೆಂಡು ಹೂವು ರಕ್ಷಣೆಬೆಳೆ, ರಾಗಿ, ತೊಗರಿ, ನವಣೆ ಕೂಡಬೆಳೆಯುತ್ತಿದ್ದೇನೆ. ಚಾಕಿ ಸಾಕಣೆಯನ್ನು ಮುಖ್ಯ ಕಸುಬಾಗಿ, ಪ್ರತಿಬ್ಯಾಚ್‌ನಲ್ಲಿ  4 ಸಾವಿರ ಡಿಎಫ್ಎಲ್‌ ಮೊಟ್ಟೆಗಳ ಎರಡನೇ ಹಂತದ ಮರಿಗಳನ್ನು ರೈತರಿಗೆ ಮಾರಾಟ ಮಾಡುತ್ತಿದ್ದೇನೆ’ ಎಂದು ಸುರೇಶ್‌ಹೇಳಿದರು.

ಹಲವು ಪ್ರಶಸ್ತಿ ಪಡೆದಿರುವ ಸುರೇಶ್‌ :  ಎಚ್‌.ಕೆ. ಸುರೇಶ್‌ ಮೂರು ಬಾರಿ ಎಸ್ಸೆಸ್ಸೆಲ್ಸಿ ಹಾಗೂ ಎರಡು ಬಾರಿ ಪಿಯುಸಿ ಫೇಲ್‌ ಆಗಿದ್ದಾರೆ. ನಂತರದಲ್ಲಿ ಬೆಂಗಳೂರು ಕೃಷಿ ವಿವಿಯಲ್ಲಿ ಬಿಎಸ್ಸಿ(ರೇಷ್ಮೆ) ಪದವಿ ಪೂರೈಸಿದ್ದಾರೆ. ಪ್ರಸ್ತುತ ಭಾರತೀಯ ರೇಷ್ಮೆ ಸಂಘದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇದುವರೆಗೆ ಕೃಷಿಗೆ ಸಂಬಂಧಿಸಿದ 8-10ಪ್ರ ಶಸ್ತಿಗಳು ಇವರಿಗೆ ಒಲಿದು ಬಂದಿವೆ.25ದೇಶಗಳಿಂದ ಪ್ರತಿನಿಧಿಗಳು ಸುರೇಶ್‌ ಅವರ ಜಮೀನಿಗೆ ಭೇಟಿ ನೀಡಿದ್ದಾರೆ. ಮಾಹಿತಿಗೆ ಮೊ: 9986830435.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.