![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 2, 2021, 3:57 PM IST
ಬೆಂಗಳೂರು : ಕೋವಿಡ್ ಹಿನ್ನೆಲೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್, ಡಿಪ್ಲೊಮಾ, ಕಾನೂನು ಸೇರಿದಂತೆ ಎಲ್ಲ ಕೋರ್ಸ್ಗಳಿಗೂ ಆನ್ಲೈನ್ ಮೂಲಕ ತರಗತಿ ಆರಂಭಿಸಲು ಶಿಕ್ಷಣ ಇಲಾಖೆ ಈಗಾಗಲೇ ಸೂಚನೆ ನೀಡಿದ್ದರೂ ತಾಂತ್ರಿಕ ದೋಷಗಳಿಂದ ಪಠ್ಯ ಸಾಮಗ್ರಿಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ರಾಜ್ಯ ಸರ್ಕಾರ ಮೇ 12ರವರೆಗೆ ಭೌತಿಕ ತರಗತಿಗಳ ಬದಲಿಗೆ ಆನ್ಲೈನ್ ತರಗತಿಗಳನ್ನುನಡೆಸಲು ಕಾಲೇಜು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಆದರೆ, ವಿದ್ಯಾರ್ಥಿಗಳಿಗೆ ಕಲಿಕಾ ನಿರ್ವಹಣಾ ವ್ಯವಸ್ಥೆ(ಎಲ್ಎಂಎಸ್)ನಿಂದ ಕಲಿಕಾ ಸಾಮಗ್ರಿಗಳನ್ನು ಡೌನ್ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ.
ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್ಲೈನ್ ಕಲಿಕೆ ಇನ್ನಷ್ಟುಕಠಿಣವಾಗುತ್ತಿದೆ. ಕಳೆದ ವರ್ಷ ರಾಜ್ಯ ಸರ್ಕಾರ ಎಲ್ಎಂಎಸ್ ಅನುಷ್ಠಾನ ಮಾಡಿದೆ. ಇದರಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಬೇಕಾದ ಕಂಟೆಂಟ್ಗಳನ್ನು ಪ್ರಾಧ್ಯಾಪಕರು ಸಿದ್ಧಪಡಿಸಿ, ಅಪ್ಲೋಡ್ ಮಾಡಬೇಕು. ವಿದ್ಯಾರ್ಥಿಗಳು ತಮ್ಮ ಲಾಗಿನ್ ಮೂಲಕ ಅದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ಅಲ್ಲಿಯೇ ಅಭ್ಯಾಸ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಮೊಬೈಲ್ ತಂತ್ರಾಂಶ : ಸಮಸ್ಯೆಯಾಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿಯೇ ಮುಂದಿನ ಸೆಮಿಸ್ಟರ್ ಆರಂಭದಿಂದಲೇ ಮೊಬೈಲ್ ತಂತ್ರಾಂಶ ಅಥವಾ ಆ್ಯಪ್ ಆಧಾರಿತವಾಗಿ ಎಲ್ಎಂಎಸ್ ಬಳಕೆಗೆ ಸಿದ್ಧಪಡಿಸುತ್ತಿದ್ದೇವೆ. ವಿದ್ಯಾರ್ಥಿ ಗಳು ಆ್ಯಪ್ಡೌನ್ಲೋಡ್ ಮಾಡಿಕೊಂಡು,ಅತ್ಯಂತ ಸುಲಭವಾಗಿ ಎಲ್ಎಂಎಸ್ನಲ್ಲಿರುವ ಕಂಟೆಂಟ್ಗಳಲ್ಲಿ ಕಲಿಕೆಗೆ ಬಳಸಿಕೊಳ್ಳುವಂತೆ ಮಾಡುತ್ತಿದ್ದೇವೆ.
ಕಾಲೇಜುಗಳಲ್ಲಿ ಡೌನ್ಲೋಡ್ಗಾಗಿ ಉಚಿತ ವೈ-ಫೈ ಕೂಡ ನೀಡಲಿದ್ದೇವೆ . ಆಗಆನ್ಲೈನ್ ಅಥವಾ ಆಫ್ಲೈನ್ ಕಲಿಕೆಗೆ ಹೆಚ್ಚುಅನುಕೂಲವಾಗಲಿದೆ ಎಂದು ಕಾಲೇಜು ಮತ್ತುತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್ಮಾಹಿತಿ ನೀಡಿದರು.
2, 4 ಮತ್ತು 6ನೇ ಸೆಮಿಸ್ಟರ್ ತರಗತಿಗಳುಆರಂಭವಾಗುವ ಮೊದಲೇ ಎಲ್ಲ ವಿಷಯದಎಲ್ಲ ಪಠ್ಯವಾರು ಕಂಟೆಂಟ್ಗಳು ಸಿದ್ಧಪಡಿಸಲು ಪ್ರಾಧ್ಯಾಪಕರಿಗೆ ಟಾರ್ಗೆಟ್ ನೀಡಲಾಗಿದೆ ಎಂದುಹಿರಿಯ ಅಧಿಕಾರಿಯೊಬ್ಬರು ವಿವರ ನೀಡಿದರು.
ಎಲ್ಎಂಎಸ್ನ ತಾಂತ್ರಿಕದೋಷವನ್ನು ಸರಿಪಡಿಸಿ,ಮುಂದಿನ ಸೆಮಿಸ್ಟರ್ ಆರಂಭದಲ್ಲಿ ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಕಂಟೆಂಟ್ ಈ ಮೂಲಕವೇ ಸಿಗುವಂತೆ ಮಾಡಲಾಗುತ್ತದೆ.ಇದಕ್ಕಾಗಿ ಪ್ರಾಧ್ಯಾಪಕರ ನಿಯೋಜನೆಮಾಡಿದ್ದು, ಆಯಾ ಕಾಲೇಜುಗಳಪ್ರಾಂಶುಪಾಲರು ಇದರಮೇಲ್ವಿಚಾರಣೆ ಮಾಡುತ್ತಿದ್ದಾರೆ.
ರಾಜು ಖಾರ್ವಿ ಕೊಡೇರಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.