ದೇವದೂತನಿಗೆ ಭಕ್ತಿಯ ನಮನ


Team Udayavani, Dec 26, 2017, 1:35 PM IST

devadoota.jpg

ಬೆಂಗಳೂರು: ಯೇಸು ಕ್ರಿಸ್ತ ಜನಿಸಿದ ದಿನವನ್ನು ನಗರದ ಚರ್ಚ್‌, ಶಾಪಿಂಗ್‌ ಮಾಲ್‌, ಮಳಿಗೆ ಹಾಗೂ ಕ್ರೈಸ್ತ ಬಾಂಧವರ ಮನೆಯಲ್ಲಿ ಅದ್ಧೂರಿಯಾಗಿ ಆಚರಿಸಿದರು. ಕ್ರಿಸ್ಮಸ್‌ನ ಹಿಂದಿನ ದಿನವಾದ ಭಾನುವಾರ ಕ್ರೈಸ್ತ ಬಾಂಧವರು, ಕ್ರಿಸ್ಮಸ್‌ ಜಾಗರಣೆಯ ರಾತ್ರಿಯನ್ನು ಸಂಭ್ರಮದಿಂದ ನಡೆಸಿದರು.

ಕ್ರಿಸ್ಮಸ್‌ ಪ್ರಯುಕ್ತ ನಗರದ ಚರ್ಚ್‌ಗಳು, ಮಾಲ್‌, ಬ್ರಿಗೇಡ್‌ ರಸ್ತೆ, ಕ್ರೈಸ್ತರ ಮನೆಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಚರ್ಚ್‌ ಆವರಣ ಮತ್ತು ಮನೆಗಳಲ್ಲಿ ಆಕರ್ಷಕ ಗೋದಲಿಗಳನ್ನು ನಿರ್ಮಿಸಲಾಗಿತ್ತು, ನಕ್ಷತ್ರಗಳನ್ನು ಜೋಡಿಸಲಾಗಿತ್ತು.

ನಗರದ ಎಂ.ಜಿ. ರಸ್ತೆಯ ಸೆಂಟ್‌ ಕೆಥಡ್ರೆಲ್‌ ಚರ್ಚ್‌, ಶಿವಾಜಿನಗರದ ಸೆಂಟ್‌ ಮೇರಿಸ್‌ ಬಸೆಲಿಕಾ, ವಿವೇಕ ನಗರದ ಇನ್‌ಫೆಂಟ್‌ ಜೀಸಸ್‌ ಚರ್ಚ್‌, ಶಾಂತಲಾ ನಗರದ ಸೆಂಟ್‌ ಪ್ಯಾಟ್ರಿಕ್ಸ್‌ ಚರ್ಚ್‌, ನಾಯಂಡಹಳ್ಳಿಯ ಸೆಂಟ್‌ ಆಂಥೋನಿ ಚರ್ಚ್‌,

ಹೆಬ್ಟಾಳದ ಬೆಥೆಲ್‌ ಏಗ್‌ ಚರ್ಚ್‌, ರಿಚ್‌ಮಂಡ್‌ ರಸ್ತೆಯ ಸ್ಯಾಕ್ರೆಡ್‌ ಹಾರ್ಟ್‌ ಚರ್ಚ್‌, ಜೆ.ಸಿ. ರಸ್ತೆಯ ಸೆಂಟ್‌ ತೆರೆಸಾ ಚರ್ಚ್‌, ಚಾಮರಾಜಪೇಟೆಯ ಸೆಂಟ್‌ ಜೋಸೇಫ್ ಚರ್ಚ್‌ ಹೀಗೆ 250ಕ್ಕೂ  ಅಧಿಕ ಚರ್ಚ್‌ಗಳಲ್ಲಿ ಕನ್ನಡ, ತಮಿಳು, ಇಂಗ್ಲಿಷ್‌, ಮಲೆಯಾಳಂ ವಿವಿಧ ಭಾಷೆಗಳಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಿದರು.

ವೈನ್‌ ಬೆರೆಸಿದ್ದ ಪ್ಲಮ್‌ಕೇಕ್‌ ಕ್ರಿಸ್ಮಸ್‌ ಆಚರಣೆಯ ಇನ್ನೊಂದು ವಿಶೇಷ. ನಗರದ ಬೇಕರಿ ಹಾಗೂ ಹೋಟೆಲ್‌ಗ‌ಳಲ್ಲಿ ಪ್ಲಮ್‌ಕೇಕ್‌ನ ವಿಶೇಷ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಕ್ರಿಸ್‌ಮಸ್‌ ಆಚರಣೆ ಭಾಗವಾಗಿ ಕ್ರೈಸ್ತರ ಮನೆಗಳಿಗೆ ತೆರಳಿ ಕ್ರೈಸ್ತ್ ಗೀತೆಗಳನ್ನು ಹಾಡಿ ಸಂಭ್ರಮಿಸಿದರು.

ಎಲ್ಲಾ ಚರ್ಚ್‌ಗಳನ್ನು ಅಲಂಕಾರಿಕ ಸಾಮಗ್ರಿಗಳಿಂದ ಸಿಂಗರಿಸಲಾಗಿತ್ತು. ಚರ್ಚ್‌ ಮುಂಭಾಗದಲ್ಲಿರುವ ಕ್ರಿಸ್ಮಸ್‌ ಟ್ರೀಗಳಿಗೂ ಅಲಂಕಾರ ಮತ್ತು ಬಣ್ಣಬಣ್ಣದ ದೀಪ ಜೋಡಿಸಲಾಗಿತ್ತು. ಚರ್ಚ್‌ಗಳಲ್ಲಿ ವಿಶೇಷ ಪಾರ್ಥನೆ ನಡೆದವು.

ಮಾಲ್‌ಗ‌ಳಲ್ಲೂ ಸಡಗರ: ಕ್ರಿಸ್ಮಸ್‌ ಸಡಗರ ನಗರದ ಮಾಲ್‌ಗ‌ಳಿಗೂ ಆವರಿಸಿತ್ತು. ಹೀಗಾಗಿ ವಿಶೇಷ ಕೊಡುಗೆ ಘೋಷಿಸಿದ್ದವು. ಎಲ್ಲಾ ಮಾಲ್‌ಗ‌ಳಲ್ಲೂ ಕ್ರಿಸ್ಮಸ್‌ ಟ್ರೀ ಸ್ಥಾಪನೆ ಮಾಡಿ, ಅದಕ್ಕೂ ಅಲಂಕಾರ ಮಾಡಿದ್ದರು. ಮಾಲ್‌ಗೆ ಭೇಟಿ ನೀಡಿದ ಬಹುತೇಕರು ಕ್ರಿಸ್ಮಸ್‌ ಟ್ರೀ ಎದುರು ನಿಂತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಸಾಂತಾಕ್ಲಾಸ್‌ ಟೋಪಿಗಳನ್ನು ಯುವ ಸಮೂಹ ಧರಿಸಿ ಚರ್ಚ್‌ಗಳ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಮಕ್ಕಳ ಕಲರವ: ಬಿಳಿಗಡ್ಡ, ಉದ್ದನೆಯ ಬಿಳಿಪಟ್ಟಿಯ ಕೆಂಪಂಗಿ, ಟೋಪಿ ಧರಿಸಿರುವ ಸಾಂತಾಕ್ಲಾಸ್‌ ಕೈ ಹಿಡಿದು ಆಟ ಆಡುವುದೇ ಮಕ್ಕಳಿಗೆ ಸಂಭ್ರಮ. ಶಿವಾಜಿನಗರ, ಎಂ.ಜಿ.ರಸ್ತೆ, ಜೆ.ಸಿ.ರಸ್ತೆ, ಚಾಮರಾಜಪೇಟೆ ಮೊದಲಾದ ಚರ್ಚ್‌ಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.  ಕುಟುಂಬ ಸಮೇತರಾಗಿ ಬಂದಿದ್ದರಿಂದ ಮಕ್ಕಳು ಸಾಂತಾಕ್ಲಾಸ್‌ಜತೆ ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು.

ಕ್ರಿಸ್ಮಸ್‌ ಆಚರಣೆ ಮನೆ ಮತ್ತು ಚರ್ಚ್‌ನಲ್ಲಿ ವೈಭವದಿಂದ ಮಾಡುತ್ತೇವೆ. ಯಾವುದೇ ಭೇದಭಾವ ಇಲ್ಲದೇ ಸ್ನೇಹಿತರನ್ನು ಮನೆಗೆ ಕರೆಯುತ್ತೇವೆ. ವಿಶೇಷ ಅಡುಗೆ ಮಾಡಿ ಎಲ್ಲರು ಜತೆಯಾಗಿ ಊಟ ಮಾಡಿ, ವೈನ್‌ ಕುಡಿದು ಸಂಭ್ರಮಿಸುತ್ತೇವೆ.
-ಜಸಿಕಾ, ಗೃಹಿಣಿ

ಸಾಂತಾಕ್ಲಾಸ್‌ ಬರುತ್ತಾರೆ ಎಂದರೆ ಅದೇ  ಸಂತೋಷದ ವಿಷಯ. ಕ್ರಿಸ್ಮಸ್‌ ಗಿಫ್ಟ್ ಹಂಚಿಕೊಳ್ಳುತ್ತೇವೆ. ಹಬ್ಬದ ಸಂತಸವನ್ನು ಎಲ್ಲರೊಂದಿಗೂ ಕಳೆಯುತ್ತೇವೆ. ಕೇಕ್‌ ಮತ್ತು ವೈನ್‌ ವಿಶೇಷವಾಗಿರುತ್ತದೆ.
-ರಾಯನ್‌, ವಿದ್ಯಾರ್ಥಿ

ಟಾಪ್ ನ್ಯೂಸ್

4-health

Childhood: ಬಾಲ್ಯಕಾಲದ ಆಘಾತಗಳು ಮತ್ತು ಆರೋಗ್ಯ

1

Crime: ಯೂಟ್ಯೂಬ್‌ ನೋಡಿ ಪ್ರೇಯಸಿಯ 59 ತುಂಡು ಮಾಡಿದ್ದ ಹಂತಕ!

INDvsBAN: New openers for India in T20; Who is the opener with Sharma?

INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್‌ ಯಾರು?

3-doctor-patient

Doctor-Patient relationship: ವೈದ್ಯ – ರೋಗಿ ಸಂಬಂಧ ಮುಂದೇನು?

vidya balan in bhool bhulaiya 3

Vidya Balan; ಮತ್ತೆ ಬಂದಳು ಮಂಜುಳಿಕಾ!

mumbai

Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Road Mishap: ಲಾರಿ ಚಕ್ರ ಹರಿದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ದುರ್ಮರಣ

‌Fraud: ಚೀಟಿ ವ್ಯವಹಾರದಲ್ಲಿ ವಂಚನೆ; ಪತಿ, ಪತ್ನಿ, ಪುತ್ರ ಬಂಧನ

‌Fraud: ಚೀಟಿ ವ್ಯವಹಾರದಲ್ಲಿ ವಂಚನೆ; ಪತಿ, ಪತ್ನಿ, ಪುತ್ರ ಬಂಧನ

Arrested: ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ

Arrested: ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ

4

Bengaluru: ಮಲ್ಲೇಶ್ವರ ಮೈದಾನದಲ್ಲಿ ಮಗು ಸಾವಿಗೆ ಗೇಟ್‌ ವೆಲ್ಡಿಂಗ್‌ ದೋಷ ಕಾರಣ; ಸಮಿತಿ

3

Arrested: 22 ಮನೆ ಕಳ್ಳತನ ಕೇಸ್‌ ಆರೋಪಿ ಸೆರೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

4-health

Childhood: ಬಾಲ್ಯಕಾಲದ ಆಘಾತಗಳು ಮತ್ತು ಆರೋಗ್ಯ

7

Road Mishap: ಲಾರಿ ಚಕ್ರ ಹರಿದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ದುರ್ಮರಣ

‌Fraud: ಚೀಟಿ ವ್ಯವಹಾರದಲ್ಲಿ ವಂಚನೆ; ಪತಿ, ಪತ್ನಿ, ಪುತ್ರ ಬಂಧನ

‌Fraud: ಚೀಟಿ ವ್ಯವಹಾರದಲ್ಲಿ ವಂಚನೆ; ಪತಿ, ಪತ್ನಿ, ಪುತ್ರ ಬಂಧನ

Arrested: ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ

Arrested: ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ

Udupi: ಎಸ್‌ಬಿಐ ಗೃಹ ಮತ್ತು ಕಾರು ಸಾಲ ಹಬ್ಬದ ಉದ್ಘಾಟನೆ

Udupi: ಎಸ್‌ಬಿಐ ಗೃಹ ಮತ್ತು ಕಾರು ಸಾಲ ಹಬ್ಬದ ಉದ್ಘಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.