ಜಗಳ ಬಿಡಿಸಲು ಹೋದ ಮುಖಂಡನ ಮನೆ ದಾಳಿ
Team Udayavani, Feb 24, 2017, 11:22 AM IST
ಕೆ.ಆರ್.ಪುರ: ರಸ್ತೆಯಲ್ಲಿ ಜಗಳವಾಡುತ್ತಿದ್ದ ಕಿಡಿಗೇಡಿಗಳ ಗುಂಪನ್ನು ಪ್ರಶ್ನಿಸಿದ ಕಾಂಗ್ರೆಸ್ ಮುಖಂಡನ ಮೇಲೆ ಅದೇ ಗುಂಪು ದಾಳಿ ಮಾಡಿದೆ. ಮನೆಗೆ ನುಗ್ಗಿದ ದುಷ್ಕರ್ಮಿಗಳು ದಾಂಧಲೆ ಮಾಡಿದ್ದಾರೆ. ಕೆಆರ್ಪುರ ಪೋಲಿಸ್ ಠಾಣೆ ವ್ಯಾಪ್ತಿಯ ದೇವಸಂದ್ರ ಮಸೀದಿ ರಸ್ತೆಯಲ್ಲಿ ಬುಧವಾರ ತಡ ರಾತ್ರಿ ಈ ಘಟನೆ ನಡೆದಿದೆ.
ಮಸೀದಿ ರಸ್ತೆಯಲ್ಲಿರುವ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ಶೇಖ್ ಬಾಬು ರವರ ಮನೆ ಮೇಲೆ ದಾಳಿ ನಡೆದಿದ್ದು, ಅವರ ಇನೋವ ಕಾರಿನ ಗಾಜುಗಳನ್ನು ಕಿಡಿಗೇಡಿಗಳು ಪುಡಿಗಟ್ಟಿದ್ದಾರೆ. ಅಡ್ಡ ಬಂದ ಬಾಬು ಅವರ ಪುತ್ರ ನದೀಮ್ ಅಕ್ರಮ್ ಹಾಗೂ ಮನೆಯಲ್ಲಿದ್ದ ಮಹಿಳೆಯರ ಮೇಲೂ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.
ಬುಧವಾರ ರಾತ್ರಿ ದೇವಸಂದ್ರದ ಮಸೀದಿ ರಸ್ತೆಯಲ್ಲಿ ರಿಜಾÌ, ಟಿಪ್ಪು, ಸೋನು, ಇಮ್ರಾನ್, ಜಾವಿದ್ ಎಂಬುವವರೂ ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಹರಟುತ್ತಾ ನಿಂತಿದ್ದರು. ಈ ವೇಳೆ ರಸ್ತೆಯಲ್ಲಿ ಕ್ಯಾಂಟರ್ವೊಂದು ಬಂದಿದೆ. ವಾಹನ ಚಾಲಕ ಜಾಗ ಬಿಡುವಂತೆ ಹಾರನ್ ಮಾಡಿದ್ದಾನೆ. ಆದರೂ, ಗುಂಪು ಜಾಗ ಬಿಟ್ಟಿಲ್ಲ. ನಂತರ, ವಾಹನ ಹೋಗಲು ದಾರಿ ಬಿಡಿ ಎಂದು ಚಾಲಕ ಯುವಕರ ಬಳಿ ಮನವಿ ಮಾಡಿದ್ದಾನೆ.
ಇದರಿಂದ ಕುಪಿತ ಗೊಂಡ ಗುಂಪು ಚಾಲಕನ ಮೇಲೆ ಹಲ್ಲೆ ನಡೆಸಿದೆ. ಜಗಳದ ಸದ್ದು ಕೇಳಿ ಮನೆಯಿಂದ ಹೊರಬಂದ ಶೇಖ್ ಬಾಬು ಮತ್ತವರ ಪುತ್ರ ನದೀಮ್, ಜಗಳ ಬಿಡಿಸಲು ಮುಂದಾಗಿದ್ದಾರೆ. ಮಾತ್ರವಲ್ಲದೆ ಜಗಳವಾಡುತ್ತಿದ್ದ ಬಗ್ಗೆ ಪ್ರಶ್ನಿಸಿದ್ದಾರೆ. ಪ್ರಶ್ನೆ ಮಾಡಿದ್ದನ್ನೇ ದೊಡ್ಡದು ಮಾಡಿದ ಯುವಕರ ಗುಂಪು ಶೇಖ್ ಬಾಬು ಮನೆಗೆ ನುಂಗಿ ದಾಂಧಲೆ ಮಾಡಿದೆ. ಗುಂಪಿನಲ್ಲಿದ್ದ ಎಲ್ಲರೂ ಗಾಂಜಾ ಸೇವನೆ ಮತ್ತಿನಲ್ಲಿದ್ದರು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ajekar Case Follow Up: ನಿಧಾನಗತಿಯ ಸಾವಿಗೆ ಎರಡು ವಿಷದ ಬಾಟಲಿ ಖರೀದಿಸಿದ್ದ ದಿಲೀಪ್
ಡಾಲರ್ಗೆ ಪರ್ಯಾಯ ಹೆಜ್ಜೆ! ಭಾರತಕ್ಕೆ ಉಂಟಾಗುವ ಲಾಭ-ನಷ್ಟಗಳೇನು?
Assembly By Election: ಗೆದ್ದು ಬನ್ನಿ; ಕಾಂಗ್ರೆಸ್ ಸಚಿವರಿಗೆ ರಣದೀಪ್ ಸುರ್ಜೇವಾಲ ಹುಕುಂ
Puttur: ಲಾರಿ-ದೋಸ್ತ್ ವಾಹನ ನಡುವೆ ಢಿಕ್ಕಿ; ಆರೋಪಿಗೆ ಶಿಕ್ಷೆ ಪ್ರಕಟ
Waqf Property: ವಕ್ಫ್ ಭೂ ವಿವಾದ: ಬಿಜೆಪಿ ಗಡುವು, ಹೋರಾಟದ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.