![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jun 21, 2017, 12:36 PM IST
ಬೆಂಗಳೂರು: ವೃದ್ಧಾಪ್ಯವೇತನ ಕೊಡಿಸುವ ನೆಪದಲ್ಲಿ ವೃದ್ಧೆಯೊಬ್ಬರನ್ನು ಕರೆದೊಯ್ದ ಅಪರಿಚಿತ ಯುವಕನೊಬ್ಬ ಚಿನ್ನದ ಸರ ದೋಚಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಮರಾಜ್ ರಸ್ತೆಯ ಶಿವನಚೆಟ್ಟಿ ಗಾರ್ಡ್ನ್ ನಿವಾಸಿ ಲಕ್ಷಿ ಸರ ಕಳೆದುಕೊಂಡವರು.
ನಾಲ್ಕೈದು ದಿನಗಳ ಹಿಂದೆ ಮನೆ ಮುಂದೆ ಕುಳಿತಿದ್ದ ಲಕ್ಷಿ ಅವರನ್ನು ಅಪರಿಚಿತ ಯುವಕನೊಬ್ಬ ವೃದ್ಧಾಪ್ಯವೇತನ ಬಗ್ಗೆ ವಿಚಾರಿಸಿದ್ದಾನೆ. ಆಗ ಲಕ್ಷ್ಮೀ ಅವರು ವೃದ್ಧಾಪ್ಯವೇತನ ಬರುತ್ತಿಲ್ಲ ಎಂದು ಹೇಳಿದ್ದಾರೆ. ಆಗ ಯುವಕ, “ನನ್ನ ಜತೆ ಬಂದರೆ ವೃದ್ಧಾಪ್ಯ ವೇತನ ಬರುವಂತೆ ಮಾಡಿಸುತ್ತೇನೆ,’ ಎಂದು ಹೇಳಿದ್ದಾನೆ.
ಅಲ್ಲೇ ಇದ್ದ ನೆರೆ ಮನೆ ವಾಸಿ ಶಾಂತಮ್ಮ ಎಂಬುವರು “ನಮಗೂ ವೃದ್ಧಾಪ್ಯ ವೇತನ ಕೊಡಿಸಿ ನಾನೂ ಬರುತ್ತೇನೆ,’ ಎಂದು ಹೇಳಿದ್ದಾರೆ. ಮೂವರು ಆಟೋ ಹತ್ತಿದ್ದು, ಮಾರ್ಗ ಮಧ್ಯೆ ಶಾಂತಮ್ಮ ಅವರು ದಾಖಲೆಗಳನ್ನು ತರುವುದಾಗಿ ಹೇಳಿ ಮನೆಗೆ ವಾಪಸ್ ಹೋಗಿದ್ದಾರೆ.
ಈ ಸಂದರ್ಭದಲ್ಲಿ ಆರೋಪಿ ಬ್ಯಾಂಕ್ ಮುಂದೆ ಕರೆದೊಯ್ದು ವೃದ್ಧೆಗೆ ನಿಮ್ಮ ಕುತ್ತಿಗೆಯಲ್ಲಿರುವ ಚಿನ್ನದ ಸರ ಕಂಡರೆ ಶ್ರೀಮಂತರು ಎಂದು ಅಧಿಕಾರಿಗಳು ಅರ್ಜಿ ಕೊಡಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಸರ ಬಿಚ್ಚುವಂತೆ ಹೇಳಿದ್ದಾನೆ. ಒಂದು ಕವರ್ನಲ್ಲಿ 30 ಗ್ರಾಂ ಸರ ಹಾಗೂ 300 ರೂ. ಹಣವನ್ನು ಹಾಕಿಸಿಕೊಂಡು ತನ್ನ ಬಳಿ ಇಟ್ಟುಕೊಂಡಿದ್ದಾನೆ. ನಂತರ ಲಕ್ಷಿ ಅವರಿಗೆ ಬ್ಯಾಂಕ್ ಒಳಗೆ ಹೋಗುವಂತೆ ಹೇಳಿ ಪರಾರಿಯಾಗಿದ್ದಾನೆ.
You seem to have an Ad Blocker on.
To continue reading, please turn it off or whitelist Udayavani.