Kidnap Case: ಪತಿ ಬಳಿ ಇದ ಮಗನನ್ನು ಅಪಹರಿಸಿದ ಪತ್ನಿ!
Team Udayavani, Aug 4, 2024, 1:13 PM IST
ಕೆ.ಆರ್.ಪುರ: ಗಂಡನ ಮೇಲಿನ ಸಿಟ್ಟಿನಿಂದ ತಾಯಿಯೇ ಸ್ವಂತ ಮಗನನ್ನು ಸ್ನೇಹಿತನೊಂದಿಗೆ ಅಪಹರಿಸಿಕೊಂಡು ಹೋಗಿರುವ ಘಟನೆ ಕೆ.ಆರ್. ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೋಡಿಗೆಹಳ್ಳಿಯ ಕಾಸಾ ಗ್ರಾಂಡ್ ಅಪಾರ್ಟ್ಮೆಂಟ್ ಬಳಿ ನಡೆದಿದೆ.
ವಿಹಾನ್(6) ಅಪಹರಣಕ್ಕೆ ಒಳಗಾದ ಬಾಲಕ.
ಈತನ ತಂದೆ ಸಿದ್ಧಾರ್ಥ ಅವರು ಕೋರ್ಟ್ ವ್ಯಾಜ್ಯ ಸಂಬಂಧ ಚೆನ್ನೈಗೆ ತೆರಳಿದ್ದರು. ಹೀಗಾಗಿ ಸಿದ್ಧಾರ್ಥ್ ತಂದೆ ಸುಂದರ್ ರಾಜ್ ತನ್ನ ಮೊಮ್ಮಗ ವಿಹಾನ್ನನ್ನು ಎಂದಿನಂತೆ ಶಾಲೆಗೆ ಬಿಡಲು ಅಪಾರ್ಟ್ಮೆಂಟ್ ಮುಂಭಾಗದಲ್ಲಿ ಬಸ್ ಕಾಯುತ್ತಿದ್ದರು. ಮಗುವಿನ ತಾಯಿ ಅನುಪಮಾ ತನ್ನ ಗಂಡನ ಮೇಲಿನ ಸಿಟ್ಟಿನಿಂದ ಬೆಳಗ್ಗೆ 8.30ಕ್ಕೆ ಸ್ನೇಹಿತ ನೀಲಕಂಠ ಜೊತೆಗೆ ಕಾರಿನಲ್ಲಿ ಬಂದು ಮಗನನ್ನು ತಾತ ಸುಂದರ್ ರಾಜ್ರಿಂದ ಕಸಿದುಕೊಂಡು ಅಪಹರಣ ಮಾಡಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇತ್ತ ಸೊಸೆ ಅನುಪಮಾ ಅಪರಿಚಿತರೊಂದಿಗೆ ಕಾರಿನಲ್ಲಿ ಬಂದು ತನ್ನ ಮೊಮ್ಮಗ ವಿಹಾನನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ಬಾಲಕ ವಿಹಾನ್ ತಾತ ಸುಂದರ್ ರಾಜ್ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಸೊಸೆ ವಿರುದ್ಧ ದೂರು ದಾಖಲಿಸಿದ್ದಾರೆ.
ದೂರಾಗಿದ್ದ ದಂಪತಿ: ಸಾಫ್ಟವೇರ್ ಉದ್ಯೋಗಿಯಾ ಗಿದ್ದ ಸಿದ್ಧಾರ್ಥ ಜೊತೆ ಅನುಪಮಾು 2014ರಲ್ಲಿ ವಿವಾಹವಾಗಿತ್ತು. ಬಳಿಕ ಇಬ್ಬರ ಮಧ್ಯೆ ಕೌಟುಂಬಿಕ ಹಿನ್ನೆಲೆಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ 2016ರಲ್ಲಿ ದೂರಾಗಿದ್ದರು. ವಿಚ್ಛೇದನ ಪ್ರಕರಣ ಇನ್ನೂ ನ್ಯಾಯಾ ಲಯದಲ್ಲಿದೆ. 2022ರಲ್ಲಿ ಗಂಡ ಮತ್ತು ಮಗು ಬೇಡವೆಂದು ಕೆ.ಆರ್. ಪುರ ಠಾಣೆಯಲ್ಲಿ ನೀಡಿದ್ದು, ಚೆನ್ನೈ ವೆಲ್ಫೆàರ್ ಕಮಿಟಿ 6 ವರ್ಷದ ಮಗುವನ್ನು ಪತಿ ಸಿದ್ಧಾರ್ಥ ವಶಕ್ಕೆ ನೀಡಿ ಆದೇಶಿಸಿತ್ತು. ಸಿದ್ಧಾರ್ಥ ತನ್ನ ತಂದೆ ಮತ್ತು ಮಗ ವಿಹಾನ್ ನೊಂದಿಗೆ ಬೆಂಗಳೂರಿ ನಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದರು. ವಿಹಾನ್ ನನ್ನು ತಾಯಿ ಅನುಪಮಾ ಚೆನ್ನೈಗೆ ಕರೆದುಕೊಂಡು ಹೋಗಿರುವ ಸಾಧ್ಯತೆ ಇದ್ದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪ್ರೇಯಸಿಯ ಪೀಡಿಸುತ್ತಿದ್ದವನಿಗೆ ಪ್ರಿಯಕರನಿಂದ ಚಾಕು ಇರಿತ!
Bengaluru: ಮೆಜೆಸ್ಟಿಕ್ ಬಳಿ ಬಿಎಂಟಿಸಿ ಬಸ್ ಡಿಕ್ಕಿ; ಅಂಗವಿಕಲ ಸ್ಥಳದಲ್ಲೇ ಸಾವು
Bengaluru: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮತ್ತೆ 9 ಮೊಬೈಲ್ ಫೋನ್ಗಳು ಪತ್ತೆ!
Leopard: ಎಲೆಕ್ಟ್ರಾನಿಕ್ ಸಿಟಿ ಎನ್ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ
Anekal: ಶಾಲಾ ಬಸ್ ಅಡ್ಡಗಟ್ಟಿ ಚಾಲಕನಿಗೆ ತೀವ್ರ ಹಲ್ಲೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.