ವಿವಿಗಳಲ್ಲಿ ಸಂಶೋಧನೆಗೆ ಆದ್ಯತೆ ಬೇಕಿದೆ: ಡಾ.ಮೋಹನ್‌ ದಾಸ್‌ ಪೈ


Team Udayavani, Jun 26, 2021, 4:56 PM IST

There is a need for research in VVs

ಬೆಂಗಳೂರು: ಭಾರತದಲ್ಲಿ ಬೋಧನಾಆಧಾರಿತ ವಿಶ್ವವಿದ್ಯಾಲಯವ್ಯವಸ್ಥೆ ಇದೆಯೇ ಹೊರತು, ಸಂಶೋಧನೆ ಆಧಾರಿತವಿಶ್ವವಿದ್ಯಾಲಯ ವ್ಯವಸ್ಥೆ ಇಲ್ಲದೇ ಇರುವುದರಿಂದ ವಿಶ್ವದ ಶ್ರೇಷ್ಠವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ನಮಗೆ ಸ್ಥಾನ ಪಡೆಯಲುಸಾಧ್ಯವಾಗುತ್ತಿಲ್ಲ ಎಂದು ಮಣಿಪಾಲ್‌ ಗ್ಲೋಬಲ್‌ ಶಿಕ್ಷಣದ ಅಧ್ಯಕ್ಷ ಡಾ.ಟಿ.ವಿ.ಮೋಹನ್‌ದಾಸ್‌ಪೈಅಭಿಪ್ರಾಯ ವ್ಯಕ್ತಪಡಿಸಿದರು.

ದಿಶಾ ಭಾರತ್‌ ಸಂಸ್ಥೆಯು ಬೆಂಗಳೂರುವಿಶ್ವವಿದ್ಯಾಲಯದ ಸಹಯೋಗದಲ್ಲಿಹಮ್ಮಿಕೊಂಡಿರುವ ವಿಕಸನ ಸರಣಿ ಉಪನ್ಯಾಸಕಾರ್ಯಕ್ರಮದಲ್ಲಿ ಶುಕ್ರವಾರ “ಸಂಶೋಧನೆ ಮತ್ತುಅನ್ವೇಷಣೆ’ ಕುರಿತು ಮಾತನಾಡಿ, ಭಾರತದಲ್ಲಿಸಾವಿರಕ್ಕೂ ಅಧಿಕ ವಿಶ್ವವಿದ್ಯಾಲಯಗಳು ಇವೆ.ಆದರೆ, ವಿಶ್ವದ ನೂರು ಶ್ರೇಷ್ಠ ವಿವಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ನಮಗೆ ಸಾಧ್ಯವಾಗಿಲ್ಲ.ಕಾರಣ, ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌ಆ್ಯಂಡ್‌ಡಿ)ಯಲ್ಲಿನಾವುಸಾಕಷ್ಟುಸಾಧಿಸಬೇಕಿದೆ. ನಮ್ಮಲ್ಲಿ ಐತಿಹಾಸಿಕ ಶೈಕ್ಷಣಿಕ ಪರಂಪರೆ, ಶ್ರೇಷ್ಠಶಿಕ್ಷಣ ಸಂಸ್ಥೆಗಳಿದ್ದರೂ, ಅದನ್ನು ಮುಂದುವರಿಸಿಕೊಂಡುಬರಲು ವಿಫಲರಾಗಿದ್ದೇವೆ ಎಂದುಕಳವಳ ವ್ಯಕ್ತಪಡಿಸಿದರು.

ಭಾರತ ಸ್ವಾತಂತ್ರ್ಯ ಪಡೆದ ನಂತರ ಸಾಕ್ಷರತೆಗೆ ನಿರೀಕ್ಷಿತಪ್ರಮಾಣದಲ್ಲಿ ಒತ್ತು ನೀಡಿಲ್ಲ. ಮಹಿಳಾ ಶಿಕ್ಷಣಕ್ಕೂ ಪ್ರೋತ್ಸಾಹ ಸಿಕ್ಕಿರಲಿಲ್ಲ. ಶಿಕ್ಷಣ ಸಂಸ್ಥೆಗಳನ್ನು ತೆರೆದರೆ ಸಾಲದು. ದಾಖಲಾತಿ,ಕಲಿಕೆ, ಬೋಧನೆ, ಸಂಶೋಧನೆಗೆ ಉತ್ತೇಜನವೂ ಬೇಕು.ಪ್ರಾಥಮಿಕ ಶಿಕ್ಷಣವೇ ಉನ್ನತ ಶಿಕ್ಷಣದ ಬುನಾದಿಯಾಗಿದೆ.ಈನಿಟ್ಟಿನಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗಬೇಕು. ಪ್ರತಿಭಾವಂತರು ಇಲ್ಲಿಯೇ ಸ್ನಾತಕೋತ್ತರ ಹಾಗೂ ಪಿಎಚ್‌.ಡಿಮಾಡುವಂತಾಗಬೇಕು ಮತ್ತು ಅವರ ಸೇವೆ ದೇಶಕ್ಕೆಲಭ್ಯವಾಗಬೇಕು ಎಂದು ಹೇಳಿದರು.

ಸರ್ಕಾರಗಳು ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಹಾಗೂಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಬೇಕು. ಯುವಜನರನ್ನು ಸಂಶೋಧನೆಗೆ ಉತ್ತೇಜಿಸುವ ನಿಟ್ಟಿನಲ್ಲಿ ವ್ಯವಸ್ಥೆ ರೂಪಿಸಬೇಕು. ಸಂಶೋಧನೆ ವಿಷಯದಲ್ಲಿ ಖಾಸಗಿ ಹಾಗೂಸರ್ಕಾರಿ ಸಂಸ್ಥೆಗಳ ನಡುವೆ ತಾರತಮ್ಯ ಇರಬಾರದು.
ಖಾಸಗಿ ಶಿಕ್ಷಣ ಸಂಸ್ಥೆಗಳು ಉತ್ತಮ ಸಂಶೋಧನೆ ಮಾಡಿದರೂ, ಸರ್ಕಾರಅದಕ್ಕೆ ಹಣಕಾಸು ಸೌಲಭ್ಯ ಒದಗಿಸುವಂತಾಗಬೇಕು. ಸಂಶೋಧನೆಗಳು ದೀರ್ಘ‌ಕಾಲ ಹಾಗೂಅಲ್ಪಕಾಲದಲ್ಲಿ ನಡೆಯುತ್ತದೆ. ವಿಶ್ವವಿದ್ಯಾಲಯದಲ್ಲಿದೀರ್ಘ‌ಕಾಲದ ಸಂಶೋಧನೆ ನಡೆಯುತ್ತದೆ ಮತ್ತುಇದಕ್ಕೆ ವಿಶೇಷ ಪ್ರಯತ್ನ ನಿರಂತರವಾಗಿನಡೆಯುತ್ತಿರುತ್ತದೆ. ಆದರೆ, ಇಂದಿನ ಅಗತ್ಯತೆಗೆತಕ್ಕಂತೆ ಕೈಗಾರಿಕೆಗಳಿಗೆ ಬೇಕಾಗುವಸಂಶೋಧನೆಗಳು ಅಲ್ಪಕಾಲಿಕವಾ ಗಿರುತ್ತದೆ ಎಂದು ವ್ಯಾಖ್ಯಾನ ಮಾಡಿದರು.

ಬಿಹಾರದ ನಲಂದ ವಿಶ್ವವಿದ್ಯಾಲಯದ ಕುಲಪತಿ ಡಾ.ಸುನೈನಾ ಸಿಂಗ್‌ ಮಾತನಾಡಿ,ಸಂಶೋಧನೆಗೆ ಯಾವುದೇ ವಿಭಾಗದಲ್ಲಿ ಮಿತಿ ಹಾಕಿಕೊಳ್ಳಬಾರದು. ವಿವಿಗಳು ಎಲ್ಲ ವಿಭಾಗದಲ್ಲೂ ಸಂಶೋಧನೆಗೆವಿಶೇಷ ಆದ್ಯತೆ ನೀಡಬೇಕು. ಇದಕ್ಕೆ ಪೂರಕವಾದ ಪಠ್ಯಕ್ರಮಸಿದ್ಧಪಡಿಸಬೇಕು. ಶಿಕ್ಷಣ ಕ್ಷೇತ್ರದ ಪುನರ್‌ ವಿಮರ್ಶೆಗೆ ರಾಷ್ಟ್ರೀಯ ಶಿಕ್ಷಣ ನೀತಿ ಅನುಕೂಲವಾಗಿದೆ ಎಂದರು.ಐಐಟಿ, ಐಐಎಂ ಸೇರಿದಂತೆ ನೂರಕ್ಕೂ ಅಧಿಕ ರಾಷ್ಟ್ರೀಯಶಿಕ್ಷಣ ಸಂಸ್ಥೆಗಳು, ಐವತ್ತಕ್ಕೂ ಅಧಿಕ ಕೇಂದ್ರೀಯವಿಶ್ವವಿದ್ಯಾಲಯಗಳಿವೆ. ಇವುಗಳಕೊಡುಗೆ ಏನು ಎಂಬುದನ್ನುಅರ್ಥ ಮಾಡಿಕೊಳ್ಳಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಸದೃಢಯೋಜನೆಯ ಜತೆಗೆ ಜ್ಞಾನಾರ್ಜನೆಗೆ ಇರುವ ಮಾರ್ಗಗಳಶೋಧನೆ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.