ಹೀಗೊಂದು ಪರಿಸರ ಸ್ನೇಹಿ ಬಸ್‌


Team Udayavani, Apr 11, 2019, 3:00 AM IST

higondu

ಬೆಂಗಳೂರು: ಈ ಬಸ್‌ನಲ್ಲಿ ಶುದ್ಧ ಕುಡಿಯುವ ನೀರು, ತಂಪಾದ ಗಾಳಿ ಎಲ್ಲವೂ ಇದೆ. ಇದೊಂದು ಅಪ್ಪಟ ಪರಿಸರ ಸ್ನೇಹಿ ಬಸ್‌. ಬನಶಂಕರಿ ಮಾರ್ಗವಾಗಿ ದೊಮ್ಮಲೂರು ಸಂಚರಿಸುವ ಕೆಎ07-ಎಫ್-838 ಬಸ್‌ ಹಸಿರುಮಯವಾಗಿ ಕಂಗೊಳಿಸುತ್ತಿದೆ.

ಈ ಬಸ್‌ ಪರಿಸರ ಸ್ನೇಹಿಯಾಗಿರುವುದರ ಹಿಂದೆ, ಡಿಪೋ 6ರ ಬಸ್‌ ಚಾಲಕ ನಾರಾಯಣಪ್ಪ ಅವರ ಕೊಡುಗೆ ಇದೆ. ಇವರು ಬಸ್‌ನಲ್ಲಿ ಪ್ರಯಾಂಣಿಕರಿಗಾಗಿ ನೀರಿನ ಕ್ಯಾನ್‌ ಅಳವಡಿಸಿದ್ದಾರೆ. ಅಷ್ಟೇ ಅಲ್ಲ, ಮನೆ ಅಂಗಳದಲ್ಲಿ ಬಳಸಬಹುದಾದ 10ಕ್ಕೂ ಹೆಚ್ಚು ಸಸಿಗಳನ್ನು ಬಸ್‌ನಲ್ಲಿ ಇಟ್ಟು ಬಸ್‌ ವಾತಾವರಣವನ್ನು ಹಸಿರಾಗಿಸಿದ್ದಾರೆ.

ಬಸ್‌ಗಳಲ್ಲಿ ಸೂಕ್ತ ಚಿಲ್ಲರೆ ಸಿಗಲಿಲ್ಲ, ಸರಿಯಾದ ಸಮಯಕ್ಕೆ ವಾಹನ ತೆಗೆಯಲಿಲ್ಲ ಎನ್ನುವ ಕಾರಣಗಳಿಗೆ ಸಾರ್ವಜನಿಕರು ಮತ್ತು ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ಉಂಟಾಗುತ್ತಿರುತ್ತದೆ. ಆದರೆ, ಈ ಬಸ್‌ನ ವಾತಾವರಣ ಸಂಪೂರ್ಣ ಭಿನ್ನವಾಗಿದೆ. ಈ ಬಸ್‌ನಲ್ಲಿ ಜನ ಖುಷಿಯಿಂದ ಪ್ರಯಾಣಿಸುತ್ತಾರೆ.

ಮುಳಬಾಗಿಲಿನ ನಾರಾಯಣಪ್ಪ ಕಳೆದ 29 ವರ್ಷಗಳಿಂದ ಬಸ್‌ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡು ವರ್ಷಗಳಿಂದ ಬಸ್‌ನಲ್ಲಿ ನೀರಿನ ಕ್ಯಾನ್‌ ಮತ್ತು ಸಣ್ಣ ಸಸಿಗಳನ್ನು ಬೆಳಸುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಇದಕ್ಕೆ ಡಿಪೋ ಹಿರಿಯ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಟ್ವಿಟ್ಟರ್‌ನಲ್ಲಿ ನಾರಾಯಣಪ್ಪ ಅವರ ಸೇವೆಗೆ ಮೆಚ್ಚುಗೆ ಸೂಚಿಸಿ ಪುಷ್ಪಪ್ರಿಯಾ ಎನ್ನುವವರು “ಬಸ್‌ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಸಣ್ಣ ಸಸಿಗಳನ್ನು ಇಟ್ಟಿದ್ದಾರೆ. ಬಸ್‌ ವಾತಾವರಣ ಪರಿಸರ ಸ್ನೇಹಿಯಾಗಿದೆ’ ಎಂದು ಟ್ವಿಟ್‌ಮಾಡಿದ್ದಾರೆ.

ಈ ವಿಶೇಷ ಕಾಳಜಿಯ ಪ್ರೇರಣೆ ಬಗ್ಗೆ ಪ್ರತಿಕ್ರಿಯಿಸಿದ ನಾರಾಯಣಪ್ಪ, ಪ್ರತಿ ದಿನ ಬಸ್‌ ಬನಶಂಕರಿ ಮಾರ್ಗವಾಗಿ ದೊಮ್ಮಲೂರು ಸಾಗುತ್ತದೆ. ಬಸ್‌ನಲ್ಲಿ ಒಮ್ಮೆ ತುಂಬ ಬಳಲಿಬಂದ ವಯಸ್ಸಾದ ವೃದ್ಧೆಯೊಬ್ಬರು ನೀರು ಕೇಳಿದರು. ಆ ಕ್ಷಣಕ್ಕೆ ಎಲ್ಲಿ ನೀರು ಹುಡುಕುವುದು ಎಂದೇ ಗೊತ್ತಾಗಲಿಲ್ಲ.

ಬಸ್‌ನಲ್ಲಿ ಗ್ಲಾಸ್‌ ಸ್ವತ್ಛ ಮಾಡುವುದಕ್ಕೆ ಇಟ್ಟಿದ್ದ ನೀರನ್ನೇ ಅವರು ಒಂದು ಗುಟುಕೂ ಬಿಡದಂತೆ ಕುಡಿದು ಬಿಟ್ಟರು! ಅಂದಿನಿಂದಲೇ ಬಸ್‌ನಲ್ಲಿ ನೀರಿನ ಕ್ಯಾನ್‌ ಇಡಲು ಪ್ರಾರಂಭಿಸಿದೆ ಎನ್ನುತ್ತಾರೆ. “ಪ್ರತಿ ದಿನ 30 ರೂಗಳನ್ನು ಕೊಟ್ಟು ನೀರಿನ ಕ್ಯಾನ್‌ ತರುತ್ತೇನೆ.

ಜನ ಖುಷಿಯಿಂದ ನೀರು ಕುಡಿದು ಹೋಗುತ್ತಾರೆ. ಸಸಿಗಳ ಬಗ್ಗೆ ಮೆಚ್ಚುಗೆ ಸೂಚಿಸುತ್ತಾರೆ ಇದಕ್ಕಿಂತ ಇನ್ನೇನು ಬೇಕು’ ಎಂದು ಕೇಳುತ್ತಾರೆ ನಾರಾಯಣಪ್ಪ. ಸಾರ್ವಜನಿಕರೊಂದಿಗೆ ಸೌರ್ಹಾದ ಬೆಸುಗೆಯನ್ನು ಬೆಸೆಯುವ ನಿಟ್ಟಿನಲ್ಲಿ ನಾರಾಯಣ್ಣಪ್ಪ ಅವರು ಮಾಡುತ್ತಿರುವ ಸೇವಾ ಕಾರ್ಯ ಇತರ ಸಿಬ್ಬಂದಿಗಳಿಗೆ ಮಾದರಿಯೇ ಸರಿ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.