![ಎಂ.ಟಿ.ಪಿ.ಕಿಟ್ ಅಕ್ರಮ ಮಾರಾಟ ವಿರುದ್ಧ ಆರೋಗ್ಯ ಇಲಾಖೆ ಎಚ್ಚರಿಕೆ](https://www.udayavani.com/wp-content/uploads/2024/07/HEALTH-415x287.jpg)
ಸಾಲದ ಹಣ ನೀಡದ್ದಕ್ಕೆ ಬ್ಯಾಟ್ನಿಂದ ಥಳಿಸಿ ಹತ್ಯೆ
Team Udayavani, Jul 26, 2017, 11:52 AM IST
![hatye.jpg](https://www.udayavani.com/wp-content/uploads/2017/07/26/hatye.jpg)
ಬೆಂಗಳೂರು: ಸಾಲದ ಹಣ ಹಿಂದಿರುಗಿಸಲು ವಿಳಂಬ ಮಾಡಿದ ಸ್ನೇಹಿತನನ್ನೇ ಕ್ರಿಕೆಟ್ ಬ್ಯಾಟ್ನಿಂದ ಹೊಡೆದು ಕೊಲೆ ಮಾಡಿದ ಆರೋಪಿಯನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾಗೇಂದ್ರ(26) ಬಂಧಿತ. ಜುಲೈ 23ರಂದು ಆರೋಪಿ ನಾಗೇಂದ್ರ, ತನ್ನ ಸ್ನೇಹಿತ ರವಿಕುಮಾರ್ ಎಂಬಾತನನ್ನು ಕೊಲೆಗೈದು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆಯವನಾದ ರವಿಕುಮಾರ್ ಮತ್ತು ಆರೋಪಿ ನಾಗೇಂದ್ರ ಆಟೋ ಚಾಲಕರಾಗಿದ್ದು, ಕಳೆದ ಐದಾರು ವರ್ಷಗಳಿಂದ ಸ್ನೇಹಿತರಾಗಿದ್ದಾರೆ. ಈ ಮಧ್ಯೆ ನಾಲ್ಕು ವರ್ಷಗಳ ಹಿಂದೆ ರವಿಕುಮಾರ್ ನಾಗೇಂದ್ರನಿಂದ 4.5 ಲಕ್ಷ ರೂ. ಸಾಲ ಪಡೆದಿದ್ದ. ಆದರೆ, ಇದುವರೆಗೂ ಹಣ ವಾಪಸ್ ನೀಡಿರಲಿಲ್ಲ. ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ್ಗ ಜಗಳ ನಡೆಯುತ್ತಿತ್ತು. ಬಳಿಕ ಸಮಾಧಾನವಾಗುತ್ತಿದ್ದರು ಎಂದು ಪೊಲೀಸರು ತಿಳಿದ್ದಾರೆ.
ಈ ನಡುವೆ ಭಾನುವಾರ ರಾತ್ರಿ ಮಾಳಗಾಳದ ಸ್ನೇಹಿತ ಶಿವರಾಜಕುಮಾರ ಮನೆಗೆ ರವಿಕುಮಾರ್ ತನ್ನ ಸ್ನೇಹಿತರಾದ ನಾಗೇಂದ್ರ ಮತ್ತು ಪ್ರವೀಣ್ಕುಮಾರ್ ಜತೆ ಬಂದಿದ್ದು, ಮೂವರು ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ಆಗ ಪ್ರವೀಣ್ಕುಮಾರ್ ಸಿಗರೇಟ್ ಸೇದಲು ಮನೆಯಿಂದ ಹೊರಬಂದಿದ್ದ.
ಇದೇ ವೇಳೆ ನಾಗೇಂದ್ರ ರವಿಕುಮಾರ್ಗೆ ತಾನು ಕೊಟ್ಟಿರುವ ಹಣ ಕೊಡುವಂತೆ ಒತ್ತಾಯಿಸಿದ. ಇದಕ್ಕೆ ರವಿಕುಮಾರ್, ನೀನು ಹಣ ಕೊಟ್ಟಿರುವುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದಿದ್ದಾನೆ. ಇದಕ್ಕೆ ಆಕ್ರೋಶಗೊಂಡ ನಾಗೇಂದ್ರ ಅಲ್ಲೇ ಇದ್ದ ಬ್ಯಾಟ್ನಲ್ಲಿ ಹಲ್ಲೆ ನಡೆಸಿ ರವಿಕುಮಾರ್ನನ್ನು ಕೊಲೆಗೈದು ಪರಾರಿಯಾಗಿದ್ದ.
ಮರು ದಿನ ಬೆಳಗ್ಗೆ 10 ಗಂಟೆಗೆ ಅದೇ ಕಟ್ಟಡದಲ್ಲಿ ನೆಲೆಸಿದ್ದ ಮಹಿಳೆ ಬಟ್ಟೆ ಒಣ ಹಾಕಲು ಮಹಡಿ ಮೇಲೆ ತೆರಳಿದಾಗ ಮನೆ ಬಾಗಿಲನಲ್ಲಿ ರಕ್ತದ ಕಲೆಗಳು ಕಂಡಿದೆ. ಅನುಮಾನಗೊಂಡು ಬಾಗಿಲು ತಳ್ಳಿ ಇಣುಕಿದಾಗ ರಕ್ತದ ಮಡುವಿನಲ್ಲಿ ರವಿಕುಮಾರ್ ಮೃತದೇಹ ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
![ಎಂ.ಟಿ.ಪಿ.ಕಿಟ್ ಅಕ್ರಮ ಮಾರಾಟ ವಿರುದ್ಧ ಆರೋಗ್ಯ ಇಲಾಖೆ ಎಚ್ಚರಿಕೆ](https://www.udayavani.com/wp-content/uploads/2024/07/HEALTH-415x287.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![11-bng](https://www.udayavani.com/wp-content/uploads/2024/07/11-bng-150x90.jpg)
Bengaluru: ಅಕ್ರಮ ಆಸ್ತಿ: ಬೆಸ್ಕಾಂ ಎಇಇಗೆ 3 ವರ್ಷ ಸಜೆ,1 ಕೋಟಿ ರೂ. ದಂಡ ವಿಧಿಸಿದ ಕೋರ್ಟ್
![10-bng](https://www.udayavani.com/wp-content/uploads/2024/07/10-bng-150x90.jpg)
Bengaluru: ಶೋಕಿಲಾಲನಿಗೆ ನಕಲಿ ಎ.ಕೆ.47 ಕೊಡಿಸಿದ್ದ ವ್ಯಕ್ತಿಗೆ ನೋಟಿಸ್
![9-crime](https://www.udayavani.com/wp-content/uploads/2024/07/9-crime-150x90.jpg)
Bengaluru: ಬೈಕ್ಗೆ ಲಾರಿ ಡಿಕ್ಕಿ : ರಿಯಲ್ ಎಸ್ಟೇಟ್ ಏಜೆಂಟ್ ಸಾವು
![8-bng](https://www.udayavani.com/wp-content/uploads/2024/07/8-bng-150x90.jpg)
Bengaluru: ಹಳೇ ದ್ವೇಷಕ್ಕೆ ವ್ಯಕ್ತಿ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
![7-bng](https://www.udayavani.com/wp-content/uploads/2024/07/7-bng-150x90.jpg)
Bengaluru: ವಿಚಾರಣಾಧೀನ ಕೈದಿಯ ಗುದದ್ವಾರದಲ್ಲಿ 2 ಮೊಬೈಲ್
MUST WATCH
ಹೊಸ ಸೇರ್ಪಡೆ
![ಎಂ.ಟಿ.ಪಿ.ಕಿಟ್ ಅಕ್ರಮ ಮಾರಾಟ ವಿರುದ್ಧ ಆರೋಗ್ಯ ಇಲಾಖೆ ಎಚ್ಚರಿಕೆ](https://www.udayavani.com/wp-content/uploads/2024/07/HEALTH-150x104.jpg)
Mangaluru ಎಂ.ಟಿ.ಪಿ.ಕಿಟ್ ಅಕ್ರಮ ಮಾರಾಟ ವಿರುದ್ಧ ಆರೋಗ್ಯ ಇಲಾಖೆ ಎಚ್ಚರಿಕೆ
![1-ghgg](https://www.udayavani.com/wp-content/uploads/2024/07/1-ghgg-150x81.jpg)
T20 World Cup ವಿಜಯೋತ್ಸವವೆಲ್ಲ ಮುಗಿದ ಬಳಿಕ ಕೊಹ್ಲಿ-ಕೋಚ್ ಆತ್ಮೀಯ ಅಪ್ಪುಗೆ
![Toll Plaza ಹೆದ್ದಾರಿ ಬದಿ ತಾತ್ಕಾಲಿಕ ಅಂಗಡಿ ತೆರವು: ಜು.20ರ ಗಡುವು ನೀಡಿದ ಅಧಿಕಾರಿ](https://www.udayavani.com/wp-content/uploads/2024/07/ROAD-HIGHWAY-150x108.jpg)
Toll Plaza ಹೆದ್ದಾರಿ ಬದಿ ತಾತ್ಕಾಲಿಕ ಅಂಗಡಿ ತೆರವು: ಜು.20ರ ಗಡುವು ನೀಡಿದ ಅಧಿಕಾರಿ
![ಹುಲ್ಕಡಿಕೆ: ಬೈಂದೂರು ತಾ.ಪಂ. ಇಒ ಭೇಟಿ](https://www.udayavani.com/wp-content/uploads/2024/07/byndoor-2-150x91.jpg)
Kundapura ಹುಲ್ಕಡಿಕೆ: ಬೈಂದೂರು ತಾ.ಪಂ. ಇಒ ಭೇಟಿ
![Rain-M](https://www.udayavani.com/wp-content/uploads/2024/07/Rain-M-150x90.jpg)
Heavy Rain: ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜಿಗೆ ಜು.6 ರಂದು ರಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.