ತೊಗಲು ಗೊಂಬೆಗೆ ಜೀವ ನೀಡಲು ಯೋಜನೆ


Team Udayavani, Feb 20, 2023, 12:58 PM IST

tdy-7

ಬೆಂಗಳೂರು: ತೊಗಲು ಗೊಂಬೆಯಾಟಕ್ಕೆ ಜೀವಂತಿಕೆ ಕೊಡುವ ನಿಟ್ಟಿನಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ ಇದೀಗ ಕರ್ನಾಟಕ ಲಲಿತಕಲಾ ಅಕಾಡೆಮಿ ಜತೆಗೂಡಿ ಯೋಜನೆ ರೂಪಿಸಿದೆ.

ಯುವ ಕಲಾವಿದರಿಗೆ ತೊಗಲು ಗೊಂಬೆಯಾಟದ ಪ್ರಸಂಗಗಳ ಕಥೆ ಹೇಳಿ ಚಿತ್ರವನ್ನು ಬರೆಸುವುದು ಆ ಮೂಲಕ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ತೊಗಲು ಗೊಂಬೆಯಾಟದ ಪ್ರದರ್ಶನದತ್ತ ಸೆಳೆಯುವ ಉದ್ದೇಶ ಕೂಡ ಇದರಲ್ಲಿ ಸೇರಿದೆ. ಕೊಪ್ಪಳ, ಕೋಲಾರ ಸೇರಿದಂತೆ ರಾಜ್ಯದ ಕೆಲವು ಭಾಗದಲ್ಲಿ ಹಲವು ಸಂಖ್ಯೆಯಲ್ಲಿ ತೊಗಲುಗೊಂಬೆ ಕಲಾವಿದರು ಇನ್ನೂ ಇದ್ದಾರೆ. ಅಂತಹ ಕಲಾವಿದರಿಗೆ ಆಹ್ವಾನ ನೀಡಿ, ಆಸಕ್ತಿ ಇರುವ ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಪ್ರದರ್ಶನ ನೀಡುವ ಕುರಿತಂತೆ ತರಬೇತಿ ನೀಡುವ ಆಲೋಚನೆಯನ್ನು ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ ಹೊಂದಿದೆ.

ರಾಮಾಯಾಣ ಮತ್ತು ಮಹಾಭಾರತದಂತಹ ಪ್ರಸಂಗಗಳನ್ನು ಜನರಿಗೆ ತಲುಪಿಸುವಲ್ಲಿ ತೊಗಲು ಗೊಂಬೆಯಾಟ ಆಗ್ರಪಂಕ್ತಿಯಲ್ಲಿತ್ತು. ಆದರೆ, ತಂತ್ರ ಜ್ಞಾನದ ನಾಗಲೋಟಕ್ಕೆ ಸಿಲುಕಿ ಇದೀಗ ತೊಗಲು ಗೊಂಬೆಯಾಟ ನಶಿಸಿಹೋಗುತ್ತಿದೆ. ಹಿನ್ನೆಲೆ ಯಲ್ಲಿ ಚಿತ್ರಕಲೆ ಮೂಲಕ ತೊಗಲು ಗೊಂಬೆಯನ್ನು ಅರಳಿ ಸುವ ಕೆಲಸದಲ್ಲಿ ಕಲಾಕೇಂದ್ರ ಮುಂದಾಗಿದೆ ಎಂದು ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರದ ಬೆಂಗ ಳೂರು ನಿರ್ದೇಶಕ ಡಿ.ಮಹೇಂದ್ರ ಮಾಹಿತಿ ನೀಡಿದ್ದಾರೆ.

ಈಗಾಲೇ ಕರ್ನಾಟಕ ಲಲಿತಕಲಾ ಅಕಾಡೆಮಿ ಜತೆ ಗೂಡಿ ತರಬೇತಿಯ ಬಗ್ಗೆ ಮಾತುಕತೆ ಕೂಡ ನಡೆಸಲಾ ಗಿದೆ.ಮುಂದಿನ ದಿನಗಳಲ್ಲಿ ಈ ಬಗ್ಗೆ ಯೋಜನೆಯ ರೂಪರೇಷೆಗಳನ್ನು ಸಿದ್ದಪಡಿಸಲಾಗುವುದು. ತೊಗಲು ಗೊಂಬೆಯಾಟಕ್ಕೆ ತನ್ನದೆ ಆದ ಜಾನಪದ ಐತಿಹ್ಯವಿದೆ. ಆದರೆ ಅದು ಈಗ ತನ್ನ ತನವನ್ನು ಕಳೆದುಕೊಂಡಿದೆ. ಆ ಶ್ರೀಮಂತ ಕಲೆಗೆ ಮತ್ತೆ ಮರುಜೀವ ನೀಡುವ ನೀಡಿನಲ್ಲೆ ಕೆಲಸ ನಡೆದಿದೆ ಎಂದು ತಿಳಿಸಿದ್ದಾರೆ.

ಕುಂಚದಲ್ಲಿ ಅರಳಿ ಕಥಾ ಪ್ರಸಂಗಗಳು: ಮಲ್ಲತ್ತಹಳ್ಳಿ ಯಲ್ಲಿರುವ ಇಂದಿರಾಗಾಂಧಿ ಕಲಾ ಕೇಂದ್ರ ತೊಗಲು ಗೊಂಬೆ ಕಲಾ ಪ್ರಕಾರವನ್ನು ಭಿತ್ತಿಗಳ ಪ್ರತಿರೂಪದಲ್ಲಿ ಅರಳಿಸುವ ಕಾರ್ಯದಲ್ಲಿ ನಿರತವಾಗಿದೆ. ಈಗಾಗಲೇ 24 ಶ್ರೇಷ್ಠ ವೃತ್ತಿಪರರ ಜತೆಗೆ ಯುವ ಕಲಾವಿದರನ್ನು ಬಳಸಿಕೊಳ್ಳಲಾಗಿದ್ದು ತೊಗಲು ಬೊಂಬೆಯಾಟದ ಕಲೆಯ ಪ್ರಸಂಗಗಳಿಗೆ ಬಣ್ಣ, ಲಯ, ವಿನ್ಯಾಸ ಹಾಗೂ ಕಥನಕ ನಿರೂಪಣೆಗಳನ್ನು ಹೇಳಿಕೊಡಲಾಗಿದೆ.ತೊಗಲು ಗೊಂಬೆಗಳಿಗೆ ಬಳಕೆ ಮಾಡುವ ಚರ್ಮದ ಬೊಂಬೆಯ ಮೂಲ ರೂಪ, ಆಕೃತಿ ಮತ್ತು ಬಣ್ಣ ಸಂಯೋಜನೆ ಕಲಿಕೆ ಕೂಡ ನೀಡ ಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ ಈಗ ಕಲಾವಿದರುಗಳನ್ನು ಬಳಕೆ ಮಾಡಿಕೊಂಡು ತೊಗಲು ಗೊಂಬೆಯಾಟದ ಪ್ರಸಂಗಳಿಗೆ ಜೀವಂತಿಕೆ ಕೊಡಲು ಮುಂದಾಗಿದೆ ಎಂದು ಹೇಳಿದ್ದಾರೆ.

ತೊಗಲು ಗೊಂಬೆಯಾಟಕ್ಕೆ ಜೀವಂತಿಕೆ ಕೊಡುವ ನಿಟ್ಟಿನಲ್ಲಿ ಲಲಿತಕಲಾ ಅಕಾಡೆಮಿ ಮತ್ತು ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ ಕೈ ಜೋಡಿಸಿವೆ. ಭಿತ್ತಿಚಿತ್ರಗಳ ಮೂಲಕ ಯುವ ಸಮೂಹಗಳಲ್ಲಿ ಅರಿವು ಮೂಡಿಸುವ ಜತೆಗೆ ಮುಂದಿನ ದಿನಗಳಲ್ಲಿ ಆಸಕ್ತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಗಲು ಗೊಂಬೆಯಾಟದ ಕುರಿತಂತೆ ತರಬೇತಿ ಕೊಡಿಸುವ ಯೋಜನೆ ರೂಪಿಸಲಾಗಿದೆ. – ಡಿ.ಮಹೇಂದ್ರ, ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರದ ಪ್ರಾದೇಶಿಕ ನಿರ್ದೇಶ

– ದೇವೇಶ ಸೂರಗುಪ್ಪ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.