ವರ್ಗಾವಣೆ ಆದ್ರೂ ರೈಟ್‌ ಹೇಳಂಗಿಲ್ಲ!


Team Udayavani, Nov 4, 2017, 11:02 AM IST

BMTC-vargavane.jpg

ಬೆಂಗಳೂರು: “ದೇವರು ವರ ಕೊಟ್ರೂ ಪೂಜಾರಿ ವರ ಕೊಡಲಿಲ್ಲ’ ಅನ್ನೋ ಮಾತು ಆಗಾಗ ನಮ್ಮ ಕಿವಿಗೆ ಬೀಳುವುದು ಕಾಮನ್ನು. ಅದರಲ್ಲೂ ಸರ್ಕಾರಿ ಕಚೇರಿ, ಕೆಲಸಗಳಿಗೆ ಈ ಮಾತು ಹೆಚ್ಚು ಅನ್ವಯವಾಗುತ್ತದೆ. ಈಗ ಈ ಮಾತು ಅನ್ವಯವಾಗಿರುವುದು ಬಿಎಂಟಿಸಿ ಸಿಬ್ಬಂದಿಗೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅಂತರ ನಿಗಮಗಳ ವರ್ಗಾವಣೆ ಆಗಿದೆ. ಆದರೆ ವರ್ಗಾವಣೆ ಆದೇಶದ ಬೆನ್ನಲ್ಲೇ ಬಿಎಂಟಿಸಿಗೆ ಸಿಬ್ಬಂದಿ ಕೊರತೆ ಎದುರಾಗಲಿದೆ. ಹೀಗಾಗಿ ಈ ಕೊರತೆ ನೀಗುವವರೆಗೂ ಬಿಎಂಟಿಸಿ ಸಿಬ್ಬಂದಿಗೆ “ಬಿಡುಗಡೆ ಭಾಗ್ಯ’ ಸಿಗುವುದು ಅನುಮಾನ.

ಒಂದೆಡೆ ಅಂತರ ನಿಗಮ ವರ್ಗಾವಣೆ ನೀತಿಯಿಂದ ಅತಿಹೆಚ್ಚು ಜನ ಬಿಎಂಟಿಸಿಯಿಂದ ವರ್ಗವಾಗುತ್ತಿದ್ದಾರೆ. ಮತ್ತೂಂದೆಡೆ ಸಿಬ್ಬಂದಿ ಕೊರತೆ ಬೇರೆ ಕಾಡುತ್ತಿದೆ. ಹಾಗಾಗಿ, ಸಿಬ್ಬಂದಿಗೆ ವರ್ಗಾವಣೆಗೆ ಆದೇಶ ಹೊರಬಂದಿದ್ದರೂ, ತಕ್ಷಣಕ್ಕೆ ಬಿಡುಗಡೆ ಭಾಗ್ಯ ಸಿಗುವುದಿಲ್ಲ. ಇದಕ್ಕಾಗಿ ಕನಿಷ್ಠ ಮೂರು ತಿಂಗಳು ಕಾಯಲೇಬೇಕಾಗುತ್ತದೆ.

ಸಾವಿರ ಸಿಬ್ಬಂದಿ ಕೊರತೆ: ಅಂತರ ನಿಗಮ ವರ್ಗಾವಣೆ ಮೂಲಕ 3,718 ನೌಕರರು ವರ್ಗಾವಣೆ ಹೊಂದುತ್ತಿದ್ದಾರೆ. ಈ ಪೈಕಿ 945 ಚಾಲಕರು ಮತ್ತು ನಿರ್ವಾಹಕರು ಹಾಗೂ 1,080 ತಾಂತ್ರಿಕ ಸಿಬ್ಬಂದಿ ಸೇರಿ 2,298 ಜನ ಬಿಎಂಟಿಸಿ ಸಿಬ್ಬಂದಿ ಇದ್ದಾರೆ. ನಗರ ಸಾರಿಗೆ ಸಂಸ್ಥೆ ಈಗಾಗಲೇ ಸಾವಿರ ಸಿಬ್ಬಂದಿಯ ಕೊರತೆ ಎದುರಿಸುತ್ತಿದೆ.

ಇದರಿಂದ ಬಿಎಂಟಿಸಿ ಕಾರ್ಯಾಚರಣೆ ಮೇಲೆ ಪ್ರಭಾವ ಉಂಟಾಗಲಿರುವುದು ಅಧಿಕಾರಿಗಳಿಗೆ ತಲೆನೋವಾಗಿದೆ. ಆದ್ದರಿಂದ ಈಗಾಗಲೇ ವರ್ಗಾವಣೆಗೊಂಡವರ ಸ್ಥಳಕ್ಕೆ ಮತ್ತೂಬ್ಬರನ್ನು ನೇಮಕ ಮಾಡುವವರೆಗೂ ವರ್ಗವಾದವರನ್ನು ಸೇವೆಯಿಂದ ಬಿಡುಗಡೆ ಮಾಡದಿರಲು ಸಂಸ್ಥೆ ನಿರ್ಧರಿಸಿದೆ.

ಬಿಎಂಟಿಸಿಯಲ್ಲಿ ಮೂರು ಸಾವಿರ ಹುದ್ದೆಗಳ ಭರ್ತಿಗೆ ಈ ಮೊದಲೇ ಸರ್ಕಾರ ಅನುಮತಿ ನೀಡಿದ್ದು, ಈಗಷ್ಟೇ ನೇಮಕಾತಿ ಪ್ರಕ್ರಿಯೆ ಚುರುಕಾಗಿದ್ದು, ಮೂರು ತಿಂಗಳಲ್ಲಿ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ. ಹೊಸದಾಗಿ ನೇಮಕವಾದವರು ಸೇವೆಗೆ ಬರುತ್ತಿದ್ದಂತೆ ವರ್ಗಾವಣೆಗೊಂಡವರನ್ನು “ರಿಲೀವ್‌’ ಮಾಡಲಾಗುವುದು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

3,178 ನೌಕರರಲ್ಲಿ 1,956 ಜನ ತಾಂತ್ರಿಕ ಸಿಬ್ಬಂದಿ ಇದ್ದಾರೆ. 1,308 ಚಾಲಕ ಮತ್ತು ನಿರ್ವಾಹಕರಾಗಿದ್ದಾರೆ. ಇನ್ನು ಹೀಗೆ ವರ್ಗಾವಣೆಗೊಂಡವರ ಪೈಕಿ ಅರ್ಧಕ್ಕರ್ಧ ನೌಕರರು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಇಕೆಎಸ್‌ಆರ್‌ಟಿಸಿ)ಗೆ ಹೋಗುತ್ತಿದ್ದಾರೆ.

ಅಂದರೆ, 1,525 ಜನರ ಈ ನಿಗಮಕ್ಕೆ ವರ್ಗಾವಣೆ ಆಗುತ್ತಿದ್ದಾರೆ. ಕೆಎಸ್‌ಆರ್‌ಟಿಸಿಗೆ 1,287 ಸಿಬ್ಬಂದಿ ತೆರಳಲಿದ್ದಾರೆ. ಇದಕ್ಕೆ ಪ್ರತಿಯಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬುಕೆಎಸ್‌ಆರ್‌ಟಿಸಿ)ಗೆ ಕ್ರಮವಾಗಿ 124 ಹಾಗೂ 782 ನೌಕರರು ವರ್ಗಾವಣೆಯಾಗಿ ಬರಲಿದ್ದಾರೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.

ತಗ್ಗಲಿದೆ ಆರ್ಥಿಕ ಹೊರೆ: ಇನ್ನು ಅಂತರ ನಿಗಮಗಳ ವರ್ಗಾವಣೆಯಿಂದ ಬಿಎಂಟಿಸಿಗೆ ಲಾಭವೂ ಆಗಲಿದೆ. ಹೊಸದಾಗಿ ನೇಮಕಗೊಳ್ಳುವ ಚಾಲಕ ಅಥವಾ ನಿರ್ವಾಹಕರಿಗೆ ನಿಗಮಗಳಲ್ಲಿ 10ರಿಂದ 20 ಸಾವಿರ ರೂ. ವೇತನ ನೀಡಲಾಗುತ್ತದೆ.

ಮುಂದಿನ ಎರಡು-ಮೂರು ವರ್ಷಗಳು ಹೊಸದಾಗಿ ನೇಮಕಗೊಂಡವರು ಟ್ರೈನಿ ಆಗಿಯೇ ಕಾರ್ಯನಿರ್ವಹಿಸಲಿದ್ದಾರೆ. ಆದರೆ, ಈಗ ಜೇಷ್ಠತೆ ಆಧಾರದಲ್ಲಿ ವರ್ಗಾವಣೆಗೊಳ್ಳುತ್ತಿರುವ ಸಿಬ್ಬಂದಿಗೆ 35ರಿಂದ 40 ಸಾವಿರ ರೂ. ವೇತನ ಇದೆ. ಎರಡು ಸಾವಿರಕ್ಕೂ ಅಧಿಕ ಜನ ವರ್ಗಾವಣೆ ಆಗುತ್ತಿರುವುದರಿಂದ ಬಿಎಂಟಿಸಿ ಮೇಲೆ ಕೋಟ್ಯಂತರ ರೂ. ಹೊರೆ ಕಡಿಮೆ ಆಗಲಿದೆ.

ಆದರೆ, ಈಗಾಗಲೇ ನಷ್ಟದಲ್ಲಿರುವ ವಾಯವ್ಯ ಮತ್ತು ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಇದು ಹೊರೆಯಾಗಲಿದೆ. ಈಗ ವರ್ಗಾವಣೆಯಾಗಿ ಬರುವ ಸಿಬ್ಬಂದಿಗೆ ಏಕಾಏಕಿ ಅಲ್ಲಿನ ನಿಗಮಗಳು ಮಾಸಿಕ 35ರಿಂದ 40 ಸಾವಿರ ರೂ. ವೇತನ ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು. 

ಟಾಪ್ ನ್ಯೂಸ್

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.