ಸ್ಕೈಬಾರ್ನಲ್ಲಿ ಕಿರುತೆರೆ ನಟಿ ಜತೆ ಅನುಚಿತ ವರ್ತನೆ
Team Udayavani, Jan 31, 2017, 11:47 AM IST
ಬೆಂಗಳೂರು: ನಗರದ ಯುಬಿ ಸಿಟಿಯಲ್ಲಿರುವ ಸ್ಕೈಬಾರ್ ಮತ್ತೆ ಸುದ್ದಿಯಾಗಿದೆ. ಸ್ಕೈಬಾರ್ನಲ್ಲಿ ಕುಡಿದ ಅಮಲಿನಲ್ಲಿ ಯುವಕ-ಯುವತಿಯರು ಗಲಾಟೆ ಮಾಡಿಕೊಂಡಿದ್ದು, ಈ ಸಂಬಂಧ ಕಿರುತೆರೆ ನಟಿಯೊಬ್ಬರು ಉದ್ಯಮಿ ಪುತ್ರನ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ನೀಡಿ ಬಳಿಕ ರಾಜೀಸಂಧಾನ ಮಾಡಿಕೊಂಡಿದ್ದಾರೆ.
ಕಿರುತೆರೆ ನಟಿ ಆರ್.ನಿರುಷಾ, ಉದ್ಯಮಿ ಶ್ರೀನಿವಾಸ್ ಎಂಬುವರ ಪುತ್ರ ದರ್ಶನ್ ಎಂಬಾತನ ವಿರುದ್ಧ ಅನುಚಿತ ವರ್ತನೆ ಕುರಿತು ದೂರು ನೀಡಿದ್ದು, ದೂರಿನ ಮೇರೆಗೆ ಎನ್ಸಿಆರ್ (ತಿಂಗಳ ಅಪರಾಧ ವರದಿ) ದಾಖಲಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ?: ದರ್ಶನ್, ಆತನ ಸ್ನೇಹಿತರಾದ ಸೌರಭ್ ಹಾಗೂ ಕಿರುತೆರೆ ನಟಿಯಾಗಿರುವ ಟೆಲಿಂಕಾಂ ಲೇಔಟ್ ನಿವಾಸಿ ಆರ್.ನಿರುಷಾ ಸೇರಿ ಆರೇಳು ಮಂದಿ ಸ್ನೇಹಿತರು ಭಾನುವಾರ ರಾತ್ರಿ ಸ್ಕೈಬಾರ್ಗೆ ತೆರಳಿದ್ದರು. ಸ್ನೇಹಿತರೆಲ್ಲ ಒಟ್ಟಿಗೆ ಮದ್ಯ ಸೇವಿಸಿದ್ದರು. ಮದ್ಯದ ಅಮಲಿನಲ್ಲಿದ್ದ ವೇಳೆ ಸೌರಭ್ ಮತ್ತು ದರ್ಶನ್ ನಡುವೆ ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸಿದ್ದಾರೆ.
ಆ ವೇಳೆ ಜತೆಗಿದ್ದ ನಟಿ ನಿರುಷಾ ಜಗಳ ಬಿಡಿಸಲು ಮುಂದಾಗಿದ್ದು, ಸಿಟ್ಟುಗೊಂಡ ದರ್ಶನ್, ನಿರುಷಾ ಅವರ ಕುತ್ತಿಗೆ ಹಿಡಿದು ಅನುಚಿತ ವರ್ತನೆ ತೋರಿ, ಅವಾಚ್ಯ ಶಬ್ದಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದ ನಿರುಷಾ, ನಾವೆಲ್ಲ ಸ್ನೇಹಿತರಾಗಿದ್ದರಿಂದ ಅಕ್ಕ-ಪಕ್ಕದಲ್ಲಿದ್ದವರು ಯಾರು ಜಗಳ ಬಿಡಿಸಲು ಬರಲಿಲ್ಲ.
ಹೀಗಾಗಿ ಭಯ ಹಾಗೂ ರಕ್ಷಣೆಯ ದೃಷ್ಟಿಯಿಂದ ದೂರು ನೀಡುತ್ತಿದ್ದೇನೆ. ದರ್ಶನ್ನನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಬೇಕೆಂದು ಅರ್ಜಿ ಕೊಟ್ಟು ಮನವಿ ಮಾಡಿದ್ದಾರೆ.
ಹೀಗಾಗಿ ಅನುಚಿತ ವರ್ತನೆಯಡಿ ಎನ್ಸಿಆರ್ ಮಾಡಿಕೊಂಡು ದರ್ಶನ್ಗೆ ನೋಟಿಸ್ ಜಾರಿ ಮಾಡಲಾಗಿದ್ದು, ಎಲ್ಲರ ವಿಚಾರಣೆ ನಡೆಸಲಾಗಿದೆ. ಕಿರುತೆರೆ ನಟಿ ನೀಡಿರುವ ಮಾಹಿತಿ ಅನ್ವಯ ದರ್ಶನ್ ಹಾಗೂ ಸೌರಭ್ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಕ್ರಮ ಕೈಗೊಂಡಿದ್ದೇವೆ ಎಂದು ಕಬ್ಬನ್ಪಾರ್ಕ್ ಎಸಿಪಿ “ಉದಯವಾಣಿ’ಗೆ ತಿಳಿಸಿದ್ದಾರೆ.
ಕ್ಷಮಾಪಣಾ ಪತ್ರ: ದೂರು ನೀಡಿದ ಬಳಿಕ ಸ್ನೇಹಿತರು ಠಾಣೆಯ ಹೊರಗೆ ಬಂದು ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದಾರೆ. ಈ ವೇಳೆ ನಿರುಷಾ, ದರ್ಶನ್ಗೆ ಕ್ಷಮಾಪಣಾ ಪತ್ರ ಬರೆದುಕೊಂಡುವಂತೆ ಕೇಳಿದ್ದಾರೆ. ಅದರಂತೆ ದರ್ಶನ್, ತಾನು ಮಾಡಿದ್ದು ತಪ್ಪು. ಸೌರಭ್ ಮತ್ತು ನಿರುಷಾಗೆ ಅವಾಚ್ಯ ಶಬ್ಧಗಳಿಂದ ಬೈದಿದ್ದಕ್ಕೆ ಕ್ಷಮೆ ಕೋರುತ್ತೇನೆ ಎಂದು ಪತ್ರ ಬರೆದುಕೊಟ್ಟಿದ್ದು, ಬಳಿಕ ಎಲ್ಲರೂ ರಾಜೀ ಸಂಧಾನ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮದ್ಯ ಸೇವನೆ
ದರ್ಶನ್ ಮತ್ತು ಸೌರಭ್ಗೆ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ವೈದ್ಯಕೀಯ ಪರೀಕ್ಷೆ ವೇಳೆ ಇಬ್ಬರು ಮದ್ಯ ಸೇವನೆ ಮಾಡಿರುವುದು ಸಾಬೀತಾಗಿದೆ. ಇನ್ನು ಕಿರುತೆರೆ ನಟಿ ನಿರುಷಾ ಹಾಗೂ ಅವರ ಜತೆಯಲ್ಲಿದ್ದ ಸ್ನೇಹಿತೆಯರು ಮದ್ಯ ಸೇವಿಸಿದ್ದರು ಎಂಬುದು ಮೇಲ್ನೋಟಕ್ಕೆ ತಿಳಿಯುತ್ತಿತ್ತು. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದರ್ಶನ್ ಸೇರಿ ಎಲ್ಲರೂ ಸ್ನೇಹಿತರು. ದರ್ಶನ್ ಬೈದಿದ್ದಕ್ಕೆ ರಕ್ಷಣೆ ದೃಷ್ಟಿಯಿಂದ ಠಾಣೆಗೆ ತೆರಳಿ ದೂರು ನೀಡಿದೆ. ದರ್ಶನ್ ಕ್ಷಮೆಯಾಚಿಸಬೇಕೆಂದು ಕೇಳಿದೆ. ದರ್ಶನ್ ಕ್ಷಮೆ ಕೇಳಿದ್ದಾರೆ. ಮಾತುಕತೆ ಮೂಲಕ ಎಲ್ಲವೂ ಬಗೆಹರಿಸಿಕೊಂಡಿದ್ದೇವೆ. ನಮ್ಮ ಮಧ್ಯೆ ಯಾವುದೇ ಸಮಸ್ಯೆ ಇಲ್ಲ. ನನ್ನ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ.
-ಆರ್.ನಿರುಷಾ, ಕಿರುತೆರೆ ನಟಿ
ಸ್ಕೈಬಾರ್ಗೆ ಹೋದಾಗ ಸ್ನೇಹಿತರು ನಡುವೆ ಜಗಳವಾಗಿದ್ದು, ಗಲಾಟೆ ಬಗ್ಗೆ ಠಾಣೆಗೆ ಮಾಹಿತಿ ಬಂದಿದೆ. ಕೂಡಲೇ ಎಲ್ಲರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದ್ದು, ನಿರುಷಾ ಎಂಬುವರು ದರ್ಶನ್ ಎಂಬುವರ ವಿರುದ್ಧ ಅಸಭ್ಯವರ್ತನೆ ದೂರು ನೀಡಿದ್ದಾರೆ. ಈ ಸಂಬಂಧ ಎನ್ಸಿಆರ್ ಮಾಡಿಕೊಂಡಿದ್ದು, ಶೀಘ್ರ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗುವುದು.
-ಚಂದ್ರಗುಪ್ತ, ಡಿಸಿಪಿ, ಕೇಂದ್ರ ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪ್ರೇಯಸಿಯ ಪೀಡಿಸುತ್ತಿದ್ದವನಿಗೆ ಪ್ರಿಯಕರನಿಂದ ಚಾಕು ಇರಿತ!
Bengaluru: ಮೆಜೆಸ್ಟಿಕ್ ಬಳಿ ಬಿಎಂಟಿಸಿ ಬಸ್ ಡಿಕ್ಕಿ; ಅಂಗವಿಕಲ ಸ್ಥಳದಲ್ಲೇ ಸಾವು
Bengaluru: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮತ್ತೆ 9 ಮೊಬೈಲ್ ಫೋನ್ಗಳು ಪತ್ತೆ!
Leopard: ಎಲೆಕ್ಟ್ರಾನಿಕ್ ಸಿಟಿ ಎನ್ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ
Anekal: ಶಾಲಾ ಬಸ್ ಅಡ್ಡಗಟ್ಟಿ ಚಾಲಕನಿಗೆ ತೀವ್ರ ಹಲ್ಲೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.