![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 9, 2019, 3:00 AM IST
ಬೆಂಗಳೂರು: ಚಿನ್ನಾಭರಣ ಹಾಗೂ ಅಪ್ಪಟ ರೇಷ್ಮೇ ಸೀರೆಗಳ ಮಾರಾಟದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನಲ್ಲಿ ಯುಗಾದಿ ಹಬ್ಬದ ವಿಶೇಷ ಕೊಡುಗೆ ಮಾರಾಟ ಮುಂದುವರಿದಿದೆ. ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಹಾಗೂ ಶ್ರೀ ಸಾಯಿ ಸ್ಯಾರಿ ಪ್ಯಾಲೇಸ್ನ ಮಾಲೀಕ ಡಾ.ಟಿ.ಎ. ಶರವಣ ಅವರು ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯ ತಿಳಿಸುತ್ತಾ, ಬಸವನಗುಡಿ (ಡಿವಿಜಿ ರಸ್ತೆ), ಎಚ್ಎಸ್ಆರ್ ಲೇಔಟ್ ಹಾಗೂ ಯಲಹಂಕದ ಮಳಿಗೆಗಳಲ್ಲಿ ಯುಗಾದಿ ಹೊಸ ವರ್ಷ ಆರಂಭದ ಪ್ರಯುಕ್ತ ಸುವರ್ಣಯುಗ ಶುಭಾರಂಭಗೊಂಡಿದೆ ಎಂದರು.
ಹಬ್ಬದ ದಿನಗಳಲ್ಲಿ ಭರ್ಜರಿ ಕೊಡುಗೆಗಳನ್ನು ನೀಡಲಾಗುತ್ತಿದ್ದು, ಚಿನ್ನಾಭರಣಗಳ ಮೇಲೆ ನೋ ವೇಸ್ಟೇಜ್, ನೋ ಸ್ಟೋನ್ ಚಾರ್ಜಸ್ ಮತ್ತು ಮೇಕಿಂಗ್ ಚಾರ್ಜ್ ಮೇಲೆ ಶೇ.25ರವರೆಗೆ ರಿಯಾಯಿತಿ ನೀಡಲಾಗುತ್ತದೆ. ನಿಮ್ಮ ಹಳೆಯ ಚಿನ್ನವನ್ನು ಇಂದಿನ (916) ಚಿನ್ನದ ದರದಕ್ಕೆ ಬದಲಾಯಿಸಿಕೊಳ್ಳುವ ಅವಕಾಶ ಮತ್ತು 1 ಕೆ.ಜಿ. ಬೆಳ್ಳಿ ವಸ್ತುಗಳ ಖರೀದಿ ಮೇಲೆ 2000 ರೂ. ರಿಯಾಯಿತಿ ಇರುತ್ತದೆ. ಗ್ರಾಹಕರು ಇದರ ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಿದರು.
ಸ್ಯಾರಿ ಪ್ಯಾಲೇಸ್ನಲ್ಲಿ ರಿಯಾಯಿತಿ: ಶ್ರೀ ಸಾಯಿ ಸ್ಯಾರಿ ಪ್ಯಾಲೇಸ್ನಲ್ಲಿ ಹೊಸ ವಿನ್ಯಾಸದ ರೇಷ್ಮೆ ಸೀರೆಗಳ ಭಂಡಾರವಿದ್ದು, ಹಬ್ಬದ ಪ್ರಯುಕ್ತ ಎಲ್ಲ ಸೀರೆಗಳ ಮೇಲೆ ಶೇ.25ರ ರಿಯಾಯಿತಿ ನೀಡಲಾಗುತ್ತಿದೆ. ಈ ಕೊಡುಗೆ ಕೆಲವೇ ದಿನಗಳು ಮಾತ್ರ. ಮೈಸೂರು, ಕಾಂಚಿವರಂ, ಧರ್ಮಾವರಂ, ಡಿಸೈನ್ ಸೀರೆಗಳು, ಪೋಚಂಪಲ್ಲಿ, ಟಿಷೂ, ಮೊಳಕಾಲ್ಮೂರು, ಪ್ರಿಂಟೆಡ್ ಹ್ಯಾಂಡೂಮ್, ಜಾರ್ಖಂಡ್, ಫ್ಯಾನ್ಸಿ ಸೀರೆಗಳೊಂದಿಗೆ ಚೂಡಿದಾರ್, ಡ್ರೆಸ್ ಮೆಟೀರಿಯಲ್ ಎಲ್ಲವೂ ಇಲ್ಲಿ ದೊರೆಯುತ್ತವೆ ಎಂದು ಅವರು ತಿಳಿಸಿದ್ದಾರೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.