ಸಾಲು ರಜೆ: ಸಹ್ಯಾದ್ರಿ ಸೌಂದರ್ಯ ಸವಿಯಲು ದೌಡು


Team Udayavani, Aug 31, 2022, 6:30 PM IST

tdy-17

ಬೆಂಗಳೂರು: ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಪ್ರವಾಸಿ ತಾಣಗಳತ್ತ ಜನರು ಚಿತ್ತ ಹರಿಸಿದ್ದು, ರೈಲ್ವೆ ಇಲಾಖೆಯ ಮಹತ್ವಾಕಾಂಕ್ಷಿ ವಿಸ್ಟಾಡೋಮ್‌ ಬೋಗಿಗಳ ಸೀಟು ಮುಂಗಡ ವಾಗಿಯೇ ಶೇ.100ರಷ್ಟು ಭರ್ತಿಯಾಗಿವೆ.

ವಿಸ್ಟಾಡೋಮ್‌ ಬೋಗಿಗಳಲ್ಲಿ ಕುಳಿತು ಪಶ್ಚಿಮ ಘಟ್ಟಗಳ ರಮಣೀಯ ಪ್ರಾಕೃತಿಕ ಸೊಬಗನ್ನು ನೋಡಲು ಇಚ್ಛಿಸುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ವಿಸ್ಟಾಡೋಮ್‌ ಸೀಟುಗಳ ಬುಕ್ಕಿಂಗ್‌ ಸಂಖ್ಯೆ ನಿರೀಕ್ಷೆ ಮೀರಿದೆ. ಒಂದೆಡೆ ಮಳೆಗಾಲ, ಇನ್ನೊಂದೆಡೆ ಸಾಲು- ಸಾಲು ಸಾರ್ವಜನಿಕ ರಜೆ ಗಳಿರುವುದರಿಂದ ವಿಸ್ಟಾಡೋಮ್‌ಗೆ ಡಿಮ್ಯಾಂಡ್‌ ಬಂದಿದೆ. ಮೇ, ಜೂನ್‌, ಜುಲೈ, ಆಗಸ್ಟ್‌ ತಿಂಗಳ ಅಂತ್ಯದ ವರೆಗೆ ಶೇ.100ರಷ್ಟು ಸೀಟುಗಳು ಭರ್ತಿಯಾಗಿದೆ.

ವಾರಾಂತ್ಯ ಹಾಗೂ ಹಬ್ಬದ ಸಂದರ್ಭದಲ್ಲಿ ಶೇ.30 ರಷ್ಟು ವೇಟಿಂಗ್‌ ಲಿಸ್ಟ್‌ ಇದೆ. ಈಗಾಗಲೇ ನವರಾತ್ರಿ, ದೀಪಾವಳಿ ಹಬ್ಬದ ರಜಾದಿನಗಳು ಹಾಗೂ ವಿಕೇಂಡ್‌ನ‌ ಸೀಟುಗಳ ಮುಂಗಡ ಬುಕ್ಕಿಂಗ್‌ ಪ್ರಾರಂಭವಾಗಿದೆ. ಬೆಂಗಳೂರು-ಮಂಗಳೂರು ಮಾರ್ಗವಾಗಿ ಸಂಚರಿಸುವ ರೈಲುಗಳಲ್ಲಿ ಇರುವ ವಿಸ್ಟಾಡೋಮ್‌ ಕೋಚ್‌ನಲ್ಲಿ ಪ್ರಯಾಣಿಸಲು ಒಬ್ಬರು 1525 ರೂ. ಟಿಕೆಟ್‌ ಪಾವತಿಸಬೇಕು. ಒಂದು ರೈಲಿನಲ್ಲಿ 2 ಬೋಗಿಯಲ್ಲಿ ತಲಾ 44 ರಂತೆ 88 ಆಸನಗಳಿವೆ. ಈ ಹಿಂದೆ ಅನೇಕರು ಪ್ರಯಾಣದ ಬೆಲೆ ಹೆಚ್ಚಿರುವುದರಿಂದ ಬೆಂಗಳೂರಿನಿಂದ ಸಕಲೇಶ ಪುರದವರೆಗೂ ಸಾಮಾನ್ಯ ಬೋಗಿಯಲ್ಲಿ ಪ್ರಯಾ ಣಿಸಿ, ಸಕಲೇಶಪುರದಿಂದ ಮಂಗಳೂರಿನ ವರೆಗೆ ವಿಸ್ಟಾಡೋಮ್‌ ಕೋಚ್‌ ಆಯ್ಕೆ ಮಾಡುತ್ತಿದ್ದರು. ಆದರೆ ಪ್ರಸ್ತುತ ಸೀಟುಗಳು ಬೆಂಗಳೂರಿನಿಂದಲೇ ಭರ್ತಿಯಾಗುತ್ತಿದೆ. ಇದರಿಂದಾಗಿ ಮಧ್ಯದಲ್ಲಿ ಕಡಿಮೆ ಮೊತ್ತದಲ್ಲಿ ವಿಸ್ಟಾಡೋಮ್‌ ಬೋಗಿಯಲ್ಲಿ ಕುಳಿತು ಆನಂದಿಸಲು ಸಾಧ್ಯವಿಲ್ಲ.

ಸಂಚಾರ ಮಾರ್ಗ: ಬೆಂಗಳೂರು – ಮಂಗಳೂರು ಮಾರ್ಗವಾಗಿ ಪ್ರತಿ ಮಂಗಳವಾರ, ಗುರುವಾರ, ರವಿವಾರ ಹಾಗೂ ಮಂಗಳೂರು- ಯಶವಂತಪುರ ಮಾರ್ಗವಾಗು ಸೋಮವಾರ, ಮಂಗಳವಾರ, ಶುಕ್ರವಾರ ವಿಸ್ಟಾಡೋಮ್‌ ರೈಲು ಸಂಚರಿಸಲಿದೆ. ಜತೆಗೆ ಯಶವಂತಪುರ- ಕಾರವಾರ ಮಾರ್ಗವಾಗಿ ಮಂಗಳವಾರ, ಗುರುವಾರ ಶನಿವಾರ ಹಾಗೂ ರವಿ ವಾರ ಮಂಗಳೂರು- ಯಶವಂತಪುರ ಮಾರ್ಗವಾಗಿ ವಿಸ್ಟಾಡೋಮ್‌ ಬೋಗಿಗಳನ್ನು ಹೊಂದಿರುವ ರೈಲುಗಳು ಸಂಚರಿಸುತ್ತಿದೆ. ಯಶವಂತಪುರ-ಮಂಗಳೂರು ಮಾರ್ಗದ ವಿಸ್ಟಾಡೋಮ್‌ ರೈಲು 2021ರ ಜುಲೈ ತಿಂಗಳಿನಲ್ಲಿ ಸಂಚಾರ ಪ್ರಾರಂಭ ವಾಗಿತ್ತು. ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ, ತದನಂತರದಲ್ಲಿ ನಿರೀಕ್ಷೆ ಮಟ್ಟಕ್ಕೆ ಪ್ರಯಾಣಿಕರು ಸ್ಪಂದನೆ ದೊರಕಿರಲಿಲ್ಲ. 2022ರ ಫೆ. ವರೆಗೆ ಬೆಂಗಳೂರಿನಿಂದ ಶೇ.20ರಷ್ಟು , ಸಕಲೇಶಪುರ ಮಂಗಳೂರು ಮಾರ್ಗ ಶೇ.30ರಷ್ಟು ಆಸನಗಳು ಭರ್ತಿಯಾಗಿತ್ತು.

ವಿಕೇಂಡ್‌ ಹಾಗೂ ಹಬ್ಬದ ರಜಾದಿನಗಳಲ್ಲಿ ವಿಸ್ಟಾಡೋಮ್‌ ಬೋಗಿಗಳು ಸೀಟುಗಳು ಮುಂಗಡವಾಗಿ ಬುಕ್ಕಿಂಗ್‌ ಭರ್ತಿಯಾಗುತ್ತಿವೆ. ವೈಟಿಂಗ್‌ ಲಿಸ್ಟ್‌ ಸಂಖ್ಯೆ ಹೆಚ್ಚಿರುತ್ತದೆ. ಸೆಪ್ಟೆಂಬರ್‌, ಅಕ್ಟೋಬರ್‌ ತಿಂಗಳ ರಜಾ ದಿನಗಳ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಈಗಾಗಲೇ ಪ್ರಾರಂಭವಾಗಿದೆ. – ಕುಸುಮಾ ಹರಿಪ್ರಸಾದ್‌, ಡಿವಿಜನಲ್‌ ರೈಲ್ವೇ ಮ್ಯಾನೇಜರ್‌, ನೈರುತ್ಯ ರೈಲ್ವೆ

 

-ತೃಪ್ತಿ ಕುಮ್ರಗೋಡು

ಟಾಪ್ ನ್ಯೂಸ್

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

NANGI-KADALKORETA

Nangi: ತೀವ್ರಗೊಂಡ ಕಡಲ್ಕೊರೆತ… ಬೀಚ್‌ ವ್ಯೂ ರೆಸಾರ್ಟ್‌ ಸಮುದ್ರ ಪಾಲಾಗುವ ಸಾಧ್ಯತೆ

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-bng

Bengaluru: ಅಕ್ರಮ ಆಸ್ತಿ: ಬೆಸ್ಕಾಂ ಎಇಇಗೆ 3 ವರ್ಷ ಸಜೆ,1 ಕೋಟಿ ರೂ. ದಂಡ ವಿಧಿಸಿದ ಕೋರ್ಟ್‌

10-bng

Bengaluru: ಶೋಕಿಲಾಲನಿಗೆ ನಕಲಿ ಎ.ಕೆ.47 ಕೊಡಿಸಿದ್ದ ವ್ಯಕ್ತಿಗೆ ನೋಟಿಸ್‌

9-crime

Bengaluru: ಬೈಕ್‌ಗೆ ಲಾರಿ ಡಿಕ್ಕಿ : ರಿಯಲ್‌ ಎಸ್ಟೇಟ್‌ ಏಜೆಂಟ್‌ ಸಾವು

8-bng

Bengaluru: ಹಳೇ ದ್ವೇಷಕ್ಕೆ ವ್ಯಕ್ತಿ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

7-bng

Bengaluru: ವಿಚಾರಣಾಧೀನ ಕೈದಿಯ ಗುದದ್ವಾರದಲ್ಲಿ 2 ಮೊಬೈಲ್‌

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.