ಮೊಬೈಲಿನಲ್ಲೂ ನುಡಿ ತಂತ್ರಾಂಶ


Team Udayavani, Nov 1, 2018, 9:33 AM IST

b-47.jpg

ಬೆಂಗಳೂರು: ಸದ್ಯ ಪ್ರಚಲಿತದಲ್ಲಿರುವ ನುಡಿ ತಂತ್ರಾಂಶದ ಲೋಪದೋಷಗಳನ್ನು ಸರಿಪಡಿಸಿ, ಯೂನಿಕೋಡ್‌ನ‌ಂತೆ ಮೊಬೈಲ್‌ ಹಾಗೂ ಕಂಪ್ಯೂಟರ್‌ಗೆ ಸರಿಹೊಂದಿರುವ ನುಡಿ 0.6 ತಂತ್ರಾಂಶ ಸಿದ್ಧವಾಗಿದ್ದು, ನವೆಂಬರ್‌ ಅಂತ್ಯದೊಳಗೆ ಕನ್ನಡಿಗರಿಗೆ ಲಭ್ಯವಾಗಲಿದೆ. ನುಡಿ ತಂತ್ರಾಂಶದಲ್ಲಿ ಕೀಲಿಮಣಿ ಮಾಡಿದ ಅಕ್ಷರ, ಪದ ಮತ್ತು ವಾಕ್ಯಗಳನ್ನು ಎಂಎಸ್‌ ವರ್ಡ್‌ ಅಥವಾ ಬೇರ್ಯಾವುದಾದರೂ ಡಾಕ್‌ ಫೈಲ್‌ ಮೂಲಕ ಓಪನ್‌ ಮಾಡಬೇಕು. ನುಡಿ ತಂತ್ರಾಂಶ ಗಣಕನಲ್ಲಿ ಅಳವಡಿಸಿಕೊಂಡಿದ್ದರೆ ಮಾತ್ರ ನುಡಿ ಕೀಲಿಮಣೆಯ ಬರಹಗಳು ಕಾಣಿಸುತ್ತದೆ. ನುಡಿ ತಂತ್ರಾಂಶ ಇಲ್ಲದ ಕಂಪ್ಯೂಟರ್‌ನಲ್ಲಿ ನುಡಿ ಓದಲು ಮತ್ತು ಬರೆಯಲು ಸಾಧ್ಯವಿಲ್ಲ. ಹೀಗಾಗಿ ನುಡಿ ತಂತ್ರಾಂಶವನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗಿದೆ. 

ನುಡಿಯಲ್ಲಿರುವ ಬರಹಗಳನ್ನು ಇನ್ಮುಂದೆ ಯೂನಿಕೋಡ್‌ ಮಾದರಿಯಲ್ಲಿ ಎಂಎಸ್‌ ವರ್ಡ್‌ ಅಥವಾ ಡಾಕ್‌ ಫೈಲ್‌ ಇಲ್ಲದೇ ನೇರವಾಗಿ ಓದಬಹುದಾಗಿದೆ. ಜತೆಗೆ ನುಡಿ ಅಕ್ಷರಗಳನ್ನು ಯೂನಿಕೋಡ್‌ಗೆ ಮತ್ತು ಯೂನಿಕೋಡ್‌ನಿಂದ ನುಡಿಗೆ ಪರಿವರ್ತನೆ ಮಾಡಬಹುದಾದ ವ್ಯವಸ್ಥೆಯನ್ನು ನುಡಿ 0.6 ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಕರ್ನಾಟಕ ಗಣಕ ಪರಿಷತ್ತಿನ ಅಧಿಕಾರಿಗಳು, ಸ್ವಾಫ್ಟ್ವೇರ್‌ ತಜ್ಞರ 
ಸಹಕಾರದೊಂದಿಗೆ ಕಳೆದ ಒಂದುವರೆ ವರ್ಷದ ಸತತ ಪರಿಶ್ರಮದಿಂದ ನುಡಿ 0.6 ತಂತ್ರಾಂಶ ಸಿದ್ಧಪಡಿಸಲಾಗಿದೆ. ನುಡಿ 0.6 ತಂತ್ರಾಂಶದ ಮೂಲಕ ಬರೆದಿರುವ ಬರಹಗಳನ್ನು ಯುನಿಕೋಡ್‌ ಮಾದರಿಯಲ್ಲಿ ಮೊಬೈಲ್‌ನಲ್ಲೂ ಓದಬಹುದಾಗಿದೆ. ಆದರೆ, ಮೊಬೈಲ್‌ಗೆ ನುಡಿ 0.6 ತಂತ್ರಾಂಶ ಅಳವಡಿಸಲು ಸಾಧ್ಯವಿಲ್ಲ. ನುಡಿ 0.6 ತಂತ್ರಾಂಶದಲ್ಲಿ ಆಡಳಿತ ಪದಕೋಶ ಹಾಗೂ ಇನ್ನಿತರೆ ಹಲವು ಹೊಸ ಅಂಶಗಳನ್ನು ಸೇರಿಸಲಾಗಿದೆ ಎಂದು ಪರಿಷತ್‌ನ ಕಾರ್ಯದರ್ಶಿ ಜಿ.ಎನ್‌. ನರಸಿಂಹಮೂರ್ತಿ ಮಾಹಿತಿ ನೀಡಿದರು.

ಅಭಿವೃದ್ಧಿಗೆ ಅವಕಾಶ : ನುಡಿ 0.6 ತಂತ್ರಾಂಶ ನವೆಂಬರ್‌ ಅಂತ್ಯದೊಳಗೆ ಸಾರ್ವಜನಿಕರ ಉಪಯೋಗಕ್ಕೆ ಬಿಡಲಾಗುತ್ತದೆ. ತಂತ್ರಾಂಶ ಸಂಪೂರ್ಣ ಪ್ರಮಾಣದಲ್ಲಿ ಸಿದಟಛಿವಾಗಿದ್ದು, ಪರೀಕ್ಷಾರ್ಥ ಬಳಕೆ ನಡೆಯುತ್ತಿದೆ. ಕರ್ನಾಟಕ ಗಣಕ ಪರಿಷತ್ತುವಿನ ಅಧಿಕೃತ ಜಾಲತಾಣದಲ್ಲಿ ನುಡಿ 0.6 ತಂತ್ರಾಂಶ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇದನ್ನು ಇನ್ನಷ್ಟು ಉನ್ನತೀಕರಿಸಬೇಕು ಎಂದು ಕಂಡುಬಂದರೆ ಸಾರ್ವಜನಿಕರು ಸಲಹೆ ನೀಡಬಹುದು. ತಂತ್ರಾಂಶದ ಕುರಿತು ಅಧ್ಯಯನ ಮಾಡಿರುವವರು ಅಥವಾ ಬಲ್ಲವರು ತಾವಾಗಿಯೇ ಉನ್ನತೀಕರಿಸಬಹುದು. ಇದಕ್ಕಾಗಿ ಪರಿಷತ್‌ನ ಜಾಲತಾಣದಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣಿಯ ನಂತರ ಪರಿಷತ್‌ನ ಪರವಾನಗಿ ಪಡೆದು ಉನ್ನತೀಕರಿಸಿ, ನೀಡಬಹುದು. ಸೂಕ್ತವೆನಿಸಿದರೆ ಅದನ್ನು ಅಧಿಕೃತವಾಗಿ ಅಪ್‌ಡೇಟ್‌ ಮಾಡಲಾಗುತ್ತದೆ ಎಂದು ಗಣಕ ಪರಿಷತ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ದೂರುಗಳಿಗೂ ಪರಿಹಾರ: ನುಡಿ ತಂತ್ರಾಂಶ ಬಳಕೆ ಸೇರಿದಂತೆ ಯಾವುದೇ ಲೋಪದೋಷವಿದ್ದರೂ ಪರಿಷತ್‌ಗೆ ದೂರು ನೀಡಬಹುದು. ಪರಿಷತ್‌ನ ಅಧಿಕಾರಿಗಳು ಅದನ್ನು ಕೂಲಂಕಷವಾಗಿ ಪರಿಶೀಲಿಸಿ, ಸಮಸ್ಯೆಗೆ ಪರಿಹಾರ ನೀಡುತ್ತಾರೆ. ಸದ್ಯ ಇರುವ ನುಡಿ 0.5 ತಂತ್ರಾಂಶವನ್ನು ತಿಂಗಳಿಗೆ 6 ಸಾವಿರ ಜನರು ಡೌನ್‌ಲೋಡ್‌ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಪರಿಷತ್‌ನಿಂದ ಸಿಕ್ಕಿದೆ. 0.6 ತಂತ್ರಾಂಶ ಬಂದ ನಂತರ ಹೊಸ ಬಳಕೆದಾರರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ಗಣಕ ಪರಿಷತ್ತು ಮೂಲಕ ಪ್ರಚುರವಾದ ನುಡಿ ತಂತ್ರಾಂಶ ನುಡಿ 0.4, 0.5 ಈಗ 0.6 ಆಗಿ ವಿವಿಧ ಅವಸ್ಥೆಗಳನ್ನು ದಾಟಿ ಹೊಸ ರೂಪ ಪಡೆದಿದೆ. ತಂತ್ರಾಂಶ ಸಂಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿದ್ದು, ಅನೇಕ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಉನ್ನತೀಕರಣಗೊಂಡ ತಂತ್ರಾಂಶದಲ್ಲಿ ಹೊಸ ಅವಕಾಶಗಳನ್ನೂ ತುಂಬಲಾಗಿದ್ದು, ನವೆಂಬರ್‌ ಅಂತ್ಯದೊಳಗೆ ಕನ್ನಡಿಗರ ಬಳಕೆಗೆ ಸಿಗಲಿದೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.