ಬಾಲ್ಯ ಸಖಿಯ ವರಿಸಿದ ಯೋಗಿ
Team Udayavani, Nov 3, 2017, 12:47 PM IST
ಬೆಂಗಳೂರು: ನಟ “ಲೂಸ್ ಮಾದ’ ಯೋಗಿ ಮದುವೆ ಗುರುವಾರ ಬೆಳಿಗ್ಗೆ ನಡೆದಿದೆ. ಆರ್.ಆರ್.ನಗರ ಸಮೀಪದ ಕರಿಷ್ಮಾ ಹಿಲ್ಸ್ ರಸ್ತೆಯಲ್ಲಿರುವ ಶ್ರೀ ಕನ್ವೆನ್ಷನ್ ಹಾಲ್ನಲ್ಲಿ, ಸಾಹಿತ್ಯ ಅವರನ್ನು ವರಿಸಿದ್ದಾರೆ ಯೋಗಿ. ಈ ಸಂದರ್ಭದಲ್ಲಿ ಎರಡೂ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರು ಹಾಜರಿದ್ದರು.
ಬುಧವಾರ ಸಂಜೆಯೇ ಕಲ್ಯಾಣ ಮಂಟಪಕ್ಕೆ ತೆರಳಿದ್ದ ಯೋಗಿ ಕುಟುಂಬವು ಮದುವೆ ಮುಂಚಿನ ಹಲವು ಶಾಸ್ತ್ರಗಳನ್ನು ಮುಗಿಸಿತು. ಅರಿಶಿಣ ಹಚ್ಚುವ ಶಾಸ್ತ್ರದೊಂದಿಗೆ ಶುರುವಾದ ಕಾರ್ಯಕ್ರಮ ಮುಂಜಾನೆ 4ರವರೆಗೆ ನಡೆಯಿತು. ಆ ಬಳಿಕ ಎಲೆಶಾಸ್ತ್ರ ಸೇರಿದಂತೆ ಇತರೆ ಶಾಸ್ತ್ರಗಳನ್ನೂ ಯೋಗಿ ಕುಟುಂಬ ನೆರವೇರಿಸಿ, ಬೆಳಗ್ಗೆ 5ರಿಂದ 6ರವರೆಗೆ ಮುಹೂರ್ತದಲ್ಲಿ ಸಾಹಿತ್ಯ ಮತ್ತು ಯೋಗಿ ಸತಿ-ಪತಿಗಳಾದರು.
ಯೋಗಿ ಮತ್ತು ಸಾಹಿತ್ಯ ಹಲವು ವರ್ಷಗಳ ಸ್ನೇಹಿತರಾಗಿದ್ದು, ಆ ಸ್ನೇಹವು ಪ್ರೇಮಕ್ಕೆ ತಿರುಗಿ, ಆ ಪ್ರೇಮ ಮದುವೆಯಲ್ಲಿ ಸುಖಾಂತ್ಯವಾಗಿದೆ. ಸಾಹಿತ್ಯ ಅವರು ಮೂಲತಃ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದಾರೆ. ಇದುವರೆಗೆ ಯೋಗಿಯ ಜೀವದ ಗೆಳತಿಯಾಗಿದ್ದ ಸಾಹಿತ್ಯ ಇನ್ನು ಮುಂದೆ ಸಂಗಾತಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Bigg Boss: ಬಿಗ್ ಬಾಸ್ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..
Irani Cup: ತನುಷ್ ಕೋಟ್ಯಾನ್ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್ ಗೆದ್ದ ಮುಂಬೈ
Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ
Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ
Renukaswamy Case: ದರ್ಶನ್ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.