Vegetable prices: ತರಕಾರಿ ಬೆಲೆ ಇಳಿಕೆ: ರೈತರು ಕಂಗಾಲು


Team Udayavani, Sep 9, 2023, 11:02 AM IST

Vegetable prices: ತರಕಾರಿ ಬೆಲೆ ಇಳಿಕೆ: ರೈತರು ಕಂಗಾಲು

ದೇವನಹಳ್ಳಿ: ರಸಗೊಬ್ಬರ ಮತ್ತು ಔಷಧಿಗಳ ಬೆಲೆ ಏರಿಕೆ ಇದ್ದರೆ ಸಹ ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಯಾಗಿರುವುದು ರೈತರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ತರಕಾರಿ ಬೆಳೆಗಳಲ್ಲಿ ಸಾಕಷ್ಟು ಏರುಪೇರುಗಳು ಆಗುತ್ತಿದೆ. ಒಂದು ಕಡೆ ಇಳುವರಿ ಹೆಚ್ಚುವರಿಯಾಗಿದ್ದು ಸಮರ್ಪಕವಾಗಿ ತರಕಾರಿಗಳು ಬರುತ್ತಿರುವುದರಿಂದ ತರಕಾರಿಗಳ ಬೆಲೆಯಲ್ಲಿ ಇಳಿಕೆ ಕಂಡಿದೆ.

ಹಲವಾರು ತರಕಾರಿಗಳು ಇಂದಿಗೂ ಅದರ ಬೆಲೆ ಇದ್ದೇ ಇರುತ್ತದೆ. ಒಂದು ಕೆ.ಜಿ.ಗೆ 30 -40,50-60 ಗಳಿಗೆ ತರಕಾರಿ ದೊರೆಯುತ್ತಿದೆ. ಔಷಧಿ ಮತ್ತು ರಸಗೊಬ್ಬರ ಬೆಲೆ ಹೆಚ್ಚಿದೆ. ರೈತರಿಂದ ವ್ಯಾಪಾರಿಗಳು ತೋಟಗಳಿಂದ ಎಂಟರಿಂದ 10 ಮತ್ತು 12 ರೂ.ಗೆ ತರಕಾರಿ ಖರೀದಿಸುತ್ತಾರೆ. ರೈತರಿಗೆ ತಾವು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಸಾಲ ಸೋಲಾ ಮಾಡಿ ತರಕಾರಿ ಬೆಳೆದರು ಸಹ ಬೆಲೆ ಸಿಗದೇ ಬದುಕು ಅತಂತ್ರವಾಗಿದೆ ಅಂತಾರೆ ರೈತರು.

ಬೆಂಬಲ ಬೆಲೆ ಕಲ್ಪಿಸಿ: ಒಂದು ಕಡೆ ಮಳೆ ಕೈಕೊಟ್ಟಿದೆ. ಮಳೆ ಇಲ್ಲದೆ ಬೋರ್ವೆಲ್‌ಗ‌ಳಲ್ಲಿ ಮತ್ತು ಕೆರೆ ಕುಂಟೆಗಳಲ್ಲಿ ನೀರು ಕಡಿಮೆಯಾಗುತ್ತಿವೆ. ಇರುವ ಬೋರ್‌ವೆಲ್‌ನಲ್ಲಿ ಅಲ್ಪಸಲ್ಪದ ನೀರಿನಲ್ಲಿಯೇ ತೋಟ ಗಾರಿಕೆ ಮತ್ತು ಕೃಷಿ ಚಟುವಟಿಕೆ ಮಾಡಿಕೊಂಡು ಬರಲಾಗುತ್ತಿದೆ. ಸರ್ಕಾರ ರೈತರ ಬೆಳೆಯುವ ಬೆಳೆ ಗಳಿಗೆ ಬೆಂಬಲ ಬೆಲೆ, ಸರಿಯಾದ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕು. ರೈತರು ಬೆಳೆ ಯುವ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಿದರೆ ಮತ್ತಷ್ಟು ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಯಾವ ಯಾವ ಕಾಲಗಳಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬುದರ ಮಾಹಿತಿ ನೀಡುವಂತಾ ಗಬೇಕು ಎಂದು ರೈತರು ಹೇಳುತ್ತಾರೆ.

ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶಾಶ್ವತವಾದ ನದಿ ಮೂಲಗಳಿಲ್ಲ ಕೇವಲ ಮಳೆ ಆಶ್ರಿತವಾಗಿಯೇ ಕೃಷಿ ಮತ್ತು ತೋಟ ಗಾರಿಕೆ ಬೆಳೆಗಳನ್ನು ರೈತರ ಬೆಳೆಯುತ್ತಿದ್ದಾರೆ. ಬೆಂ.ಗ್ರಾಂ.ಜಿಲ್ಲೆಯಲ್ಲಿ ಈಗಾಗಲೇ ಒಂದು ಕಡೆ ಕೆಐಡಿಬಿ ಹಾಗೂ ಐಟಿಐಆರ್‌ ಹಾಗೂ ಇತರೆ ಉದ್ದೇಶಗಳಿಗೆ ಭೂಸ್ವಾಧೀನ ಪ್ರಕ್ರಿಯೆಗಳು ನಡೆಯುತ್ತಿದೆ. ಫ‌ಲವತ್ತದ ಭೂಮಿಗಳು ಭೂಮಿ ಗಳು ಕೈಗಾರಿಕೆ ಮತ್ತು ಇತರೆ ಉದ್ದೇಶಗಳಿಗೆ ನೀಡುತ್ತಿದ್ದಾರೆ. ಈ ಕೂಡಲೇ ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು. ಎಂದು ರೈತರ ಆಗ್ರಹವಾಗಿದೆ.

ಬಂಡವಾಳ ಸಹ ಸಿಗ್ತಿಲ್ಲ: ಬೆಲೆ ಏರಿಳಿತ ಸಹಜವಾಗಿದೆ. ರೈತರು ಬೆಂಗಳೂರು ಮಾರುಕಟ್ಟೆ, ಚಿಕ್ಕಬಳ್ಳಾಪುರ, ದೊಡ್ಡಬ ಳ್ಳಾಪುರ, ಕೋಲಾರ, ಮಾರುಕಟ್ಟೆಗಳಿಗೆ ತರಕಾರಿ ಬೆಳೆದು ಹಾಕುತ್ತಾರೆ. ತಾವು ಬೆಳೆದ ತರಕಾರಿ ಸಾಗಾಣಿಕೆ ವಚ್ಚ ಹೆಚ್ಚಿದೆ. ಕೂಲಿ ಸರಿಯಾದ ಸಮಯಕ್ಕೆ ಬರುವುದು ಕಷ್ಟವಾಗುತ್ತದೆ. ಔಷಧಿ ಮತ್ತು ಕೂಲಿಕಾರರು ಸಾರಿಗೆ ಸಂಪರ್ಕ ಎಲ್ಲ ಸೇರಿದರು ಸಹ ರೈತರಿಗೆ ಹಾಕಿದ ಬಂಡವಾಳವೂ ಸಹ ಸಿಗದ ಪರಿಸ್ಥಿತಿ ನಿರ್ಮಾಣ ವಾಗುತ್ತಿದೆ ಎಂದು ರೈತರು ತಮ್ಮ ತೋಡಿಕೊಳ್ಳುತ್ತದೆ. ಎಲ್ಲ ಸೊಪ್ಪುಗಳ ಬೆಲೆ ಸಹ ಕಡಿಮೆಯಿದೆ. ಕೊತ್ತಂಬರಿಸೊಪ್ಪು, ದಂಟಿನ ಸೊಪ್ಪು, ಪಾಲಕು,ಮೆಂತೆ, ವಿವಿಧ ಸೊಪ್ಪುಗಳು 10 ರಿಂದ 20 ರೂ.ಗಳಿಗೆ ಸಿಗುತ್ತಿದೆ.

ತರಕಾರಿ ಬೆಳೆಗಳು ಅಂಕಿ ಅಂಶ: ಈರುಳ್ಳಿ ರೂ. 20, ಆಲೂಗಡ್ಡೆ 20, ಟೊಮ್ಯಾಟೋ 15, ಕ್ಯಾರೆಟ್‌ 40, ಹಾಗಲಕಾಯಿ, ಮೂಲಂಗಿ 20, ಬದನೆಕಾಯಿ 15, ಬೆಂಡೆಕಾಯಿ, ಬೀಟ್‌ರೂಟ್‌ 30, ಹೀರೆಕಾಯಿ 25 ರೂ., ನುಗ್ಗೆಕಾಯಿ 60, ಸೌತೆಕಾಯಿ 10, ಕ್ಯಾಪ್ಸಿಕಂ 30, ಹುರುಳಿಕಾಯಿ 40, ಕುಂಬಳಕಾಯಿ 30, ಹೂಕೋಸು 20, ಎಲೆಕೋಸು 20, ಮೆಣಸಿನಕಾಯಿ 40, ನೌಕೋಲ್‌ 30 ರೀತಿ ತರಕಾರಿಗಳಲ್ಲಿ ಬೆಲೆಯಿದೆ. ರೈತರು ಬೆಳೆಯುವ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ರಸಗೊಬ್ಬರ ಮತ್ತು ಔಷಧಿಗಳು ಬೆಲೆ ಏರಿಕೆ ಆಗಿದೆ. ಆದರೂ ಸಹ ತೋಟಗಾರಿಕೆ ಕೃಷಿ ಪದ್ಧತಿಗಳನ್ನು ನಮ್ಮ ತಂದೆ ತಾತ ಮುತ್ತಾತನ ಕಾಲದಿಂದ ಮಾಡಿಕೊಂಡು ಬಂದಿದ್ದೇವೆ.

ಸಾಲ ಸೋಲ ಮಾಡಿ ತೋಟಗಾರಿಕೆ ಬೆಳೆಗಳನ್ನು ಬೆಳೆದಿರುವ ಸಹ ವ್ಯಾಪಾರಸ್ಥರು ತೋಟಗಳಿಗೆ ಬಂದು ಎಂಟ ರಿಂದ ಹತ್ತು ರೂಪಾಯಿ 12 ರೂಪಾಯಿಗೆ ತೆಗೆದುಕೊಂಡು ಹೋಗುತ್ತಾರೆ. ರೈತರಿಗೆ ಬೆಳೆಗಳು ಬೆಳೆದರೂ ಸಹ ಬೆಳೆ ಇಳಿಕೆಯಿಂದ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದಿವೆ. – ಪುರುಷೋತ್ತಮ್‌, ರೈತ

ತರಕಾರಿ ಬೆಳೆಯಲ್ಲಿ ಸಾಕಷ್ಟು ಹೇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ತರಕಾರಿ ನಿರೀಕ್ಷಿತ ಮಟ್ಟದಲ್ಲಿ ಬರುತ್ತಿದೆ. ಪ್ರತಿ ತರಕಾರಿ ಬೆಲೆಯಲ್ಲೋ ಇಳಿಕೆಯಾಗಿದೆ. ಪೆಟ್ರೋಲ್‌ ಡೀಸೆಲ್‌ ಏರಿಕೆಯಿಂದ ಟ್ರಾನ್ಸ್‌ಪೋರ್ಟ್‌ ಸಹ ಹೆಚ್ಚಾಗಿದೆ. ತರಕಾರಿಗಳನ್ನು ತಂದು ಮಾರಾಟ ಮಾಡುವುದೇ ಕಷ್ಟವಾಗುತ್ತದೆ. – ಸಿದ್ದರಾಜು, ವ್ಯಾಪಾರಸ್ಥ

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24-bng

Bengaluru: ಜಪ್ತಿ ಮಾಡಿದ ವಸ್ತುಗಳ ಮೇಲೆ ಕ್ಯೂಆರ್‌ ಕೋಡ್‌: ಪೊಲೀಸ್‌ ಆಯುಕ್ತ

WhatsApp Image 2025-01-22 at 01.46.02

ನಿವೃತ್ತ ಬಿಸಿಯೂಟ ಸಿಬಂದಿಗೆ ಇಡುಗಂಟು: ಶಿಕ್ಷಣ ಇಲಾಖೆ

Life imprisonment: ಕೊಲೆ, ದರೋಡೆ ಪ್ರಕರಣ; 8 ಮಂದಿಗೆ ಜೀವಾವಧಿ ಶಿಕ್ಷೆ

Life imprisonment: ಕೊಲೆ, ದರೋಡೆ ಪ್ರಕರಣ; 8 ಮಂದಿಗೆ ಜೀವಾವಧಿ ಶಿಕ್ಷೆ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.