ಹೊಲದಲ್ಲೇ ರಾಗಿ ಮೊಳಕೆ ಒಡೆಯುವ ಭೀತಿ


Team Udayavani, Dec 12, 2022, 2:50 PM IST

ಹೊಲದಲ್ಲೇ ರಾಗಿ ಮೊಳಕೆ ಒಡೆಯುವ ಭೀತಿ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾಗಿ ಬೆಳೆ ಅತ್ಯಧಿಕ ಬೆಳೆಯಾಗಿದ್ದು, ಕೊಯ್ಲಿಗೆ ಬಂದಿರುವ ರಾಗಿ ಕಟಾವು ಕಾರ್ಯ ನಡೆಯುತ್ತಿದೆ. ಆದರೆ, ಮ್ಯಾಂಡಸ್‌ ಚಂಡಮಾರುತದ ಮಳೆ ಯಿಂದಾಗಿ ಈಗಾಗಲೇ ಕಟಾವು ಮಾಡಿರುವ ರಾಗಿ ಬೆಳೆಯೂ ಸಹ ಮಳೆಗೆ ತುತ್ತಾಗಿ ರಾಗಿ ಮೊಳಕೆ ಒಡೆಯುವ ಆತಂಕ ರೈತರಲ್ಲಿ ಮನೆ ಮಾಡಿದೆ. 90 ದಿನಗಳಲ್ಲಿ ಬೆಳೆ ಕೈಗೆ ಬರುವ ರಾಗಿ ತಳಿಗಳನ್ನು ಬಿತ್ತನೆ ಮಾಡಿರುವ ಬೆಳೆಗಾರರ ಮೊಗದಲ್ಲಿ ಆತಂಕ ಮನೆ ಮಾಡಿದ್ದು, ಸತತ ಮಳೆಯಾದಲ್ಲಿ ಬೆಳೆ ಗತಿಯೇನು ಎಂಬ ಚಿಂತೆ ಶುರುವಾಗಿದೆ.

ಸಾಧಾರಣವಾಗಿ ಜಿಲ್ಲೆಯ ರೈತರು 100 ದಿನಗಳಲ್ಲಿ ಬೆಳೆ ಕೈಗೆ ಸಿಗುವ ಎಂಎಲ್‌ 65 ತಳಿ, 105ರಿಂದ 115 ದಿನ ಕಾಲ ಅಂದರೆ ಮೂರೂವರೇ ತಿಂಗಳು ಬೆಳೆಯಿರುವ ಜಿಪಿಯು 28 ತಳಿಗಳನ್ನು ಬೆಳೆಯಲಾಗುತ್ತಿದೆ.

ಬೆಳೆಗಾರರಲ್ಲಿ ಆತಂಕ: ಕಳೆದ ವರ್ಷ ಮಳೆಯಿಂದಾಗಿ 90 ದಿನಗಳಲ್ಲಿ ಕೈಗೆ ಬರುವ ಬೆಳೆ ನಷ್ಟವಾಗಿದ್ದರಿಂದ ಈ ಬಾರಿ ಎಚ್ಚೆತ್ತ ರೈತರು 120 ರಿಂದ 125 ದಿನಗಳ ಕಾಲ ಅಂದರೆ ಜಡಿ ಮಳೆ ಬಂದರೂ ಬೆಳೆಗೆ ಯಾವುದೇ ತೊಂದರೆಯಾಗದಂತೆ ಬೆಳೆ ಕೈಗೆ ಸಿಗುವ ತಳಿ ರಾಗಿಯನ್ನು ಬಿತ್ತನೆ ಮಾಡಿದ್ದಾರೆ. ಜಿಲ್ಲಾದ್ಯಂತ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ರಾಗಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ. ಒಂದೇ ರೀತಿ ಸತತವಾಗಿ ಮಳೆ ಸುರಿದಲ್ಲಿ ಕೊಯ್ಲು ಮಾಡಿ ಹೊಲದಲ್ಲಿರುವ ರಾಗಿ ತೆನೆಗಳಿಗೆ ತೇವಾಂಶ ಹೆಚ್ಚಾಗಿ ಮೊಳಕೆ ಬಂದು ನಷ್ಟವಾಗುವ ಸಾಧ್ಯತೆ ಹೆಚ್ಚಿದೆ.

ಜಾನುವಾರುಗಳಿಗೆ ಮೇವಿಲ್ಲ: ಮಳೆ ಹಾವಳಿಯಿಂದಾಗಿ ಜಾನುವಾರುಗಳಿಗೆ ಮೇವು ಒದಗಿಸಲು ತೀವ್ರ ತೊಂದರೆಯಾಗಿದೆ. ರೈತರು ಇದ್ದಬಿದ್ದ ಒಣ ಮೇವು ಹಾಕಿದರು. ಕಳೆದ ಎರಡು ಮೂರು ತಿಂಗಳು ಸುರಿದ ಮಳೆಯಿಂದ ಹೂವು ಬೆಳೆಗಾರರು ಇನ್ನೂ ಸುಧಾರಿಸಿಕೊಂಡಿಲ್ಲ. ಇನ್ನೇನು ಮಳೆಯಿಲ್ಲ ಎಂದು ರೋಜ್‌ ಗಿಡಗಳನ್ನು ಕತ್ತರಿಸಿ ಬೆಳೆ ನಿರ್ವಹಿಸುತ್ತಿರುವ ರೈತರಿಗೆ ಮತ್ತೆ ಒಕ್ಕರಿಸಿದ ಈ ಚಂಡಮಾರುತ ಸೇವಂತಿಗೆ, ದ್ರಾಕ್ಷಿ ಬೆಳೆಗಾರರು ರೋಗ ನಿಯಂತ್ರಿಸುವ ಹರಸಾಹಸ ಪಡುವಂತಾಗಿದೆ. ಮನೆಗಳ ಹತ್ತಿರ ರಾಗಿಯನ್ನು ಒಣಗಲು ಹಾಕಲಾಗಿತ್ತು. ಆದರೆ, ರಾಗಿ ತೆನೆಗಳಿಗೆ ಟಾರ್ಪಲ್‌ಗ‌ಳನ್ನು ಕಟ್ಟಿ ಸುರಕ್ಷತೆ ಮಾಡುತ್ತಿದ್ದಾರೆ.

ಮಲಗಿಸಿಟ್ಟ ರಾಗಿಗೆ ನಷ್ಟ: ಬಹುತೇಕ ಕಡೆ ರಾಗಿ ಬೆಳೆ ಕಟಾವು ಮಾಡಲು ಯಂತ್ರಗಳ ಅಬ್ಬರ ಜೋರಾಗಿದೆ. ಚಂತಮಾರುತದ ಎಫೆಕ್ಟ್ ಗೆ ಒಳಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕಡಿಮೆ ಅವಧಿಯಲ್ಲಿ ಬೆಳೆಯುವ ರಾಗಿ ತಳಿಗಳು ಕೊಯ್ಲಿಗೆ ಬಂದು ಸಾಕಷ್ಟು ಮಂದಿ ಬೆಳೆಗಾರರು ಕೊಯ್ಲು ಮಾಡಿ ಹೊಲಗಳಲ್ಲಿಯೇ ಮಲಗಿಸಿಟ್ಟಿದ್ದಾರೆ. ಇಂಥ ಹೊಲಗಳಲ್ಲಿ ಸತತ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿ ಮಲಗಿಸಿಟ್ಟ ಜಾಗದಲ್ಲಿಯೇ ರಾಗಿ ಮೊಳಕೆ ಬರುವ ಸಾಧ್ಯತೆ ಇರುತ್ತದೆ. ಸಂರಕ್ಷಣೆ ಮಾಡಲು ಸಾಧ್ಯವಾಗದೆ ಬೆಳೆಗಾರರು ಆತಂಕದಲ್ಲಿದ್ದಾರೆ.

ರಾಗಿ ಕೊಯ್ಲು ಮಾಡಿ ಭೂಯಿ ಮೇಲೆ ಮಲಗಿಸಿಟ್ಟ ರಾಗಿಗೆ ತೇವಾಂಶ ಹೆಚ್ಚಾಗಿ ಮೊಳಕೆ ಬರುವ ಸಾಧ್ಯತೆಯಿದೆ. ರಾಗಿ ಕೊಯ್ಲು ಕಟಾವು ಹಂತದಲ್ಲಿದ್ದು, ನಿರಂತರ ಮಳೆ ಬರುತ್ತಿರುವುದರಿಂದ ರೈತರಿಗೆ ಸಂಕಷ್ಟ ತರುವಂತಾಗಿದೆ. ವಾತಾವರಣ ಇದೇ ರೀತಿ ಮುಂದುವರಿದರೆ ರಾಗಿ ಬೆಳೆ ಮೇಲೆ ಪರಿಣಾಮ ಬೀಳಲಿದೆ. ಮುಂದಿನ ದಿನಗಳಲ್ಲಿ ನಷ್ಟದ ಪ್ರಮಾಣವನ್ನು ಅಂದಾಜಿಸಲಾಗುವುದು.– ಲಲಿತಾ ರೆಡ್ಡಿ, ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ

ಟಾಪ್ ನ್ಯೂಸ್

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Doddaballapura ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ

Doddaballapura ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ

Anekal: ದೌರ್ಜನ್ಯ; ಕುಡುಕನ ನಗ್ನಗೊಳಿಸಿ ಥಳಿತ

Anekal: ದೌರ್ಜನ್ಯ; ಕುಡುಕನ ನಗ್ನಗೊಳಿಸಿ ಥಳಿತ

Crime: 56 ಕೇಸ್‌; ರೌಡಿಶೀಟರ್‌ಗೆ 2ನೇ ಬಾರಿ ಗುಂಡೇಟು

Crime: 56 ಕೇಸ್‌; ರೌಡಿಶೀಟರ್‌ಗೆ 2ನೇ ಬಾರಿ ಗುಂಡೇಟು

Crime: ಏರ್ಪೋರ್ಟ್ ನಲ್ಲಿ ಚಾಕುವಿನಿಂದ ಇರಿದು ನೌಕರನ ಬರ್ಬರ ಹತ್ಯೆ

Crime: ಏರ್ಪೋರ್ಟ್ ನಲ್ಲಿ ಚಾಕುವಿನಿಂದ ಇರಿದು ನೌಕರನ ಬರ್ಬರ ಹತ್ಯೆ

13

Bangalore: ಶಾಸಕ ಶಾಮನೂರು ಹೆಸರಿನಲ್ಲಿ ವಂಚನೆ: ಇಬ್ಬರ ಸೆರೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

1-japp

Japan ಆ್ಯನಿಮೇಟೆಡ್‌ ರಾಮಾಯಣ ಅ.18ಕ್ಕೆ ಮರು ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.