![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jun 5, 2022, 1:57 PM IST
ನೆಲಮಂಗಲ: ವೀವರ್ಸ್ ಕಾಲೋನಿಯ ಗಂಡನ ಮನೆಯಲ್ಲಿ ಪೂಜಾ(24) ಎಂಬಾಕೆಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪತಿ, ಅತ್ತೆ ಮತ್ತು ಮಾವನನ್ನು ಬಂಧಿಸಿದ್ದಾರೆ.
ಪತಿ ಮಂಜುನಾಥ್, ಅತ್ತೆ ಶ್ಯಾಮಲಾ ಮತ್ತು ಮಾವ ಅನಂತಮೂರ್ತಿ ಅವರನ್ನು ಬಂಧಿಸಲಾಗಿದೆ.
ಎರಡು ವರ್ಷದ ಹಿಂದೆ ಮಂಜುನಾಥ್ ಗೆ ಪೂಜಾಳನ್ನು ಮದುವೆ ಮಾಡಿಕೊಟ್ಟಿದ್ದರು. ಘಟನೆ ಬಳಿಕ ಪತಿ ಮಂಜುನಾಥ್ ಮತ್ತು ಕುಟುಂಬದವರ ವಿರುದ್ಸ ಕೊಲೆ ಆರೋಪ ಮಾಡಲಾಗಿತ್ತು. ಕೊಲೆ ಮಾಡಿ ನೇಣು ಹಾಕಿದ್ದಾರೆ ಎನ್ನುವ ಆರೋಪವನ್ನು ಮಾಡಿದ್ದರು. ಹೆಂಡತಿಯೊಂದಿಗೆ ಗಂಡ ಮುಂಜುನಾಥ ಪ್ರತಿನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ, ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ ಕಷ್ಟ ಕೊಡುತ್ತಿದ್ದರು. ಮಂಜುನಾಥನಿಗೆ ಶಿಕ್ಷೆ ಆಗಬೇಕು ಎಂದು ಮೃತಳ ಪೋಷಕರು, ಸಂಬಂಧಿಕರು ಆಗ್ರಹಿಸಿದ್ದರು.
ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್ ಮೊದಲನೆ ಅಲೆ ಸಮಯದಲ್ಲಿ ದೇವಸ್ಥಾನದಲ್ಲಿ ಮದುವೆ ಮಾಡಲಾಗಿತ್ತು. ಮದುವೆ ಖರ್ಚು ಕಡಿಮೆ ಆದ ಹಿನ್ನೆಲೆಯಲ್ಲಿ ಪೂಜಾಳ ಪೋಷಕರು ಚಿನ್ನದ ಸರ ಮಾಡಿಸಿಕೊಟ್ಟಿದ್ದರು ಎಂದು ತಿಳಿದು ಬಂದಿದೆ.
ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.