ಮೆಡಿಕಲ್ಸ್ಗಳಿಗೆ ವೈದ್ಯಾಧಿಕಾರಿ ಭೇಟಿ
Team Udayavani, May 5, 2021, 3:03 PM IST
ಮಾಗಡಿ: ವೈದ್ಯರು ನೀಡಿದ ಸೂಕ್ತ ಚೀಟಿಯಿದ್ದರೆ ಮಾತ್ರ ಮಾತ್ರೆ ಹಾಗೂ ಔಷಧವನ್ನು ನೀಡಬೇಕು. ಇಲ್ಲದಿದ್ದರೆ ಕಾನೂನು ರಿತ್ಯ ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್ ಬಿ.ಜಿ. ಶ್ರೀನಿವಾಸ್ ಪ್ರಸಾದ್ ಮೆಡಿಕಲ್ ಸ್ಟೋರ್ಗಳ ಮಾಲೀಕರಿಗೆ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಮೆಡಿಕಲ್ಸ್ ಸ್ಟೋರ್ಗಳಿಗೆ ಭೇಟಿ ನೀಡಿ ಮಾತನಾಡಿ, ಕೋವಿಡ್ ಮುಂಜಾಗ್ರತಾ ಕ್ರಮದ ಕುರಿತು ಜನಜಾಗೃತಿ ಮೂಡಿಸುತ್ತಿದ್ದರೂ ಜನರು ಕೋವಿಡ್ ನಿಯಮ ಪಾಲಿಸದೆ ಸಾವು ನೋವುಗಳನ್ನು ಅನುಭವಿಸುತ್ತಿದ್ದಾರೆ. ಜತೆಗೆ ವೈದ್ಯ, ಸೂಚನೆಗಳನ್ನುಪಡೆಯದೆ ಮೆಡಿಕಲ್ಗಳಿಂದ ಮಾತ್ರೆಗಳನ್ನು ಪಡೆದು ರೋಗಿಗಳಾಗುತ್ತಿದ್ದಾರೆ.
ವೈದ್ಯರ ಚೀಟಿ ಇಲ್ಲದೆ ಮೆಡಿ ಕಲ್ಸ್ ಸ್ಟೋರ್ಮಾಲೀಕರು ಔಷಧ ನೀಡಿ ದರೆ ಕಾನೂನುರಿತ್ಯ ಕ್ರಮ ಜರುಗಿಸ ಬೇಕಾಗುತ್ತದೆ ಎಚ್ಚರಿಕೆ ನೀಡಿದರು.ತಾಲೂಕು ವೈದ್ಯಾಧಿಕಾರಿ ಡಾ.ಸತೀಶ್ ಮಾತನಾಡಿ, ಕೊರೊನಾ ರೋಗಿಗಳ ಆರೋಗ್ಯದ ಮೇಲೆ ತೀವ್ರ ಪರಿಣಾಮಬೀರುತ್ರಿರುವ ಬಗ್ಗೆ ವೈದ್ಯರು ಸಹ ಆತಂಕಗೊಳಗಾಗಿದ್ದು, ಜೊತೆಗೆ ಕೋವಿಡ್ಸೋಂಕಿತರ ಸಂಖ್ಯೆಯೂ ಅಧಿಕಗೊಳ್ಳಲು ಕಾರಣವಾಗುತ್ತಿದೆ. ಯಾವುದೇ ಪರೀಕ್ಷೆಗೆ ಒಳಪಡದೆ ಏಕಾಏಕಿ ರೋಗಿಗಳೇ ಮೆಡಿಕಲ್ಸ್ ಸ್ಟೋರ್ಗಳಲ್ಲಿ ನೋವು ನಿವಾರಕ ಔಷಧ ಪಡೆದು ಸೇವಿಸಬೇಡಿ ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.