Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!
ಹಬ್ಬ ಮುಗಿಯುತ್ತಿದ್ದಂತೆ ಯಾರಿಗೂ ಬೇಡವಾಗಿ ರಸ್ತೆ ಬದಿಗೆ, ಹಳ್ಳಗಳಲ್ಲಿ ಬೀಳುತ್ತಿವೆ
Team Udayavani, Oct 16, 2024, 6:30 AM IST
ದೊಡ್ಡಬಳ್ಳಾಪುರ: ಆಯುಧಪೂಜೆ – ದಸರಾದಲ್ಲಿ ಪ್ರಮುಖವಾಗಿ ಉಪಯೋಗಿಸುವ ಬೂದು ಕುಂಬಳ ಕಾಯಿ ಹಬ್ಬ ಮುಗಿಯುತ್ತಿದ್ದಂತೆ ಯಾರಿಗೂ ಬೇಡವಾಗಿ ರಸ್ತೆ ಬದಿಗೆ ಹಾಗೂ ಹಳ್ಳಗಳಲ್ಲಿ ಬೀಳುತ್ತಿವೆ.
ದಸರೆ ಆರಂಭಕ್ಕೂ ಒಂದು ವಾರ ಮೊದಲೇ ಒಂದು ಕೆ.ಜಿ.ಗೆ 18ರಿಂದ 20 ರೂ.ಗಳ ವರೆಗೂ ಮಾರಾಟವಾಯಿತು. ಒಂದು ಬೂದುಗುಂಬಳ 4ರಿಂದ 7 ಕೆ.ಜಿ ತೂಗುತ್ತಿತ್ತು. ಆದರೆ ಹಬ್ಬ ಮುಕ್ತಾಯವಾದ ಅನಂತರ ಕೊಳ್ಳುವವರಿಲ್ಲದೇ ನಗರದ ಸುತ್ತಮುತ್ತಲಿನ ರಸ್ತೆ ಬದಿಯಲ್ಲಿ ರಾಶಿಗಟ್ಟಲೇ ಕಾಯಿಗಳನ್ನು ರೈತರು ಸುರಿದು ಹೋಗಿರುವ ದೃಶ್ಯ ಸಾಮಾನ್ಯವಾಗಿದೆ.
ದೊಡ್ಡಬಳ್ಳಾಪುರ ಗೌರಿ ಬಿದನೂರು ರಸ್ತೆ, ಚಿಕ್ಕಬಳ್ಳಾಪುರ ರಸ್ತೆಗಳಲ್ಲಿ ಹೆಚ್ಚಿನ ಬೂದುಗುಂಬಳ ರಾಶಿ ಕಂಡುಬರುತ್ತಿವೆ. ಬೆಲೆ ಇಲ್ಲದ ಸಮಯದಲ್ಲಿ ಟೊಮೊಟೋ ಹಣ್ಣು ಸುರಿಯುವಂತೆ ಈಗ ಬೂದುಗುಂಬಳ ಕಾಯಿಗಳನ್ನು ಸುರಿಯುವ ಸ್ಥಿತಿ ಬಂದಿದೆ. ಸಾಮಾನ್ಯವಾಗಿ ಬೂದುಗುಂಬಳವನ್ನು, ಮಜ್ಜಿಗೆ ಹುಳಿ, ಕಾಶಿ ಹಲ್ವ ಮೊದಲಾಗಿ ಅಡುಗೆಗಳಲ್ಲಿ ಉಪಯೋಗಿಸುತ್ತಾರೆ.
ಕೆಲವು ಸಮುದಾಯಗಳಲ್ಲಿ ಮಾತ್ರ ಸಾಂಬಾರಿಗೆ ಬಳಸುತ್ತಾರೆ. ಈ ವೇಳೆ ಮಾರುಕಟ್ಟೆಗೆ ತಕ್ಕ ಮಟ್ಟಿಗೆ ಕಾಯಿಗಳು ಬಂದರೆ ಬೆಲೆ ಸ್ಥಿರವಾಗಿದ್ದು, ಮಾರಾಟ ಸಹಜವಾಗಿರುತ್ತದೆ. ಆಯುಧ ಪೂಜೆ ಹೊರತು ಇತರ ಸಮಯದಲ್ಲಿ ಸಾಮಾನ್ಯವಾಗಿ ಬೂದುಗುಂಬಳಕ್ಕೆ ಬೇಡಿಕೆ ಕಡಿಮೆ. ಹಬ್ಬದ ಸಮಯದ ಒಂದು ವಾರದ ವ್ಯಾಪಾರವನ್ನು ನಂಬಿ ರೈತರು ಎಕರೆಗಟ್ಟಲೆ ಪ್ರದೇಶದಲ್ಲಿ ಬೂದುಕುಂಬಳ ಬೆಳೆದಿರುವ ಪರಿಣಾಮ ಇಂದು ಬೀದಿಗೆ ಸುರಿಯುವಂತಾಗಿದೆ ಎಂದು ರೈತ ಹನುಮೇಗೌಡ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drinking Water: ಕಾವೇರಿ 6ನೇ ಹಂತದ ಯೋಜನೆಗೆ ಡಿಪಿಆರ್ ಸಿದ್ಧ: ಡಿಸಿಎಂ ಶಿವಕುಮಾರ್
Belagavi: ಫೇಸ್ಬುಕ್ ಗೆಳೆಯನ ಜೊತೆ ಸೇರಿ ಕೋಟ್ಯಧಿಪತಿ ಗಂಡನನ್ನೇ ಹತ್ಯೆಗೈದಳಾ ಪತ್ನಿ…?
Channapatna By Election; ಮೈತ್ರಿ ಅಭ್ಯರ್ಥಿ ನಾನೆ: ಸಿ.ಪಿ.ಯೋಗೇಶ್ವರ್ ವಿಶ್ವಾಸದ ನುಡಿ
Belgavi; ಜೈಲಿನಲ್ಲಿ ಆತ್ಮಹ*ತ್ಯೆಗೆ ಯತ್ನಿಸಿದ್ದ ಕೈದಿ ಸಾ*ವು
Channapatna By Election; 3 ಸಾವಿರ ಮಂದಿಗೆ ಸಿದ್ದ ಮಾಡಿದ್ದ ಬಿರಿಯಾನಿ ವಶಕ್ಕೆ
MUST WATCH
ಹೊಸ ಸೇರ್ಪಡೆ
BBK11: ಗಲಾಟೆ ಭರದಲ್ಲಿ ಮಂಜುಗೆ ಕಿಸ್ ಮಾಡಿದ್ರಾ ಜಗದೀಶ್? ಏನಿದು ವೈರಲ್ ವಿಡಿಯೋ?
Drinking Water: ಕಾವೇರಿ 6ನೇ ಹಂತದ ಯೋಜನೆಗೆ ಡಿಪಿಆರ್ ಸಿದ್ಧ: ಡಿಸಿಎಂ ಶಿವಕುಮಾರ್
Kollywood: 33 ವರ್ಷದ ಬಳಿಕ ರಜಿನಿ ಜತೆ ಮಣಿರತ್ನಂ ಸಿನಿಮಾ? ನಿರ್ದೇಶಕರ ಪತ್ನಿ ಹೇಳಿದ್ದೇನು?
Extortion Case: ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್ ಶರ್ಮಾ ಬಂಧನ
ನರಗುಂದ:”ಭಾರತ ಉನ್ನತ ಸಂಸ್ಕೃತಿ ಹೊಂದಿದ ದೇಶ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.