
ಪಾಲಿಕೆ ತ್ಯಾಜ್ಯದಿಂದ ಬೆಟ್ಟದಾಸನಪುರದಲ್ಲಿ ದಟ್ಟ ಹೊಗೆ
Team Udayavani, Jan 26, 2022, 1:19 PM IST

ಆನೇಕಲ್: ರಾತ್ರೋ ರಾತ್ರಿ ಬಿಬಿಎಂಪಿ ಕಸವನ್ನು ತಂದು ತಾಲೂಕಿನ ಹೊರವಲಯದ ಕ್ವಾರಿಗಳಲ್ಲಿ ಸುರಿದು ಕಸಕ್ಕೆ ಬೆಂಕಿ ಹಚ್ಚುತ್ತಿದ್ದು, ಮಂಗಳವಾರ ದಟ್ಟವಾದ ಹೊಗೆ ಕಾಣಿಸಿಕೊಂಡುಅಗ್ನಿಶಾಮಕ ದಳದವರು ಆಗಮಿಸಿ ಹೊಗೆ ನಿಯಂತ್ರಿಸಿದ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಮೀಪದಲ್ಲಿ ಬೆಟ್ಟದಾಸನಪುರದಲ್ಲಿ ನಡೆದಿದೆ.
ಮಂಗಳವಾರ ಬೆಳಗ್ಗೆ ಹೊಗೆಯು ಬೆಟ್ಟದಾಸನಪುರ ಆವರಿಸಿದ್ದು, ಮನೆಯಲ್ಲಿನ ಮಕ್ಕಳು ಹಾಗೂ ವೃದ್ಧರು ಕೆಮ್ಮಲುಶುರು ಮಾಡಿದರು. ದನ ಕರು ಕುರಿ ಮೇಕೆ ಜತೆಗೆ ಇತರ ಸಾಕುಪ್ರಾಣಿಗಳು ಅಸಹಜವಾಗಿ ವರ್ತಿಸತೊಡಗಿದವು. ದಟ್ಟವಾದ ಹೊಗೆಯಿಂದ ಗ್ರಾಮಸ್ಥರು ಕಣ್ಣು ಉರಿ, ಮೈ ಕೈ ಕಡಿತಕ್ಕೆ ಗುರಿ ಯಾಗುತ್ತಿರುವುದು ಕಂಡು ಬಂದಿದೆ ಎಂದು ಗ್ರಾಪಂಸದಸ್ಯ ಕಾಂತರಾಜು ಆಕ್ರೋಶ ವ್ಯಕ್ತಪಡಿಸಿದರು. ಈ ಮೊದಲುಇದೇ ಪರಿಸ್ಥಿತಿ ಬಂದಾಗ ಗ್ರಾಮಸ್ಥರು ರಸ್ತೆ ತಡೆ ನೆಡೆಸಿ ಪ್ರತಿಭಟನೆ
ನಡೆಸಿದೆವು. ಬಿಬಿಎಂಪಿ ಅಧಿಕಾರಿಗಳು ಸ್ವತ್ಛತಾ ಉಪಕರಣಗಳನ್ನು ನೀಡುವ ಜೊತೆಗೆ ಆರೋಗ್ಯ ತಪಾ ಸಣಾ ತಂಡವನ್ನು ಕಳಿಸಿದ್ದರು. ಸೊಳ್ಳೆ ಹಾಗೂ ನೊಣಗಳ ಕಾಟವನ್ನು ತಪ್ಪಿಸಲು ಪರದೆಯನ್ನು ನೀಡಿದ್ದರು. ಅವೈಜ್ಞಾನಿಕ ವಾಗಿ ಹಳ್ಳಿಗಳಿಗೆ ತ್ಯಾಜ್ಯ ಸುರಿಯುತ್ತಿರುವ ಕಾರಣ ಜನ, ಜಾನುವಾರು ಹಾಗೂ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ರಾತ್ರೋರಾತ್ರಿ ಕಸದ ಲಾರಿಗಳು ಗ್ರಾಮದ ಸುತ್ತ ಮುತ್ತ ಕಸ ಸುರಿಯುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ರಸ್ತೆ ತಡೆಯುವುದರ ಜತೆಗೆ ತ್ಯಾಜ್ಯವನ್ನು ಬಿಬಿಎಂಪಿ ಕಚೇರಿ ಮುಂದೆ ಸುರಿಯಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.