ಶರಣರ ಬದುಕಿನ ಮಾರ್ಗ ಅನುಕರಣೀಯವಾದುದು


Team Udayavani, May 14, 2019, 3:00 AM IST

sharanara

ವಿಜಯಪುರ: ಸಕಲಜೀವಿಗಳಲ್ಲಿ ಲೇಸನ್ನು ಬಯಸಿದ ಶರಣರ ಬದುಕಿನ ಮಾರ್ಗವು ಸಾರ್ವಕಾಲಿಕ ಅನುಕರಣೀಯ. ಕಾಯಕನಿಷ್ಠೆ. ಧರ್ಮನಿಷ್ಠರಾಗಿ ಶರಣಸಂಸ್ಕೃತಿಯನ್ನು ಕಟ್ಟಿಕೊಳ್ಳುವ ಕಾಯಕದಲ್ಲಿ ಎಲ್ಲರೂ ತೊಡಗಿಕೊಳ್ಳಬೇಕಿದೆ.

ಸಮಾಜದ ಹಿತಕ್ಕಾಗಿ ತತ್ವನಿಷ್ಠೆ, ಮೌಲ್ಯನಿಷ್ಠೆಯಿಟ್ಟುಕೊಂಡು ಧೀರೋದ್ಧಾತ ಶ್ರೇಷ್ಠ ಬದುಕು ಮಾರ್ಗದಲ್ಲಿ ಧ್ಯೇಯ, ಉದಾತ್ತತೆ ಇರಿಸಿಕೊಳ್ಳುವಂತಾಗಬೇಕು ಎಂದು ನಿಡುಮಾಮಿಡಿ ಶ್ರೀ ಮಾನವ ಸದ್ಧರ್ಮಸಿಂಹಾಸನ ಪೀಠಾಧ್ಯಕ್ಷ ಶ್ರೀ ವೀರಭದ್ರಚನ್ನಮಲ್ಲ ದೇಶೀಕೇಂದ್ರಸ್ವಾಮೀಜಿ ಹೇಳಿದರು.

ಪಟ್ಟಣ ಸುಬ್ಬಮ್ಮಚನ್ನಪ್ಪ ಸಮುದಾಯಭವನದಲ್ಲಿ ಶ್ರೀ ವೀರೇಶಚಾರಿಟಬಲ್‌ ಟ್ರಸ್ಟ್‌, ದೇವನಹಳ್ಳಿ ಸಾಕ್ಷಿಮುರುಘ ಸೇವಾಟ್ರಸ್ಟ್‌ಗಳ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಸಾಹಿತಿ ಸಿ.ಎಂ.ವೀರಣ್ಣ ಸಂಸ್ಮರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ವೀರಣ್ಣನವರ ಕೊಡುಗೆ ಅಪಾರ: ಸಾಮಾಜಿಕ, ಧಾರ್ಮಿಕ, ಅಧ್ಯಾತ್ಮಿಕ ಮತ್ತು ಸಾಹಿತ್ಯಿಕ ಕ್ಷೇತ್ರಕ್ಕೆ ಸಿ.ಎಂ.ವೀರಣ್ಣನವರ ಕೊಡುಗೆ ಅಪಾರವಾದುದು. ಅಕ್ಕನಬಳಗ, ಅರಿವಿನ ಮನೆಯ ಮೂಲಕ ಮಹಿಳೆಯರಿಗೆ, ಕಿರಿಯರಿಗೆ ಧರ್ಮಪ್ರಸಾರ ಮಾಡಲು ಮಾಡಿದ ಸೇವೆಯನ್ನು ಅನುಕರಿಸಬೇಕು ಎಂದರು.

ಜಚನಿ ಕಾರ್ಯ ಪ್ರಶಂಸನೀಯ: 12 ನೇ ಶತಮಾನದ ನಂತರ ಶ್ರಮಜೀವಿಸಂಸ್ಕೃತಿಗೆ ಪೂರಕವಾಗಿ ನಿರಕ್ಷರಕುಕ್ಷಿಗಳನ್ನು ಸಾಹಿತ್ಯಸೃಷ್ಟಿಯೆಡೆಗೆ ಓಲೈಸುವ ಕಾರ್ಯದಲ್ಲಿ ಶರಣರಷ್ಟೇ ಮಹತ್ವಪೂರ್ಣವಾಗಿ ಸೇವೆಸಲ್ಲಿಸದ ನಿಡುಮಾಮಿಡಿ ಕ್ಷೇತ್ರಾಧ್ಯಕ್ಷ ಸಾಹಿತ್ಯಸೂರ್ಯ ಜಚನಿ ಗುರುಗಳ ಕಾರ್ಯವು ಶ್ಲಾಘನೀಯವಾದುದು ಎಂದು ತಿಳಿಸಿದರು.

ಸಿ.ಎಂ.ವೀರಣ್ಣ ಪ್ರಶಸ್ತಿ ನೀಡಬೇಕು: ಸಾಹಿತ್ಯಚಂದ್ರ ಸಿ.ಎಂ.ವೀರಣ್ಣ ಅವರ ಹೆಸರಿನಲ್ಲಿ ಶ್ರೀ ವೀರೇಶ ಚಾರಿಟಬಲ್‌ ಟ್ರಸ್ಟ್‌ನ ವತಿಯಿಂದ ಪ್ರತಿವರ್ಷವೂ ಕೊಡುವ ಯೋಜನೆಯು ಜಾರಿಯಾಗಬೇಕು. ಸತ್ಪ್ರೇರಣೆ, ಸದ್ಚಿಂತನೆ ಬಂದು ಹೊಸಬೆಳಕು ಮೂಡಿ ಹೊಸಭಾವನೆ ಪ್ರತಿಫ‌ಲಿಸಲು ನಿಸರ್ಗವೇ ಮಾರ್ಗತೋರಬೇಕಿದೆ ಎಂದು ಹೇಳಿದರು.

ಸಾಧೆನೆ ಮೂಲಕ ಸಾಫ‌ಲ್ಯ: ವನಕಲ್ಲು ಶ್ರೀ ಮಲ್ಲೇಶ್ವರಸಂಸ್ಥಾನಮಠಾಧ್ಯಕ್ಷ ಶ್ರೀ ಬಸವರಮಾನಂದಸ್ವಾಮೀಜಿ ಅನುಭವಾಮೃತವನ್ನು ನೀಡಿ, ಮನುಷ್ಯನು ನಾನಾಕ್ಷೇತ್ರಗಳಲ್ಲಿ ಸಾಧನೆ, ಸಿದ್ಧಿಗಳ ಮೂಲಕ ಜೀವನದಲ್ಲಿ ಸಾಫ‌ಲ್ಯವನ್ನು ಪಡೆಯಲು ಸಾಧ್ಯವಿದ್ದು, ಧಾರ್ಮಿಕ ರಂಗದಲ್ಲಿ ವ್ರತ, ನಿಯಮ, ಶರಣರ ನಿಷ್ಠಾನುಷ್ಠಾನ, ಗುರುಲಿಂಗಜಂಗಮದಲ್ಲಿ ಪ್ರೇಮವನ್ನಿರಿಸಕೊಳ್ಳಬಹುದಾಗಿದೆ. ಉತ್ತಮ ಸೇವಾಮನೋಭಾವನೆಯಿರಿಸಿಕೊಳ್ಳುವ ಮೂಲಕ ಪಾಪಪುಣ್ಯಾಧಿಕರ್ಮಗಳಿಂದ ಹೊರಬರಲು ಸಾಧ್ಯವಿದೆ ಎಂದರು.

ಎಲ್ಲರೊಳಗೊಂದಾಗಿ ಬದುಕಿ: ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್‌.ಎಸ್‌.ರುದ್ರೇಶಮೂರ್ತಿ ಮಾತನಾಡಿ, ಎಲ್ಲರೊಳಗೊಂದಾಗಿ ಬದುಕಲು ಮಾಗಿದ ಮನಸ್ಸುಗಳಿಗೆ ಮಾತ್ರ ಸಾಧ್ಯವಿದೆ. ವಾಸ್ತವವಾಗಿ ಹಿರಿತನ ಬರುವುದು ವಯಸ್ಸು, ಅಧಿಕಾರ, ಹಣ, ವಿದ್ವತ್ತಿನಿಂದ ಅಲ್ಲ. ಸದಾಸಾತ್ವಿಕತೆ, ವಿನಯಶೀಲತೆ, ಅಹಂನಿರಸನಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಚಿಕ್ಕಬಳ್ಳಾಪುರ ವಾಪಸಂದ್ರ ನಿಡುಮಾಮಿಡಿ ಶಾಖಾಮಠಾಧ್ಯಕ್ಷೆ ಡಾ.ಶಿವಜ್ಯೋತಿತಾಯಿ, ದೇವನಹಳ್ಳಿ ಸಾಕ್ಷಿಮುರುಘ ಸೇವಾಟ್ರಸ್ಟ್‌ನ ಅಧ್ಯಕ್ಷ ತುಪ್ಪದ ಚಕ್ಕವೀರಭದ್ರಪ್ಪ, ಶ್ರೀ ವೀರಭದ್ರಸ್ವಾಮಿಗೋಷ್ಠಿ ಅಕ್ಕನ ಬಳಗ ಸೇವಾಟ್ರಸ್ಟ್‌ನ ಅಧ್ಯಕ್ಷ ಸಿ.ಬಸಪ್ಪ, ಪಿ.ರುದ್ರಪ್ಪ, ಚುಟುಕು ಕವಿ ಜರಗನಹಳ್ಳಿ ಶಿವಶಂಕರ್‌, ನಗರ್ತ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್‌.ಎಸ್‌.ಬಸವರಾಜು, ತಾಲೂಕು ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮ.ಸುರೇಶ್‌ಬಾಬು, ಶ್ರೀ ವೀರೇಶಚಾರಿಟಬಲ್‌ ಟ್ರಸ್ಟ್‌ನ ಅಧ್ಯಕ್ಷ ಅನಿಲ್‌ಕುಮಾರ್‌, ಕಾರ್ಯದರ್ಶಿ ವಿಮಲಾಂಬ, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: 56 ಕೇಸ್‌; ರೌಡಿಶೀಟರ್‌ಗೆ 2ನೇ ಬಾರಿ ಗುಂಡೇಟು

Crime: 56 ಕೇಸ್‌; ರೌಡಿಶೀಟರ್‌ಗೆ 2ನೇ ಬಾರಿ ಗುಂಡೇಟು

Crime: ಏರ್ಪೋರ್ಟ್ ನಲ್ಲಿ ಚಾಕುವಿನಿಂದ ಇರಿದು ನೌಕರನ ಬರ್ಬರ ಹತ್ಯೆ

Crime: ಏರ್ಪೋರ್ಟ್ ನಲ್ಲಿ ಚಾಕುವಿನಿಂದ ಇರಿದು ನೌಕರನ ಬರ್ಬರ ಹತ್ಯೆ

13

Bangalore: ಶಾಸಕ ಶಾಮನೂರು ಹೆಸರಿನಲ್ಲಿ ವಂಚನೆ: ಇಬ್ಬರ ಸೆರೆ

Untitled-5

Bangalore: ಇಬ್ಬರು ಮಕ್ಕಳನ್ನು ಕೊಂದ ಮಲತಂದೆಯ ಬಂಧನ

16-bng

Magadi: ಮದುವೆ ನಿಶ್ಚಯವಾಗಿದ್ದ ಯುವ ವಕೀಲೆ ಆತ್ಮಹತ್ಯೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.