ನಾಳೆ ಮೌಕ್ತಿಕಾಂಬದೇವಿ ಅದ್ದೂರಿ ಕರಗ ಮಹೋತ್ಸವ


Team Udayavani, May 17, 2019, 12:12 PM IST

blore-g-2

ದೇವನಹಳ್ಳಿ: ನಗರದ ಇತಿಹಾಸ ಪ್ರಸಿದ್ಧ ಮೌಕ್ತಿಕಾಂಬ ಕರಗ ಮಹೋತ್ಸವ ಮೇ 18ರಂದು ರಾತ್ರಿ ಒಂದು ಗಂಟೆಗೆ ಅದ್ದೂರಿಯಾಗಿ ನಡೆಯಲಿದೆ ಎಂದು ತಾಲೂಕು ತಿಗಳರ ಸಂಘದ ಅಧ್ಯಕ್ಷ ವಿ.ಗೋಪಾಲಕೃಷ್ಣ ತಿಳಿಸಿದರು.

ನಗರದ ಮರಳುಬಾಗಿಲಿನಲ್ಲಿರು ಮೌಕ್ತಿಕಾಂಬ ದೇಗುಲದ ಆವರಣದಲ್ಲಿ ನಡೆದ ಕರಗ ಮಹೋತ್ಸವ ಸಂಬಂಧಿಸಿದಂತೆ ನಡೆದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.

ಬೆಂಗಳೂರಿನಲ್ಲಿ ಪ್ರಾರಂಭವಾದ ಕರಗೋತ್ಸವ ದೇವನಹಳ್ಳಿಯಲ್ಲೂ ಪ್ರತಿ ವರ್ಷ ನಡೆದುಕೊಂಡು ಬಂದಿದೆ. 1836ರಲ್ಲಿ ಬ್ರಿಟಿಷರು ಕರಗವನ್ನು ಪ್ರಾರಂಭಿಸಿದರು. ಅಲ್ಲಿಂದ ಕರಗ ಮಾಡಲು ಅನುಮತಿ ನೀಡುತ್ತಿದ್ದರು. ತದನಂತರ 1947ರಿಂದ ನಿರಂತರವಾಗಿ ಕರಗ ಮಹೋತ್ಸವವನ್ನು ನಡೆಸಿ ಕೊಂಡು ಬರುತ್ತಿದ್ದೇವೆ. ರಾಮಯ್ಯ 20 ವರ್ಷಗಳ ಕಾಲ, ಲಕ್ಷ್ಮಣ 12ವರ್ಷ, ವೆಂಕಟಸ್ವಾಮಪ್ಪ 3 ವರ್ಷ, ಗಣಾಚಾರಿ ಗೋಪಾಲಪ್ಪ 3 ವರ್ಷ, ಕೃಷ್ಣಪ್ಪ 15ವರ್ಷ, ಭೀಮಣ್ಣ 8 ವರ್ಷ, ಚಿನ್ನಣ್ಣ 25 ವರ್ಷ, ರವಿಕುಮಾರ್‌ ಕಳೆದ 8ವರ್ಷಗಳಿಂದ ಕರಗವನ್ನು ಹೊರುತ್ತಿದ್ದಾರೆ ಎಂದು ಹೇಳಿದರು.

ಇತಿಹಾಸ ಪ್ರಸಿದ್ಧ ಕರಗ: ಬೆಂಗಳೂರು ಬಿಟ್ಟರೆ ದೇವನಹಳ್ಳಿ ಕರಗ ಇತಿಹಾಸ ಪ್ರಸಿದ್ಧಿಯಾಗಿದೆ. ತಾಲೂಕಿನ ಬೈಚಾಪುರ, ರಾಯಸಂದ್ರ, ಚಿಕ್ಕ ಹೊಸಹಳ್ಳಿ, ದೊಡ್ಡಹೊಸಹಳ್ಳಿ, ಕಾಡೇರಪ್ಪನಹಳ್ಳಿ, ನಲ್ಲೂರು, ಬಿದಲಪುರ, ಮಲ್ಲೇನಹಳ್ಳಿ, ಲಾಲ ಗೊಂಡನಹಳ್ಳಿ, ಚಿಕ್ಕಸಣ್ಣೆ, ದೊಡ್ಡಸಣ್ಣೆ, ದೇವನಹಳ್ಳಿ ನಗರದ 23ವಾರ್ಡುಗಳಲ್ಲಿರುವ ತಿಗಳ ಸಮುದಾ ಯದ ಮುಖಂಡರು, ಕುಲಸ್ಥರು ಭಾಗವಹಿ ಸಲಿದ್ದಾರೆ. ಕರಗದ ಪೂಜಾರಿ ರವಿಕುಮಾರ್‌ ಕರಗವನ್ನು ಹೊರಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮಗಳು: ದೇಗುಲ ಸಮಿತಿ ಅಧ್ಯಕ್ಷ ಎಸ್‌.ಆರ್‌.ವಿಜಯ್‌ಕುಮಾರ್‌ ಮಾತನಾಡಿ, ಮೇ 16 ರಂದು ಬೆಳಗಿನ ಜಾವ 4 ಗಂಟೆಗೆ ಹಸಿಕರಗ ನಡೆಯಲಿದೆ. ಮೇ 17ರಂದು ರಾತ್ರಿ 8ಗಂಟೆಗೆ ದೀಪದ ಆರತಿ, ಅಗ್ನಿಕುಂಡ ನಡೆಯಲಿದೆ. ಮೇ 18ರಂದು ಕರಗ (ಶಕೊöೕತ್ಸವ) ರಾತ್ರಿ 1ಗಂಟೆಗೆ ದೇವಸ್ಥಾನದಿಂದ ಕರಗ ಹೊರಟು, ನಗರದ ರಾಜ ಬೀದಿಗಳಲ್ಲಿ ಕರಗ ಸಂಚರಿಸಲಿದೆ. ಮೇ 19ರಂದು ಸಂಜೆ 4 ಗಂಟೆಗೆ ವಸಂತೋತ್ಸವ ಅದೇ ದಿನ ರಾತ್ರಿ 8ಗಂಟೆಗೆ ಧ್ವಜಾವರೋಹಣ, ಮೇ 20ರಂದು ರಾತ್ರಿ 8 ಗಂಟೆಗೆ ಪಣಸ್ತರ ಪೂಜೆ ಮತ್ತು ಮಹಾ ಮಂಗಳಾರತಿ ನಡೆಯಲಿದೆ ಎಂದರು.

ಮೌಕ್ತಿಕಾಂಬ ಅಮ್ಮನವರ ಕರಗದ ಪ್ರಯುಕ್ತ ದೇವನಹಳ್ಳಿ ನಗರದಲ್ಲಿ ಗ್ರಾಮದೇವತೆಗಳ ಪಲ್ಲಕಿ ಉತ್ಸವಗಳು, ಮೌಕ್ತಿಕಾಂಬ ದೇವಿಗೆ ವಿಶೇಷ ಹೂವಿನ ಪಲ್ಲಕಿ ಉತ್ಸವ ನಡೆಯಲಿದೆ. ದೇವಾಲ ಯಕ್ಕೆ ವಿದ್ಯುತ್‌ ದೀಪಾಲಂಕಾರ, ಮೇ 18ರಂದು ಸಂಜೆ 6.30ಕ್ಕೆ ದೇವಸ್ಥಾನ ಆವರಣದಲ್ಲಿ ಪದ್ಮಶ್ರೀ ಘಂಟಸಾಲಗಾನ ಕಲಾವೃಂದ, ವಿಜಯ ಪುರ ಜ್ಯೂನಿಯರ್‌ ಘಂಟಸಾಲ ಲಕ್ಷ್ಮೀಪತಿ ಅವರಿಂದ ರಸಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಭಕ್ತಾದಿ ಗಳಿಗೆ ಅನ್ನಸಂತರ್ಪಣೆ ಮತ್ತು ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿದೆ. ನೂರಾರು ವೀರಗಾರರು ಭಾಗವಹಿಸಲಿದ್ದಾರೆ. ಎಲ್ಲಾ ಜನಾಂಗದವರು ಒಟ್ಟು ಗೂಡಿ ಹಬ್ಬದ ವಾತಾವರಣದಲ್ಲಿ ಕರಗ ಮಹೋ ತ್ಸವ ನಡೆಸಲಿದ್ದಾರೆ. ಯಾವುದೇ ಪಕ್ಷಪಾತವಿಲ್ಲದೆ ಪಕ್ಷಾತೀತವಾಗಿ ನಡೆಸಿಕೊಂಡು ಬಂದಿದ್ದೇವೆ ಎಂದರು.

ಮೌಕ್ತಿಕಾಂಬ ದೇಗುಲ ಸಮಿತಿ ಉಪಾಧ್ಯಕ್ಷ ಜಿ. ರಾಮಚಂದ್ರಪ್ಪ, ಕಾರ್ಯದರ್ಶಿ ಎಂ.ಜಿ.ಕೃಷ್ಣಪ್ಪ, ಖಜಾಂಚಿ ಗೋಪಾಲಪ್ಪ, ಕರಗದ ಪೂಜಾರಿ ರವಿಕುಮಾರ್‌, ಸಮಿತಿ ಸದಸ್ಯರಾದ ಗೋಪಾಲಪ್ಪ, ಕಾಂತರಾಜ್‌, ಶ್ರೀನಿವಾಸ್‌, ಮಂಜುನಾಥ್‌, ರಾಮಕೃಷ್ಣಪ್ಪ, ಉಮೇಶ್‌, ಮುನಿರಾಜು ಮತ್ತಿತರರಿದ್ದರು.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

24-bng

Bengaluru: ಜಪ್ತಿ ಮಾಡಿದ ವಸ್ತುಗಳ ಮೇಲೆ ಕ್ಯೂಆರ್‌ ಕೋಡ್‌: ಪೊಲೀಸ್‌ ಆಯುಕ್ತ

WhatsApp Image 2025-01-22 at 01.46.02

ನಿವೃತ್ತ ಬಿಸಿಯೂಟ ಸಿಬಂದಿಗೆ ಇಡುಗಂಟು: ಶಿಕ್ಷಣ ಇಲಾಖೆ

Life imprisonment: ಕೊಲೆ, ದರೋಡೆ ಪ್ರಕರಣ; 8 ಮಂದಿಗೆ ಜೀವಾವಧಿ ಶಿಕ್ಷೆ

Life imprisonment: ಕೊಲೆ, ದರೋಡೆ ಪ್ರಕರಣ; 8 ಮಂದಿಗೆ ಜೀವಾವಧಿ ಶಿಕ್ಷೆ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.