ಬೆಳಗಾವಿ: ಪ್ರಶಸ್ತಿ ಬಂದೊಡನೆ ಪ್ರಚಾರದ ಗೀಳು ಬೇಡ: ಅಲ್ಲಾಗಿರಿರಾಜ್‌

ಸಮಾಜದಲ್ಲಿ ನಡೆಯುವ ಅಂಕು ಡೊಂಕುಗಳ ವಿಡಂಬನೆಯಿದೆ

Team Udayavani, Jun 19, 2023, 11:31 AM IST

ಬೆಳಗಾವಿ: ಪ್ರಶಸ್ತಿ ಬಂದೊಡನೆ ಪ್ರಚಾರದ ಗೀಳು ಬೇಡ: ಅಲ್ಲಾಗಿರಿರಾಜ್‌

ಬೆಳಗಾವಿ: ಪ್ರಶಸ್ತಿ ಬಂದಿದೆ ಎಂದೊಡನೆ ಹೆಚ್ಚಿನ ಕವಿಗಳು ಪ್ರಚಾರದ ಗೀಳಿಗೆ ಬೀಳುತ್ತಾರೆ. ಪ್ರಶಸ್ತಿ ಬರುವುದು ಕವಿತೆಗೆ ಹೊರತು ಕವಿಗಲ್ಲ ಎಂಬ ಸತ್ಯವನ್ನು ಅರಿಯಬೇಕು. ಕವಿ, ಸಾಹಿತಿಯಾದವರು ಮೊದಲು ತಮ್ಮ ಓದುಗ ಬಳಗವನ್ನು ಸೃಷ್ಟಿ ಮಾಡಿಕೊಳ್ಳಬೇಕು. ಎಲ್ಲಿಯವರೆಗೆ ಸಾಹಿತ್ಯವು ಓದುಗರ ಮನಸ್ಸನ್ನು ಮುಟ್ಟುವುದಿಲ್ಲವೋ, ಅಲ್ಲಿಯವರೆಗೆ ಅದು ಕೇವಲ ತೂಕದ ಸಾಹಿತ್ಯವಾಗುತ್ತದೆ ಎಂದು ಖ್ಯಾತ ಗಜಲ್‌ ಕವಿ ಅಲ್ಲಾಗಿರಿರಾಜ್‌ ಹೇಳಿದರು.

ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ, ಕೃಷ್ಣಮೂರ್ತಿ ಪುರಾಣಿಕ ಪ್ರತಿಷ್ಠಾನ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಸಹƒದಯ ಸಾಹಿತ್ಯ ಪ್ರತಿಷ್ಠಾನ ಸಹಯೋಗದೊಂದಿಗೆ ರವಿವಾರ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸಹೃದಯ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಗಜಲ್‌ ಇದು ನವಾಬರ ಅರಮನೆಯಲ್ಲಿ ಹಾಡುವಂತಹ ಸಾಹಿತ್ಯವಾಗಿತ್ತು. ಮುಂದಿನ ದಿನಗಳಲ್ಲಿ ಬೀದಿಗೆ ಬಂದು, ನಂತರ ಜಗತ್ತಿನ ಎಲ್ಲ ಭಾಷೆಗಳ ಕಾವ್ಯರಾಣಿ ಎಂಬ ಹೆಸರನ್ನು ಪಡೆಯಿತು.

ಸಹೃದಯ ವೇದಿಕೆ ಮೂಲಕ ಗಜಲ್‌ ಹಾಗೂ ಕಾವ್ಯ ಪ್ರಕಾರದಲ್ಲಿಯ ಅತ್ಯತ್ತಮ ಕೃತಿಗಳನ್ನು ಹುಡುಕಿ ಪ್ರಶಸ್ತಿಗಳನ್ನು ನೀಡುತ್ತಿರುವ ನಾಗೇಶ ನಾಯಕ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ಕವಿಗಳಾದ ಡಾ| ರತ್ನಾಕರ ಕುನಗೋಡು ಮತ್ತು ಮಹಾದೇವ ಎಸ್‌. ಪಾಟೀಲ ಅವರ ಸಹೃದಯ  ಕಾವ್ಯ ಪ್ರಶಸ್ತಿ ಪುರಸ್ಕೃತ ಕೃತಿಗಳ ಕುರಿತು ಮಾತನಾಡಿದ ಆರ್‌.ಪಿ.ಡಿ. ಮಹಾವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಚ್‌. ಬಿ. ಕೋಲಕಾರ, ಈ ಕವಿಗಳ ಕೃತಿಗಳಲ್ಲಿ ವಚನಗಳ ಛಾಯೆಯಿದೆ. ಸಮಾಜದಲ್ಲಿ ನಡೆಯುವ ಅಂಕು ಡೊಂಕುಗಳ ವಿಡಂಬನೆಯಿದೆ. ಈ ಕವಿದ್ವಯರು ಭವಿಷತ್ತಿನ ಭರವಸೆಯ ಕವಿಗಳು ಎಂದು ಹೇಳಿದರು.

ಪ್ರಾಸ್ತವಿಕ ಭಾಷಣ ಮಾಡಿದ ನಾಗೇಶ ಜೆ. ನಾಯಕ ಅವರು ಸಮಾಜದಿಂದ ನಾನು ಸಾಕಷ್ಟು ಪಡೆದಿದ್ದೇನೆ. ಪ್ರತಿಯಾಗಿ ಏನನ್ನಾದರೂ ಕೊಡಬೇಕೆಂಬುದೇ ಸಹೃದಯ ಸಾಹಿತ್ಯ ಪ್ರತಿಷ್ಠಾನದ ಹುಟ್ಟಿಗೆ ಕಾರಣ. ಕಾವ್ಯ ನನ್ನ ಮೆಚ್ಚಿನ ಪ್ರಕಾರ. ಅಲ್ಲದೇ
ಮರೆಯಾಗಿ ಉಳಿದಿರುವ ಗಜಲ್‌ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ಉದ್ದೇಶದಿಂದ ಕಾವ್ಯ ಹಾಗೂ ಗಜಲ್‌ ಪ್ರಕಾರಕ್ಕೆ ಪ್ರಶಸ್ತಿಯನ್ನು ಕೊಡಲಾಗುತ್ತಿದೆ ಎಂದರು.

ಪ್ರಶಸ್ತಿ ಪುರಸ್ಕೃತ ಕವಿಗಳಾದ ಡಾ, ರತ್ನಾಕರ ಕುನಗೋಡು ಮತ್ತು ಮಹಾದೇವ ಎಸ್‌. ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ಲೇಖಕರಾದ ಎಲ್‌. ಎಸ್‌. ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಬೆಳಗಾವಿಯ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಜಿ. ರಾಮಯ್ಯ, ಮುನವಳ್ಳಿ ಅರ್ಬನ್‌ ಬ್ಯಾಂಕ್‌ ಯರಗಟ್ಟಿ ಶಾಖೆ ವ್ಯವಸ್ಥಾಪಕರಾದ ಶಿವಾನಂದ ಬಿ. ಮದ್ದಾನಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಹಾಶೀಮ ಎ. ತಹಶೀಲದಾರ ಅವರನ್ನು ಸನ್ಮಾನಿಸಲಾಯಿತು.

ಕವಿಗಳಾದ ನದೀಮ್‌ ಸನದಿ, ನಿರಜಾ ಗಣಾಚಾರಿ, ಶಿವಾನಂದ ಉಳ್ಳಿಗೇರಿ, ಮಂಜುಳಾ ಶೆಟ್ಟರ, ಶೇಖರ ಹಾದಿಮನಿ, ರಾಜೇಶ್ವರಿ ಹಿರೇಮಠ, ಕಿರಣ ಗಣಾಚಾರಿ, ಸೌಮ್ಯ ಕೋಟಗಿ, ಸುಖದೇವಾನಂದ ಚವತ್ರಿಮಠ, ಬಸವರಾಜ ಹೊನಗೌಡರ್‌, ಮಮತಾ ಶಂಕರ, ಎಮ್‌, ಡಿ. ಬಾವಾಖಾನ, ಜ್ಯೋತಿ ಮಾಳಿ, ಶ್ರೀಶೈಲ್‌ ಹುಬ್ಬಳ್ಳಿ, ಅನಸೂಯಾ ಮೇಟ್ಯಾಲ, ರೇಣುಕಾ ಕಠಾರಿ, ಶಿವಾನಂದ ಬಾಗಾಯಿ, ಎಂ.ಬಿ. ಜ್ಞಾನೇಶ್ವರ, ಸಂತೋಷ ನಿಂಗರೆಡ್ಡ, ಆನಂದ ಪಾಟೀಲ, ನೀಲಾ ಕೆ. ಮಾಲಾ ಅಕ್ಕಿಶೆಟ್ಟಿ ಕವಿತಾ ವಾಚನ ಮಾಡಿದರು. ಸಿದ್ದಪ್ಪ ಗರಗದ, ಬಸವರಾಜ ಪಟ್ಟಣಶೆಟ್ಟಿ, ಉಪಸ್ಥಿತರಿದ್ದರು. ಪ್ರವೀಣ ಶೆಟ್ಟಪ್ಪನವರ ಸ್ವಾಗತಿಸಿದರು. ರಮೇಶ ತಳವಾರ ವಂದಿಸಿದರು.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-belagavi

Belagavi: ಗಣೇಶ ಮೆರವಣಿಗೆ ವೇಳೆ ಟ್ರಾಲಿಗೆ ಸಿಲುಕಿ ವ್ಯಕ್ತಿ ಸಾವು

1-belgavi

Belagavi; ಗಣಪತಿ ಮೂರ್ತಿ ವಿಸರ್ಜನೆ ವೇಳೆ ಮೂವರಿಗೆ ಚಾಕು ಇರಿತ!!

Belagavi: ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಗೆ ಚಾಲನೆ: ವೈಭವದ ಮೆರವಣಿಗೆ

Belagavi: ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಗೆ ಚಾಲನೆ

Train ಬೆಳಗಾವಿಗೆ ಶೀಘ್ರ ಮತ್ತೊಂದು ರೈಲು: ಸೋಮಣ್ಣ

Train ಬೆಳಗಾವಿಗೆ ಶೀಘ್ರ ಮತ್ತೊಂದು ರೈಲು: ಸೋಮಣ್ಣ

Ramesh Jarkiholi: ಮುನಿರತ್ನ ಬಂಧನದ ಹಿಂದೆ ಡಿಕೆಶಿ ಕೈವಾಡ

Ramesh Jarkiholi: ಮುನಿರತ್ನ ಬಂಧನದ ಹಿಂದೆ ಡಿಕೆಶಿ ಕೈವಾಡ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.