![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Aug 23, 2021, 6:12 PM IST
ವರದಿ : ಭೈರೋಬಾ ಕಾಂಬಳೆ
ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸಡ್ಡು ಹೊಡೆಯಲು ಮಹಾರಾಷ್ಟ್ರ ಏಕೀಕರಣ ಸಮಿತಿ ರಣತಂತ್ರ ಹೆಣೆಯುತ್ತಿದ್ದರೆ, ಈ ಬಿಗ್ ಫೆ„ಟ್ ಹೇಗಾದರೂ ಮಾಡಿ ಬಿಟ್ಟು ಕೊಡದಿರಲು ಬಿಜೆಪಿ-ಕಾಂಗ್ರೆಸ್-ಆಪ್ ಪ್ರತಿ ತಂತ್ರ ಹೆಣೆಯಲು ಶತಾಯಗಾತ ಪ್ರಯತ್ನ ನಡೆಸುತ್ತಿವೆ. ಅಭ್ಯರ್ಥಿಗಳ ಆಯ್ಕೆಗೆ ತೀವ್ರ ಕಸರತ್ತು ಶುರುವಾಗಿದೆ.
ಸೋಮವಾರ ಆ. 23ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಆಗಿದ್ದರಿಂದ ಪಕ್ಷಗಳಲ್ಲಿ ಹಗಲು ರಾತ್ರಿ ಎನ್ನದೇ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ಶುರುವಾಗಿದೆ. ಕಾಂಗ್ರೆಸ್ನವರೂ ಪಕ್ಷದ ಚಿಹ್ನೆಯೇ ಮೇಲೆಯೇ ರಂಗ ಪ್ರವೇಶ ಮಾಡಬೇಕೆಂಬ ನಿರ್ಧಾರಕ್ಕೆ ಬಂದಿದ್ದು, ಹಲವು ಆಕಾಂಕ್ಷಿಗಳ ಮಧ್ಯೆ 58 ಅಭ್ಯರ್ಥಿಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈಗಾಗಲೇ ಕೆಲವು ಅಭ್ಯರ್ಥಿಗಳು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಟಿಕೆಟ್ ನಮಗೆ ಕೊಡುವಂತೆ ಅನೇಕರು ಬಿಜೆಪಿ ನಾಯಕರ ಬಳಿ ದುಂಬಾಲು ಬಿದ್ದಿದ್ದಾರೆ.
ಒಂದೊಂದು ವಾರ್ಡ್ನಲ್ಲಿ 8-10 ಆಕಾಂಕ್ಷಿಗಳಿದ್ದಾರೆ. ಇದರಲ್ಲಿ ಎರಡು ದಿನಗಳಿಂದ 2-3 ಜನರ ಹೆಸರುಗಳನ್ನು ಉಳಿಸಿಕೊಂಡಿವೆ. ಇದರಲ್ಲಿ ಸದ್ಯ 22 ಮಂದಿಯ ಪಟ್ಟಿ ರೆಡಿ ಆಗಿದ್ದು, ಉಳಿದ ಪಟ್ಟಿ ನಂತರ ಸೋಮವಾರ ಬಿಡುಗಡೆ ಮಾಡಲಿದೆ.
ಎಐಎಂಐಗೆ ಟಕ್ಕರ್ ನೀಡಲು ಕೈ ಪ್ಲ್ಯಾನ್: ಸತೀಶ ಜಾರಕಿಹೊಳಿ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷ ರಾಜು ಸೇs… ನೇತೃತ್ವದಲ್ಲಿಯೇ ಅತಿ ಹೆಚ್ಚಿನ ಅಭ್ಯರ್ಥಿಗಳ ಹೆಸರು ಫೆ„ನಲ್ ಆಗಲಿವೆ. ಸತೀಶ ಬಳಿ ಕಾಂಗ್ರೆಸ್ ಆಕಾಂಕ್ಷಿಗಳು ದುಂಬಾಲು ಬೀಳುತ್ತಿದ್ದಾರೆ. ಉತ್ತರ ಕ್ಷೇತ್ರದಲ್ಲಿ ಉರ್ದು ಭಾಷಿಕ ಘಟಬಂಧನ ಮಾಡಲು ಮುಂದಾಗಿದೆ. ಇದರಿಂದಾಗಿ ಎಐಎಂಐಗೆ ಠಕ್ಕರ ನೀಡಲು ತಂತ್ರ ಹೆಣೆಯುತ್ತಿದೆ.2 ವಾರ್ಡ್ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ. ಅಲ್ಲಿ ಗೆದ್ದವರು ತಮ್ಮವರೇ ಎಂಬ ನಿರ್ಧಾರಕ್ಕೆ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ನವರ ಬಳಿ ಬಹುತೇಕ ಅಂತಿಮ ಪಟ್ಟಿ ಸಿದ್ಧಗೊಂಡಿದ್ದರೂ ಇನ್ನೂ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದೆ. ಸೋಮವಾರ ಆ. 23ರಂದು ಬೆಳಗ್ಗೆ 10 ಗಂಟೆಯ ನಂತರ ಎಲರೂ ಒಟ್ಟಾಗಿ ನಾಮಪತ್ರ ಸಲ್ಲಿಸಲು ತೆರಳಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಬಹಳ ಪ್ರತಿಷ್ಠೆಯಾಗಿ ಈ ಚುನಾವಣೆಯನ್ನು ತೆಗೆದುಕೊಂಡಿದ್ದು, ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಅಳೆದು ತೂಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪ್ಲ್ಯಾನ್ ಮಾಡಿದ್ದಾರೆ. ಪಟ್ಟಿ ಸಿದ್ಧಗೊಳಿಸಿ ಬೆಂಗಳೂರಿಗೆ ಅಂತಿಮ ಒಪ್ಪಿಗೆಗಾಗಿ ಕಳುಹಿಸಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿ ಈಗಾಗಲೇ ಅನೇಕ ಮಂದಿ ಕಡೆಯಿಂದ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸುವಂತೆ ಮೌಖೀಕವಾಗಿ ಹೇಳಿದೆ. ಅದರಂತೆ ಅನೇಕರು ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಾಮಪತ್ರ ಸಲ್ಲಿಸುತ್ತಿದ್ದಾರೆ. ನಂತರ ಆ. 23ರಂದು ಸಂಜೆ 4 ಗಂಟೆಯ ಬಳಿಕ ಕೆಲವು ವಾರ್ಡ್ಗಳ ಹೆಸರುಗಳನ್ನು ಫೆ„ನಲ್ ಮಾಡಲಿದೆ. ಆ. 26 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದರಿಂದ ಅಲ್ಲಿಯವರೆಗೂ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.
You seem to have an Ad Blocker on.
To continue reading, please turn it off or whitelist Udayavani.