![1-havy](https://www.udayavani.com/wp-content/uploads/2024/12/1-havy-415x277.jpg)
ಮಗನ ಸಾಧನೆಗೆ ಅಪ್ಪ-ಅಮ್ಮ ದಿಲ್ಖುಷ್
Team Udayavani, Nov 23, 2018, 5:17 PM IST
![bel-1.jpg](https://www.udayavani.com/wp-content/uploads/2018/11/23/bel-1.jpg)
ಬೆಳಗಾವಿ: ಬಾಲ್ಯದಿಂದಲೂ ಕ್ರಿಕೆಟ್ ಹುಚ್ಚು ಬೆಳೆಸಿಕೊಂಡಿರುವ ಮಗ ರೋನಿತ್ ಸಾಧನೆ ತವರು ಪಿಚ್ನಲ್ಲಿ ನೋಡಿ ಅತ್ಯಂತ ಖುಷಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಅವನಿಂದ ನಿರೀಕ್ಷಿಸುತ್ತಿದ್ದೇವೆ.
ಮಗನ ಸಾಧನೆಯನ್ನು ಕಣ್ತುಂಬಿಕೊಳ್ಳಲು ಆಟೋ ನಗರದ ಕೆಎಸ್ಸಿಎ ಮೈದಾನಕ್ಕೆ ಬಂದಿದ್ದ ಕರ್ನಾಟಕ ತಂಡದ ವೇಗದ ಬೌಲರ್ ರೋನಿತ್ನ ತಾಯಿ ಸರಿತಾ ಮೋರೆ ಉದಯವಾಣಿಯೊಂದಿಗೆ ಸಂತಸ ಹಂಚಿಕೊಂಡರು.
ಕರ್ನಾಟಕ ತಂಡದ ಪರವಾಗಿ ಇದೇ ಮೊದಲ ರಣಜಿ ಟ್ರೋಫಿ ಆಡುತ್ತಿರುವ ರೋನಿತ್ ಮೋರೆ ಕುಂದಾನಗರಿಯಲ್ಲಿ ಮೊದಲ ಪಂದ್ಯ ಇದಾಗಿದೆ. ರಾಜ್ಯ ತಂಡದಲ್ಲಿ ಅವಕಾಶ ಸಿಗದಿದ್ದಕ್ಕೆ ಹಿಮಾಚಲ ಪ್ರದೇಶದ ಪರವಾಗಿ ಆಡಿದ್ದ ರೋನಿತ್ಗೆ ಮೂರು ವರ್ಷಗಳ ಬಳಿಕ ಅವಕಾಶ ಸಿಕ್ಕಿದೆ. ಬೆಳಗಾವಿಯಲ್ಲಿ ಅಭಿಮಾನಿಗಳ ಹಷೋದ್ಘಾರದ ಮಧ್ಯೆಯೇ ಆಟ ಆರಂಭಿಸಿರುವ ರೋನಿತ್ ಐದು ವಿಕೆಟ್ ಪಡೆದು ಬೆಳಗಾವಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಚಿಕ್ಕಂದಿನಿಂದಲೂ ರೋನಿತ್ ಕ್ರಿಕೆಟ್ ಆಡುತ್ತಲೇ ಬೆಳೆದಿದ್ದಾನೆ. ಗೋಮಟೇಶದಲ್ಲಿ ಪ್ರೌಢಶಾಲೆ ಮುಗಿಸಿ, ಗೋಗಟೆ ಹಾಗೂ ಜೈನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದಿದ್ದಾನೆ. ಸಣ್ಣ ಪುಟ್ಟ ಪಂದ್ಯಾವಳಿಯಲ್ಲಿ ಆಡುತ್ತ ಈಗ ರಣಜಿಯಲ್ಲಿ ಭಾಗವಹಿಸಿ ತವರಿಗೆ ಆಡಲು ಬಂದಿದ್ದು ನಮಗೆ ತುಂಬ ಹೆಮ್ಮೆಯ ತರುತ್ತಿದೆ. ಜೊತೆಗೆ ಎದುರಾಳಿಯ 5 ವಿಕೆಟ್ ಪಡೆದು ಮಿಂಚಿರುವುದು ನಮಗೆ ಎಲ್ಲಿಲ್ಲದ ಸಂತಸ ತಂದಿದೆ ಎನ್ನುತ್ತಾರೆ ತಾಯಿ ಸರಿತಾ.
ಕರ್ನಾಟಕ ತಂಡದಲ್ಲಿ ಬಹಳ ವರ್ಷಗಳ ನಂತರ ಅವಕಾಶ ಸಿಕ್ಕರೂ ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿದ್ದಾನೆ. ಮುಂದೆ ಇನ್ನೂ ಉತ್ತಮ ಸಾಧನೆ ಮಾಡುತ್ತಾನೆ. ಈತನ ಸಾಧನೆಯ ಹಿಂದೆ ಸಹೋದರ ನಿಖೀಲ್ ಹಾಗೂ ತಂದೆ ಗಜಾನನ ಅವರ ಪ್ರೋತ್ಸಾಹ ಹೆಚ್ಚಿದೆ ಎನ್ನುತ್ತಾರೆ ತಾಯಿ ಸರಿತಾ. ಮಕ್ಕಳ ಪ್ರತಿಭೆಯನ್ನು ಯಾರೂ ಹತ್ತಿಕ್ಕಬಾರದು.
ಮಕ್ಕಳ ಆಸಕ್ತಿಯನ್ನು ಗುರುತಿಸಿ ಅವರಿಗೆ ಇಷ್ಟವಾದ ಕ್ಷೇತ್ರದ ಆಯ್ಕೆ ಮಾಡಿಕೊಳ್ಳಲು ಬಿಟ್ಟು ಕೊಡಬೇಕು. ಅವರಿಗೆ ಆಸಕ್ತಿ ಇಲ್ಲದಿದ್ದರೂ ನಾವು ಒತ್ತಾಯಪೂರ್ವಕವಾಗಿ ಕಳುಹಿಸಬಾರದು ಎಂದು ತಂದೆ ಗಜಾನನ ಮೋರೆ ಹೇಳುತ್ತಾರೆ.
ತಮ್ಮನ ಆಟ ನೋಡಲು ಬೆಂಗಳೂರಿ ನಿಂದ ಬಂದಿದ್ದೇನೆ. ಉತ್ತಮ ಪ್ರದರ್ಶನ ನೀಡುತ್ತಾನೆ ಎಂಬುದು ನಮಗೆ ಮೊದಲೇ ಗೊತ್ತಿತ್ತು. ಬೆಳಗಾವಿಯಲ್ಲಿ ಕರ್ನಾಟಕ ತಂಡ ಗೆಲ್ಲುವ ವಿಶ್ವಾಸವಿದೆ. ನನ್ನ ಸಹೋದರನೊಂದಿಗೆ ಉಳಿದ ಎಲ್ಲ ಆಟಗಾರರ ಶ್ರಮವೂ ಇದೆ ಎನ್ನುತ್ತಾರೆ ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿರುವ ರೋನಿತ್ನ ಸಹೋದರ ನಿಖೀಲ್.
ಕೈ ಬೀಸಿದ ಮಗ-ಪೋಷಕರ ಆನಂದ ಮಗನ ಸಾಧನೆಯನ್ನು ಕಣ್ತುಂಬಿಕೊಳ್ಳಲು ಮೈದಾನದ ಪ್ರಸ್ಕ್ಲಬ್ ಬಾಕ್ಸ್ನಲ್ಲಿ ಕುಳಿತಿದ್ದ ರೋನಿತ್ ಪೋಷಕರು ಆನಂದ ಬಾಷ್ಪ ಹರಿಸಿದರು. ಮಗ 5 ವಿಕೆಟ್ ಕಬಳಿಸಿ ಆಲೌಟ್ ಮಾಡಿ ಪೆವಿಲಿಯನ್ನತ್ತ ಬರುವಾಗ ತಂದೆ-ತಾಯಿಯನ್ನು ನೋಡಿ ಕೈ ಬೀಸಿದನು. ಆಗ ಎದ್ದು ನಿಂತು ಸಂಭ್ರಮಿಸುತ್ತಿದ್ದ ತಂದೆ ಗಜಾನನ ಹಾಗೂ ತಾಯಿ-ಸರಿತಾ ಅವರು ಮಗನನ್ನು ನೋಡಿ ಆನಂದ ಭಾಷ್ಪ ಸುರಿಸಿದರು.
ಧೋನಿ ಅಭಿಮಾನಿ
ರೋನಿತ್ ಮೋರೆ ಕ್ರಿಕೆಟ್ ಆಡುವಾಗ ಅನೇಕ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಆಟ ನೋಡುತ್ತಿದ್ದ. ಜೊತೆಗೆ ಈತ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರಸಿಂಗ್ ಅವರ ಅಭಿಮಾನಿ ಎಂದು ಅಭಿಮಾನದಿಂದ ಹೇಳಿಕೊಂಡರು ತಾಯಿ ಸರಿತಾ.
ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
![1-havy](https://www.udayavani.com/wp-content/uploads/2024/12/1-havy-415x277.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ](https://www.udayavani.com/wp-content/uploads/2024/12/bel-3-150x87.jpg)
Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ
![BGV-Congress](https://www.udayavani.com/wp-content/uploads/2024/12/BGV-Congress-150x90.jpg)
Congress: ಪಕ್ಷದೊಳಗೆ ಹೊಸ ನಾಯಕತ್ವಕ್ಕೆ ಅವಕಾಶ ಸಿಗಬೇಕು: ಮಲ್ಲಿಕಾರ್ಜುನ ಖರ್ಗೆ
![Sonia-Ghandi](https://www.udayavani.com/wp-content/uploads/2024/12/Sonia-Ghandi-1-150x90.jpg)
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
![BGV–BIMS](https://www.udayavani.com/wp-content/uploads/2024/12/BGV-BIMS-150x90.jpg)
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
![Cong-ind-Map](https://www.udayavani.com/wp-content/uploads/2024/12/Cong-ind-Map-150x90.jpg)
Controversy: ಕಾಂಗ್ರೆಸ್ ಪೋಸ್ಟರ್ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![1-havy](https://www.udayavani.com/wp-content/uploads/2024/12/1-havy-150x100.jpg)
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
![puttige-4](https://www.udayavani.com/wp-content/uploads/2024/12/puttige-4-1-150x92.jpg)
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
![Kharge (2)](https://www.udayavani.com/wp-content/uploads/2024/12/Kharge-2-1-150x87.jpg)
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
![1](https://www.udayavani.com/wp-content/uploads/2024/12/1-53-150x80.jpg)
Kasaragod Crime News: ಅವಳಿ ಪಾಸ್ಪೋರ್ಟ್; ಕೇಸು ದಾಖಲು
![1-weqeqw](https://www.udayavani.com/wp-content/uploads/2024/12/1-weqeqw-150x78.jpg)
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.