ಮೊದಲ, 3ನೇ ಮದುವೆ ಬಚ್ಚಿಟ್ಟದ್ದಕ್ಕೆ 2ನೇ ಹೆಂಡತಿಯಿಂದಲೇ ಗಂಡನ ಕೊಲೆಗೆ ಸುಪಾರಿ


Team Udayavani, Mar 23, 2022, 2:17 PM IST

16murder

ಬೆಳಗಾವಿ: ಮೊದಲ ಹಾಗೂ ಮೂರನೇ ಮದುವೆ ಬಚ್ಚಿಟ್ಟಿದ್ದಕ್ಕೆ ಕುಪಿತಗೊಂಡ ಎರಡನೇ ಹೆಂಡತಿ 10 ಲಕ್ಷ ರೂ. ಸುಪಾರಿ ಕೊಟ್ಟು ತನ್ನ ಗಂಡನನ್ನು ಕೊಲೆ ಮಾಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಸಮೇತ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಗೀಡಾದ ರಾಜು ದೊಡ್ಡಬೊಮ್ಮನವರನ ಪತ್ನಿ ಬೆಳಗಾವಿಯ ಕಿರಣ ರಾಜು ದೊಡ್ಡಬೊಮ್ಮನವರ(26), ಹಿಂದವಾಡಿಯ ಶಶಿಕಾಂತ ಪಾಟೀಲ, ಖಾಸಬಾಗದ ಧರಣೇಂದ್ರ ಕಂಠಿ, ಸಂಜಯ ರಜಪೂತ ಹಾಗೂ ವಿಜಯ ಜಾಗೃತ ಎಂಬಾತರನ್ನು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಕೊಲೆ ಮಾಡಿದ್ದು ಏಕೆ?

ರಿಯಲ್‌ ಎಸ್ಟೇಟ್‌ ಉದ್ಯಮಿ ಆಗಿದ್ದ ರಾಜು ದೊಡ್ಡಬೊಮ್ಮನವರ ಮೊದಲ ಮದುವೆ ಹಾಗೂ ಮೂರನೇ ಮದುವೆ ಆಗಿರುವ ಬಗ್ಗೆ ಎರಡನೇ ಹೆಂಡತಿ ಕಿರಣಗೆ ಹೇಳದೇ ಬಚ್ಚಿಟ್ಟಿದ್ದನು. ಮೊದಲ ಹೆಂಡತಿ ಇದ್ದರೂ ಎರಡನೇ ಮದುವೆ ಆಗಿರುವ ಬಗ್ಗೆ ಕಿರಣಗೆ ಸಿಟ್ಟಿತ್ತು. ನಂತರದಲ್ಲಿ ರಾಜು, ದೀಪಾ ಎಂಬವರೊಂದಿಗೆ ಮೂರನೇ ಮದುವೆಯನ್ನೂ ಮಾಡಿಕೊಂಡಿದ್ದನು. ಇದರಿಂದ ಕಿರಣ ನೊಂದಿದ್ದಳು. ಆಗ ಕಿರಣ ತನ್ನ ಪರಿಚಯಸ್ಥರಿಗೆ ಈ ವಿಷಯ ತಿಳಿಸಿದ್ದಳು. ಜತೆಗೆ ಸಂಜಯ ರಜಪೂತ ಎಂಬಾತನೊಂದಿಗೆ ಕಿರಣ ಸಲುಗೆಯಿಂದ ಇದ್ದಿದ್ದು ರಾಜುಗೆ ಆಗಿ ಬರುತ್ತಿರಲಿಲ್ಲ. ಈ ಬಗ್ಗೆ ಕಿರಣನೊಂದಿಗೆ ರಾಜು ಆಗಾಗ ಜಗಳವಾಡುತ್ತಿದ್ದನು ಎಂದು ತಿಳಿದು ಬಂದಿದೆ.

10 ಲಕ್ಷ ರೂ. ಸುಪಾರಿ

ಎರಡನೇ ಹೆಂಡತಿ ಕಿರಣನೊಂದಿಗೆ ರಾಜು ಆಗಾಗ ಜಗಳ ಮಾಡುತ್ತಿದ್ದನು. ಈಕೆಯನ್ನು ಬಿಟ್ಟು ಮಂಡೋಳಿ ರಸ್ತೆಯಲ್ಲಿರುವ ಭವಾನಿ ನಗರದ ಸಂಸ್ಕೃತ ಅಪಾರ್ಟಮೆಂಟ್‌ ನಲ್ಲಿ ಇರುತ್ತಿದ್ದನು. ಕೆಲ ತಿಂಗಳಿಂದ ರಾಜುನನ್ನು ಕೊಲೆ ಮಾಡಲು ಕಿರಣ ಪ್ಲ್ಯಾನ್‌ ಮಾಡಿಕೊಂಡಿದ್ದಳು. ಹೀಗಾಗಿ ಪ್ರಮುಖ ಆರೋಪಿ ಸಂಜಯ ರಜಪೂತನಿಗೆ 10 ಲಕ್ಷ ರೂ. ಸುಪಾರಿ ಕೊಟ್ಟಿದ್ದಳು. ಅದರಂತೆ ಮೊದಲು 5 ಲಕ್ಷ ರೂ. ನಂತರ 5 ಲಕ್ಷ ರೂ. ಹಣ ಕೊಟ್ಟು ತನ್ನ ಗಂಡನನ್ನು ಕೊಲೆ ಮಾಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಮಂಡೋಳಿ ರಸ್ತೆಯ ಭವಾನಿ ನಗರದ ಸಂಸ್ಕೃತ ಅಪಾರ್ಟಮೆಂಟ್‌ನ ಬಾಡಿಗೆ ಮನೆಯಲ್ಲಿದ್ದ ರಾಜು ಮಲ್ಲಪ್ಪ ದೊಡ್ಡಬೊಮ್ಮನ್ನವರ(41) ಎಂಬಾತನ ಕಣ್ಣಿಗೆ ಖಾರದ ಪುಡಿ ಎರಚಿ ಮಾ. 15ರಂದು ಬೆಳಗ್ಗೆ 6:30ರ ಸುಮಾರಿಗೆ ಹತ್ಯೆ ಮಾಡಲಾಗಿತ್ತು. ಆಸ್ಪತ್ರೆಯಲ್ಲಿದ್ದ ಮೂರನೇ ಪತ್ನಿಯನ್ನು ನೋಡಲು ಕಾರಿನಲ್ಲಿ ತೆರಳುತ್ತಿದ್ದಾಗ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಲಾಗಿತ್ತು. ರಕ್ತದ ಮಡವಿನಲ್ಲಿ ಬಿದ್ದು ಸ್ಥಳದಲ್ಲಿಯೇ ರಾಜು ಮೃತಪಟ್ಟಿದ್ದನು. ಪತ್ನಿ ದೀಪಾ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿದ್ದರು. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಕೊಲೆಯಾದ ನಾಲ್ಕೈದು ದಿನಗಳಲ್ಲಿಯೇ ಹಂತಕರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಬಾಗಲಕೋಟೆ : ಉರುಸ್​ನಲ್ಲಿ ಪ್ರಸಾದ ಸೇವಿಸಿ 48 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ಗುಡಾಜಿ, ಇನ್ಸಪೆಕ್ಟರ್‌ ಸುನೀಲಕುಮಾರ ಹಾಗೂ ಪೊಲೀಸರ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ರಾಜು ದೊಡ್ಡಬೊಮ್ಮನ್ನವರ ಕೆಲವು ವರ್ಷಗಳಿಂದ ರಿಯಲ್‌ ಎಸ್ಟೇಟ್‌ ಹಾಗೂ ಬಿಲ್ಡರ್‌ ಉದ್ಯೋಗದಲ್ಲಿ ತೊಡಗಿಕೊಂಡಿದ್ದನು. ಕೆಲವು ಕಡೆಗೆ ಮನೆ ಕಟ್ಟಿಸಿ ಕೊಡುತ್ತಿದ್ದನು. ಇದರಲ್ಲಿ ಹಲವಾರು ಮನೆಗಳು ಅರ್ಧಂಬರ್ಧ ಆಗಿವೆ. ಗ್ರಾಹಕರು ರಾಜುನ ಬಗ್ಗೆ ಅಸಮಾಧಾನ ಹೊಂದಿದ್ದರು. ಇನ್ನೂ ಕೆಲವರಿಂದ ಹಣ ಪಡೆದು ಜಾಗ ನೀಡುವುದಾಗಿ ಭರವಸೆ ನೀಡಿದ್ದನು. ಆದರೆ ಅನೇಕರಿಗೆ ಜಾಗ ನೀಡಿರಲಿಲ್ಲ ಎಂಬ ಆರೋಪವೂ ರಾಜು ಮೇಲಿದೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

court

Painting; ಅಶ್ಲೀ*ಲತೆಗೆ ಸರಕಾರದ ವಿವರಣೆ ಏನು?: ಹೈಕೋರ್ಟ್‌ ತರಾಟೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kharge (2)

BJP ಟ್ರಿಪಲ್‌ ಎಂಜಿನ್‌ ಸರಕಾರ ಜನರ ಆಹಾರ ಕಸಿಯುತ್ತಿದೆ: ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM Siddaramaiah: “ಮನುಷ್ಯರನ್ನು ಪ್ರೀತಿಸಿ, ದ್ವೇಷಿಸಬೇಡಿ’

CM Siddaramaiah: “ಮನುಷ್ಯರನ್ನು ಪ್ರೀತಿಸಿ, ದ್ವೇಷಿಸಬೇಡಿ’

Belagavi: Police rescued children by showing the taste of bullets to kidnappers

Belagavi: ಕಿಡ್ನ್ಯಾಪರ್ಸ್‌ ಗೆ ಗುಂಡಿನ ರುಚಿ ತೋರಿಸಿ ಮಕ್ಕಳನ್ನು ರಕ್ಷಿಸಿದ ಪೊಲೀಸರು

Belagavi: ಕರಾಳ ದಿನಾಚರಣೆಗೆ ಅನುಮತಿ ನೀಡಬಾರದೆಂದು ಕರವೇ ಪ್ರತಿಭಟನೆ

Belagavi: ಕರಾಳ ದಿನಾಚರಣೆಗೆ ಅನುಮತಿ ನೀಡಬಾರದೆಂದು ಕರವೇ ಪ್ರತಿಭಟನೆ

9-belagavi

Belagavi: ಕ್ರಾಂತಿಯ ನೆಲ ಕಿತ್ತೂರಿನಲ್ಲಿ 200ನೇ ವಿಜಯೋತ್ಸವಕ್ಕೆ ಅದ್ಧೂರಿ ಚಾಲನೆ

ಸತೀಶ್‌ ಜಾರಕಿಹೊಳಿ

Belagavi: ಸಿಪಿವೈ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಮಾಹಿತಿ ಇಲ್ಲ: ಸತೀಶ್‌ ಜಾರಕಿಹೊಳಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

AATISHI (2)

Kejriwal ಮೇಲೆ ಹಲ್ಲೆ: ಆರೋಪ ತಿರಸ್ಕರಿಸಿದ ಬಿಜೆಪಿ

police crime

Dog ಕೊಂ*ದು ಮರಕ್ಕೆ ಕಟ್ಟಿದ ತಾಯಿ-ಮಗನ ಮೇಲೆ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.