Hindalga Central Jail ಬೆಂಗಳೂರು ಜೈಲು ಸ್ಫೋಟಿಸುವುದಾಗಿ ಬೆದರಿಕೆ ಕರೆ
Team Udayavani, Oct 9, 2023, 11:20 PM IST
ಬೆಳಗಾವಿ: ಹಿಂಡಲಗಾ ಹಾಗೂ ಬೆಂಗಳೂರು ಜೈಲನ್ನು ಸ್ಫೋಟಿಸುವುದಾಗಿ ಅನಾಮಧೇಯ ವ್ಯಕ್ತಿಯೋರ್ವ ಬೆದರಿಕೆ ಕರೆ ಮಾಡಿದ್ದಾನೆ.
ಬಂದಿಖಾನೆ ಇಲಾಖೆಯ ಉತ್ತರ ವಲಯ ಡಿಐಜಿಪಿ ಟಿ.ಪಿ ಶೇಷ ಅವರಿಗೆ ಮೂರು ಮೊಬೈಲ್ ನಂಬರ್ಗಳಿಂದ ಕರೆ ಬಂದಿದ್ದು, ಹಿಂಡಲಗಾ ಹಾಗೂ ಬೆಂಗಳೂರು ಕಾರಾಗೃಹದ ಮೇಲೆ ಬಾಂಬ್ ಹಾಕಲಾಗು ವುದು. ಜತೆಗೆ ಟಿ.ಪಿ.ಶೇಷ ಅವರ ಸರಕಾರಿ ವಸತಿ ಗೃಹದ ಮೇಲೂ ಬಾಂಬ್ ದಾಳಿ ನಡೆಸಲಾಗುವುದು. ಹಿಂಡಲಗಾ ಜೈಲಿನಲ್ಲೇ ಗಲಭೆ ಸೃಷ್ಟಿಸುತ್ತೇನೆ ಎಂದು ತಿಳಿಸಿದ್ದಾನೆ.
“ನಾನು ಹಿಂಡಲಗಾ ಜೈಲಿನ ಹೆಡ್ ವಾರ್ಡರ್ ಜಗದೀಶ್ ಗಸ್ತಿ ಅವರ ಸಂಬಂಧಿ ಕನಾಗಿದ್ದು, ಜತೆಗೆ ಇನ್ನೊಬ್ಬ ವಾರ್ಡರ್ ಎಸ್.ಎಂ.ಗೋಟೆ ಅವರಿಗೂ ಪರಿಚಿತನಾಗಿದ್ದೇನೆ. ನಾನು ಹಿಂಡಲಗಾ ಜೈಲಿನಲ್ಲಿದ್ದಾಗ ಭೂಗತ ಪಾತಕಿ ಬನ್ನಂಜೆ ರಾಜಾಗೆ ಈ ಇಬ್ಬರು ವಾರ್ಡರ್ಗಳ ಸಹಕಾರದಿಂದ ಸಹಾಯ ಮಾಡಿದ್ದೇನೆ’ ಎಂದು ಆತ ಹೇಳಿದ್ದಾನೆ. ಈ ಬಗ್ಗೆ ಡಿಐಜಿಪಿ ಟಿ.ಪಿ.ಶೇಷ ಬೆಳಗಾವಿ ಗ್ರಾಮೀಣ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Flight: ಬೆಳಗಾವಿ – ಬೆಂಗಳೂರು ವಿಮಾನ ರದ್ದು ಮಾಡದಂತೆ ಕೇಂದ್ರ ಸಚಿವರಿಗೆ ಶೆಟ್ಟರ್ ಮನವಿ
Bailhongal: ಕರೆಂಟ್ ಶಾಕ್ ತಗುಲಿ ಮಹಿಳೆ ಸಾವು
Belagavi: ಫೇಸ್ಬುಕ್ ಗೆಳೆಯನ ಜೊತೆ ಸೇರಿ ಕೋಟ್ಯಧಿಪತಿ ಗಂಡನನ್ನೇ ಹತ್ಯೆಗೈದಳಾ ಪತ್ನಿ…?
Belgavi; ಜೈಲಿನಲ್ಲಿ ಆತ್ಮಹ*ತ್ಯೆಗೆ ಯತ್ನಿಸಿದ್ದ ಕೈದಿ ಸಾ*ವು
ನವೆಂಬರ್ 1ರಂದು ಕರಾಳ ದಿನಕ್ಕಿಲ್ಲ ಅವಕಾಶ: ಜಿಲ್ಲಾಧಿಕಾರಿ ಎಚ್ಚರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.