ಮನೆ ಬದುಕೇ ಜಾನಪದ-ಜಾನಪದವೇ ಸಂಸ್ಕೃತಿ

ಉತ್ತರ ಕರ್ನಾಟಕದ ಆಡು ಭಾಷೆಯ ಅಪೂರ್ವ ನಿಘಂಟು ನುಡಿ ಜಾನಪದವಾಗಿದೆ

Team Udayavani, Nov 1, 2021, 8:04 PM IST

ಮನೆ ಬದುಕೇ ಜಾನಪದ-ಜಾನಪದವೇ ಸಂಸ್ಕೃತಿ

ಹಾರೂಗೇರಿ: ನೆಲ ಮೂಲದ ಸಂಸ್ಕೃತಿಯೇ ಜಾನಪದವಾಗಿದ್ದು, ಅದುವೇ ನಮ್ಮ ಮನೆಯ ಸಂಪತ್ತು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ|ಬಿ.ವಿ.ವಸಂತಕುಮಾರ ಹೇಳಿದರು ಇಲ್ಲಿನ ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆಯ ಬಿ.ಆರ್‌.ದರೂರ ಪದವಿ ಕಾಲೇಜಿನಲ್ಲಿ ರವಿವಾರ ಪ್ರಾಚಾರ್ಯ ಬಿ.ಎ.ಜಂಬಗಿ ಅವರ “ನುಡಿ ಜಾನಪದ’ ಗ್ರಂಥ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಭಾಷೆ ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ. ಅದು ನೆಲದ ಬದುಕಿನ ಜೀವಕೋಶ. ಅದುವೇ ಸಂಸ್ಕೃತಿ. ಕನ್ನಡದ ಪ್ರತಿಯೊಂದು ಪದದಲ್ಲಿಯೂ ನೆಲಮೂಲ, ಬದುಕಿನ ಸುಗಂಧವಿದೆ. ಆ ಗಂಧದ ವಿವಿಧ ಆಯಾಮಗಳನ್ನು ಸಂಕಲಿಸಿದ ಶ್ರೇಯಸ್ಸು ಪ್ರಾಚಾರ್ಯ ಜಂಬಗಿಯವರ ನುಡಿ ಜಾನಪದ ಕೃತಿಗೆ ಸಲ್ಲುತ್ತದೆ. ಈ ನುಡಿ ಜಾನಪದವು ಕನ್ನಡ ಸಾಹಿತ್ಯ, ಸಂಸ್ಕೃತಿ ಅಧ್ಯಯನಕ್ಕೆ ಮೂಲ ಆಕರವಾಗಿದ್ದು, ಪ್ರತಿಯೊಂದು ಪದದ ಹಿನ್ನೆಲೆಯಲ್ಲಿ ಅಧ್ಯಯನ ಕೈಗೊಳ್ಳುವ ಎಲ್ಲ ಸಾಧ್ಯತೆಗಳು ಗ್ರಂಥದಲ್ಲಿ ಅನಾವರಣಗೊಂಡಿವೆ.

ನಿಘಂಟು ರಚನೆ ಬಹುದೊಡ್ಡ ಸವಾಲು. ಅದರಲ್ಲೂ ಜಾನಪದದ ಸೊಲ್ಲುಗಳಿಂದ ಕೂಡಿದ ನಮ್ಮ ಆಡು ನುಡಿಗಳನ್ನು ಗ್ರಂಥಸ್ಥಗೊಳಿಸುವುದು ಮತ್ತೂಂದು ಸವಾಲು. ಎರಡೂ ಸವಾಲುಗಳನ್ನು ಸಮರ್ಥವಾಗಿ ಸ್ವೀಕರಿಸುವುದರ ಮೂಲಕ ಉತ್ತರ ಕರ್ನಾಟಕದ ಆಡು ಭಾಷೆಯ ಅಪೂರ್ವ ನಿಘಂಟು ನುಡಿ ಜಾನಪದವಾಗಿದೆ ಎಂದು ಡಾ.ವಸಂತಕುಮಾರ ಶ್ಲಾಘಿಸಿದರು. ಖ್ಯಾತ ವಿಮರ್ಶಕ ಡಾ|ವೈ.ಎಂ.ಯಾಕೋಳ್ಳಿ ಕೃತಿ ಪರಿಚಯಿಸಿ ಮಾತನಾಡಿ, ಅದರ ವಿವಿಧ ಆಯಾಮಗಳನ್ನು ತೆರೆದಿಟ್ಟರು. ನಾಲ್ಕು ವರ್ಷಗಳ ಜಂಬಗಿಯವರ ತಪಸ್ಸಿನ ಫಲ ಈ ನುಡಿ ಜಾನಪದದಲ್ಲಿ ಫಲಿಸಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಆರ್‌ಸಿಯು ಕನ್ನಡ ಅಧ್ಯಾಪಕರ ಪರಿಷತ್‌ ಅಧ್ಯಕ್ಷ ಡಾ|ಎಚ್‌.ಐ.ತಿಮ್ಮಾಪೂರ ಮಾತನಾಡಿ, ಆಸ್ತಿ, ಅಂತಸ್ತು ಕುಟುಂಬಕ್ಕೆ ವರ್ಗಾವಣೆಯಾಗುತ್ತವೆ. ವರ್ಗಾವಣೆಯಾಗದ ಸಂಪತ್ತು ಪುಸ್ತಕಗಳು. ಜನಪದದಲ್ಲಿ ಜೀವನವೇ ಪ್ರೀತಿಯ ಹಂದರವಾಗಿದೆ ಎಂದ ಅವರು, ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಜಂಬಗಿಯವರು ಸಾಹಿತ್ಯದಲ್ಲಿ ಒಲವು ತೋರುವುದರ ಜತೆಗೆ ನಿಘಂಟು ರಚನೆಗೆ ಕೈ ಹಾಕಿದ್ದು, ಭಾಷಾ ಪ್ರಾಧ್ಯಾಪಕರಿಗೆ ಮಾದರಿಯಾಗಿದೆ ಎಂದರು.

ನುಡಿ ಜಾನಪದ ಗ್ರಂಥಕತೃ ಬಿ.ಎ.ಜಂಬಗಿ ಅವರನ್ನು ಸತ್ಕರಿಸಿ, ಅಭಿನಂದಿಸಲಾಯಿತು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ|ವಿ.ಎಸ್‌.ಮಾಳಿ ಅವರನ್ನು ರಾಣಿ ಚನ್ನಮ್ಮ ವಿವಿ ಪ್ರಾಚಾರ್ಯರ ಸಂಘದ ವತಿಯಿಂದ ಡಾ|ಎಚ್‌ .ಐ.ತಿಮ್ಮಾಪೂರ ಸತ್ಕರಿಸಿದರು. ಸಂಸ್ಥೆ ಹಿರಿಯ ಕಾರ್ಯದರ್ಶಿ ವಿ.ಎಚ್‌.ಪವಾರ, ಆರ್‌.ಎಂ.ಗಸ್ತಿ, ಡಾ|ಪಿ.ಬಿ.ಕಲಿcಮಡ್‌, ರಾಜಶೇಖರ ಜಂಬಗಿ, ಚಂದ್ರಶೇಖರ ಜಂಬಗಿ, ಸಚೀನ ಮೊರೆ, ಆದೇಶ ಜಂಬಗಿ, ಡಾ|ಶೀಲಾ ಜಂಬಗಿ, ಡಾ|ಸಿ.ಆರ್‌.ಗುಡಸಿ, ಎಸ್‌.ಎಲ್‌.ಬಾಡಗಿ, ಬಸವರಾಜ ತುಳಸಿಗೇರಿ, ಪ್ರೊ|ಬಿ.ಬಿ.ಮುಗಳಿಹಾಳ, ಡಾ|ರತ್ನಾ ಬಾಳಪ್ಪನವರ, ಡಾ|ಸಿದ್ದಣ್ಣ ಉತ್ನಾಳ, ಘಣಶ್ಯಾಮ ಭಾಂಡಗೆ, ಡಾ|ಪಿ.ಬಿ.ನರಗುಂದ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಆಧಾರ ಹಿರಿಯ ನಾಗರಿಕರ ಕಲ್ಯಾಣ ಸಂಸ್ಥೆ ಹಾಗೂ ಬಿ.ಆರ್‌ .ದರೂರ ಸಂಶೋಧನ ಸಂಸ್ಥೆ ಕಾರ್ಯಕ್ರಮವನ್ನು ಸಂಯೋಜಿಸಿದ್ದವು. ಡಾ|ವಿ.ಎಸ್‌.ಮಾಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ|ವಿನೋದ ಕಾಂಬಳೆ ನಿರೂಪಿಸಿದರು. ಶರಣ ಐ.ಆರ್‌.ಮಠಪತಿ ವಂದಿಸಿದರು.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavai: ಆಟೋಗೆ ಕಾರು ಟಚ್ ಆಗಿದ್ದಕ್ಕೆ ಮಾಜಿ ಶಾಸಕರ ಹ*ತ್ಯೆ!

Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!

Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು

Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು

Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ

Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ

Belagavi: Rpe, mrder have increased due to the court system: Muthalik

Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್

Belagavi: Return to public life in two weeks: Minister Lakshmi Hebbalkar

Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.